‘ನಂದ ಗೋಕುಲ’: ತಂದೆ ನಂದನ ನಿಜವಾದ ಆಶಯ ತಿಳಿದು ಬದಲಾದ ಕೇಶವ

ಕಲರ್ಸ್ ಕನ್ನಡದ 'ನಂದ ಗೋಕುಲ' ಧಾರಾವಾಹಿಯಲ್ಲಿ, ನಂದನ ನಿಜ ಆಶಯ ತಿಳಿದು ಮಗ ಕೇಶವನ ನಿರ್ಧಾರ ಬದಲಾಗಿದೆ. ತಂದೆಯ ಕೋಪದ ಹಿಂದಿನ ಪ್ರೀತಿ ಅರ್ಥವಾದ ಕೇಶವ, ಮನೆ ಬಿಟ್ಟು ಹೋಗುವ ತನ್ನ ಹಿಂದಿನ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಈ ಜನಪ್ರಿಯ ಧಾರಾವಾಹಿ, ಭಾವನಾತ್ಮಕ ತಿರುವು ಪಡೆದು ಪ್ರೇಕ್ಷಕರನ್ನು ಸೆಳೆದಿದೆ.

‘ನಂದ ಗೋಕುಲ’: ತಂದೆ ನಂದನ ನಿಜವಾದ ಆಶಯ ತಿಳಿದು ಬದಲಾದ ಕೇಶವ
ನಂದ ಗೋಕುಲ
Edited By:

Updated on: Apr 28, 2026 | 7:55 AM

‘ನಂದ ಗೋಕುಲ’ ಧಾರಾವಾಹಿ (Nanda Gokula) ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ ಮತ್ತು ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯನ್ನು ಅನೇಕರು ಇಷ್ಟಪಟ್ಟಿದ್ದಾರೆ. ಈಗ ಧಾರಾವಾಹಿಯಲ್ಲಿ ನಂದನ ಅಸಲಿ ಮುಖ ರಿವೀಲ್ ಆಗಿದೆ. ಅಂದರೆ ಆತ ಏನು ಎಂಬುದು ರಿವೀಲ್ ಆಗಿದೆ. ಇದರಿಂದ ಕೇಶವ ತನ್ನ ನಿರ್ಧಾರವನ್ನು ಬದಲಿಸಿದ್ದಾನೆ. ಈ ಎಪಿಸೋಡ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಆತ ಪ್ರೀತಿ ತೋರಿಸೋದೇ ಹೀಗೆ. ಇದು ಮನೆಯ ಎಲ್ಲರಿಗೂ ಗೊತ್ತಿದೆ. ಆದರೂ ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

ಕೇಶವ ಹಾಗೂ ಮೀನಾ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಕೆಲವು ಕೆಲಸವನ್ನು ಕೇಶವನಿಗೆ ಹೇಳಲಾಗಿತ್ತು. ಆದರೆ, ಈ ಕೆಲಸವನ್ನು ಅವನು ಮಾಡಲೇ ಇಲ್ಲ. ಇದಕ್ಕೆ ಕಾರಣವೂ ಇದೆ. ಆತನಿಗೆ ಮೀನಾ ಜೊತೆ ಸಮಯ ಕಳೆಯಬೇಕಿತ್ತು. ಹೀಗಾಗಿ, ತಂದೆ ನಂದ ಕೊಟ್ಟ ಕೆಲಸವನ್ನು ಕೇಶವ ಮಾಡಿರಲಿಲ್ಲ. ಇದರಿಂದ ನಂದ ಬೇಸರಗೊಂಡಿದ್ದಾನೆ.

ನಂದನು ಬೇಸರಗೊಂಡ ಬಳಿಕ ಕೇಶವನಿಗೆ ಬಯ್ಯೋಕೆ ಆರಂಭಿಸಿದ. ಈ ಬಯ್ಯುವಿಕೆ ನಂತರ ಮೀನಾ ಮೇಲೂ ಶಿಫ್ಟ್ ಆಯಿತು. ಇದು ಕೇಶವನಿಗೆ ಸಾಕಷ್ಟು ಬೇಸರ ಮೂಡಿಸಿತು. ತನಗೆ ಬಯ್ಯೋದನ್ನು ಆತ ಹೇಗೋ ಸಹಸಿಕೊಳ್ಳುತ್ತಿದ್ದ. ಆದರೆ, ಈಗ ಮೀನಾಗೆ ಬಯ್ಯೋದನ್ನು ನೋಡಿ ಆತ ಸಿಟ್ಟಾಗಿದ್ದಾನೆ.

ನಂದನ ಮಾತಿನಿಂದ ಕೇಶವ ಬೇಸರಗೊಂಡ. ಆತ ಬೇರೆ ಮನೆ ಮಾಡುವ ನಿರ್ಧಾರಕ್ಕೆ ಬಂದ. ನಂತರ ಅಪ್ಪ ಮಾಡೋದು ಒಳ್ಳೆಯದಕ್ಕೆ ಎಂಬ ವಿಷಯ ಅರಿವಾಗಿದೆ. ಹೀಗಾಗಿ, ಬೇರೆ ಮನೆ ಮಾಡಬೇಕು ಎಂಬ ನಿರ್ಧರದಿಂದ ಹಿಂದೆ ಸರಿದಿದ್ದಾನೆ.

ಇದನ್ನೂ ಓದಿ: ನಂದ ಗೋಕುಲ: ಮೀನಾಳ ಒಪ್ಪಿಕೊಂಡ ನಂದ? ಸೊಸೆಗೆ ಆರತಿ ಎತ್ತಿ ಸ್ವಾಗತಿಸಿದ ಮಾವ

‘ನಂದ ಗೋಕುಲ’ ಧಾರಾವಾಹಿ ಕಲರ್ಸ್​​ನ ಟಾಪ್​ ಧಾರಾವಾಹಿಗಳಲ್ಲಿ ಮೊದಲಿದೆ. ಈ ಧಾರಾವಾಹಿ ಟಿಆರ್​​ಪಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Published On - 7:53 am, Tue, 28 April 26

Follow Us