AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!

BBK8: ಸದಾ ಸೈಲೆಂಟ್​ ಆಗಿರುವ ನಟಿ ವೈಷ್ಣವಿ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅವರ ಒಂದು ಲವ್​ಸ್ಟೋರಿ ರಹಸ್ಯ ಬಯಲಾಗಿದೆ.

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!
ವೈಷ್ಣವಿ ಗೌಡ
ಮದನ್​ ಕುಮಾರ್​
|

Updated on: Mar 26, 2021 | 12:57 PM

Share

ಕಿರುತೆರೆಯ ‘ಅಗ್ನಿಸಾಕ್ಷಿ’ ಸೀರಿಯಲ್​ ಮೂಲಕ ಸಿಕ್ಕಾಪಟ್ಟೆ ಫೇಮಸ್​ ಆದವರು ನಟಿ ವೈಷ್ಣವಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅವರು ಮಾಡಿದ ಸನ್ನಿಧಿ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಸದ್ಯ ವೈಷ್ಣವಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಸುತ್ತಿದ್ದಾರೆ. ವೈಷ್ಣವಿ ಮಾತನಾಡುವುದು ಕಮ್ಮಿ ಎಂಬ ಅಭಿಪ್ರಾಯ ಎಲ್ಲರಲ್ಲೂ ಇದೆ. ಆದರೆ ಈಗ ಅವರೊಂದು ಮುಖ್ಯವಾದ ವಿಚಾರದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ತಮ್ಮ ನಿಜಜೀವನದ ಲವ್​ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ಚಿಕ್ಕ ವಯಸ್ಸಿನಿಂದಲೂ ನನಗೆ ಲವ್​ ಮಾಡಬೇಕು, ರಿಲೇಷನ್​ಶಿಪ್​ನಲ್ಲಿ ಇರಬೇಕು ಎಂಬ ಆಸೆ ಇತ್ತು. ನನ್ನ ಸ್ನೇಹಿತೆಯರೆಲ್ಲ ರಿಲೇಷನ್​ಶಿಪ್​ನಲ್ಲಿ ಇದ್ದರು. ತಮಗೆ ಬಾಯ್​ಫ್ರೆಂಡ್​ ಇದಾನೆ ಅಂತ ಹೇಳಿಕೊಳ್ತಾ ಇದ್ದರು. ಆದರೆ ನಂಗೆ ಲವ್​ ಆಗಿರಲಿಲ್ಲ. ನನಗೇನು ಕಡಿಮೆ ಆಗಿದೆ? ನಾನು ಯಾಕೆ ಯಾವಾಗಲೂ ಸಿಂಗಲ್​ ಆಗಿ ಇರುತ್ತೇನೆ? ಈ ಪ್ರಶ್ನೆ ನನ್ನನ್ನು ಕಾಡುತ್ತಿತ್ತು’ ಎಂದು ತಮ್ಮ ಲವ್​ ಸ್ಟೋರಿ ಹೇಳಲು ಶುರು ಮಾಡಿದರು ವೈಷ್ಣವಿ.

‘ಒಂದು ರಿಲೇಷನ್​ಶಿಪ್​ ಕೂಡ ನನಗೆ ಆಗುತ್ತಿರಲಿಲ್ಲ. ಹಾಗಾಗಿ ಎಲ್ಲೇ ಹೋದರೂ ಕೂಡ ನಾನು ಹುಡುಕಾಟ ನಡೆಸುತ್ತಿದ್ದೆ. ಪ್ರತಿ ಬಾರಿ ಕಲ್ಲು ಹೊಡೆಯುತ್ತಿದ್ದೆ. ಆದರೆ ನನಗೆ ಯಾರೂ ಸಿಗುತ್ತಿರಲಿಲ್ಲ. ಒಮ್ಮೆ ಜಿಮ್​ಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗ ನನಗೆ ಇಷ್ಟ ಆದ. ಪರಿಚಯ ಆಯಿತು. ನೀವು ನಟಿನಾ ಎಂದು ಅವರು ಕೇಳಿದರು. ಹೌದು ಅಂತ ಹೇಳಿದೆ. ಅವತ್ತಿಂದ ಒಂದು ಕಿಡಿ ಹೊತ್ತಿಕೊಂಡಿತು. ಆದರೆ ಮುಂದುವರಿಯೋಕೆ ನನಗೆ ನಾಚಿಕೆ ಆಗುತ್ತಿತ್ತು’ ಎಂದು ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರ ಎದುರು ನಾಚುತ್ತಲೇ ಈ ವಿಚಾರ ಹೇಳಿಕೊಂಡಿದ್ದಾರೆ. ಮುಂದೇನಾಯಿತು ಎಂಬ ಕುತೂಹಲದಲ್ಲೇ ಎಲ್ಲರೂ ಕೇಳಿಸಿಕೊಳ್ಳುತ್ತಿದ್ದರು.

ಅವರು ಬಾಕ್ಸಿಂಗ್​​ ಕ್ಲಾಸ್​ಗೆ ಬರುತ್ತಿದ್ದರು, ನಾನು ಡ್ಯಾನ್ಸ್​ ಕ್ಲಾಸ್​ಗೆ ಬರುತ್ತಿದೆ. ಹಾಗಾಗಿ ಟೈಮಿಂಗ್​ ಮಿಸ್​ ಆಗುತ್ತಿತ್ತು. ಅವರು ಯಾಕೆ ಕಾಣಿಸುತ್ತಿಲ್ಲ ಎಂದು ಅವರ ಬಗ್ಗೆಯೇ ಆಲೋಚನೆ ಮಾಡುತ್ತ ಡ್ಯಾನ್ಸ್​ ಮಾಡುತ್ತಿದ್ದಾಗ ಒಮ್ಮೆ ಬ್ಯಾಲೆನ್ಸ್​ ತಪ್ಪಿ ಬಿದ್ದು ಬಿಟ್ಟೆ. ಆಮೇಲೆ ಹತ್ತು ದಿನ ಡಾಕ್ಟರ್​ ರೆಸ್ಟ್​ ತೆಗೆದುಕೊಳ್ಳಲು ಹೇಳಿದರು. ನಂತರ ಶೂಟಿಂಗ್​ ಬೇರೆ ಇತ್ತು. ಇನ್ನು 10 ದಿನ ಅವರನ್ನು ನೋಡೋಕೆ ಆಗಲ್ಲವಲ್ಲ ಅಂತ ಬೇಜಾರು ಆಯಿತು. ಅವರ ಹೆಸರು ಗೊತ್ತಿಲ್ಲ, ಜಾಸ್ತಿ ಮಾತನಾಡಿಸಿಲ್ಲ, ಸೋಶಿಯಲ್ ಮೀಡಿಯಾದಲ್ಲೂ ಫ್ರೆಂಡ್ಸ್​ ಆಗಿರಲಿಲ್ಲ’ ಎಂದು ವೈಷ್ಣವಿ ಹೇಳುತ್ತಿದ್ದಂತೆಯೇ ಎಲ್ಲರ ಕುತೂಹಲ ಇನ್ನಷ್ಟು ಕೆರಳಿತು.

‘10 ದಿನ ಆದಮೇಲೆ ರೆಸ್ಟ್​ ಮುಗಿಯಿತು. ಅವರು ಎಲ್ಲಿದ್ದಾರೆ ಅಂತ ಹುಡುಕುತ್ತಲೇ ಇದ್ದೆ. ಒಂದಿನ ಜಿಮ್​ ಮುಗಿಸಿಕೊಂಡು ಅಪ್ಪನ ಬೈಕ್​ನಲ್ಲಿ ಕುಳಿತು ಮನೆಗೆ ಹೋಗ್ತಾ ಇದ್ದೆ. ಅಲ್ಲೇ ದಾರಿಯಲ್ಲಿ ಆ ಹುಡುಗ ಕಾಣಿಸಿದ. ಮತ್ತೆ ಸ್ಪಾರ್ಕ್​ ಆಯಿತು. ಅಲ್ಲೇ ಅವನ ಪಕ್ಕಕ್ಕೆ ನೋಡಿದರೆ ಒಬ್ಬಳು ಹುಡುಗಿ ಇದ್ದಳು. ಅವರಿಬ್ಬರು ಫ್ರೆಂಡ್ಸ್​ ಆಗಿರಬಹುದು ಅಂದುಕೊಂಡೆ. ಇನ್ನೂ ಸ್ವಲ್ಪ ಗಮನಿಸಿ ನೋಡಿದರೆ ಅವರು ಕೈ ಕೈ ಹಿಡಿದುಕೊಂಡಿರುವುದು ಕಾಣಿಸಿತು. ಇಬ್ಬರೂ ಪರಸ್ಪರ ಕೈ ಉಜ್ಜಿಕೊಳ್ಳುತ್ತಿದ್ದರು. ಕೊನೇ ಬಾರಿ ಒಮ್ಮೆ ಹಿಂದೆ ತಿರುಗಿ ಟಾಟಾ ಮಾಡಿದೆ. ನಾನು ಅವರನ್ನು ನೋಡಿದ್ದು ಅದೇ ಲಾಸ್ಟ್​. ಈ ಘಟನೆ ಯಾರಿಗೂ ಗೊತ್ತಿರಲಿಲ್ಲ. ಇದೆಲ್ಲ ಕೇಳಿಸಿಕೊಂಡಮೇಲೆ ಅಮ್ಮ ಮತ್ತೆ ನನ್ನನ್ನು ಜಿಮ್​ಗೆ ಕಳಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ವೈಷ್ಣವಿ ನಗು ಚೆಲ್ಲಿದ್ದಾರೆ.

ಇದನ್ನೂ ಓದಿ: ವೈಷ್ಣವಿಯ ಬಟ್ಟೆ ಎಳೆದ ಶಮಂತ್​ ಬ್ರೋ ಗೌಡ! ಕಿಚ್ಚನ ಎದುರು ವೈಷ್ಣವಿ ಗಂಭೀರ ಆರೋಪ

ಹಾಗೆಲ್ಲಾ ಮುಟ್ಟಿದ್ರೆ ಕಚ್ಚಿ ಬಿಡ್ತೀನಿ; ವೈಷ್ಣವಿ ಹೀಗೆ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

Follow Us
ನಡುರಸ್ತೆಯಲ್ಲೇ ಸಿಲುಕಿಕೊಂಡ ಕೆಎಸ್‌ಆರ್‌ಟಿಸಿ ಬಸ್
ನಡುರಸ್ತೆಯಲ್ಲೇ ಸಿಲುಕಿಕೊಂಡ ಕೆಎಸ್‌ಆರ್‌ಟಿಸಿ ಬಸ್
3-4 ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ
3-4 ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ