AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

H3N2 In India: ಇನ್ಫ್ಲುಯೆನ್ಸ ಎ ವೈರಸ್ ಮಾರಕವೇ? ಸೋಂಕಿನ ಬಗೆಗಿನ ಸತ್ಯ ಮತ್ತು ಮಿಥ್ಯ

ತಜ್ಞರ ಪ್ರಕಾರ 65 ವರ್ಷಕ್ಕಿಂತ ಮೇಲ್ಪಟ್ಟರು, ಅಸ್ವಸ್ಥತೆಯಿಂದ ಬಳಲುತ್ತಿರುವ ಜನರು, ಉಸಿರಾಟದ ತೊಂದರೆ ಇರುವವರು, ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳು H3N2 ವೈರಸ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

H3N2 In India: ಇನ್ಫ್ಲುಯೆನ್ಸ ಎ ವೈರಸ್ ಮಾರಕವೇ? ಸೋಂಕಿನ ಬಗೆಗಿನ ಸತ್ಯ ಮತ್ತು ಮಿಥ್ಯ
H3N2 ವೈರಸ್ Image Credit source: india.com
Follow us
ಅಕ್ಷತಾ ವರ್ಕಾಡಿ
|

Updated on: Mar 17, 2023 | 5:37 PM

H3N2 ವೈರಸ್ ಬಗ್ಗೆ ಕುರಿತ ರೋಗಲಕ್ಷಣಗಳು ಹಾಗೂ ಕೆಲವೊಂದು ಸತ್ಯಗಳು ಹಾಗೂ ಮಿಥ್ಯಗಳ ಬಗ್ಗೆ ತಿಳಿಯೋಣ. ಶೀತ ಮತ್ತು ಜ್ವರದ ಪ್ರಕರಣಗಳ ಹಠಾತ್ ಏರಿಕೆಯು ಭಾರತದಲ್ಲಿ ಆತಂಕವನ್ನು ಸೃಷ್ಟಿಸಿದೆ. ನಿರಂತರ ಕೆಮ್ಮು, ಜ್ವರ ಮತ್ತು ಕೋವಿಡ್ ತರಹದ ರೋಗಲಕ್ಷಣಗಳ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ಆದರೆ ಈ ಸೋಂಕಿನ ಗಂಭೀರ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಯಾವುವು? ನೀವು ತೆಗೆದುಕೊಳ್ಳಬೇಕಾದ ತಕ್ಷಣದ ಮುನ್ನೆಚ್ಚರಿಕಾ ಕ್ರಮಗಳು ಯಾವುವು? ಈ ವೈರಸ್ ಬಗೆಗಿನ ಕೆಲವು ಸತ್ಯ ಮತ್ತು ಮಿತ್ಯಗಳ ಮಾಹಿತಿ ಇಲ್ಲಿವೆ.

H3N2 ವೈರಸ್ ಜ್ವರದ ರೋಗಲಕ್ಷಣಗಳು:

  • ಕೆಮ್ಮುವುದು
  • ಮೂಗಿನಲ್ಲಿ ಸ್ರವಿಸುವಿಕೆ ಅಥವಾ ಉಸಿರುಗಟ್ಟುವಿಕೆ
  • ಗಂಟಲು ಕೆರೆತ
  • ತಲೆನೋವು
  • ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು
  • ಜ್ವರ
  • ಅತಿಸಾರ

ಇದನ್ನೂ ಓದಿ: ರಾತ್ರಿ ನಿದ್ದೆ ಬರದೇ ಒದ್ದಾಡುತ್ತಿದ್ದೀರಾ? ಇಲ್ಲಿವೆ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವ 5 ಆಹಾರಗಳು

H3N2 ವೈರಸ್​​ನಿಂದ ಯಾರಿಗೆ ಹೆಚ್ಚು ಅಪಾಯ:

ತಜ್ಞರ ಪ್ರಕಾರ 65 ವರ್ಷಕ್ಕಿಂತ ಮೇಲ್ಪಟ್ಟರು, ಅಸ್ವಸ್ಥತೆಯಿಂದ ಬಳಲುತ್ತಿರುವ ಜನರು, ಉಸಿರಾಟದ ತೊಂದರೆ ಇರುವವರು, ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳು ಈ ವೈರಸ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

H3N2 ವೈರಸ್‌ನ ಮಿಥ್ಯ ಮತ್ತು ಸತ್ಯಗಳು:

ವೋಕಾರ್ಡ್ ಹಾಸ್ಪಿಟಲ್‌ನ ಇಂಟರ್‌ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಅನಿಕೇತ್ ಮುಲೆ ಅವರು ಭಾರತದಲ್ಲಿ ಸಾಂಕ್ರಮಿಕವಾಗಿ ಹರಡುತ್ತಿರುವ H3N2 ವೈರಸ್ ಬಗ್ಗೆ ಕೆಲವು ಅಪರಿಚಿತ ಮಿಥ್ಯ ಮತ್ತು ಸತ್ಯಗಳ ಬಗ್ಗೆ ಚರ್ಚಿಸಿದ್ದಾರೆ.

ಮಿಥ್ಯ: ಇನ್ಫ್ಲುಯೆನ್ಸ ಎ ವೈರಸ್ ಜ್ವರ ಸಾಮಾನ್ಯವಾದ ಶೀತವನ್ನು ಹೊಂದಿರುತ್ತದೆ.

ಸತ್ಯ:  ಜ್ವರವು ಸಾಮಾನ್ಯ ಶೀತದಂತೆ ಅಲ್ಲ. ಇದು ಗಮನಾರ್ಹವಾಗಿ ಹೆಚ್ಚು ಅಪಾಯಕಾರಿಯಾಗಿದೆ. ಇದು ಅಧಿಕ ಜ್ವರ, ತಲೆನೋವು ಮತ್ತು ದೇಹದ ನೋವು, ಶೀತ ಮತ್ತು ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ದೇಹದ ಬಳಲಿಕೆಯನ್ನು ಉಂಟುಮಾಡುತ್ತದೆ. ಈ ಜ್ವರವು ಸಾವಿಗೂ ಕೂಡಾ ಕಾರಣವಾಗಬಹುದು.

ಮಿಥ್ಯ: ಆರೋಗ್ಯವಂತ ಜನರಿಗೆ ಫ್ಲೂ ಲಸಿಕೆ ಅಗತ್ಯವಿಲ್ಲ

ಸತ್ಯ: ಯುವಕರು, ಆರೋಗ್ಯವಂತರು ಸೇರಿದಂತೆ ಪ್ರತಿಯೊಬ್ಬರೂ ಜ್ವರಕ್ಕೆ ತುತ್ತಾಗಬಹುದು. 6 ತಿಂಗಳ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ಪ್ರತಿವರ್ಷ ಲಸಿಕೆಯನ್ನು ಪಡೆಯಬೇಕು. ಫ್ಲೂ ಲಸಿಕೆಯು ಜ್ವರ ಮತ್ತು ಅದರ ರೋಗಲಕ್ಷಣಗಳಿಗೆ ಒಳಗಾಗುವ ವ್ಯಕ್ತಿಗಳಿಗೆ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಮಿಥ್ಯ: ಪ್ರತಿವರ್ಷ ವ್ಯಾಕ್ಸಿನೇಷನ್ ಅಗತ್ಯವಿಲ್ಲ.

ಸತ್ಯ: ಫ್ಲೂ ಲಸಿಕೆ ಪ್ರತಿರಕ್ಷೆಯು ಕಾಲಾನಂತರದಲ್ಲಿ ಕ್ಷೀಣಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಚ್ಚಿನ ರಕ್ಷಣೆಗಾಗಿ ವರ್ಷಕ್ಕೊಮ್ಮೆ ವ್ಯಾಕ್ಸಿನೇಷನ್ ಅಗತ್ಯವಿದೆ.

ಮುನ್ನೆಚ್ಚರಿಕೆಗಳು:

ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುವುದು, ಮಾಸ್ಕ್ ಧರಿಸುವುದು, ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವುದು, ಕಣ್ಣು ಮತ್ತು ಬಾಯಿಯನ್ನು ಆಗಾಗ್ಗೆ ಮುಟ್ಟುವುದನ್ನು ತಪ್ಪಿಸುವುದು, ತಲೆನೋವು ಮತ್ತು ಜ್ವರ ಕಾಣಿಸಿಕೊಂಡರೆ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವ ಮೂಲಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ