AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇಪದೆ ವಾಂತಿ ಬಂದಂತೆ ಆಗುತ್ತದೆಯೇ? ತಲೆತಿರುಗುವಿಕೆಗೆ ಪರಿಹಾರವೇನು?

ತಲೆ ಸುತ್ತುವುದಕ್ಕೆ ವೀಕ್​ನೆಸ್, ಪಿತ್ತ, ಗರ್ಭ ಧರಿಸುವುದು ಮುಂತಾದ ಸಮಸ್ಯೆಗಳು ಇರುತ್ತದೆ. ಇದರಿಂದ ಕೆಲವೊಮ್ಮೆ ವಾಂತಿ ಕೂಡ ಉಂಟಾಗುತ್ತದೆ. ಇದು ತೀರಾ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯೇನಲ್ಲ. ಇದಕ್ಕೆ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು, ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಪದೇಪದೆ ವಾಂತಿ ಬಂದಂತೆ ಆಗುತ್ತದೆಯೇ? ತಲೆತಿರುಗುವಿಕೆಗೆ ಪರಿಹಾರವೇನು?
ಸಾಂದರ್ಭಿಕ ಚಿತ್ರ Image Credit source: iStock
ಸುಷ್ಮಾ ಚಕ್ರೆ
|

Updated on: Jan 22, 2024 | 7:08 PM

Share

ಕೆಲವೊಮ್ಮೆ ಬೆಳಗ್ಗೆ ಎದ್ದಾಗ ಇದ್ದಕ್ಕಿಂತೆ ತಲೆ ಸುತ್ತಿದಂತಾಗುತ್ತದೆ, ವಾಂತಿ ಬಂದಂತಾಗುತ್ತದೆ. ಏನೂ ಮಾಡಲು ಆಗದಷ್ಟು ಸುಸ್ತಾಗಿ ಬಿಡುತ್ತದೆ. ಗರ್ಭಿಣಿಯರಲ್ಲಿ ಈ ರೀತಿಯ ಲಕ್ಷಣಗಳು ಉಂಟಾಗುವುದು ಸಾಮಾನ್ಯ. ಆದರೆ, ಬೇರೆಯವರಿಗೂ ಈ ರೀತಿಯ ಸಮಸ್ಯೆಗಳು ಆಗಾಗ ಉಂಟಾಗುತ್ತದೆ. ದೇಹದಲ್ಲಿ ಪಿತ್ತ ಹೆಚ್ಚಾದಾಗ ಬಹುತೇಕರಿಗೆ ಈ ರೀತಿಯ ಅನುಭವ ಆಗುತ್ತದೆ. ಈ ರೀತಿ ತಲೆ ಸುತ್ತಿದಂತಾದಾಗ, ವಾಂತಿ ಬರುತ್ತದೆ ಎನಿಸಿದಾಗ ಈ ಕೆಳಗಿನ ಮನೆಮದ್ದುಗಳನ್ನು ಬಳಸಬಹುದು.

ತಲೆತಿರುಗುವಿಕೆ ಅನೇಕ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದ್ದು, ತಲೆತಿರುಗುವಿಕೆಗೆ ಕಾರಣವಾದ ವಿವಿಧ ಅಂಶಗಳ ಆಧಾರದ ಮೇಲೆ ಅವು ಎಷ್ಟು ಗಂಭೀರವಾಗಿದೆ ಎಂಬುದು ನಿರ್ಧರಿತವಾಗುತ್ತದೆ. ತಲೆತಿರುಗುವಿಕೆಯು ಹೆಚ್ಚಿದ ರಕ್ತದೊತ್ತಡ, ನಿರ್ಜಲೀಕರಣ ಅಥವಾ ಯಾವುದೇ ಇತರೆ ಸಮಸ್ಯೆಗಳಿಂದ ಉಂಟಾಗಬಹುದು. ನಿರ್ಜಲೀಕರಣವು ತಲೆತಿರುಗುವಿಕೆ ಮತ್ತು ತಲೆತಿರುಗುವಿಕೆಗೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ದೇಹವನ್ನು ಹೈಡ್ರೀಕರಿಸಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಬೇಕು.

ಇದನ್ನೂ ಓದಿ: ಬೆಂಗಳೂರು: ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವಾಂತಿ-ಜ್ವರಯಿದ್ದರೆ ನಿರ್ಲಕ್ಷಿಸದಿರಿ

ನಿರ್ಜಲೀಕರಣ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯಲು ಮರೆಯದಿರಿ. ಶುಂಠಿಯಲ್ಲಿರುವ ವಾಕರಿಕೆ ನಿವಾರಕ ಗುಣಲಕ್ಷಣಗಳು ತಲೆತಿರುಗುವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಯಾವುದೇ ರೂಪದಲ್ಲಿ ಶುಂಠಿಯನ್ನು ಸೇವಿಸಿದರೂ ತೊಂದರೆಯಿಲ್ಲ. ತಾಜಾ ಶುಂಠಿಯನ್ನು ಅಗಿಯಬಹುದು ಅಥವಾ ಶುಂಠಿ ಚಹಾವನ್ನು ಸೇವಿಸಬಹುದು.

ಆಳವಾದ ಉಸಿರಾಟವು ನಿಮ್ಮನ್ನು ಶಾಂತಗೊಳಿಸುತ್ತದೆ. ಆದ್ದರಿಂದ ಇದು ತಲೆತಿರುಗುವಿಕೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಸ್ಥಿರವಾದ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಮತ್ತು ತಲೆತಿರುಗುವಿಕೆಯನ್ನು ಕಡಿಮೆ ಮಾಡಲು ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ. ನಿಮ್ಮ ದೇಹದಲ್ಲಿನ ವಿಟಮಿನ್​ಗಳ ಕೊರತೆಯನ್ನು ಸರಿಮಾಡಿಕೊಳ್ಳಿ. ವಿಟಮಿನ್ ಬಿ 12 ಅಥವಾ ಮೆಗ್ನೀಸಿಯಮ್ ಕೊರತೆಗಳು ನಿಮ್ಮ ತಲೆತಿರುಗುವಿಕೆಗೆ ಕಾರಣವಾಗಿದ್ದರೆ ಆ ಸಪ್ಲಿಮೆಂಟ್​ಗಳನ್ನು ಸೇವಿಸಿ.

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಲು ಕಾಳು ಮೆಣಸು ಸೇವಿಸಿ

ತುಂಬ ತಲೆ ಸುತ್ತುತ್ತಿದ್ದರೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇನ್ನು ಕೆಲವರಿಗೆ ಜೀರಿಗೆ ಕಷಾಯ, ಕೋಕಂ ಹಣ್ಣಿನ ಜ್ಯೂಸ್ ಕುಡಿದರೂ ತಲೆ ಸುತ್ತುವಿಕೆ ನಿಯಂತ್ರಣಕ್ಕೆ ಬರುತ್ತದೆ. ಇವುಗಳನ್ನು ಮಾಡಿದರೂ ವಾಂತಿ ಬಂದಂತಾಗುತ್ತಿದ್ದರೆ ಅಥವಾ ತಲೆ ಸುತ್ತುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್