AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ, ಅವರು ಮನೆಯವರನ್ನು ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಮುಂದಾಗುತ್ತಿದ್ದಾರೆ.

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ
ಪ್ರಶಾಂತ್​-ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 12, 2021 | 8:34 AM

ಬಿಗ್​ ಬಾಸ್​ ಮನೆಯ ಸದಸ್ಯರು ಪ್ರಶಾಂತ್​ ಸಂಬರಗಿ ಮೇಲೆ ಸಾಲು ಸಾಲು ಆರೋಪ ಮಾಡುತ್ತಲೇ ಇರುತ್ತಾರೆ. ಕೆಲವೊಂದು ಮನೆಯಲ್ಲೇ ಬಗೆಹರಿದರೆ, ಇನ್ನೂ ಕೆಲವು ಸುದೀಪ್​ ಎದುರು ಚರ್ಚೆಗೆ ಬರುತ್ತದೆ. ಆದರೆ, ಈ ಬಾರಿ ಸ್ವತಃ ಸುದೀಪ್​ ಅವರೇ ಪ್ರಶಾಂತ್​ ವಿಚಾರ ಎತ್ತಿಕೊಂಡು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸರಿಯಾಗಿ ಮಾತಿನ ಚಾಟಿ ಬೀಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ, ಅವರು ಮನೆಯವರನ್ನು ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಮುಂದಾಗುತ್ತಿದ್ದಾರೆ. ಎಲ್ಲರೂ ತಾವು ಹೇಳಿದಂತೆ ಕೇಳಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಇದರ ಭಾಗವಾಗಿ ಅವರು ಕೆಲವು ಸುಳ್ಳುಗಳನ್ನು ಹೇಳಿದ್ದಾರೆ. ಇದು ಸುದೀಪ್​ ಗಮನಕ್ಕೆ ಬಂದಿದೆ.

ಬಿಗ್​ ಬಾಸ್​ ಇತ್ತೀಚೆಗೆ ಟಾಸ್ಕ್​ ಒಂದನ್ನು ನೀಡಿದ್ದರು. ಅದನ್ನು ಹೇಳೋಕೆ ಕನ್​ಫೆಷನ್​ ರೂಂಗೆ ಪ್ರಶಾಂತ್​ ಅವರನ್ನು ಕರೆಯಲಾಗಿತ್ತು. ಆಗ ಬಿಗ್​ ಬಿಗ್​ ಬಾಸ್​ ಟಾಸ್ಕ್​ ಬಗ್ಗೆ ಹೇಳಿದ್ದರು. ಆಗ ನಮಗೆ ಊಟ ಆಗಿಲ್ಲ, 10 ನಿಮಿಷ ಟೈಂ ಕೊಡಿ ಎಂದು ಪ್ರಶಾಂತ್​ ಕೇಳಿದ್ದರು. ಆದರೆ, ಕನ್​ಫೆಷನ್​ ರೂಂನಿಂದ ಹೊರ ಬಂದ ಪ್ರಶಾಂತ್​, ಬಿಗ್​ ಬಾಸ್ ಹೇಳಿದಾರೆ, 10 ನಿಮಿಷ ಮಾತ್ರ ಟೈಂ ಇದೆ. ಅಷ್ಟರಲ್ಲಿ ರೆಡಿ ಆಗಿ ಎಂದು ಹೇಳಿದ್ದರು. ಇದನ್ನು ಸುದೀಪ್​ ಉಲ್ಲೇಖಿಸಿದ್ದಾರೆ.

ಇನ್ನು, ಬಿಗ್​ ಬಾಸ್​ ಮನೆಯಲ್ಲಿ ದಿಂಬಿನ ಫೈಟ್​ ನಡೆಯುತ್ತಿತ್ತು. ಹೀಗೆ ಮಾಡಬಾರದು ಎಂದು ಬಿಗ್​ ಬಾಸ್​ ಹೇಳಿದಾರೆ ಅಂತ ಪ್ರಶಾಂತ್​ ಹೇಳುವ ಮೂಲಕ ಮನೆಯವರನ್ನು ಸುಮ್ಮನಿರಿಸಿದ್ದರು. ಇದಕ್ಕೂ ಸುದೀಪ್​ ಅಸಮಾಧಾನ ಹೊರ ಹಾಕಿದ್ದಾರೆ.

ಬಿಗ್​ ಬಾಸ್ ಕೋಟ್​ ಮಾಡಿ ಹೇಳುವಾಗ ಎಚ್ಚರವಾಗಿರಿ. ಬಿಗ್​ ಬಾಸ್​ ಏನು ಹೇಳಿದ್ದಾರೋ ಅದನ್ನು ಮಾತ್ರ ಹೇಳಬೇಕು. ನೀವೇ ಲೈನ್ ಕ್ರಿಯೇಟ್​ ಮಾಡಿ ಹೇಳಬಾರದು. ಹಾಗೆ ಹೇಳೋದು ತಪ್ಪಾಗುತ್ತದೆ ಎಂದು ಅಚ್ಚರಿಸಿದರು. ಇದಕ್ಕೆ ಸಮಜಾಯಿಶಿ ಕೊಡೋಕೆ ಹೋದ ಪ್ರಶಾಂತ್​ಗೆ, ತಪ್ಪು ತಪ್ಪೇ ಎಂದು ಹೇಳುವ ಮೂಲಕ ಸುದೀಪ್​​ ಸುಮ್ಮನಾಗಿಸಿದರು.

ಇದನ್ನೂ ಓದಿ: ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!

ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ

ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ