ಬಿಗ್ ಬಾಸ್ ಎಕ್ಸ್​​ಪೋಸ್ ಮಾಡ್ತೀನಿ ಎಂದು ಹೋದವರ ಕಥೆ ಹೀಗಾಗಬಾರದಿತ್ತು..

|

Updated on: Oct 12, 2024 | 7:35 AM

‘ಬಿಗ್ ಬಾಸ್’ನ ಎಕ್ಸ್​ಪೋಸ್ ಮಾಡ್ತೀನಿ, ಬಿಗ್ ಬಾಸ್​ ಅನ್ನೇ ಕೊಂಡುಕೊಳ್ಳುತ್ತೇನೆ ಎಂದೆಲ್ಲ ಬಿಲ್ಡಪ್ ಕೊಟ್ಟಿದ್ದರು ಜಗದೀಶ್. ಮೊದಲ ವಾರ ಸುದೀಪ್ ಅವರಿಂದ ಜಗದೀಶ್​ಗೆ ಕಿವಿಮಾತು ಸಿಕ್ಕಿತ್ತು. ಈ ಕಿವಿಮಾತಿನಿಂದ ಅವರು ಬದಲಾದಂತೆ ಇದೆ.

ಬಿಗ್ ಬಾಸ್ ಎಕ್ಸ್​​ಪೋಸ್ ಮಾಡ್ತೀನಿ ಎಂದು ಹೋದವರ ಕಥೆ ಹೀಗಾಗಬಾರದಿತ್ತು..
ಜಗದೀಶ್​-ಸುದೀಪ್
Follow us on

‘ಬಿಗ್ ಬಾಸ್ ಕನ್ನಡ ಸಿಸನ್ 11’ರಲ್ಲಿ ಜಗದೀಶ್ ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡ್ತೀನಿ ಎಂದು ಸವಾಲನ್ನು ಕೂಡ ಹಾಕಿದ್ದರು. ಆದರೆ, ಈಗ ಅವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್’ ಬಗ್ಗೆ ಅವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್​ ಎಕ್ಸ್​ಪೋಸ್ ಮಾಡ್ತೀನಿ ಎಂದು ಹೋದವರಿಗೆ ಈ ರೀತಿ ಆಗಬಾರದಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಬಿಗ್ ಬಾಸ್’ನ ಎಕ್ಸ್​ಪೋಸ್ ಮಾಡ್ತೀನಿ, ಬಿಗ್ ಬಾಸ್​ ಅನ್ನೇ ಕೊಂಡುಕೊಳ್ಳುತ್ತೇನೆ ಎಂದೆಲ್ಲ ಬಿಲ್ಡಪ್ ಕೊಟ್ಟಿದ್ದರು ಜಗದೀಶ್. ಮೊದಲ ವಾರ ಸುದೀಪ್ ಅವರಿಂದ ಜಗದೀಶ್​ಗೆ ಕಿವಿಮಾತು ಸಿಕ್ಕಿತ್ತು. ಈ ಕಿವಿಮಾತಿನಿಂದ ಅವರು ಬದಲಾದಂತೆ ಇದೆ. ಎಲ್ಲರಿಗೂ ಕಿರಿಕಿರಿ ಮಾಡಿದ್ದನ್ನು ಅವರು ಮುಂದುವರಿಸಿದ್ದಾರೆ ನಿಜ. ಆದರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಅವರು ಕೊಂಚ ಬದಲಾಗಿದ್ದಾರೆ. ಅವರ ಆಲೋಚನೆಗಳು ಕೂಡ ಬದಲಾಗಿವೆ.

ಈ ಬಗ್ಗೆ ಜಗದೀಶ್ ಅವರು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್​ನ ನಾನು ಇಷ್ಟಪಡುತ್ತಿದ್ದೇನೆ. ಇದೊಂದು ಸ್ಕ್ರಿಪ್ಟೆಡ್​ ಶೋ ಎಂದುಕೊಂಡಿದ್ದೆ. ಅದು ಸುಳ್ಳಾಯಿತು. ಎಲ್ಲಾ ಸೆಟಪ್ ಇರುತ್ತದೆ ಎಂದುಕೊಂಡಿದ್ದೆ. ಅದು ಕೂಡ ಸುಳ್ಳಾಗಿದೆ. ಒಟ್ಟಾರೆ ಎಲ್ಲವೂ ಸುಳ್ಳಾಯಿತು’ ಎಂದು ಜಗದೀಶ್ ಅವರು ಕ್ಯಾಮೆರಾ ಎದುರು ಬಂದು ಹೇಳಿಕೊಂಡಿದ್ದಾರೆ.

ಜಗದೀಶ್ ಅವರು ಈ ಮೊದಲು ವಕೀಲರಾಗಿದ್ದರು. ಆದರೆ, ಈಗ ಅವರು ವಕೀಲ ವೃತ್ತಿ ನಡೆಸುವಂತಿಲ್ಲ ಎನ್ನುವ ಆದೇಶ ಬಂದಿದೆ. ಈ ಕಾರಣಕ್ಕೆ ಅವರನ್ನು ವಕೀಲರು ಎಂದು ಕರೆಯಬಾರದು ಎಂದು ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡಕ್ಕೆ ಮನವಿ ಮಾಡಿತ್ತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಈ ವಾರ ಇರಲ್ಲ ಯಾವುದೇ ಎಲಿಮಿನೇಷನ್; ಕಾರಣ ಏನು?

‘ಬಿಗ್ ಬಾಸ್ ಕನ್ನಡ ಸೀಸನ್​ 11’ರಲ್ಲಿ ಎರಡು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಈ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಭವ್ಯಾ ಗೌಡ, ಧನರಾಜ್, ಧರ್ಮ, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸ, ಜಗದೀಶ್, ಅನುಷಾ ರೈ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.