ಐಪಿಎಲ್​ನಿಂದ ಸಿರಿಯಲ್ ಟಿಆರ್​ಪಿ ಮೇಲೆ ಭರ್ಜರಿ ಎಫೆಕ್ಟ್; ಯಾವ ಧಾರಾವಾಹಿಗೆ ಮೊದಲ ಸ್ಥಾನ?

Kannada Serial TRP: ಜೀ ಕನ್ನಡದಲ್ಲಿ ಇತ್ತೀಚೆಗೆ ಆರಂಭ ಆದ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿಗೆ ಕಳೆದ ವಾರಕ್ಕಿಂತ ಕಡಿಮೆ ಟಿಆರ್​ಪಿ ಸಿಕ್ಕಿದೆ. ಉಳಿದ ಧಾರಾವಾಹಿಗಳ ರೇಟಿಂಗ್ ಕೂಡ ಕಡಿಮೆ ಆಗಿರುವುದರಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಇದೆ.

ಐಪಿಎಲ್​ನಿಂದ ಸಿರಿಯಲ್ ಟಿಆರ್​ಪಿ ಮೇಲೆ ಭರ್ಜರಿ ಎಫೆಕ್ಟ್; ಯಾವ ಧಾರಾವಾಹಿಗೆ ಮೊದಲ ಸ್ಥಾನ?
ಐಪಿಎಲ್​ನಿಂದ ಸಿರಿಯಲ್ ಟಿಆರ್​ಪಿ ಮೇಲೆ ಭರ್ಜರಿ ಎಫೆಕ್ಟ್

Updated on: Apr 19, 2024 | 2:20 PM

ಐಪಿಎಲ್ (IPL) ಹಂಗಾಮಾ ಶುರುವಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಐಪಿಎಲ್ ವೀಕ್ಷಣೆ ಮಾಡುತ್ತಾರೆ. ಇದರ ಪ್ರಭಾವ ಧಾರಾವಾಹಿ ಟಿಆರ್​ಪಿಗಳ ಮೇಲಾಗಿದೆ ಎಂದರೂ ತಪ್ಪಿಲ್ಲ. ಈ ಮೊದಲು ಧಾರಾವಾಹಿಗಳು ಎರಡು ಡಿಜಿಟ್ ಸಂಖ್ಯೆಯಲ್ಲಿ ಟಿಆರ್​ಪಿ (TRP) ಪಡೆದ ಉದಾಹರಣೆ ಇದೆ. ಆದರೆ, ಈಗ ಹಾಗಿಲ್ಲ. ವಾರ ಕಳೆದಂತೆ ಎಲ್ಲಾ ಧಾರಾವಾಹಿಗಳ ಟಿಆರ್​ಪಿಯಲ್ಲಿ ಇಳಿಕೆ ಕಾಣುತ್ತಿದೆ. ಇದಕ್ಕೆ ಐಪಿಎಲ್ ಕಾರಣ ಎಂದು ಹೇಳಲಾಗುತ್ತಿದೆ.

ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿಗೆ ಕಳೆದ ವಾರಕ್ಕಿಂತ ಕಡಿಮೆ ಟಿಆರ್​ಪಿ ಸಿಕ್ಕಿದೆ. ಉಳಿದ ಧಾರಾವಾಹಿಗಳ ರೇಟಿಂಗ್ ಕೂಡ ಕಡಿಮೆ ಆಗಿರುವುದರಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಇದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಈ ಧಾರಾವಾಹಿ ಈ ಮೊದಲು ಎರಡಂಕಿ ಟಿಆರ್​ಪಿ ಪಡೆಯುತ್ತಿತ್ತು. ಆದರೆ, ಇತ್ತೀಚೆಗೆ ಟಿಆರ್​ಪಿ ಕುಸಿಯುತ್ತಿದೆ.

ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿದೆ. ಈ ಧಾರಾವಾಹಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಯ ಟಿಆರ್​ಪಿಯಲ್ಲಿ ಏರಿಳಿತ ಆಗುತ್ತಲೇ ಇದೆ. ‘ಸೀತಾ ರಾಮ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಅಶೋಕ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕನ್ಸಿಸ್ಟನ್ಸಿ ಕಾಪಾಡಿಕೊಂಡು ಹೋಗುತ್ತಿದೆ.

ಇದನ್ನೂ ಓದಿ: ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ

ಹೊಸದಾಗಿ ಎಂಟ್ರಿಕೊಟ್ಟಿರೋ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ರೇಸ್​ನಲ್ಲಿ ಐದನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಸ್ಥಾನ ಪಡೆದುಕೊಂಡು ಮಿಂಚುತ್ತಿದೆ. ಎಲ್ಲಾ ಧಾರಾವಾಹಿಗಳ ಟಿಆರ್​ಪಿ ಕಡಿಮೆ ಆಗಿರುವುದಕ್ಕೆ ಐಪಿಎಲ್ ಮುಖ್ಯ ಕಾರಣ ಅನ್ನೋದು ಕೆಲವರ ಅಭಿಪ್ರಾಯ. ಈ ಮೊದಲು ಬಿಗ್ ಬಾಸ್ ಬಂದಾಗ ಇತರ ವಾಹಿನಿಗಳಲ್ಲಿ ಆ ಸಂದರ್ಭದಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಗಳ ಟಿಆರ್​ಪಿ ಕಡಿಮೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:19 pm, Fri, 19 April 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us