AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದಾ ಹಸಿವಿನ ಅನುಭವವಾಗುತ್ತದೆಯೇ? ನಿಮಗೆ ಈ ಕಾಯಿಲೆ ಇರಬಹುದು

ಅತಿಯಾಗಿ ತಿನ್ನುವುದೂ ಒಂದು ಕಾಯಿಲೆ, ನಿಮಗೆ ಇಷ್ಟವಾದ ಆಹಾರವನ್ನು ಒಂದು ಬಾರಿ ತಿನ್ನುವುದು ಬೇರೆ ಆದರೆ ಪ್ರತಿ ಐದು, ಹತ್ತು ನಿಮಿಷಗಳಿಗೊಮ್ಮೆ ಅತಿಯಾದ ಆಹಾರ ಸೇವನೆಯೂ ಒಂದು ಕಾಯಿಲೆಯಾಗಿದೆ. ವಿಶ್ವದಲ್ಲಿರುವ ಶೇ. 2ಕ್ಕಿಂತ ಹೆಚ್ಚು ಮಂದಿ Binge Eating Disorderನಿಂದ ಬಳಲುತ್ತಿದ್ದಾರೆ

ಸದಾ ಹಸಿವಿನ ಅನುಭವವಾಗುತ್ತದೆಯೇ? ನಿಮಗೆ ಈ ಕಾಯಿಲೆ ಇರಬಹುದು
Food
TV9 Web
| Edited By: |

Updated on: Jun 30, 2022 | 4:04 PM

Share

ಅತಿಯಾಗಿ ತಿನ್ನುವುದೂ ಒಂದು ಕಾಯಿಲೆ, ನಿಮಗೆ ಇಷ್ಟವಾದ ಆಹಾರವನ್ನು ಒಂದು ಬಾರಿ ತಿನ್ನುವುದು ಬೇರೆ ಆದರೆ ಪ್ರತಿ ಐದು, ಹತ್ತು ನಿಮಿಷಗಳಿಗೊಮ್ಮೆ ಅತಿಯಾದ ಆಹಾರ ಸೇವನೆಯೂ ಒಂದು ಕಾಯಿಲೆಯಾಗಿದೆ. ವಿಶ್ವದಲ್ಲಿರುವ ಶೇ. 2ಕ್ಕಿಂತ ಹೆಚ್ಚು ಮಂದಿ Binge Eating Disorderನಿಂದ ಬಳಲುತ್ತಿದ್ದಾರೆ. ಅತಿ ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕೊಬ್ಬು, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು ಹೆಚ್ಚಾಗುತ್ತದೆ.

ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡಿದರೆ ಎಷ್ಟು ಪ್ರಮಾಣದಲ್ಲಿ ಆಹಾರವನ್ನು ನಾವು ಸೇವನೆ ಮಾಡುತ್ತೇವೆ ಎಂಬುದೇ ತಿಳಿಯುವುದಿಲ್ಲ. ಅತಿ ಹೆಚ್ಚು ತಿನ್ನಲು ಕಾರಣಗಳು -ಒತ್ತಡ -ಆತ್ಮಹತ್ಯಾ ಯೋಚನೆಗಳು -ಅಡಿಕ್ಷನ್ -ತೂಕದ ಕುರಿತು ತುಂಬಾ ತಲೆಕೆಡಿಸಿಕೊಂಡಿರುವುದು

ಏನು ನೋಡಿದರೂ ತಿನ್ನಬೇಕು ಎನಿಸುವುದು: ಕೆಲವರಿಗೆ ಏನು ನೋಡಿದರೂ ತಿನ್ನಬೇಕು ಅನಿಸುತ್ತದೆ. ಇದು ಮನಸ್ಸಿನ ಭಾವನೆಯಾಗಿರುತ್ತೆ. ಪ್ರತಿಯೊಂದು ಭಾವನೆಯು ನಿಮ್ಮನ್ನು ಅತಿಯಾಗಿ ತಿನ್ನುವಂತೆ ಮಾಡುವುದಿಲ್ಲ. ನೀವು ಒತ್ತಡವನ್ನು ತೊಡೆದು ಹಾಕಲು ಸಾಧ್ಯವಾಗದಿದ್ದ ಸಮಯದಲ್ಲಿ ನಕಾರಾತ್ಮಕ ಭಾವನೆಗಳು ಅತಿಯಾಗಿ ತಿನ್ನಲು ಪ್ರಚೋದನೆ ಮಾಡುತ್ತೆ.

ಎಂಥಹ ಸಮಯದಲ್ಲಿ ಹೆಚ್ಚು ತಿನ್ನುವುದು ರೂಢಿಯಾಗುತ್ತದೆ ಯಾವುದೇ ಖಿನ್ನತೆಯಿಂದ ಬಳಲುತ್ತಿದ್ದರೆ, ಕೋಪ, ಉದ್ವೇಗ, ಭಯ, ಒಂಟಿತನಕ್ಕೆ ಒಳಗಾದರೆ ಅಥವಾ ಯಾವುದೇ ಬೇಸರದಲ್ಲಿದ್ದರೆ ನಕಾರಾತ್ಮಕ ಭಾವನೆಗಳನ್ನು ನಿಗ್ರಹಿಸಲು ಅನೇಕರು ಆಹಾರವನ್ನ ಹೆಚ್ಚಾಗಿ ತಿನ್ನುವುದನ್ನು ರೂಢಿಸಿಕೊಳ್ತಾರೆ.

ಅನೇಕ ಅಭ್ಯಾಸಗಳಂತೆ, ಆಹಾರ ಪದ್ಧತಿಯನ್ನು ಬದಲಾಯಿಸಬಹುದು ಮತ್ತು ಸರಿಪಡಿಸಬಹುದು. ಆದರೆ ಬಹಳ ದಿನಗಳಿಂದ ಈ ಅಭ್ಯಾಸವಿದ್ದರೆ ಹೊರಬರಲು ಸ್ವಲ್ಪ ಕಷ್ಟವಾದರೂ ಖಂಡಿತ ಬದಲಾಯಿಸಬಹುದು.

ಕಡಿಮೆ ಪೌಷ್ಟಿಕಾಂಶದ ಮೌಲ್ಯದೊಂದಿಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಮೂಲಕ ಒತ್ತಡದಂತಹ ನಕಾರಾತ್ಮಕ ಭಾವನೆಗಳಿಗೆ ಭಾವನಾತ್ಮಕ ಆಹಾರದೊಂದಿಗೆ ಅನೇಕ ಜನರು ಪ್ರತಿಕ್ರಿಯಿಸುತ್ತಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ