ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು

|

Updated on: Apr 19, 2021 | 5:13 PM

ವೈಷ್ಣವಿ ಅವರ ಜೋಕ್​ ಕೇಳಿ ಶುಭಾ ಪೂಂಜಾ ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಕೆಟ್ಟ ಜೋಕ್​ ಅನ್ನು ನಾನು ನನ್ನ ಜೀವಮಾನದಲ್ಲೇ ಕೇಳಿಲ್ಲ. ಅವರಿಗೆ ಒಂದು ವಾರ ನೀರನ್ನೇ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು
ವೈಷ್ಣವಿ ಗೌಡ
Follow us on

ಬಿಗ್​ ಬಾಸ್​ ಮನೆಯಲ್ಲಿ ಏನೇ ತಪ್ಪು ಮಾಡಿದರೂ ಅದಕ್ಕೊಂದು ಶಿಕ್ಷೆ ಇದ್ದೇ ಇರುತ್ತದೆ. ಬಿಗ್​ ಬಾಸ್​ ಸ್ಪರ್ಧಿಗಳು ಆದಷ್ಟು ತಪ್ಪು ಮಾಡದಿರಲಿ ಎಂಬುದನ್ನು ನೋಡಿಕೊಳ್ಳೋಕೇ ಈ ರೀತಿ ಮಾಡಲಾಗುತ್ತಿದೆ. ಈಗ ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ತಪ್ಪೊಂದು ಮಾಡಿದ್ದಾರೆ. ಅದಕ್ಕೆ ಶಿಕ್ಷೆ ಕೂಡ ಸಿಕ್ಕಿದೆ.

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಕಿಚನ್​ನಲ್ಲಿ ಪಾತ್ರೆ ತೊಳೆಯುವ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಗಾಜಿನ ಲೋಟ​ ಒಂದು ಒಡೆದು ಹೋಗಿದೆ. ಆಗ ರಘು, ನೀನು ಕಪ್​ ಒಡೆದು ಹಾಕಿದ್ದೀಯಾ. ನಿನಗೆ ಶಿಕ್ಷೆ ಖಂಡಿತ. ಬಿಗ್​ ಬಾಸ್​ ಇವರಿಗೆ ಕಠಿಣ ಶಿಕ್ಷೆ ನೀಡಿ ಎಂದು ಕೋರಿದ್ದರು. ವೈಷ್ಣವಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಈ ವೇಳೆ ಬಿಗ್​ ಬಾಸ್ ಬಳಿ ಕ್ಷಮೆ ಕೂಡ ಕೇಳಿದ್ದಾರೆ.

ಈಗ ಬಿಗ್​ ಬಾಸ್​ ವೈಷ್ಣವಿಗೆ ಶಿಕ್ಷೆ ನೀಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ನಿಮಗೆ ನೀರು ಕುಡಿಯಬೇಕು ಎಂದರೆ ಮನೆಯ ಸದಸ್ಯರಿಗೆ ಒಂದು ಜೋಕ್​ ಹೇಳಬೇಕು. ಅಂದಾಗ ಮಾತ್ರ ನೀವು ನೀರು ಕುಡಿಯಬಹುದು ಎಂದು ಬಿಗ್​ ಬಾಸ್​ ಹೇಳಿದ್ದಾರೆ.  ಅವರು ಬಿಗ್​ ಬಾಸ್​ ಮನೆಯಲ್ಲಿ ಜೋಕ್​ ಹೇಳೋಕೆ ಒದ್ದಾಡಿದ್ದಾರೆ. ಮನೆಯವರು ವೈಷ್ಣವಿ ನಗು ಬಾರದ ಜೋಕ್​ ಕೇಳಿ ಕೇಳಿ ಸುಸ್ತ್​ ಆಗಿದ್ದಾರೆ.

ವೈಷ್ಣವಿ ಅವರ ಜೋಕ್​ ಕೇಳಿ ಶುಭಾ ಪೂಂಜಾ ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಕೆಟ್ಟ ಜೋಕ್​ ಅನ್ನು ನಾನು ನನ್ನ ಜೀವಮಾನದಲ್ಲೇ ಕೇಳಿಲ್ಲ. ಅವರಿಗೆ ಒಂದು ವಾರ ನೀರನ್ನೇ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು, ವೈಷ್ಣವಿ ಜೋಕ್​ ಕೇಳಿ ಮಂಜು ಕೂಡ ಗಾಬರಿ ಆಗಿದ್ದಾರೆ. ಈ ಎಪಿಸೋಡ್​ ಇಂದು (ಏಪ್ರಿಲ್​ 19) ರಂದು ಪ್ರಸಾರವಾಗಲಿದೆ. ವೈಷ್ಣವಿ ಅವರ ಜೋಕ್​ ಕೇಳಿ ಯಾರ್ಯಾರ ಕಿವಿಯಲ್ಲಿ ರಕ್ತ ಬಂತು ಎಂಬುದು ಗೊತ್ತಿಲ್ಲ ಎಂದು ವೀಕ್ಷಕರು ಕಮೆಂಟ್​ ಹಾಕಿದ್ದಾರೆ.

ಇದನ್ನೂ ಓದಿ: ಒಮ್ಮೊಮ್ಮೆ ಕೊಲೆ ಮಾಡಬೇಕು ಅನಿಸುತ್ತೆ; ರಘು ಗೌಡ ಹೀಗೆ ಹೇಳಿದ್ದು ಯಾರಿಗೆ?

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

Published On - 5:11 pm, Mon, 19 April 21