AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಾಗಿ ಇರುವುದನ್ನು ನೋಡಿದ ಅನೇಕರು ಮನೆಯಲ್ಲಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮೊದಲಿರೋದು ಪ್ರಶಾಂತ್ ಸಂಬರಗಿ.

ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!
ರಘು ಗೌಡ-ಪ್ರಶಾಂತ್ ಸಂಬರಗಿ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 10, 2021 | 4:23 PM

Share

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸ್ಟ್ರಾಂಗ್​ ಸ್ಪರ್ಧಿಗಳನ್ನು ಸೋಲಿಸೋಕೆ ಒಂದಾದಮೇಲೆ ಒಂದರಂತೆ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ, ಈ ರೀತಿ ಕುತಂತ್ರಗಳ ಬಗ್ಗೆ ಮನೆಯವರಿಗೆ ವಾಸನೆ ಸಿಕ್ಕಿದೆ. ಹೀಗಾಗಿ, ಎಲ್ಲಾ ಸ್ಪರ್ಧಿಗಳೂ ಎಚ್ಚೆತ್ತುಕೊಂಡಿದ್ದಾರೆ. ರಘು ಕೂಡ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಇದರಿಂದಲೇ, ಪ್ರಶಾಂತ್​ ಸಂಬರಗಿ ಮಾಡಿದ ದೊಡ್ಡ ಕುತಂತ್ರವೊಂದು ವಿಫಲವಾಗಿದೆ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಾಗಿ ಇರುವುದನ್ನು ನೋಡಿದ ಅನೇಕರು ಮನೆಯಲ್ಲಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮೊದಲಿರೋದು ಪ್ರಶಾಂತ್ ಸಂಬರಗಿ. ಹೀಗಾಗಿ, ದಿವ್ಯಾ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಿ, ಮಂಜು ಅವರನ್ನು ವೀಕ್​ ಮಾಡಬೇಕು ಎನ್ನುವುದು ಸಂಬರಗಿ ಆಲೋಚನೆ. ಹೀಗಾಗಿ, ಈ ವಾರದ ಕಳಪೆ ಪ್ರದರ್ಶನವನ್ನು ದಿವ್ಯಾಗೆ ನೀಡಬೇಕು ಎಂದು ತಂತ್ರ ರೂಪಿಸಿದ್ದರು. ಸದಾ ಅವರ ಹಿಂದೆ ತಿರುಗುತ್ತಿರುವ ಶಮಂತ್​ ಅವರನ್ನು ಇದಕ್ಕಾಗಿ ಮುಂದೆ ಬಿಟ್ಟಿದ್ದರು.

ಶಮಂತ್ ಮೊದಲು ವಿಶ್ವ ಬಳಿ ಹೋಗಿ ದಿವ್ಯಾ ಅವರನ್ನು ಕಳಪೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಇದಾದ ನಂತರ ಶಮಂತ್​ ತೆರಳಿದ್ದು ರಘು ಗೌಡ ಬಳಿ. ದಿವ್ಯಾ ನನಗೆ ಅವಮಾನ ಮಾಡಿದ್ದಾಳೆ. ಅವಳ ವಿರುದ್ಧ ದ್ವೇಷ ತೀರಿಸಿಕೊಳ್ಳಲೇಬೇಕು. ಹೀಗಾಗಿ, ನಾನು ಈ ವಾರ ಅವಳಿಗೆ ಕಳಪೆ ಪಟ್ಟ ಕಟ್ಟುತ್ತಿದ್ದೇನೆ. ನೀನು ಕೂಡ ಅವಳಿಗೆ ಕಳಪೆ ಪಟ್ಟ ಕಟ್ಟು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ರಘು ನಗುತ್ತಲೇ ಓಕೆ ಎಂದಿದ್ದಾರೆ.

ರಘು ಅವರ ಮನವೊಲಿಸಿದ್ದೇನೆ ಎಂದು ಶಮಂತ್​ ಖುಷಿಯಾಗಿದ್ದರು. ಆದರೆ, ಅಚ್ಚರಿ ಎಂಬಂತೆ ರಘು ಹೆಸರು ತೆಗೆದುಕೊಂಡಿದ್ದು ಚಕ್ರವರ್ತಿ ಚಂದ್ರಚೂಡ್​ ಅವರದ್ದು. ದಿವ್ಯಾಗೆ ಒಂದೆರಡು ವೋಟ್​ ಹೆಚ್ಚು ಬಿದ್ದಿದ್ದರೂ ಅವರು ಕಳಪೆ ಪಟ್ಟ ಕಟ್ಟಿಕೊಂಡು ಜೈಲಿಗೆ ಹೋಗುತ್ತಿದ್ದರು. ಇದನ್ನು ರಘು ಗೌಡ ತಡೆದಿದ್ದಾರೆ. ಈ ಮೂಲಕ ಪ್ರಶಾಂತ್​ ತಂತ್ರವನ್ನು ರಘು ವಿಫಲ ಮಾಡಿದ್ದಾರೆ.

ಇದನ್ನೂ ಓದಿ: ಸಂಬರಗಿ ಎದುರು ಹಾಕ್ಕೊಂಡ ಮಂಜುಗೆ ಬಿಗ್​ಬಾಸ್​ ಮನೆಯಲ್ಲಿ ಇನ್ಮೇಲೆ ಕಷ್ಟಕಾಲ!

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?