ಟಿಆರ್​ಪಿ ಲೆಕ್ಕ: ಹೊಸ ಧಾರಾವಾಹಿಗಳ ಜೊತೆ ಹಳೆ ಸೀರಿಯಲ್​ಗಳ ಕಾಂಪಿಟೇಷನ್

ಈ ವಾರದ ಕನ್ನಡ ಟಿವಿ ಟಿಆರ್​ಪಿ ವರದಿಯ ಪ್ರಕಾರ, ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. 'ಲಕ್ಷ್ಮೀ ನಿವಾಸ' ಮತ್ತು 'ಅಣ್ಣಯ್ಯ' ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿದೆ. ಹೊಸ ಧಾರಾವಾಹಿ 'ನಾನಿನ್ನ ಬಿಡಲಾರೆ' ಉತ್ತಮ ಪ್ರದರ್ಶನ ನೀಡಿದೆ. 'ಸರಿಗಮಪ' ಶೋ ಕೂಡ ಉತ್ತಮ ಟಿಆರ್​ಪಿ ಪಡೆದಿದೆ.

ಟಿಆರ್​ಪಿ ಲೆಕ್ಕ: ಹೊಸ ಧಾರಾವಾಹಿಗಳ ಜೊತೆ ಹಳೆ ಸೀರಿಯಲ್​ಗಳ ಕಾಂಪಿಟೇಷನ್
ಟಿಆರ್​ಪಿ ಲೆಕ್ಕ: ಹೊಸ ಧಾರಾವಾಹಿಗಳ ಜೊತೆ ಹಳೆ ಸೀರಿಯಲ್​ಗಳ ಕಾಂಪಿಟೇಷನ್

Updated on: Feb 13, 2025 | 2:47 PM

ಒಂದೇ ಚಾನೆಲ್​ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್​ಪಿ ಸ್ಪರ್ಧೆ ಇದ್ದೇ ಇರುತ್ತದೆ. ಎಲ್ಲಾ ಧಾರಾವಾಹಿಗಳು ಮೊದಲ ಸ್ಥಾನ ಪಡೆಯಬೇಕು ಎಂದು ಎಲ್ಲಾ ಧಾರಾವಾಹಿಗಳು ಪ್ರಯತ್ನಿಸುತ್ತಾ ಇರುತ್ತವೆ. ಈಗ ಟಿಆರ್​ಪಿ ಲೆಕ್ಕಾಚಾರ ಸಿಕ್ಕಿದೆ. ಈ ವರ್ಷದ ಐದನೇ ವಾರದ ಟಿಆರ್​ಪಿ ಲೆಕ್ಕ ಹೊರ ಬಿದ್ದಿದೆ. ಇದರಲ್ಲಿ ಯಾವ ಧಾರಾವಾಹಿ ಮೊದಲಿದೆ? ಹೊಸ ಧಾರಾವಾಹಿಗಳ ಟಿಆರ್​ಪಿ ಹೇಗಿದೆ ಎಂಬುದರ ವಿವರ ಇದೆ.

ನಗರ ಹಾಗೂ ಗ್ರಾಮಗಳ ಟಿಆರ್​ಪಿಯನ್ನು ಪರಿಗಣಿಸಿದರೆ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ.  ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತ್ತಿದೆ.

ಈ ಮೂರು ಧಾರಾವಾಹಿಗಳು ಈ ಮೊದಲೇ ಪ್ರಸಾರ ಆರಂಭಿಸಿದ್ದವು. ಹೀಗಾಗಿ, ಈಗ ಹೊಸದಾಗಿ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳು ಈ ಧಾರಾವಾಹಿಗಳ ಜೊತೆ ಸ್ಪರ್ಧೆಗೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ನಾಲ್ಕನೇ ಸ್ಥಾನದಲ್ಲಿ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಇತ್ತೀಚಿನ ದಿನಗಳಲ್ಲಿ ಆರಂಭ ಆದ ಈ ಧಾರಾವಾಹಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಈ ಧಾರಾವಾಹಿಯ ಗ್ರಾಫಿಕ್ಸ್ ಹಾಗೂ ಮೇಕಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಒಂದನೇ ಸ್ಥಾನ ಪಡೆಯಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಪ್ರಮುಖ ಟ್ವಿಸ್ಟ್​ಗಳು ಇದ್ದು, ಎಲ್ಲರ ಮೆಚ್ಚುಗೆ ಪಡೆದಿದೆ. ಹೀಗಾಗಿ ಟಾಪ್ 5ರಲ್ಲಿ ಧಾರಾವಾಹಿಗೆ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ಟಿಆರ್​ಪಿ ವಿಚಾರದಲ್ಲಿ ‘ಬಿಗ್ ಬಾಸ್ ಫಿನಾಲೆ’ ದಾಖಲೆ; ಹೊಸ ಧಾರಾವಾಹಿಗಳ ರೇಟಿಂಗ್ ಹೇಗಿದೆ?

ಇನ್ನು, ಸರಿಗಮಪ ವೇದಿಕೆ ಮೇಲೆ ಇತ್ತೀಚೆಗೆ ಶ್ರುತಿ, ಸುಧಾರಾಣಿ, ತಾರಾ ಮೊದಲಾದ ಸೆಲೆಬ್ರಿಟಿಗಳು ಬಂದಿದ್ದರು. ಇದರ ಟಿಆರ್​ಪಿ ಕೂಡ ಹೊರ ಬಿದ್ದಿದೆ. ಇದಕ್ಕೆ 10.6 ಟಿವಿಆರ್ ಸಿಕ್ಕಿದೆ. ಈ ಮೂಲಕ ಜನರು ಈ ಶೋನ ಮೆಚ್ಚಿಕೊಂಡಿದ್ದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:22 pm, Thu, 13 February 25

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us