AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

ಬಿಗ್​ ಬಾಸ್​ ಮನೆ ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ಗೆ ಭವಿಷ್ಯ ಹೇಳುವ ಕಲೆ ಗೊತ್ತಿದೆಯಂತೆ! ಹೀಗಾಗಿ, ಅವರು ಬಿಗ್​ ಬಾಸ್​ನ ಪ್ರತಿ ಸ್ಪರ್ಧಿ ಬಳಿ ಹೋಗಿ ಭವಿಷ್ಯ ಹೇಳಿದ್ದಾರೆ.

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ
ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: Apr 12, 2021 | 8:46 AM

Share

ವೈಷ್ಣವಿ ಗೌಡ ಬಿಗ್​ ಬಾಸ್​ ಮನೆಗೆ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಸಾಕಷ್ಟು ಸೈಲೆಂಟ್​ ಆಗಿದ್ದರು. ನಂತರ ಅವರು ಕ್ರಶ್​ ಬಗ್ಗೆ ಹೇಳಿಕೊಂಡಿದ್ದರು. ಈಗ ಅವರು ಬಿಗ್​ ಬಾಸ್​ ಮನೆಯಲ್ಲಿ ಗಂಡ ಬೇಕು ಎಂದು ಗೋಗರೆಯುತ್ತಿದ್ದಾರೆ. ಇದನ್ನು ಕೇಳಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆ ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ಗೆ ಭವಿಷ್ಯ ಹೇಳುವ ಕಲೆ ಗೊತ್ತಿದೆಯಂತೆ! ಹೀಗಾಗಿ, ಅವರು ಬಿಗ್​ ಬಾಸ್​ನ ಪ್ರತಿ ಸ್ಪರ್ಧಿ ಬಳಿ ಹೋಗಿ ಭವಿಷ್ಯ ಹೇಳಿದ್ದಾರೆ.

ನಿಧಿ ಬಳಿ ಹೋಗಿ, ನಿಮಗೆ ಮದುವೆ ಆಗುತ್ತೆ. ಗಂಡು ಮಗು ಜನಿಸುತ್ತದೆ. ನಿಮ್ಮ ಹಾರ್ಟ್​ ತುಂಬಾನೇ ಒಳ್ಳೆಯದು. ವಯಸ್ಸು 80ರ ಮೇಲಾಗುತ್ತದೆ ಎಂದು ಚಂದ್ರಚೂಡ್​ ಭವಿಷ್ಯ ನುಡಿದರು. ಈ ವಿಚಾರವನ್ನು ಕೇಳಿ ನಿಧಿ ತುಂಬಾನೇ ಖುಷಿ ಆದರು.

ರಘು ಬಳಿ ಹೋಗಿ, ನಿನಗೆ ಯಾವುದರ ಮೇಲೂ ನಂಬಿಕೆ ಇಲ್ಲ. ರೇಖೆಗಳೇ ಇದನ್ನು ಹೇಳುತ್ತವೆ ಎಂದರು ಚಂದ್ರಚೂಡ್​. ಬ್ರೋ ಗೌಡ ಅವರದ್ದು ಜೂಜಿನ ಕೈ. ಜೂಜು ಆಡಿದರೆ ಹಣ ಬರುತ್ತದೆ ಎಂದರು ಅವರು. ಪ್ರಶಾಂತ್​ ಅವರನ್ನು ಮರಳುಗಾಡಿನಲ್ಲಿ ಬಿಟ್ಟರೂ ಅವರು ಮರಳಿ ಮಾರಿ ಬದುಕುತ್ತಾರೆ ಎಂದರು.

10 ಚಕ್ರದ ಹೆಣ್ಣುಮಗಳು ಯಾರು ಎಂದು ಕೇಳಿದರು ಚಂದ್ರಚೂಡ್​. ಇದಕ್ಕೆ ವೈಷ್ಣವಿ ನಾನೇ ಎಂದರು. ಆಗ ಮಾತನಾಡಿದ ಚಂದ್ರಚೂಡ್​, ನೀವು ಸಮಾಜಕ್ಕೆ ಒಳ್ಳೆಯದು ಮಾಡಬೇಕು. ದೇಶಕ್ಕಾಗಿ ದುಡಿಯಬೇಕು ಎಂದರು. ಆಗ ವೈಷ್ಣವಿ, ನನಗೆ ಮದುವೆ ಆಗಬೇಕು. ವಿವಾಹವಾಗಿ ದೇಶಸೇವೆ ಮಾಡಬಹುದೇ ಎಂದು ಕೇಳಿದರು. ನಿನಗೆ ಮದುವೆ ಆಗಲ್ಲ ಎಂದು ಚಂದ್ರಚೂಡ್​ ಕಡ್ಡಿ ಮುರಿದಂತೆ ಹೇಳಿದರು. ಆಗ ವೈಷ್ಣವಿ ನನಗೆ ಗಂಡ ಬೇಕು ಎಂದು ಹಠ ಹಿಡಿದರು. ಮದುವೆ ಮಾಡ್ಕೊಳ್ಳಮ್ಮ, ಯಾರು ಬೇಡ ಎಂದರು ಎಂದು ಚಂದ್ರಚೂಡ್​ ನಕ್ಕರು. ಇದನ್ನು ಕೇಳಿ ಮನೆ ಮಂದಿ ಎಲ್ಲರೂ ನಗೆ ಗಡಲಲ್ಲಿ ತೇಲಿದರು.

ಇದನ್ನೂ ಓದಿ:  ನಿಮ್ಮೇಲೆ ಕ್ರಶ್​ ಆಗಿದೆ; ವೈಷ್ಣವಿ ಎದುರು ಫೀಲಿಂಗ್ಸ್​ ಹೇಳಿಕೊಂಡ ರಘು!

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!

Follow Us
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!