
ಸತೀಶ್ ಕ್ಯಾಡಬಾಮ್ (Satish) ಅವರು ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ. ಒಂದಲ್ಲಾ ಒಂದು ವಿಷಯದ ಮೂಲಕ ಅವರು ವಿವಾದ ಸೃಷ್ಟಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಸತೀಶ್ ಅವರು ಮೂತ್ರ ಮಾಡುವ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, ‘ದಾದ ಯಾರ್ ಗೊತ್ತ..’ ಹಾಡನ್ನು ಹಾಕಿದ್ದರು. ಈ ವಿಷಯದಲ್ಲಿ ಸುದೀಪ್ ಅಭಿಮಾನಿಗಳು ಸಿಟ್ಟಾಗಿದ್ದರು. ಸುದೀಪ್ ಆಪ್ತ ಬಳಗದಲ್ಲಿರೋ ರಜತ್ ಹಾಗೂ ಸುದೀಪ್ ಕೂಡ ಸಿಟ್ಟಾಗಿದ್ದರು. ಈಗ ಈ ಬಗ್ಗೆ ಸತೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಚಾಲೆಂಜ್ ಕೂಡ ಹಾಕಿದ್ದಾರೆ.
ಸತೀಶ್ ಅವರು ಕೆಲ ದಿನಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮೂತ್ರ ಮಾಡುತ್ತಿರೋದು ಕಂಡು ಬಂದಿದೆ. ಇಷ್ಟೇ ಆಗಿದ್ದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಅವರು ಇದಕ್ಕೆ, ‘ದಾದ ಯಾರ್ ಗೊತ್ತ..’ ಹಾಡನ್ನು ಹಾಕಿರೋದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ರಜತ್ ಹಾಗೂ ವಿನಯ್ ಗೌಡ ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಅವರಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿಚ್ಚನ ಕಿಚಾಯಿಸಿದ ಡಾಗ್ ಸತೀಶ್ಗೆ ವಿನಯ್-ರಜತ್ ಖಡಕ್ ವಾರ್ನಿಂಗ್
ಎಸ್ಎಸ್ ಟಿವಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸತೀಶ್ ಮಾತನಾಡಿದರು. ‘ನಾನು ಮೂತ್ರ ಮಾಡಿದ್ರೂ ಸುದ್ದಿ ಆಗುತ್ತೆ ಅಂತ ಹೇಳಿದ್ದೆ. ಅದನ್ನ ತೋರಿಸೋಕೆ ವಿಡಿಯೋ ಮಾಡಿದ್ದು. ಆ ವಿಡಿಯೋಗೆ ಹಾಡು ಹೆಚ್ಚು ಸೂಕ್ತ ಅನಿಸುತ್ತಿತ್ತು. ಅದಕ್ಕೆ ಹಾಕಿದೆ’ ಎಂದು ಅವರು ಹೇಳಿದ್ದಾರೆ. ಇನ್ನು, ಯಾವುದೇ ಕಾರಣಕ್ಕೂ ವಿಡಿಯೋನ ತೆಗೆಯಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
‘ನಾನು ಕಮೆಂಟ್ಸ್ ನೋಡಿಲ್ಲ. ಹೀಗಾಗಿ, ಯಾರು ಏನು ಹೇಳಿದ್ರೋ ಗೊತ್ತಿಲ್ಲ. ನಾನು ಮೀಟರ್ಲೆಸ್ ಆಗಿದ್ರೆ ವಿಡಿಯೋ ತೆಗೆಯುತ್ತಿದ್ದೆ. ನಾನು ಮೀಟರ್ ಇರುವವನು. ಹೀಗಾಗಿ, ವಿಡಿಯೋನ ಹಾಗೆಯೇ ಇಟ್ಟಿದ್ದೇನೆ. ಸಿಎಂ ಬಂದು ಹೇಳಿದ್ರೂ ವಿಡಿಯೋ ತೆಗೆಯಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:06 am, Wed, 4 March 26