AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cardio grit Gold: ಕ್ಯಾನ್ಸರ್ ಚಿಕಿತ್ಸೆಯಲ್ಲಿ Cardiotoxicity ಅಡ್ಡಪರಿಣಾಮ; ಪತಂಜಲಿಯಲ್ಲಿ ಪರಿಹಾರ

Patanjali research on Cardiotoxicity: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೀಮೋಥೆರಪಿ ಔಷಧಿಗಳು ಕೆಲವೊಮ್ಮೆ ರೋಗಿಗಳ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ಆಯುರ್ವೇದ ಔಷಧವನ್ನು ಪಡೆಯುವುದು ಮುಖ್ಯವಾಗಿದೆ. ಪತಂಜಲಿ ಸಂಶೋಧನಾ ಸಂಸ್ಥೆ ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಕಾರ್ಡಿಯೋಗ್ರಿಟ್ ಗೋಲ್ಡ್ ಔಷಧವನ್ನು ಅಭಿವೃದ್ಧಿಪಡಿಸಿದೆ.

Cardio grit Gold: ಕ್ಯಾನ್ಸರ್ ಚಿಕಿತ್ಸೆಯಲ್ಲಿ Cardiotoxicity ಅಡ್ಡಪರಿಣಾಮ; ಪತಂಜಲಿಯಲ್ಲಿ ಪರಿಹಾರ
ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2025 | 6:31 PM

Share

Patanjali Cardio grit Gold: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಕಿಮೊಥೆರಪಿಯು ಕೆಲ ರೋಗಿಗಳ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಕಾರ್ಡಿಯೋಟಾಕ್ಸಿಸಿಟಿ (Cardiotoxicity) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ಪರಿಹಾರವಿದೆ ಎಂದು ಪತಂಜಲಿ (Patanjali) ಹೇಳಿಕೊಂಡಿದೆ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಸಂಯೋಜನೆಯಿಂದ ದೊಡ್ಡ ಕಾಯಿಲೆಗಳನ್ನೂ ಸಹ ಗುಣಪಡಿಸಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪತಂಜಲಿಯ ಆಚಾರ್ಯ ಬಾಲಕೃಷ್ಣ ಹೇಳುತ್ತಾರೆ.

ಕಿಮೋಥೆರಪಿ ಟ್ರೀಟ್ಮೆಂಟ್​ನಿಂದ ಉಂಟಾಗುವ ಕಾರ್ಡಿಯೋಟಾಕ್ಸಿಸಿಟಿಯನ್ನು ಕಾರ್ಡಿಯೋಗ್ರಿಟ್ ಗೋಲ್ಡ್​ನಿಂದ ಗುಣಪಡಿಸಬಹುದು ಎಂದು ಪತಂಜಲಿಯ ಸಂಶೋಧನೆಯಿಂದ ಸಾಬೀತಾಗಿದೆ. ಪತಂಜಲಿ ಸಂಸ್ಥೆಯ ವಿಜ್ಞಾನಿಗಳು ಈ ಕಾರ್ಡಿಯೋಗ್ರಿಟ್ ಗೋಲ್ಡ್ ಅನ್ನು ಅಭಿವೃದ್ಧಪಡಿಸಿದ್ದಾರೆ. ಈ ಔಷಧದ ಪರಿಣಾಮವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ. ಅದರ ಫಲಿತಾಂಶಗಳನ್ನು ಇಂಟರ್ನ್ಯಾಷನಲ್ ರಿಸರ್ಚ್ ಜರ್ನಲ್ ಆದ ಜರ್ನಲ್ ಆಫ್ ಟಾಕ್ಸಿಕಾಲಜಿಯಲ್ಲಿ (Journal of Toxicology) ಪ್ರಕಟಿಸಲಾಗಿದೆ.

ಇದನ್ನೂ ಓದಿ: ಜಾಯಿಂಟ್ ಪೇನ್​ಗೆ ಆಯುರ್ವೇದ ಪರಿಹಾರ; ದಿವ್ಯ ಪೀಡಾಂತಕ್ ತೈಲ ಬಳಸುವ ಕ್ರಮ ತಿಳಿಯಿರಿ

ಕಾರ್ಡಿಯೋಗ್ರಿಟ್ ಗೋಲ್ಡ್ ಅನ್ನು ತಯಾರಿಸಿದ್ದು ಹೇಗೆ?

ಪತಂಜಲಿಯ ತಂಡವು ಸಿ. ಎಲೆಗನ್ಸ್ ಎನ್ನುವ ಹುಳದ ಮೇಲೆ ಈ ಔಷಧವನ್ನು ಪರೀಕ್ಷಿಸಿತು. ಎಲೆಗನ್ಸ್ ಎಂಬುವವು ಪ್ರಪಂಚದಾದ್ಯಂತ ವೈದ್ಯಕೀಯ ಸಂಶೋಧನೆಯಲ್ಲಿ ಬಳಸಲಾಗುವ ಸಣ್ಣ ಜೀವಿಗಳಾಗಿವೆ. ಕಾರ್ಡಿಯೋಗ್ರಿಟ್ ಗೋಲ್ಡ್ ತೆಗೆದುಕೊಂಡ ನಂತರ, ಈ ಜೀವಿಗಳಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಸಂಭವಿಸಿವೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಅವುಗಳ ಆಹಾರ ಸೇವನೆ ಸಾಮರ್ಥ್ಯ ಹೆಚ್ಚಾಯಿತು. ಹೃದಯದಂತಹ ಸಕ್ರಿಯ ಸ್ನಾಯುಗಳ ಸ್ಥಿತಿ ಸುಧಾರಿಸಿತು. ದೇಹದಲ್ಲಿ ಹಾನಿಕಾರಕ ROS (ರಿಯಾಕ್ಟಿವ್ ಆಕ್ಸಿಜನ್ ಸ್ಪೀಸೀಸ್) ಮಟ್ಟ ಕಡಿಮೆಯಾಯಿತು. ಹಾಗೆಯೇ, ಈ ಜೀವಿಗಳ ದೇಹದಲ್ಲಿ ಡಾಕ್ಸೊರುಬಿಸಿನ್ (Doxorubicin) ಮಟ್ಟ ಕಡಿಮೆಯಾಯಿತು. ಇದರರ್ಥ ಈ ಔಷಧವು ಕಾರ್ಡಿಯೋಟಾಕ್ಸಿಸಿಟಿಯ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

ಕಾರ್ಡಿಯೋಗ್ರಿಟ್ ಗೋಲ್ಡ್​ನಲ್ಲಿನ ಅಂಶಗಳು

ಕಾರ್ಡಿಯೋಗ್ರಿಟ್ ಗೋಲ್ಡ್ – ಇದು ಯೋಗೇಂದ್ರ ರಸ, ಅರ್ಜುನ್, ಮೋತಿ ಪಿಷ್ಟಿ, ಅಕಿಕ್ ಪಿಷ್ಟಿ ಮುಂತಾದ ಗಿಡಮೂಲಿಕೆಗಳು ಮತ್ತು ಬೂದಿಯನ್ನು ಒಳಗೊಂಡಿದೆ. ಹಳೆಯ ಆಯುರ್ವೇದ ಗ್ರಂಥಗಳಲ್ಲಿ, ಇವು ಹೃದಯವನ್ನು ಬಲಪಡಿಸಲು ಮತ್ತು ಹೃದಯ ಕಾಯಿಲೆಗಳನ್ನು ತಡೆಗಟ್ಟಲು ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಪತಂಜಲಿ ತಂಡವು ಈ ಸಾಂಪ್ರದಾಯಿಕ ಪರಿಹಾರಗಳನ್ನು ಆಧುನಿಕ ವೈಜ್ಞಾನಿಕ ವಿಧಾನದೊಂದಿಗೆ ಸಂಯೋಜಿಸುವ ಮೂಲಕ ಅವುಗಳಿಗೆ ಹೊಸ ರೂಪ ನೀಡಿದೆ.

ಇದನ್ನೂ ಓದಿ: ಕಣ್ಣುಗಳಿಗೆ ಹಿತ ಈ ಆಯುರ್ವೇದೀಯ ಐ ಡ್ರಾಪ್ಸ್; ಹೇಗೆ ಕೆಲಸ ಮಾಡುತ್ತೆ ಈ ಪತಂಜಲಿ ದೃಷ್ಟಿ ಔಷಧಿ ನೋಡಿ

ಆಯುರ್ವೇದವನ್ನು ಅಳವಡಿಸಿಕೊಳ್ಳುವತ್ತ ಹೆಜ್ಜೆಗಳು

ಈ ಸಂಶೋಧನೆಯು ಆಯುರ್ವೇದದ ಶಕ್ತಿಯನ್ನು ಸಾಬೀತುಪಡಿಸುತ್ತದೆ. ಅಷ್ಟೇ ಅಲ್ಲ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದಾಗ ಅವು ಆಧುನಿಕ ವೈದ್ಯಕೀಯದ ಕಠಿಣ ಸವಾಲುಗಳಿಗೆ ಪರಿಹಾರವಾಗಬಹುದು ಎಂಬುದನ್ನೂ ತೋರಿಸುತ್ತದೆ ಎಂದು ಆಚಾರ್ಯ ಬಾಲಕೃಷ್ಣ ಹೇಳುತ್ತಾರೆ. ಈಗ ಇಡೀ ಜಗತ್ತು ಆಯುರ್ವೇದದ ಕಡೆಗೆ ಭರವಸೆಯಿಂದ ನೋಡುತ್ತಿದೆ ಎನ್ನುತ್ತಾರೆ ಆಚಾರ್ಯರು.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

(Disclaimer: ಇಲ್ಲಿ ಪ್ರಸ್ತಾಪಿಸಲಾಗಿರುವ ಯಾವುದೇ ಔಷಧಿಯನ್ನು ಬಳಸುವ ಮೊದಲು, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ