AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep: ಮಗುವಿನಂತೆ ಸುಖವಾಗಿ ನಿದ್ರಿಸಲು ಸಹಾಯ ಮಾಡಲಿವೆ ಈ ಆಹಾರಗಳು

ಸುಖನಿದ್ರೆಯು ದೇವರು ಕೊಟ್ಟ ವರವಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಈ ವರ ದಕ್ಕುವುದಿಲ್ಲ. ರಾತ್ರಿ ಮಲಗಿದರೆ ಬೆಳಗ್ಗೆಯೇ ಏಳುವವರು ಕೆಲವೇ ಕೆಲವು ಮಂದಿ, ಬಹುತೇಕ ಮಂದಿಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಲೇ ಇರುತ್ತದೆ. ಮೆಲಟೋನಿನ್ ಅಥವಾ ಸ್ಲೀಪ್ ಹಾರ್ಮೋನ್​ಗಳು ನಿದ್ರೆಯನ್ನು ಉತ್ತಮಗೊಳಿಸುತ್ತದೆ. ಈ ಹಾರ್ಮೋನ್​ಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ

Sleep: ಮಗುವಿನಂತೆ ಸುಖವಾಗಿ ನಿದ್ರಿಸಲು ಸಹಾಯ ಮಾಡಲಿವೆ ಈ ಆಹಾರಗಳು
Sleep
Follow us
TV9 Web
| Updated By: ನಯನಾ ರಾಜೀವ್

Updated on: Jul 06, 2022 | 12:58 PM

ಸುಖನಿದ್ರೆಯು ದೇವರು ಕೊಟ್ಟ ವರವಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಈ ವರ ದಕ್ಕುವುದಿಲ್ಲ. ರಾತ್ರಿ ಮಲಗಿದರೆ ಬೆಳಗ್ಗೆಯೇ ಏಳುವವರು ಕೆಲವೇ ಕೆಲವು ಮಂದಿ, ಬಹುತೇಕ ಮಂದಿಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಲೇ ಇರುತ್ತದೆ. ಮೆಲಟೋನಿನ್ ಅಥವಾ ಸ್ಲೀಪ್ ಹಾರ್ಮೋನ್​ಗಳು ನಿದ್ರೆಯನ್ನು ಉತ್ತಮಗೊಳಿಸುತ್ತದೆ. ಈ ಹಾರ್ಮೋನ್​ಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ.

ಒಂದೊಮ್ಮೆ ನೀವು ಕತ್ತಲೆಯ ಕೋಣೆಯಲ್ಲಿದ್ದರೆ ಹಾರ್ಮೋನ್​ಗಳ ಪ್ರಭಾವ ಕಡಿಮೆ ಇರುತ್ತದೆ, ಬೆಳಕಿನಲ್ಲಿದ್ದರೆ ಈ ಹಾರ್ಮೋನ್​ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ಆರೋಗ್ಯಯುತ ಆಹಾರ ಸೇವನೆ, ವ್ಯಾಯಾಮವೂ ಕೂಡ ನಿಯಮಿತವಾಗಿ ಮಾಡಲೇಬೇಕಿದೆ.

ಉತ್ತಮ ನಿದ್ರೆಗೆ ಸಹಾಯಕವಾಗುವ ಆಹಾರಗಳಿವು ಹಾಲು: ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ, ಹಸುವಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಮೆಲಟೋನಿನ್ ಅಂಶವಿದ್ದು, ಯಾವುದೇ ತೊಂದರೆ ಇಲ್ಲದೆ ರಾತ್ರಿ ಆರಾಮದಾಯಕವಾಗಿ ನೀವು ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕೂಡ ಮೆಲಟೋನಿನ್ ಅಂಶವು ಹೆಚ್ಚಾಗಿರಲಿದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಹಾಗೂ ಮೆಗ್ನೀಶಿಯಂ ಅಂಶವು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ನಟ್ಸ್: ಬಾದಾಮಿ, ಪಿಸ್ತ, ಗೋಡಂಬಿ ಸೇರಿದಂತೆ ಎಲ್ಲಾ ಬಗೆಯ ನಟ್ಸ್​ಗಳು ಮೆಲಟೋನಿನ್ ಹಾಗೂ ಮೆಗ್ನೀಶಿಯಂ ಅಂಶವನ್ನು ಒಳಗೊಂಡಿರುವ ಕಾರಣ ರಾತ್ರಿ ಇವುಗಳನ್ನು ಸೇವಿಸಬೇಕು.

ಮೊಟ್ಟೆಗಳು: ಮೊಟ್ಟೆಯಲ್ಲಿ ಪ್ರೋಟಿನ್, ಐರನ್ ಹಾಗೂ ಉತ್ತಮ ಕೊಬ್ಬು ಇದ್ದು, ಸುಖನಿದ್ರೆಗೆ ಸಹಾಯ ಮಾಡುತ್ತದೆ. ಅಲ್​ಝೈಮರ್, ಪಾರ್ಕಿನ್​ಸನ್, ದೃಷ್ಟಿದೋಷಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಇಡಲಿದೆ.

ಮೀನು ಸೇವನೆ: ಸಾಲ್ಮನ್, ಸಾರ್ಡಿನೆಸ್, ಟ್ರೌಟ್​ನಲ್ಲಿ ಒಮೆಗಾ ಫ್ಯಾಟಿ ಆಸಿಡ್​ಗಳಿರಲಿದ್ದು, ಮೆಲಾಟಿನ್​ ಅನ್ನು ಒಳಗೊಂಡಿರುತ್ತದೆ. ಉತ್ತಮ ನಿದ್ರೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!