AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ತೂಕವನ್ನು ಕಡಿಮೆ ಮಾಡಬೇಕೇ? ಹಾಗಾದ್ರೆ ಸಂಜೆ ಚಹಾದೊಂದಿಗೆ ಈ ಸ್ನ್ಯಾಕ್ಸ್​ ಸೇವಿಸಿ

ನೀವು ತುಂಬಾ ದಪ್ಪಗಿದ್ದೀರಿ ಎಂಬ ಚಿಂತೆ ನಿಮ್ಮನ್ನು ಪ್ರತಿ ದಿನ ಕಾಡುತ್ತಿದ್ದೇಯೇ? ಹಾಗಿದ್ದರೆ ನೀವು ತಿನ್ನುವ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಿ. ಇಂದಿನಿಂದ ನಿಮ್ಮ ಸಂಜೆಯ ಚಹಾದೊಂದಿಗೆ ಗರಿ ಗರಿಯಾಗಿ ಕರಿದ ತಿಂಡಿಗಳ ಬದಲಾಗಿ,ಈ ಕೆಳಗಿನ ತಿಂಡಿಗಳನ್ನು ರೂಢಿಸಿಕೊಳ್ಳಿ.

Health Tips: ತೂಕವನ್ನು ಕಡಿಮೆ ಮಾಡಬೇಕೇ? ಹಾಗಾದ್ರೆ ಸಂಜೆ ಚಹಾದೊಂದಿಗೆ ಈ ಸ್ನ್ಯಾಕ್ಸ್​ ಸೇವಿಸಿ
Health Tips
TV9 Web
| Edited By: |

Updated on: Oct 30, 2022 | 6:02 PM

Share

ನಮ್ಮ ದೇಶದಲ್ಲಿ ಬಹುಬೇಡಿಕೆಯ ಪಾನೀಯವೆಂದರೆ ಅದು ಚಹಾ. ಹಾಗೆ ನಮ್ಮಲ್ಲಿ ಹಲವರಿಗೆ ಸಂಜೆಯ ಹೊತ್ತು ಒಂದು ಕಪ್ ಟೀ ಬೇಕೇ ಬೇಕು. ಇದರ ಜೊತೆಗೆ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದ ತಿಂಡಿಯಂತೂ ಇದ್ದರೆ ಇನ್ನೂ ಖುಷಿ. ಪ್ರತಿ ದಿನ ಕರಿದ ತಿಂಡಿಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯದ ಕಡೆ ಗಮನಹರಿಸಿ.

ನೀವು ತುಂಬಾ ದಪ್ಪಗಿದ್ದೀರಿ ಎಂಬ ಚಿಂತೆ ನಿಮ್ಮನ್ನು ಪ್ರತಿ ದಿನ ಕಾಡುತ್ತಿದೆಯೇ? ಹಾಗಿದ್ದರೆ ನೀವು ತಿನ್ನುವ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಿ. ಇಂದಿನಿಂದ ನಿಮ್ಮ ಸಂಜೆಯ ಚಹಾದೊಂದಿಗೆ ಗರಿ ಗರಿಯಾಗಿ ಕರಿದ ತಿಂಡಿಗಳ ಬದಲಾಗಿ,ಈ ಕೆಳಗಿನ ತಿಂಡಿಗಳನ್ನು ರೂಢಿಸಿಕೊಳ್ಳಿ.

ಭಾರತೀಯ ತಿಂಡಿಗಳ ರುಚಿಗಳೆಂದರೇನೇ ಹಾಗೆ ನಾವು ಬಯಸಿದಾಗಲೆಲ್ಲಾ ನಮ್ಮನ್ನು ಎಳೆಯುತ್ತದೆ. ಅದು ಗರಿಗರಿಯಾದ ಸಮೋಸಾ, ಬೋಂಡಾ, ಪಕೋಡಾ, ರುಚಿಕರವಾದ ದೇಸಿ ಸ್ಯಾಂಡ್‌ವಿಚ್‌ಗಳು ಹೀಗೆ ಹತ್ತು ಹಲವು. ಈ ತಿಂಡಿಗಳು ಸಂಜೆಯ ಚಹಾಕ್ಕೆ ಹೇಳಿ ಮಾಡಿಸಿದ ಜೋಡಿ. ಆದರೆ ಇಂತಹ ತಿಂಡಿಗಳನ್ನು ಪ್ರತಿ ದಿನ ತಿನ್ನುತ್ತಿದ್ದರೆ, ನೀವು ನಿಮ್ಮ ದೇಹದ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ವಿಶೇಷವಾಗಿ ತೂಕ ಕಳೆದುಕೊಳ್ಳಲು ಬಯಸುವವರು ಆದಷ್ಟು ಎಣ್ಣೆಯಿಂದ ಕರಿದ ಪದಾರ್ಥಗಳಿಂದ ದೂರವಿರಿ.

ಹಾಗಾದರೆ, ನೀವು ಯಾವ ರೀತಿಯ ತಿಂಡಿ ತಿನ್ನಬೇಕು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಖಾನಾ ಭೇಲ್:

ಸಿಹಿ ಮತ್ತು ಮಸಾಲೆಯುಕ್ತ, ಈ ಮಖಾನಾ ಭೇಲ್ ಒಂದು ಸೂಪರ್ ರುಚಿಕರವಾದ ಮತ್ತು ಆರೋಗ್ಯಕರ ಭೇಲ್ ಆಗಿದೆ. ಆಲೂಗಡ್ಡೆ, ಕಡಲೆಕಾಯಿ, ಮಖಾನಾ, ಹಸಿರು ಮೆಣಸಿನಕಾಯಿಗಳ ಜೊತೆಗೆ ಮಸಾಲೆ ಕರಿಮೆಣಸು ಮತ್ತು ಜೀರಿಗೆ ಪುಡಿಗಳನ್ನು ಸೇರಿಸಿ ಈ ಭೇಲ್ ತಯಾರಿಸಿ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಸೋಯಾ ಇಡ್ಲಿ :

ಸೋಯಾಬೀನ್, ಉದ್ದಿನಬೇಳೆ ಮತ್ತು ಅಕ್ಕಿಯಿಂದ ತಯಾರಿಸಲಾದ ಈ ಸೋಯಾ ಇಡ್ಲಿಯು ರುಚಿಯ ಜೊತೆಗೆ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡುವಲ್ಲಿ ಸಹಾಯಕವಾಗಿದೆ.

ಓಟ್ಸ್ ಚಿವ್ಡಾ:

ನಮ್ಮ ದೇಹದ ಆರೋಗ್ಯದ ವಿಷಯದಲ್ಲಿ ಓಟ್ಸ್ ಅನ್ನು ಪರಿಚಯಿಸುವ ಅಗತ್ಯವಿಲ್ಲ. ಯಾಕೆಂದರೆ ಇದು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ಓಟ್ಸ್ ಚಿವ್ಡಾವನ್ನು ಓಟ್ಸ್, ಬೇಳೆ, ಕಡಲೆ ಕಾಳು, ಅರಶಿನ, ಮೆಣಸಿನ ಹುಡಿ,ಕರಿಮೆಣಸಿನ ಕಾಳು ಹಾಗು ಸಕ್ಕರೆಯನ್ನು ಸೇರಿಸಿ ತಯಾರಿಸಲಾಗುತ್ತದೆ.

ಸಿಹಿ ಆಲೂಗಡ್ಡೆ ಚಾಟ್:

ಮೆಣಸಿನ ಹುಡಿ,ಕರಿಮೆಣಸಿನ ಕಾಳು ಮಸಾಲಾ ಮತ್ತು ನಿಂಬೆ ರಸದಲ್ಲಿ ಬೆರೆಸಿದ ಸಿಹಿ ಆಲೂಗಡ್ಡೆಯಿಂದ ಯಾವುದೇ ಎಣ್ಣೆಯಿಂದ ಕರಿಯದೆ ಬೇಯಿಸಲಾಗುತ್ತದೆ. ಇದನ್ನು ಮನೆಯಲ್ಲಿ ಮಾಡುವುದು ತುಂಬಾ ಸುಲಭ.

ಮಸಾಲಾ ಆಮ್ಲೆಟ್‌: ಸಾಮಾನ್ಯವಾಗಿ ನಾವು ಮಾಡುವ ಆಮ್ಲೆಟ್‌ ಇದಾಗಿದ್ದು, ಇದರಲ್ಲಿ ಯಾವುದೇ ಎಣ್ಣೆಯನ್ನು ಬಳಸದೇ ಮಾಡುವುದು ಅತಿ ಮುಖ್ಯವಾಗಿದೆ. ಮೊಟ್ಟೆಯಲ್ಲಿರುವ ಉತ್ತಮ ಅಂಶಗಳು ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಚಹಾ ಸಮಯದಲ್ಲಿ ಮಾತ್ರವಲ್ಲದೆ ಊಟದ ಸಮಯದಲ್ಲಿ ಸೇವಿಸಬಹುದು. ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು