AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Exam Diet: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಆರೋಗ್ಯಕರ ಡಯಟ್ ಪ್ಲಾನ್

ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.

Exam Diet: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಆರೋಗ್ಯಕರ ಡಯಟ್ ಪ್ಲಾನ್
Exam foodImage Credit source: NDTV
ನಯನಾ ಎಸ್​ಪಿ
|

Updated on:Mar 12, 2023 | 5:50 PM

Share

ಪರೀಕ್ಷೆಗಳು (Exams) ಪ್ರತಿ ವಿದ್ಯಾರ್ಥಿಯ (Students) ಶೈಕ್ಷಣಿಕ ಪ್ರಯಾಣದ ಅನಿವಾರ್ಯ ಭಾಗವಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ನಿಯಮಿತವಾದ ಮತ್ತು ಆರೋಗ್ಯಕರವಾದ ಊಟ ಮತ್ತು ತಿಂಡಿಗಳನ್ನು(Food)  ತಿನ್ನುವುದು ನಿಮ್ಮ ಮಕ್ಕಳು ಓದುವಾಗ ಹೆಚ್ಚು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರವು ಆಹಾರದ ಅತ್ಯಗತ್ಯ ಅಂಶವಾಗಿದೆ. ಬೆಳಗಿನ ತಿಂದಿವನ್ನು ಸೇವಿಸದೇ ಇರುವುದು ದೇಹಕ್ಕೆ ಹಾನಿಕರ. ಹೆಚ್ಚು ಹೊತ್ತು ಉಪವಾಸವಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಇದು ನಿಮ್ಮ ಮಗುವಿನ ಗಮನದ ಮೇಲೆ ಪರಿಣಾಮ ಬೀರುತ್ತದೆ.

ಎಕ್ಸಾಂ ಸ್ಟ್ರೆಸ್ ಇದ್ದರೆ ನಿಮ್ಮ ಮಗುವಿಗೆ ವಾಕರಿಕೆ ಬಂದಂತೆ ಅನಿಸಬಹುದು. ಪರೀಕ್ಷೆಯ ಮೊದಲು ಆರೋಗ್ಯಕರ ಆಹಾರವನ್ನು ಹೊಟ್ಟೆ ತುಂಬ ತಿನ್ನುವುದು ಮುಖ್ಯ. ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.

ಇದನ್ನೂ ಓದಿ: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ

ಪರೀಕ್ಷಾ ಸಮಯದಲ್ಲಿ ಮಕ್ಕಳ ಡಯಟ್​ನಲ್ಲಿ ಪೋಷಕರು ಸೇರಿಸಬೇಕಾದ ಆರೋಗ್ಯಕರ ಆಹಾರದ ಪಟ್ಟಿ ಇಲ್ಲಿದೆ:

  1. ನಿಮ್ಮ ಮಕ್ಕಳು ಹೈಡ್ರೇಟೆಡ್ ಆಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿರ್ಜಲೀಕರಣ ಸ್ನಾಯುವಿನ ಆಯಾಸಕ್ಕೆ ಕಾರಣವಾಗಿ ಪರೀಕ್ಷೆ ಬರೆಯಲು ಅಡ್ಡಿ ಉಂಟು ಮಾಡಬಹುದು.
  2. ಜೀರ್ಣಿಸಿಕೊಳ್ಳಲು ಸುಲಭವಾಗಲು ಸಣ್ಣ ಪ್ರಮಾಣದ ಆಹಾರವನ್ನು ಹಲವು ಬಾರಿ ಮಕ್ಕಳು ತಿನ್ನುವುದು ಉತ್ತಮ.
  3. ಪ್ರೋಟೀನ್ ಭರಿತ ಆಹಾರಗಳನ್ನು ಮಕ್ಕಳ ಡಯಟ್​ಗೆ ಸೇರಿಸಿ
  4. ಸಕ್ಕರೆ ಮತ್ತು ಉಪ್ಪನ್ನು ತಪ್ಪಿಸಿ ಏಕೆಂದರೆ ಅವು ವ್ಯಸನಕಾರಿ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
  5. ಪಿಜ್ಜಾ, ಬರ್ಗರ್, ವಡಾ ಪಾವ್, ಸಮೋಸಾ ಮುಂತಾದ ಬೀದಿ ತಿಂಡಿ ಮತ್ತು ಚಿಪ್ಸ್, ಚಾಕಲೇಟ್ ಅಂತಹ ಪ್ಯಾಕೇಜ್ ಆದ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳಿ.
  6. ಕೆಫೀನ್ ಅನ್ನು ತಪ್ಪಿಸಿ. ಏರೇಟೆಡ್ ಡ್ರಿಂಕ್ಸ್ (Fizzy Drinks) ಮತ್ತು ಹಣ್ಣಿನ ರಸವನ್ನು (Fruit Juice) ತಪ್ಪಿಸಿ. ಅದರ ಬದಲು ತಾಜಾ ಹಣ್ಣನ್ನು ಸೇವಿಸುವುದು ಉತ್ತಮ.
  7. ಅಜೀರ್ಣ ಮತ್ತು ಕಿಬ್ಬೊಟ್ಟೆಯ ಉಬ್ಬುವಿಕೆಯನ್ನು ತಡೆಯುವ ಹೆಚ್ಚಿನ ಫೈಬರ್ ಆಹಾರವನ್ನು ನೀಡಿ
  8. ಬಾಳೆಹಣ್ಣು ಶಕ್ತಿಯ ಉತ್ತಮ ಮೂಲವಾಗಿದೆ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು, ಮಾನಸಿಕ ಗೊಂದಲ ಮತ್ತು ಅವ್ಯವಸ್ಥೆಯನ್ನು ತಡೆಯಲು ಪರೀಕ್ಷೆಯ ಮೊದಲು ಬಾಳೆಹಣ್ಣನ್ನು ಸೇವಿಸಬಹುದು.

Published On - 3:01 pm, Sun, 12 March 23

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?