AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Almonds Benefits: ತೂಕ ಕಡಿಮೆ ಮಾಡಿಕೊಳ್ಳಬೇಕೆ? ಬಾದಾಮಿಯನ್ನು ಈ ವಿಧಾನಗಳಲ್ಲಿ ಬಳಸಿದರೆ ಪರಿಣಾಮ‌‌ ಖಂಡಿತ!

Weight Loss Tips: ಬಾದಾಮಿಯು ಫೈಬರ್ ಮತ್ತು ಪ್ರೋಟೀನ್​ಗಳಿಂದ ಸಮೃದ್ಧವಾಗಿರುತ್ತದೆ. ಇದು ದೇಹದ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

Almonds Benefits: ತೂಕ ಕಡಿಮೆ ಮಾಡಿಕೊಳ್ಳಬೇಕೆ? ಬಾದಾಮಿಯನ್ನು ಈ ವಿಧಾನಗಳಲ್ಲಿ ಬಳಸಿದರೆ ಪರಿಣಾಮ‌‌ ಖಂಡಿತ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 28, 2021 | 12:36 PM

Share

ಉತ್ತಮ ಹೃದಯ ಆರೋಗ್ಯ, ಆರೋಗ್ಯಕರ ಜೀವನ ಶೈಲಿಯನ್ನು ಪಡೆಯಬೇಕಾದಲ್ಲಿ ಪೌಷ್ಟಿಕಯುಕ್ತ ಆಹಾರ ಕ್ರಮ ನಮ್ಮದಾಗಿರಬೇಕು. ದೇಹದ ತೂಕ ನಿಯಂತ್ರಣ ಕೂಡಾ ನಾವು ಸೇವಿಸುವ ಅಹಾರದಕ್ಕೆ ಅವಲಂಬಿತವಾಗಿರುತ್ತದೆ. ಹಾಗಿರುವಾಗ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಯೋಚಿಸಿದ್ದರೆ ಬಾದಾಮಿಯನ್ನು ಸೇವಿಸಿ. ಇದು ನಿಮ್ಮ ತೂಕ ನಷ್ಟಕ್ಕೆ ಸಹಯವಾಗುತ್ತದೆ. ಯಾವ ಯಾವ ವಿಧಾನಗಳಲ್ಲಿ ಬಾದಾಮಿಯನ್ನು ಸೇವಿಸಬಹುದು ಎಂದು ಆಲೋಚಿಸುತ್ತಿದ್ದಿರಾ? ಈ ಕೆಲವು ವಿಧಾನಗಳ ಮೂಲಕ ನೀವು ಬಾದಾಮಿಯನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಬಾದಾಮಿಯು ಫೈಬರ್ ಮತ್ತು ಪ್ರೋಟೀನ್​ಗಳಿಂದ ಸಮೃದ್ಧವಾಗಿರುತ್ತದೆ. ಇದು ದೇಹದ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್​ನ ಡಯೆಟಿಕ್ಸ್ ರಿತಿಕಾ ಸಮದ್ಧರ್ ಹೇಳಿರುವ ಮಾಹಿತಿಯನ್ನು ಹಿಂದುಸ್ತಾನ್ ಟೈಮ್ಸ್​ನಲ್ಲಿ ಉಲ್ಲೇಖಿಸಲಾಗಿದೆ.

ಇಂಟರ್ ನ್ಯಾಶನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾದಾಮಿಯು ಶೇ. 39ರಷ್ಟು ಕೊಬ್ಬನ್ನು ಒಳಗೊಂಡಿರುತ್ತದೆ. ಇದರಲ್ಲಿ ಶೇ. 25ರಷ್ಟು ಹೃದಯ ಅರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳಿವೆ. ಅಧ್ಯಯನದ ಪ್ರಕಾರ, ನಿಯಮಿಯವಾಗಿ ಬಾದಾಮಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳುವುದಲ್ಲದೇ ಹೊಟ್ಟೆಯ ಕೊಬ್ಬು ಮತ್ತು ಸೊಂಟದ ಹೆಚ್ಚುವರಿ ಸುತ್ತಳತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಇದಲ್ಲದೇ ಬಾದಾಮಿ ಸೇವನೆಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯ ಪ್ರಯೋಜನ ಬೀರುವಂಥದ್ದು. ಒಂದು ಮುಷ್ಟಿ ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ಅನ್ನು ಶೇ 4.4 ರಷ್ಟು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ತಜ್ಞರು ಹೇಳುವ ಪ್ರಕಾರ ಪ್ರತಿನಿತ್ಯ 28 ರಿಂದ 30 ಗ್ರಾಂ ಬಾದಾಮಿ ಸೇವಿಸುವ ಮೂಲಕ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಬಾದಾಮಿ ಸೇವಿಸಲು ಸೂಕ್ತ ಸಮಯ ಯಾವುದು? ಊಟದ ಮಾಡುವ ಮೊದಲು ನಿಮಗೆ ಹಸಿವಾದಾಗ ಬಾದಾಮಿಯಿಂದ ತಯಾರಿಸಿದ ತಿಂಡಿಗಳನ್ನು ನೀವು ಸವಿಯಬಹುದು. ಕೆಲವರು ಮುಂಜಾನೆಯಲ್ಲಿ ತಿಂಡಿಯ ನಂತರ ಹಸಿವಾದಾಗ ಮಧ್ಯ ಆಹಾರವಾಗಿ ಸೇವಿಸುತ್ತಾರೆ. ಜತೆಗೆ ಸ್ನ್ಯಾಕ್ಸ್ ರೂಪದಲ್ಲಿಯೂ ಸಹ ಸಂಜೆಯ ವೇಳೆ ಸೇವಿಸಬಹುದು.

ಹಸಿ ಬಾದಾಮಿ ಬಾದಾಮಿಯನ್ನು ಹಸಿಯಾಗಿಯೂ ಸೇವಿಸಬಹುದು ಇಲ್ಲವೇ ಹುರಿದು ಸೇವಿಸಬಹುದು. ಸುಮಾರು 22 ರಿಂದ 23 ಗ್ರಾಂ ಬಾದಾಮಿ ನಿಮ್ಮ ದೇಹದಲ್ಲಿ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲವೇ ನೀರಿನಲ್ಲಿ ನೆನೆಸಿ ಅವುಗಳನ್ನು ಸೇವಿಸಬಹುದಾಗಿದೆ. ಯಾವುದಕ್ಕೂ ಬಾದಾಮಿಯ ಸಿಪ್ಪೆ ತೆಗೆದು ಸೇವಿಸಬೇಡಿ, ನೀರಿನಲ್ಲಿ ನೆನೆಸಿ ಸೇವಿಸುವಾಗಲೂ ಸಿಪ್ಪೆಯೊಂದಿಗೆ ಬಾದಾಮಿ ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಬಾದಾಮಿ ಪುಡಿ ನೀವು ಪ್ರತಿನಿತ್ಯ ಗಂಜಿ ಅಥವಾ ಇನ್ನಿತರ ಆಹಾರವನ್ನು ಸೇವಿಸುವಾಗ ಬಾದಾಮಿ ಪುಡಿಯನ್ನು ಸೇರಿಸಿಕೊಂಡು ಸೇವಿಸಬಹುದು. ಇದು ನಿಮ್ಮ ಅರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತದೆ ಜತೆಗೆ ಆಹಾರದೊಂದಿಗೆ ಬಾದಾಮಿ ನಿಮ್ಮ ದೇಹವನ್ನು ಸೇರುತ್ತದೆ.

ಬಾದಾಮಿ ಹಾಲು ಬಾದಾಮಿ ಹಾಲು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಸುಲಭದಲ್ಲಿ ಬಾದಾಮಿ ಹಾಲನ್ನು ತಯಾರಿಸಬಹುದು ಜತೆಗೆ ಹೆಚ್ಚು ರುಚಿಕರವಾಗಿಯೂ ಇರುತ್ತದೆ. ಈ ರೀತಿಯಾಗಿ ಸುಲಭದಲ್ಲಿ ನೀವು ಅರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ತೂಕ ನಷ್ಟಕ್ಕೆ ಅದೆಷ್ಟೋ ಪ್ರಯತ್ನ ಪಡುತ್ತಿದ್ದರೆ, ಈ ರೀತಿಯಾಗಿ ನೀವು ಆರೋಗ್ಯ ಪ್ರಯೋಜನಗಳ ಜತೆಗೆ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಇದನ್ನೂ ಓದಿ:

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 3 ಬಗೆಯ ಆರೋಗ್ಯಕರ ಪಾನೀಯಗಳು ಸಹಾಯಕ

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ

(Almonds use to 4 ways for weight loss check in kannada)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ