Sign In

By signing in or creating an account, you agree with Associated Broadcasting Company's Terms & Conditions and Privacy Policy.

Exam Diet: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಆರೋಗ್ಯಕರ ಡಯಟ್ ಪ್ಲಾನ್

ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.

Exam Diet: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಆರೋಗ್ಯಕರ ಡಯಟ್ ಪ್ಲಾನ್
Exam foodImage Credit source: NDTV
Follow us
ನಯನಾ ಎಸ್​ಪಿ
|

Updated on:Mar 12, 2023 | 5:50 PM

ಪರೀಕ್ಷೆಗಳು (Exams) ಪ್ರತಿ ವಿದ್ಯಾರ್ಥಿಯ (Students) ಶೈಕ್ಷಣಿಕ ಪ್ರಯಾಣದ ಅನಿವಾರ್ಯ ಭಾಗವಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ನಿಯಮಿತವಾದ ಮತ್ತು ಆರೋಗ್ಯಕರವಾದ ಊಟ ಮತ್ತು ತಿಂಡಿಗಳನ್ನು(Food)  ತಿನ್ನುವುದು ನಿಮ್ಮ ಮಕ್ಕಳು ಓದುವಾಗ ಹೆಚ್ಚು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರವು ಆಹಾರದ ಅತ್ಯಗತ್ಯ ಅಂಶವಾಗಿದೆ. ಬೆಳಗಿನ ತಿಂದಿವನ್ನು ಸೇವಿಸದೇ ಇರುವುದು ದೇಹಕ್ಕೆ ಹಾನಿಕರ. ಹೆಚ್ಚು ಹೊತ್ತು ಉಪವಾಸವಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಇದು ನಿಮ್ಮ ಮಗುವಿನ ಗಮನದ ಮೇಲೆ ಪರಿಣಾಮ ಬೀರುತ್ತದೆ.

ಎಕ್ಸಾಂ ಸ್ಟ್ರೆಸ್ ಇದ್ದರೆ ನಿಮ್ಮ ಮಗುವಿಗೆ ವಾಕರಿಕೆ ಬಂದಂತೆ ಅನಿಸಬಹುದು. ಪರೀಕ್ಷೆಯ ಮೊದಲು ಆರೋಗ್ಯಕರ ಆಹಾರವನ್ನು ಹೊಟ್ಟೆ ತುಂಬ ತಿನ್ನುವುದು ಮುಖ್ಯ. ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.

ಇದನ್ನೂ ಓದಿ: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ

ಪರೀಕ್ಷಾ ಸಮಯದಲ್ಲಿ ಮಕ್ಕಳ ಡಯಟ್​ನಲ್ಲಿ ಪೋಷಕರು ಸೇರಿಸಬೇಕಾದ ಆರೋಗ್ಯಕರ ಆಹಾರದ ಪಟ್ಟಿ ಇಲ್ಲಿದೆ:

  1. ನಿಮ್ಮ ಮಕ್ಕಳು ಹೈಡ್ರೇಟೆಡ್ ಆಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿರ್ಜಲೀಕರಣ ಸ್ನಾಯುವಿನ ಆಯಾಸಕ್ಕೆ ಕಾರಣವಾಗಿ ಪರೀಕ್ಷೆ ಬರೆಯಲು ಅಡ್ಡಿ ಉಂಟು ಮಾಡಬಹುದು.
  2. ಜೀರ್ಣಿಸಿಕೊಳ್ಳಲು ಸುಲಭವಾಗಲು ಸಣ್ಣ ಪ್ರಮಾಣದ ಆಹಾರವನ್ನು ಹಲವು ಬಾರಿ ಮಕ್ಕಳು ತಿನ್ನುವುದು ಉತ್ತಮ.
  3. ಪ್ರೋಟೀನ್ ಭರಿತ ಆಹಾರಗಳನ್ನು ಮಕ್ಕಳ ಡಯಟ್​ಗೆ ಸೇರಿಸಿ
  4. ಸಕ್ಕರೆ ಮತ್ತು ಉಪ್ಪನ್ನು ತಪ್ಪಿಸಿ ಏಕೆಂದರೆ ಅವು ವ್ಯಸನಕಾರಿ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
  5. ಪಿಜ್ಜಾ, ಬರ್ಗರ್, ವಡಾ ಪಾವ್, ಸಮೋಸಾ ಮುಂತಾದ ಬೀದಿ ತಿಂಡಿ ಮತ್ತು ಚಿಪ್ಸ್, ಚಾಕಲೇಟ್ ಅಂತಹ ಪ್ಯಾಕೇಜ್ ಆದ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳಿ.
  6. ಕೆಫೀನ್ ಅನ್ನು ತಪ್ಪಿಸಿ. ಏರೇಟೆಡ್ ಡ್ರಿಂಕ್ಸ್ (Fizzy Drinks) ಮತ್ತು ಹಣ್ಣಿನ ರಸವನ್ನು (Fruit Juice) ತಪ್ಪಿಸಿ. ಅದರ ಬದಲು ತಾಜಾ ಹಣ್ಣನ್ನು ಸೇವಿಸುವುದು ಉತ್ತಮ.
  7. ಅಜೀರ್ಣ ಮತ್ತು ಕಿಬ್ಬೊಟ್ಟೆಯ ಉಬ್ಬುವಿಕೆಯನ್ನು ತಡೆಯುವ ಹೆಚ್ಚಿನ ಫೈಬರ್ ಆಹಾರವನ್ನು ನೀಡಿ
  8. ಬಾಳೆಹಣ್ಣು ಶಕ್ತಿಯ ಉತ್ತಮ ಮೂಲವಾಗಿದೆ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು, ಮಾನಸಿಕ ಗೊಂದಲ ಮತ್ತು ಅವ್ಯವಸ್ಥೆಯನ್ನು ತಡೆಯಲು ಪರೀಕ್ಷೆಯ ಮೊದಲು ಬಾಳೆಹಣ್ಣನ್ನು ಸೇವಿಸಬಹುದು.

Published On - 3:01 pm, Sun, 12 March 23

PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ