AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ ಗಾಯಕ ಪಂಕಜ್ ಉದಾಸ್ ನಿಧನ; ಈ ರೋಗದ ಲಕ್ಷಣಗಳಿವು

Pancreatic Cancer Symptoms: ಖ್ಯಾತ ಗಾಯಕ ಪಂಕಜ್ ಉದಾಸ್ ತಮ್ಮ 72ನೇ ವಯಸ್ಸಿನಲ್ಲಿ ಪ್ಯಾಂಕ್ರಿಯಾಟಿಕ್ ಅಥವಾ ಮೇದೋಜ್ಜೀರಕ ಗ್ರಂಥಿಯ​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. ಇದು ಪುರುಷರಲ್ಲಿ ಇತ್ತೀಚೆಗೆ ಪತ್ತೆಯಾಗುತ್ತಿರುವ ಭಯಾನಕವಾದ ಕ್ಯಾನ್ಸರ್ ಆಗಿದೆ. ಪುರುಷರಲ್ಲಿ ಗೆಡ್ಡೆ ಬೆಳೆಯುತ್ತಿರುವುದು ನಮಗೆ ಗೊತ್ತಾಗುವುದು ಹೇಗೆ? ಇದರ ಲಕ್ಷಣಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ ಗಾಯಕ ಪಂಕಜ್ ಉದಾಸ್ ನಿಧನ; ಈ ರೋಗದ ಲಕ್ಷಣಗಳಿವು
ಪಂಕಜ್ ಉದಾಸ್
ಸುಷ್ಮಾ ಚಕ್ರೆ
|

Updated on: Feb 27, 2024 | 1:13 PM

Share

ಇತ್ತೀಚೆಗೆ ಕ್ಯಾನ್ಸರ್​ (Cancer) ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಖ್ಯಾತ ಗಜಲ್ ಗಾಯಕ, ಪದ್ಮಶ್ರೀ ಪುರಸ್ಕೃತ ಪಂಕಜ್ ಉದಾಸ್ (Pankaj Udhas) ಕೂಡ ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ (Pancreatic Cancer) ಸಾವನ್ನಪ್ಪಿದ ಬಳಿಕ ಈ ಕ್ಯಾನ್ಸರ್ ವಿಧದ ಬಗ್ಗೆ ಜನರ ಕುತೂಹಲ ಹೆಚ್ಚಾಗುತ್ತಿದೆ. ಈ ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್ ಬಂದರೆ ಅದರ ಲಕ್ಷಣಗಳು ಆರಂಭದಲ್ಲಿ ಗೊತ್ತಾಗುವುದೇ ಇಲ್ಲ. ಕೆಲವೊಮ್ಮೆ ಸಾವಿನ ಹಂತಕ್ಕೆ ತಲುಪಿದಾಗ ಮಾತ್ರ ಇದರ ರೋಗಲಕ್ಷಣಗಳು ಗೊತ್ತಾಗುತ್ತವೆ. ಪುರುಷರ ದೇಹದಲ್ಲಿ ಬೆಳೆಯುವ ಎಲ್ಲ ಗೆಡ್ಡೆಗಳೂ ಮಾರಣಾಂತಿಕ ಎಂದು ಹೇಳಲು ಸಾಧ್ಯವಿಲ್ಲ. ಹಾನಿಕರವಲ್ಲದ ಗೆಡ್ಡೆಗಳು ಕೂಡ ದೊಡ್ಡದಾಗಿ ಬೆಳೆಯಬಹುದು. ಅವು ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ. ಮಾರಣಾಂತಿಕ ಗೆಡ್ಡೆಗಳು ಹತ್ತಿರದ ಅಂಗಾಂಶಗಳಿಗೆ ಹರಡಬಹುದು.

ಸಾಯುವ 2-3 ತಿಂಗಳುಗಳ ಮೊದಲಿನವರೆಗೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದ ಪಂಕಜ್ ಉದಾಸ್ ಅವರಿಗೆ ತಮಗೆ ಕ್ಯಾನ್ಸರ್ ಉಂಟಾಗಿದೆ ಎಂದು ತಿಳಿಯುವ ವೇಳೆಗೆ ಬಹಳ ತಡವಾಗಿತ್ತು. ಜಗತ್ತಿನಾದ್ಯಂತ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಪ್ಯಾಂಕ್ರಿಯಾಟಿಕ್ ಅಥವಾ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಒಂದು ರೀತಿಯ ಕ್ಯಾನ್ಸರ್ ಆಗಿದ್ದು, ಮೇದೋಜ್ಜೀರಕ ಗ್ರಂಥಿಯಲ್ಲಿ ಗೆಡ್ಡೆಯ ಬೆಳವಣಿಗೆ ಪ್ರಾರಂಭವಾಗುತ್ತದೆ. ಮೇದೋಜ್ಜೀರಕ ಗ್ರಂಥಿಯು ನಮ್ಮ ದೇಹಕ್ಕೆ ಮುಖ್ಯವಾದುದು. ಏಕೆಂದರೆ ಅದು ಉತ್ತಮ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ರಹಸ್ಯ ಕಿಣ್ವಗಳು ಮತ್ತು ಮಧುಮೇಹ ನಿಯಂತ್ರಣಕ್ಕೆ ಹಾರ್ಮೋನುಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ: Mouth Cancer: ಧೂಮಪಾನ ಮಾಡದವರಿಗೂ ಬಾಯಿಯ ಕ್ಯಾನ್ಸರ್ ಬರಲು ಕಾರಣ ಇಲ್ಲಿದೆ

ಸಾಮಾನ್ಯವಾಗಿ, ಆರಂಭಿಕ ಹಂತಗಳಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಮೇಯೊ ಕ್ಲಿನಿಕ್ ಪ್ರಕಾರ, ಕ್ಯಾನ್ಸರ್ ಇತರ ಅಂಗಗಳಿಗೆ ಹರಡುವವರೆಗೂ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಗೋಚರಿಸದ ಕಾರಣ ಇದು ಬಹಳ ಅಪಾಯಕಾರಿಯಾದ ಕ್ಯಾನ್ಸರ್ ಆಗಿದೆ.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್​ನ ಲಕ್ಷಣಗಳು ಇಲ್ಲಿವೆ:

– ಹಸಿವಾಗದಿರುವುದು

– ವಿವರಿಸಲಾಗದ ತೂಕ ಇಳಿಕೆ

– ತೆಳು ಚರ್ಮ ಮತ್ತು ಕಣ್ಣುಗಳು

– ಗಾಢ ಬಣ್ಣದ ಮೂತ್ರ

– ತುರಿಕೆ

– ಅನಿಯಂತ್ರಿತ ಮಧುಮೇಹ

– ಹೊಟ್ಟೆಯ ಬದಿಯಲ್ಲಿ ನೋವು

– ಕೈಕಾಲುಗಳಲ್ಲಿ ನೋವು

– ನಿರಂತರ ಆಯಾಸ

ಇದನ್ನೂ ಓದಿ: Breast Cancer: ತಲೆನೋವಿ​ಗೂ ಸ್ತನ ಕ್ಯಾನ್ಸರ್​ಗೂ ಇದೆ ಸಂಬಂಧ; ಈ ಬಗ್ಗೆ ಎಚ್ಚರವಿರಲಿ

ಮೇದೋಜ್ಜೀರಕ ಗ್ರಂಥಿಯ ಗೆಡ್ಡೆಯನ್ನು ಉಂಟುಮಾಡುವ ಕಾರಣಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಕೆಲವು ಅಧ್ಯಯನಗಳು ಇದಕ್ಕೆ ಕುಟುಂಬದ ಇತಿಹಾಸವನ್ನು ಸೂಚಿಸುತ್ತವೆ. ಅತಿಯಾದ ಮದ್ಯಪಾನ, ಜಡ ಜೀವನಶೈಲಿ ಮತ್ತು ಸ್ಥೂಲಕಾಯತೆಯು ಕ್ಯಾನ್ಸರ್ ಗೆಡ್ಡೆಯನ್ನು ಅಭಿವೃದ್ಧಿಪಡಿಸುವ ಇತರ ಅಪಾಯಕಾರಿ ಅಂಶಗಳಾಗಿವೆ. ಸ್ಥೂಲಕಾಯತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ, ಕ್ಯಾನ್ಸರ್‌ನ ನಿಯಮಿತ ತಪಾಸಣೆ, ಆರೋಗ್ಯ ತಪಾಸಣೆ, ನಿಯಂತ್ರಿತ ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನ ಮಾಡದಿರುವುದು ಹೀಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಮಾತ್ರವಲ್ಲದೆ ಇತರ ಆರೋಗ್ಯ ಕಾಯಿಲೆಗಳನ್ನು ಸಹ ನಿಯಂತ್ರಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?