Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Health Tips: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ಸೈನಸ್​ ಹೆಚ್ಚಾಗಬಹುದು: ಎಚ್ಚರಿಕೆಯಿಂದಿರಿ

ಮೂಗಿನ ಎರಡೂ ಹೊಳ್ಳೆಗಳು ಅಲರ್ಜಿ, ಶೀತ, ಬ್ಯಾಕ್ಟೀರಿಯಾಗಳಿಂದ ಮುಚ್ಚಿಹೋಗುತ್ತವೆ. ಇದರಿಂದ ಎದೆಯಲ್ಲಿ ಲೋಳೆಯಂತಹ ದ್ರವ ಸಿಲುಕಿಕೊಂಡು ತಲೆನೋವು, ಉಸಿರಾಟ ಸಂಬಂಧೀ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ

Winter Health Tips: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ಸೈನಸ್​ ಹೆಚ್ಚಾಗಬಹುದು: ಎಚ್ಚರಿಕೆಯಿಂದಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 25, 2021 | 7:30 AM

ಮೈಕೊರೆಯುವ ಚಳಿಗಾಲ ಆರಂಭವಾಗಿದೆ. ಚಳಿಯ ಜತೆಗೆ ಆರೋಗ್ಯದ ಸಮಸ್ಯೆಗಳೂ ಎದುರಾಗುತ್ತವೆ. ಶೀತ, ನೆಗಡಿ, ಫ್ಲೂನಂತಹ ಕಾಯಿಲೆಗಳು ಹರಡಬಹುದು ಹೀಗಾಗಿ ನಿಮ್ಮ ಆಹಾರ ಪದ್ಧತಿಯೆಡೆಗೆ ಹೆಚ್ಚು ಗಮನ ನೀಡಿ ಅಲ್ಲದೆ ಮೈಯನ್ನು ಬೆಚ್ಚಗಿರಿಸುವ ಉಡುಪುಗಳನ್ನು ಧರಿಸಿ. ಆಗ ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಿಂದ ದೂರವಿರಬಹುದು. ಚಳಿಗಾಲದಲ್ಲಿ ಕಾಡುವ ಮುಖ್ಯ ಸಮಸ್ಯೆ ಎಂದರೆ ಸೈನಸ್​ ಅಥವಾ ಸೈನುಟೀಸ್. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಸೈನಸ್​ ಸಮಸ್ಯೆ ಉಲ್ಬಣವಾಗುತ್ತಿದೆ. ಚಳಿಗಾಲದಲ್ಲಿ ಸೈನಸ್​ನ ತೀವ್ರತೆ ಹೆಚ್ಚು. ವಾತಾವರಣದಲ್ಲಿ ಬೀಸುವ ತಣ್ಣನೆಯ ಗಾಳಿ ಮೂಗಿಗೆ ಸೋಕಿ ಉಸಿರಾಟಕ್ಕೆ ತೊಂದರೆ ನೀಡುತ್ತದೆ. ಈ ಕಾಯಿಲೆಯನ್ನು ಆರಂಭದಲ್ಲೇ ಕಡಿಮೆ ಮಾಡಿಕೊಂಡರೆ ಒಳಿತು. ಇಲ್ಲವಾದರೆ ಕ್ರಮೇಣ ಉಸಿರಾಟ ಸಂಬಂಧೀ ಕಾಯಿಲೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಸೈನಸ್​ಅನ್ನು ನೀವು ಸೇವಿಸುವ ಆಹಾರದ ಮೂಲಕವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಸೈನಸ್​ ಎಂದರೇನು? ಮೂಗಿನ ಎರಡೂ ಹೊಳ್ಳೆಗಳು ಅಲರ್ಜಿ, ಶೀತ, ಬ್ಯಾಕ್ಟೀರಿಯಾಗಳಿಂದ ಮುಚ್ಚಿಹೋಗುತ್ತವೆ. ಇದರಿಂದ ಎದೆಯಲ್ಲಿ ಲೋಳೆಯಂತಹ ದ್ರವ ಸಿಲುಕಿಕೊಂಡು ತಲೆನೋವು, ಉಸಿರಾಟ ಸಂಬಂಧೀ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸೈನಸ್​ನಿಂದ ದವಡೆ, ಹಣೆ, ಮುಖದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸೈನಸ್​ ಅನ್ನು ನಿರ್ಲಕ್ಷಿಸಿದರೆ ಕ್ರಮೇಣ ಅದರ ತೀವ್ರತೆ ಜಾಸ್ತಿಯಾಗಿ ಮೆದುಳು ಜ್ವರ, ಮಿನಿಜೈಂಡೀಸ್​ನಂತಹ ಹಲವು ಮಾರಣಾಂತಿಕ ಕಾಯಿಲೆಗಳು ಉಲ್ಬಣವಾಗುತ್ತವೆ.

ಹಾಗಾದರೆ ಸೈನಸ್​ ತೊಂದರೆ ಇರುವವರಿಗೆ ಚಳಿಗಾಲದಲ್ಲಿ ಯಾವೆಲ್ಲ ಆಹಾರಗಳು ತೊಂದರೆಯಾದೀತು? ಅದರ ಮಾಹಿತಿ ಇಲ್ಲಿದೆ.

ಮೈದಾ ಮತ್ತು ಆಲೂಗಡ್ಡೆ ಮೈದಾ ಮತ್ತು ಆಲೂಗಡ್ಡೆಯಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್​ಗಳಿರುತ್ತವೆ. ಇವು ನಿಮಗೆ ಮೂಗಿನಲ್ಲಿ ಉರಿಯೂತ ಉಂಟುಮಾಡಬಹುದು. ಆದ್ದರಿಂದ ಚಳಿಗಾಲದಲ್ಲಿ ಮೈದಾದಿಂದ ತಯಾರಿಸಿದ ಆಹಾರ ಮತ್ತು ಆಲೂಗಡ್ಡೆಯಿಂದ ಆದಷ್ಟು ದೂರವಿರಿ.

ಒಮೆಗಾ 3 ಕೊಬ್ಬಿನಾಮ್ಲಗಳು ಸೂರ್ಯಕಾಂತಿ, ಜೋಳ, ಬಾದಾಮಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಯಥೇಚ್ಛವಾಗಿರುತ್ತವೆ. ನಿಮಗೆ ಸೈನಸ್​ ಸಮಸ್ಯೆಯಿದ್ದರೆ ಚಳಿಗಾಲದಲ್ಲಿ ಈ ಆಹಾರಗಳಿಂದ ಆದಷ್ಟು ದೂರವಿರಿ. ಒಮೆಗಾ 3 ಕೊಬ್ಬಿನಾಮ್ಲಗಳು ನಿಮ್ಮ ಸೈನಸ್​ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಸಕ್ಕರೆ ಸೈನಸ್​ ಸಮಸ್ಯೆಯುಳ್ಳವರು ಸಿಹಿತಿಂಡಿಗಳು, ಪೇಸ್ಟ್ರೀ, ಸೋಡಾ, ತಣ್ಣನೆಯ ಪಾನೀಯಗಳಿಂದ ದೂರವಿರಿ. ಇವುಗಳಲ್ಲಿ ಸಂಸ್ಕರಿಸಿದ ಸಕ್ಕರೆ ಪ್ರಮಾಣವಿರುತ್ತದೆ. ಇವು ನಿಮ್ಮ ದೇಹವನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತದೆ. ತಣ್ಣನೆಯ ಪಾನೀಯಗಳಿಂದ ನಿಮ್ಮ ಉಸಿರಾಟಕ್ಕೂ ತೊಂದರೆಯಾಗುತ್ತದೆ.

ಫಾಸ್ಟ್​ ಫುಡ್​ ಸೇವನೆ ಮೋನೋ ಸೋಡಿಯಂ ಗ್ಲುಟಮೇಟ್​ ಎನ್ನುವ ಅಂಶವನ್ನು ಫಾಸ್ಟ್​ ಫುಡ್​ಗಳು ಹೊಂದಿರುತ್ತವೆ. ಇದು ನಿಮ್ಮ ಸೈನಸ್​ಅನ್ನು ತೀವ್ರಗೊಳಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಆದಷ್ಟು ಫಾಸ್ಟ್​ ಅಥವಾ ಜಂಕ್​ ಫುಡ್​ಗಳನ್ನು ಅವೈಡ್​ ಮಾಡಿ. ಇಲ್ಲವಾದರೆ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಡೈರಿ ಉತ್ಪನ್ನಗಳು ಸೈನಸ್​ ಸಮಸ್ಯೆಗಳಿಂದ ಬಳಲುತ್ತಿರುವವರು, ಹಾಲು, ಮೊಸರಿನಂತಹ ಡೈರಿ ಉತ್ಪನ್ನಗಳಿಂದ ದೂರವಿರಿ. ಇವು ನಿಮ್ಮ ಸೈನಸ್​ ಸಮಸ್ಯೆಗೆ ಹೆಚ್ಚಿನ ತೊಂದರೆ ನೀಡುತ್ತವೆ. ಜತೆಗೆ ಸೋಯಾಬಿನ್​ ನಂತಹ ಪದಾರ್ಥಗಳು ಅಲರ್ಜಿಯನ್ನು ಜಾಸ್ತಿ ಮಾಡಿ ಸೈನಸ್​ ತೊಂದರೆ ಹೆಚ್ಚಾಗುವಂತೆ ಮಾಡುತ್ತದೆ.​

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!