AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leukemia in Children: ನಿಮ್ಮ ಮಗು ಹೊಟ್ಟೆ ನೋವಿನಿಂದ ಬಳಲುತ್ತಿದೆಯೇ? ಲ್ಯುಕೇಮಿಯಾದ ಲಕ್ಷಣಗಳ ಬಗ್ಗೆ ತಿಳಿಯಿರಿ

ಮಕ್ಕಳಿಗೆ ತಮ್ಮ ದೇಹದೊಳಗೆ ಏನಾಗುತ್ತಿದೆ ಎನ್ನುವ ಅರಿವಿರುವುದಿಲ್ಲ, ಹೇಳಲೂ ಬರುವುದಿಲ್ಲ. ಪೋಷಕರು ತಮ್ಮ ಮಗುವಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಮಕ್ಕಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಿಲ್ಲ.

Leukemia in Children: ನಿಮ್ಮ ಮಗು ಹೊಟ್ಟೆ ನೋವಿನಿಂದ ಬಳಲುತ್ತಿದೆಯೇ? ಲ್ಯುಕೇಮಿಯಾದ ಲಕ್ಷಣಗಳ ಬಗ್ಗೆ ತಿಳಿಯಿರಿ
Leukemia in ChildrenImage Credit source: Medanta
TV9 Web
| Updated By: ನಯನಾ ರಾಜೀವ್|

Updated on: Aug 15, 2022 | 11:01 AM

Share

ಮಕ್ಕಳಿಗೆ ತಮ್ಮ ದೇಹದೊಳಗೆ ಏನಾಗುತ್ತಿದೆ ಎನ್ನುವ ಅರಿವಿರುವುದಿಲ್ಲ, ಹೇಳಲೂ ಬರುವುದಿಲ್ಲ. ಪೋಷಕರು ತಮ್ಮ ಮಗುವಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಮಕ್ಕಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಿಲ್ಲ.  ಹಾಗೆಯೇ ಲ್ಯುಕೇಮಿಯಾ ಲಕ್ಷಣಗಳನ್ನು ಕೂಡ ಗುರುತಿಸುವುದು ಕಷ್ಟ.

ಮನೆಯಲ್ಲಿ ಪೋಷಕರು ಮತ್ತು ವಯಸ್ಕರು ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ತಮ್ಮ ಮಕ್ಕಳಲ್ಲಿ ಕಂಡುಬರುವ ಬದಲಾವಣೆಗಳನ್ನು ಪರಿಶೀಲಿಸುವುದು ಮುಖ್ಯ.

ಲ್ಯುಕೇಮಿಯಾ ಎಂದರೇನು? ಲ್ಯುಕೇಮಿಯಾ ರಕ್ತದ ಕ್ಯಾನ್ಸರ್​ನ ಒಂದು ರೂಪವಾಗಿದೆ. ಲ್ಯುಕೇಮಿಯಾ ಎಂಬುದು ನಿಮ್ಮ ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ರಕ್ತದ ಕ್ಯಾನ್ಸರ್ ಆಗಿದೆ. ಆ ಬಿಳಿ ರಕ್ತ ಕಣಗಳು ನಿಮ್ಮ ದೇಹವು ಆರೋಗ್ಯಕರವಾಗಿರಬೇಕಾದ ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳನ್ನು ಹೊರಹಾಕುತ್ತದೆ. ಜೊತೆಗೆ ಹೆಚ್ಚುವರಿ ಬಿಳಿ ರಕ್ತ ಕಣಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.

ಲ್ಯುಕೇಮಿಯಾ ಲಕ್ಷಣಗಳೇನು?: ವಿವಿಧ ರೀತಿಯ ಲ್ಯುಕೇಮಿಯಾ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವು ರೂಪಗಳ ಆರಂಭಿಕ ಹಂತಗಳಲ್ಲಿ ನೀವು ಯಾವುದೇ ಚಿಹ್ನೆಗಳನ್ನು ಗಮನಿಸದೇ ಇರಬಹುದು. ಅವುಗಳೆಂದರೆ,

ಉಸಿರಾಟದ ತೊಂದರೆ: ಲ್ಯುಕೇಮಿಕ್ ಕೋಶಗಳು ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು. ಲ್ಯುಕೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಕೆಮ್ಮು ಹೆಚ್ಚಿರುತ್ತದೆ.

-ದೌರ್ಬಲ್ಯ ಅಥವಾ ಆಯಾಸ

-ಸುಲಭವಾಗಿ ಮೂಗೇಟುಗಳು ಅಥವಾ ರಕ್ತಸ್ರಾವ

-ಜ್ವರ ಅಥವಾ ಶೀತ

-ತೀವ್ರವಾದ ಅಥವಾ ಮತ್ತೆ ಬರುತ್ತಿರುವ ಸೋಂಕುಗಳು

-ರಾತ್ರಿ ಬೆವರುವಿಕೆ

-ಉಸಿರಾಟದ ತೊಂದರೆ

-ನಿಮ್ಮ ಮೂಳೆಗಳು ಅಥವಾ ಕೀಲುಗಳಲ್ಲಿ ನೋವು

-ತಲೆನೋವು

-ವಾಂತಿ

-ತೂಕ ಇಳಿಕೆ

ರಕ್ತಹೀನತೆ: WBC ಗಳು ಅಧಿಕವಾಗಿ ಉತ್ಪತ್ತಿಯಾದಾಗ, ಅವುಗಳು ಕಿಕ್ಕಿರಿದು ತುಂಬಿರುತ್ತವೆ ಮತ್ತು ಅದು ಸಾಕಷ್ಟು RBC ಗಳನ್ನು ಉತ್ಪಾದಿಸಲು ಕಷ್ಟವಾಗುತ್ತದೆ. ಇದು ರಕ್ತಹೀನತೆ ಸ್ಥಿತಿಗೆ ಕಾರಣವಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!