AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep: ಮಗುವಿನಂತೆ ಸುಖವಾಗಿ ನಿದ್ರಿಸಲು ಸಹಾಯ ಮಾಡಲಿವೆ ಈ ಆಹಾರಗಳು

ಸುಖನಿದ್ರೆಯು ದೇವರು ಕೊಟ್ಟ ವರವಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಈ ವರ ದಕ್ಕುವುದಿಲ್ಲ. ರಾತ್ರಿ ಮಲಗಿದರೆ ಬೆಳಗ್ಗೆಯೇ ಏಳುವವರು ಕೆಲವೇ ಕೆಲವು ಮಂದಿ, ಬಹುತೇಕ ಮಂದಿಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಲೇ ಇರುತ್ತದೆ. ಮೆಲಟೋನಿನ್ ಅಥವಾ ಸ್ಲೀಪ್ ಹಾರ್ಮೋನ್​ಗಳು ನಿದ್ರೆಯನ್ನು ಉತ್ತಮಗೊಳಿಸುತ್ತದೆ. ಈ ಹಾರ್ಮೋನ್​ಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ

Sleep: ಮಗುವಿನಂತೆ ಸುಖವಾಗಿ ನಿದ್ರಿಸಲು ಸಹಾಯ ಮಾಡಲಿವೆ ಈ ಆಹಾರಗಳು
Sleep
TV9 Web
| Edited By: |

Updated on: Jul 06, 2022 | 12:58 PM

Share

ಸುಖನಿದ್ರೆಯು ದೇವರು ಕೊಟ್ಟ ವರವಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಈ ವರ ದಕ್ಕುವುದಿಲ್ಲ. ರಾತ್ರಿ ಮಲಗಿದರೆ ಬೆಳಗ್ಗೆಯೇ ಏಳುವವರು ಕೆಲವೇ ಕೆಲವು ಮಂದಿ, ಬಹುತೇಕ ಮಂದಿಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಲೇ ಇರುತ್ತದೆ. ಮೆಲಟೋನಿನ್ ಅಥವಾ ಸ್ಲೀಪ್ ಹಾರ್ಮೋನ್​ಗಳು ನಿದ್ರೆಯನ್ನು ಉತ್ತಮಗೊಳಿಸುತ್ತದೆ. ಈ ಹಾರ್ಮೋನ್​ಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ.

ಒಂದೊಮ್ಮೆ ನೀವು ಕತ್ತಲೆಯ ಕೋಣೆಯಲ್ಲಿದ್ದರೆ ಹಾರ್ಮೋನ್​ಗಳ ಪ್ರಭಾವ ಕಡಿಮೆ ಇರುತ್ತದೆ, ಬೆಳಕಿನಲ್ಲಿದ್ದರೆ ಈ ಹಾರ್ಮೋನ್​ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ಆರೋಗ್ಯಯುತ ಆಹಾರ ಸೇವನೆ, ವ್ಯಾಯಾಮವೂ ಕೂಡ ನಿಯಮಿತವಾಗಿ ಮಾಡಲೇಬೇಕಿದೆ.

ಉತ್ತಮ ನಿದ್ರೆಗೆ ಸಹಾಯಕವಾಗುವ ಆಹಾರಗಳಿವು ಹಾಲು: ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ, ಹಸುವಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಮೆಲಟೋನಿನ್ ಅಂಶವಿದ್ದು, ಯಾವುದೇ ತೊಂದರೆ ಇಲ್ಲದೆ ರಾತ್ರಿ ಆರಾಮದಾಯಕವಾಗಿ ನೀವು ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕೂಡ ಮೆಲಟೋನಿನ್ ಅಂಶವು ಹೆಚ್ಚಾಗಿರಲಿದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಹಾಗೂ ಮೆಗ್ನೀಶಿಯಂ ಅಂಶವು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ನಟ್ಸ್: ಬಾದಾಮಿ, ಪಿಸ್ತ, ಗೋಡಂಬಿ ಸೇರಿದಂತೆ ಎಲ್ಲಾ ಬಗೆಯ ನಟ್ಸ್​ಗಳು ಮೆಲಟೋನಿನ್ ಹಾಗೂ ಮೆಗ್ನೀಶಿಯಂ ಅಂಶವನ್ನು ಒಳಗೊಂಡಿರುವ ಕಾರಣ ರಾತ್ರಿ ಇವುಗಳನ್ನು ಸೇವಿಸಬೇಕು.

ಮೊಟ್ಟೆಗಳು: ಮೊಟ್ಟೆಯಲ್ಲಿ ಪ್ರೋಟಿನ್, ಐರನ್ ಹಾಗೂ ಉತ್ತಮ ಕೊಬ್ಬು ಇದ್ದು, ಸುಖನಿದ್ರೆಗೆ ಸಹಾಯ ಮಾಡುತ್ತದೆ. ಅಲ್​ಝೈಮರ್, ಪಾರ್ಕಿನ್​ಸನ್, ದೃಷ್ಟಿದೋಷಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಇಡಲಿದೆ.

ಮೀನು ಸೇವನೆ: ಸಾಲ್ಮನ್, ಸಾರ್ಡಿನೆಸ್, ಟ್ರೌಟ್​ನಲ್ಲಿ ಒಮೆಗಾ ಫ್ಯಾಟಿ ಆಸಿಡ್​ಗಳಿರಲಿದ್ದು, ಮೆಲಾಟಿನ್​ ಅನ್ನು ಒಳಗೊಂಡಿರುತ್ತದೆ. ಉತ್ತಮ ನಿದ್ರೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?