
ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಹಲವಾರು ಲವ್ ಸ್ಟೋರಿಗಳು ಹುಟ್ಟಿಕೊಂಡಿವೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋ ಕೂಡ ಇದಕ್ಕೆ ಹೊರತಲ್ಲ. ಗಿಲ್ಲಿ ನಟ (Gilli Nata) ಅವರು ಕಾವ್ಯ ಶೈವ ಎದುರು ಈಗಾಗಲೇ ಹಲವು ಬಾರಿ ಐ ಲವ್ ಯೂ ಎಂದು ಹೇಳಿದ್ದಾರೆ. ಆದರೆ ಕಾವ್ಯ ಅವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಹಲವು ಬಾರಿ ಮಾತಿನ ಚಕಮಕಿ ಕೂಡ ನಡೆದಿದೆ. ನವೆಂಬರ್ 28ರ ಸಂಚಿಕೆಯಲ್ಲಿ ಕೂಡ ಅದೇ ರೀತಿ ಆಗಿದೆ. ಕಾವ್ಯ (Kavya Shaiva) ಅವರು ಗಿಲ್ಲಿಯನ್ನು ಅಣ್ಣ ಎಂದು ಕರೆದಿದ್ದಾರೆ. ಕೂಡಲೇ ಗಿಲ್ಲಿ ಅವರು ಐ ಲವ್ ಯೂ ಎಂದು ಹಠ ಹಿಡಿದಿದ್ದಾರೆ.
ಬಿಗ್ ಬಾಸ್ ಮನೆಗೆ ಮೋಕ್ಷಿತಾ ಪೈ, ರಜತ್ ಕಿಶನ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಅವರು ಅತಿಥಿಯಾಗಿ ಬಂದಿದ್ದಾರೆ. ಅವರ ಜೊತೆ ಕಾವ್ಯ, ಗಿಲ್ಲಿ ಮುಂತಾದವರು ಮಾತನಾಡುತ್ತಾ ಕುಳಿತಿದ್ದರು. ಆ ವೇಳೆ ಕಾವ್ಯ ಅವರು ಮೈಕ್ ಧರಿಸಿರಲಿಲ್ಲ. ಆಗ ಬಿಗ್ ಬಾಸ್ ಎಚ್ಚರಿಕೆ ನೀಡಿದರು. ಕಾವ್ಯಾ ಅವರು ಇಡೀ ಮನೆಯ ಸದಸ್ಯರ ಬಳಿ ಕ್ಷಮೆ ಕೇಳಬೇಕಾಯಿತು.
ಕಾವ್ಯ ಅವರು ಎಲ್ಲರ ಬಳಿ ಕ್ಷಮೆ ಕೇಳಲು ಬರುವುದಕ್ಕೂ ಮುನ್ನ ಗಿಲ್ಲಿ ನಟ ಒಂದು ಕಿತಾಪತಿ ಮಾಡಿದರು. ‘ಯಾರೂ ಕೂಡ ಕಾವ್ಯನ ಕ್ಷಮಿಸಿಬೇಡಿ’ ಎಂದು ಮನೆಯ ಸದಸ್ಯರಿಗೆ ಗಿಲ್ಲಿ ಹೇಳಿದರು. ಈ ವಿಷಯ ಕಾವ್ಯ ಅವರಿಗೆ ಗೊತ್ತಾಯಿತು. ಆಗ ಅವರಿಗೆ ಕೋಪ ಬಂತು. ‘ಅಣ್ಣಯ್ಯಾ.. ಹೃದಯವಂತ..’ ಎಂದು ಜೋರಾಗಿ ಹಾಡು ಹೇಳಿದರು. ಅದರಿಂದ ಗಿಲ್ಲಿಗೆ ಬೇಸರ ಆಯಿತು.
ಕಾವ್ಯಾ ಅವರು ಅಣ್ಣ ಎಂದು ಕರೆಯುವುದು ಗಿಲ್ಲಿಗೆ ಇಷ್ಟ ಇಲ್ಲ. ಈ ಬಾರಿ ಕೂಡ ಹಾಗೆಯೇ ಆಯಿತು. ಕಾವ್ಯಾ ಅವರು ಅಣ್ಣ ಎಂದು ಕರೆದ ಮರುಕ್ಷಣವೇ ಗಿಲ್ಲ ‘ಐ ಲವ್ ಯೂ’ ಎಂದು ಕೂಗಲು ಆರಂಭಿಸಿದರು. ಅವರಿಬ್ಬರ ನಡುವಿನ ಈ ಸಂಭಾಷಣೆ ಸಖತ್ ಫನ್ನಿ ಆಗಿತ್ತು. ಇಂಥ ಹಲವು ತಮಾಷೆಯ ಪ್ರಸಂಗಗಳ ಮೂಲಕ ಗಿಲ್ಲಿ ನಟ ಅವರು ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಉಗ್ರಂ ಮಂಜು ಜೊತೆ ಕ್ಲೋಸ್ ಆದ ಕಾವ್ಯ: ನೊಂದುಕೊಂಡ ಗಿಲ್ಲಿ ನಟ
ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆಗಾದರೂ ಹೆಚ್ಚು ಬಾಂಧವ್ಯ ಇಟ್ಟುಕೊಂಡರೆ ಆಟಕ್ಕೆ ತೊಂದರೆ ಆಗುತ್ತದೆ. ಈ ಮೊದಲಿನ ಸಂಚಿಕೆಗಳಲ್ಲಿ ಅದು ಸಾಬೀತಾಗಿದೆ. ಆರಂಭದಲ್ಲಿ ಎಲ್ಲ ಸಂಬಂಧವೂ ಚೆನ್ನಾಗಿ ಇರುತ್ತದೆ. ಆದರೆ ಆಟದಲ್ಲಿ ಪೈಪೋಟಿ ಹೆಚ್ಚಿದಾಗ ಸಂಬಂಧಕ್ಕೆ ಬೆಲೆ ಕೊಟ್ಟುಕೊಂಡು ಕೂರುವುದು ಕಷ್ಟ ಆಗುತ್ತದೆ. ಕಾವ್ಯ ಮತ್ತು ಗಿಲ್ಲಿ ವಿಚಾರದಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.