AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pet Nutrition: ಈ ಆಹಾರಗಳು ಮಾನವರಿಗೆ ಆರೋಗ್ಯಕರ ಆದರೆ ಸಾಕುಪ್ರಾಣಿಗಳಿಗೆ ವಿಷಕಾರಿ

ನೀವು ಸೇವನೆ ಮಾಡುವ ಈ ಆಹಾರಗಳನ್ನು ನಿಮ್ಮ ಮನೆಯ ಸಾಕುಪ್ರಾಣಿಗಳಿಗೆ ಹಾಕಬೇಡಿ, ಏಕೆಂದರೆ ನಿಮಗೆ ಆ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಾದರೂ ನಿಮ್ಮ ಮನೆಯ ಸಾಕು ಪ್ರಾಣಿಗಳಿಗೆ ವಿಷಕಾರಿಯಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

Pet Nutrition: ಈ ಆಹಾರಗಳು ಮಾನವರಿಗೆ ಆರೋಗ್ಯಕರ ಆದರೆ ಸಾಕುಪ್ರಾಣಿಗಳಿಗೆ ವಿಷಕಾರಿ
Pet NutritionImage Credit source: HT
TV9 Web
| Edited By: |

Updated on:Oct 01, 2022 | 4:11 PM

Share

ತಮ್ಮ ಪ್ರೀತಿ ಪಾತ್ರರೊಂದಿಗೆ ಊಟವನ್ನು ಹಂಚಿಕೊಳ್ಳಲು ಯಾರು ಇಷ್ಟಪಡುವುದಿಲ್ಲ? ಸಾಮಾನ್ಯ ನಿಮ್ಮ ಮನೆಗಳಲ್ಲಿ ಸಾಕು ಪ್ರಾಣಿಗಳು ಇರಬಹುದು, ಅವುಗಳ ಜೊತೆಗೆ ಊಟ ಮಾಡುವುದು ಎಂದರೆ ಒಂದು ಸಂತೋಷವೇ ಅಥವಾ ನಮ್ಮ ತಟ್ಟೆಯಲ್ಲಿರುವ ಆಹಾರವನ್ನು ಅವುಗಳ ಜೊತೆಗೆ ಹಂಚಿಕೊಳ್ಳುವ ಅಭ್ಯಾಸಗಳು ಇರುತ್ತದೆ. ನಿಮ್ಮ ಮನೆಯಲ್ಲಿ ಸಾಕುವ ನಾಯಿ ಅಥವಾ ಬೆಕ್ಕುಗಳು ಆಗಿರಬಹುದು, ಅವುಗಳು ಕೂಡ ಅಷ್ಟೇ ನಿಮ್ಮ ತಟ್ಟೆಯಲ್ಲಿ ಏನಿದೇ? ಎಂದು ನೋಡುವುತ್ತದೆ.

ಆಗಾ ನೀವು ತಿನ್ನುವುದನ್ನು ಅದಕ್ಕೂ ಹಾಕುತ್ತೀರಾ, ಆದರೆ ಇದರಿಂದ ಅವುಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ನೀವು ಅವುಗಳಿಗೆ ಯಾವು ಆಹಾರ ಉತ್ತಮ ಎಂಬುದನ್ನು ನೋಡದೇ ಹಾಕುತ್ತೀರ. ಇದರಿಂದ ಅವುಗಳಿಗೆ ಅಪಾಯಕಾರಿಯಾಗಬಹುದು, ನಿಮ್ಮ ಸಾಕುಪ್ರಾಣಿಗಳಿಗೆ ವಿಷಕಾರಿಯಾಗಬಹುದಾದ ಕೆಲವು ಆಹಾರಗಳಿವೆ, ಆವಕಾಡೊ, ಸೇಬುಗಳು, ಚೆರ್ರಿಗಳು, ಸಿಟ್ರಸ್ ಹಣ್ಣುಗಳು ಮಾನವರಿಗೆ ಆರೋಗ್ಯಕರವಾಗಿರುತ್ತವೆ ಮತ್ತು ಅವರ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತವೆ, ದುರದೃಷ್ಟವಶಾತ್ ಅವು ಹಾನಿಕಾರಕವಲ್ಲ, ಆದರೆ ಸಾಕುಪ್ರಾಣಿಗಳಿಗೆ ವಿಷಕಾರಿಯಾಗಿದೆ.

ನೀವು ಆರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರೆ ನಿಮ್ಮನ್ನು ದಿಟ್ಟಿಸುತ್ತಿರುತ್ತದೆ, ಆಗಾ ನೀವು ನೀವು ತಿನ್ನುತ್ತೀರುವ ಆಹಾರದಲ್ಲಿ ಒಂದು ತುಂಡನ್ನು ಅದಕ್ಕೂ ಹಾಕುತ್ತೀರಾ, ಆದರೆ ಕೆಲವು ಆರೋಗ್ಯಕರ ಮಾನವ ಆಹಾರಗಳು ನಿಮ್ಮ ಸಾಕುಪ್ರಾಣಿಗಳಿಗೆ ಅತ್ಯಂತ ಅಪಾಯಕಾರಿಯಾಗಬಹುದು. ಪಶುವೈದ್ಯಕೀಯ ತಜ್ಞರಾದ ಡಾ ಕೆಂಜಾಲೆ ಮತ್ತು ಡಾ ಐಶ್ವರ್ಯ ಆರ್ ಪ್ರಕಾರ ನಿಮ್ಮ ಸಾಕುಪ್ರಾಣಿಗಳಿಗೆ ನೀವು ಎಂದಿಗೂ ನೀಡಬಾರದ ಕೆಲವು ಆಹಾರಗಳು ಇಲ್ಲಿವೆ ಎಂದು HT ವರದಿ ಮಾಡಿದೆ.

1. ಆವಕಾಡೊ

ಆವಕಾಡೊ ವಿಟಮಿನ್‌ಗಳ (C, E , K & B6) ಮತ್ತು ಮಾನವರಲ್ಲಿ ರೈಬೋಫ್ಲಾವಿನ್‌ಗಳ ಉತ್ತಮ ಮೂಲವಾಗಿದೆ ಆದರೆ ಸಾಕುಪ್ರಾಣಿಗಳಿಗೆ ಇದು ತೊಂದರೆಯಾಗಬಹುದು. ಆವಕಾಡೊದಲ್ಲಿರುವ ಪರ್ಸಿನ್ ಪ್ರಾಯಶಃ ಸಾಕುಪ್ರಾಣಿಗಳಲ್ಲಿ ವಾಂತಿ ಮತ್ತು ಅತಿಸಾರವನ್ನು ಉಂಟುಮಾಡಬಹುದು. ಅಲ್ಲದೆ, ಆವಕಾಡೊ ಬೀಜಗಳು ಕರುಳಿನಲ್ಲಿ ಸಿಲುಕಿಕೊಳ್ಳಬಹುದು ಮತ್ತು ಇದು ಸಾಕುಪ್ರಾಣಿಗಳಿಗೆ ಮಾರಕವಾಗಬಹುದು.

2. ಪ್ಲಮ್, ಚೆರ್ರಿಗಳು, ಪೀಚ್​ಗಳು, ಸೇಬು

ಪ್ಲಮ್, ಚೆರ್ರಿಗಳು, ಪೀಚ್​ಗಳು ಮತ್ತು ಸೇಬುಗಳು ಸಾಕುಪ್ರಾಣಿಗಳಲ್ಲಿ ಗಂಭೀರ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅವುಗಳ ಬೀಜಗಳಲ್ಲಿ ಇರುವ ಸೈನೈಡ್ ವಿಷಕಾರಿಯಾಗಿದೆ ಮತ್ತು ಅದು ನಿಮ್ಮ ಸಾಕುಪ್ರಾಣಿಗಳಿಗೆ ದೊಡ್ಡ ತೊಂದರೆಗೆ ಕಾರಣವಾಗಬಹುದು. ಈ ಆಹಾರಗಳ ಸೇವನೆಯು ಸಾಕುಪ್ರಾಣಿಗಳಲ್ಲಿ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

3. ಬೀಜಗಳು

ಬೀಜಗಳನ್ನು ಮಾನವ ಬಳಕೆಗೆ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಬೀಜಗಳು ನಿಮ್ಮ ಸಾಕುಪ್ರಾಣಿಗಳಿಗೆ ಅತ್ಯಂತ ಹಾನಿಕಾರಕವಾಗಿದೆ. ಬೀಜಗಳು ನಾಯಿಗಳು ಅಥವಾ ಬೆಕ್ಕುಗಳಲ್ಲಿ ಅಲರ್ಜಿಯನ್ನು ಉಂಟು ಮಾಡುವ ಪ್ರವೃತ್ತಿಯನ್ನು ಹೊಂದಿವೆ. ಕೆಲವು ಬೀಜಗಳು ಜೀರ್ಣಿಸಿಕೊಳ್ಳಲು ಕಷ್ಟವಾಗುವುದರಿಂದ, ಅವು ನಿಮ್ಮ ಸಾಕುಪ್ರಾಣಿಗಳಲ್ಲಿ ಜೀರ್ಣಕಾರಿ ತೊಂದರೆಯನ್ನು ಉಂಟುಮಾಡಬಹುದು.

4. ಈರುಳ್ಳಿ ಮತ್ತು ಬೆಳ್ಳುಳ್ಳಿ

ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ನೈಸರ್ಗಿಕ ಪ್ರತಿಜೀವಕವೆಂದು ಪರಿಗಣಿಸಲಾಗುತ್ತದೆ ಮತ್ತು ಮಾನವರಿಗೆ ಇತರ ಪ್ರಯೋಜನಗಳನ್ನು ಹೊಂದಿದೆ ಆದರೆ ಅವು ಸಾಕುಪ್ರಾಣಿಗಳಲ್ಲಿನ ಕೆಂಪು ರಕ್ತ ಕಣಗಳಿಗೆ ದೊಡ್ಡ ಹಾನಿಯನ್ನು ಉಂಟುಮಾಡಬಹುದು ಮತ್ತು ನಿಮ್ಮ ಸಾಕುಪ್ರಾಣಿಗಳಿಗೆ ಜಠರಗರುಳಿನ ತೊಂದರೆ ಮತ್ತು ರಕ್ತಹೀನತೆಯನ್ನು ಉಂಟುಮಾಡಬಹುದು. ಈ ಆಹಾರಗಳ ಕಾರಣದಿಂದಾಗಿ ಬೆಕ್ಕುಗಳು ಹೆಚ್ಚು ಪರಿಣಾಮ ಬೀರುತ್ತವೆ ಆದರೆ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅವುಗಳು ಕೂಡ ಅಪಾಯಕ್ಕೆ ಒಳಗಾಗಬಹುದು.

5. ಸಿಟ್ರಸ್ ಹಣ್ಣುಗಳು ಮತ್ತು ನಿಂಬೆ

ನಿಂಬೆ ಮತ್ತು ಸಿಟ್ರಸ್ ಹಣ್ಣುಗಳು ಮಾನವರಲ್ಲಿ ವಿಟಮಿನ್-ಸಿ ಮತ್ತು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ, ಆದರೆ ನಿಮ್ಮ ಸಾಕುಪ್ರಾಣಿಗಳಿಗೆ ಗಂಭೀರವಾಗಿ ವಿಷಕಾರಿಯಾಗಬಹುದು. ನಿಂಬೆ ಮತ್ತು ಸಿಟ್ರಸ್ ಸಾಕುಪ್ರಾಣಿಗಳ ಹೊಟ್ಟೆಯ pH ಮಟ್ಟವನ್ನು ತೊಂದರೆಗೊಳಿಸುತ್ತದೆ, ಇದು ನೋವು, ವಾಂತಿ, ಅತಿಸಾರವನ್ನು ಉಂಟುಮಾಡುತ್ತದೆ. ನಾಯಿಗಳು ನೈಸರ್ಗಿಕವಾಗಿ ವಿಟಮಿನ್-ಸಿ ಅನ್ನು ಉತ್ಪಾದಿಸುತ್ತವೆ ಮತ್ತು ಆದ್ದರಿಂದ ಅವುಗಳಿಗೆ ಹೆಚ್ಚುವರಿ ಡೋಸೇಜ್ ಅಗತ್ಯವಿಲ್ಲ.

Published On - 4:11 pm, Sat, 1 October 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು