Cancer
ಕ್ಯಾನ್ಸರ್ ಎನ್ನುವುದು ಅಸಹಜ ಜೀವಕೋಶದ ಬೆಳವಣಿಗೆಯನ್ನು ಒಳಗೊಂಡಿರುವ ರೋಗಗಳ ಗುಂಪಾಗಿದ್ದು, ಇದು ದೇಹದ ಇತರ ಭಾಗಗಳಿಗೆ ಆಕ್ರಮಣ ಮಾಡುವ ಅಥವಾ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಗೆಡ್ಡೆಗಳ ಮೂಲಕ ಕ್ಯಾನ್ಸರ್ ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ಕ್ಯಾನ್ಸರ್ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಜನರಿಗೆ ಕ್ಯಾನ್ಸರ್ ರೋಗಲಕ್ಷಣದ ಬಗ್ಗೆ ಜನರಿಗೆ ಹೆಚ್ಚಿನ ತಿಳಿವಳಿಕೆ ಇರದಿರುವುದು ಒಂದು ಮುಖ್ಯ ಕಾರಣ. ಕ್ಯಾನ್ಸರ್ನ ಸಂಭವನೀಯ ರೋಗಲಕ್ಷಣಗಳು ಗಡ್ಡೆ, ಅಸಹಜ ರಕ್ತಸ್ರಾವ, ದೀರ್ಘಕಾಲದ ಕೆಮ್ಮು, ಅತಿಯಾಗಿ ತೂಕ ಇಳಿಯುವುದು, ಮಲವಿಸರ್ಜನೆಯಲ್ಲಿ ಸಮಸ್ಯೆ ಇತ್ಯಾದಿ. 100 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್ಗಳು ಮನುಷ್ಯರ ಮೇಲೆ ಪರಿಣಾಮ ಬೀರುತ್ತವೆ.ತಂಬಾಕು ಸೇವನೆಯು ಸುಮಾರು 22%ರಷ್ಟು ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ.
ಇನ್ನೂ ಹೆಚ್ಚು ಓದಿಸರ್ವೈಕಲ್ ಕ್ಯಾನ್ಸರ್ ವಿರುದ್ಧ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ: 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಪ್ರಾರಂಭ
Free HPV Vaccines: ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಆರೋಗ್ಯ ಇಲಾಖೆಯು 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ನೀಡುವ ಮಹತ್ವದ ಅಭಿಯಾನ ಆರಂಭಿಸಿದೆ. ಖಾಸಗಿಯಲ್ಲಿ 3 ರಿಂದ 5 ಸಾವಿರ ರೂ. ಬೆಲೆಯಿದ್ದ ಈ ಲಸಿಕೆಗೆ ಈಗ ಶೇ. 50 ರಷ್ಟು ಬೇಡಿಕೆ ಹೆಚ್ಚಾಗಿದ್ದು, ಸರ್ಕಾರದ ಈ ಉಚಿತ ಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
- Vinay Kashappanavar
- Updated on: Jul 15, 2026
- 9:24 am
‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ನಿಧನ: ಕ್ಯಾನ್ಸರ್ ಗೆದ್ದರೂ ತಪ್ಪದ ಸಾವು
‘ಜುರಾಸಿಕ್ ಪಾರ್ಕ್’, ‘ದಿ ಪಿಯಾನೋ’ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಖ್ಯಾತ ನಟ ಸ್ಯಾಮ್ ನೀಲ್ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಹಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ರಾಜಕೀಯ ಗಣ್ಯರು ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಕಂಬನಿ ಮಿಡಿಯುತ್ತಿದ್ದಾರೆ.
- Madan Kumar
- Updated on: Jul 13, 2026
- 4:23 pm
‘ಈ ಮರುಜನ್ಮ ನಿಮಗೆ ಅರ್ಪಣೆ’: ಬಹಿರಂಗ ಆಗುತ್ತಿದೆ ಶಿವಣ್ಣ ಕಷ್ಟದ ದಿನಗಳ ಪೂರ್ತಿ ಮಾಹಿತಿ
ನಟ ಶಿವರಾಜ್ಕುಮಾರ್ ಅವರು ಅನಾರೋಗ್ಯವನ್ನು ಎದುರಿಸಿ ಮತ್ತೆ ಮೊದಲಿನಂತೆ ಆ್ಯಕ್ಟೀವ್ ಆಗಿದ್ದಾರೆ. ಆದರೆ ಆ ಜರ್ನಿ ಅಷ್ಟು ಸುಲಭದ್ದಾಗಿರಲಿಲ್ಲ. ಈ ಕುರಿತು ಸ್ವತಃ ಶಿವಣ್ಣ ಮಾತನಾಡಿದ್ದಾರೆ. ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಹಂಚಿಕೊಂಡಿರುವ ಅವರು ‘ಈ ಮರುಜನ್ಮ ನಿಮಗೆ ಅರ್ಪಣೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
- Madan Kumar
- Updated on: Jul 12, 2026
- 8:38 am
ಕ್ಯಾನ್ಸರ್ ಔಷಧಿ ಬೆಲೆ ಕಡಿಮೆಗೊಳಿಸಲು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ತೀರ್ಪಿಗಾಗಿ ಕಾಯುತ್ತಲೇ ಪ್ರಾಣ ಬಿಟ್ಟ ಮಹಿಳೆ!
ನ್ಯಾಯಾಂಗದ ವಿಳಂಬವು ಹೇಗೆ ಕೆಲವೊಮ್ಮೆ ಮಾನವನ ಜೀವಕ್ಕೆ ಮಾರಕವಾಗಬಹುದು ಎಂಬುದಕ್ಕೆ ಅತ್ಯಂತ ನೋವಿನ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುವ ದುಬಾರಿ ಔಷಧಿಯ ಬೆಲೆಯನ್ನು ಕಡಿಮೆ ಮಾಡಲು ಮತ್ತು ಎಲ್ಲರಿಗೂ ಸಿಗುವಂತೆ ಮಾಡಲು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ 57 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಕೋರ್ಟ್ ತೀರ್ಪು ನೀಡುವ ಮೊದಲೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
- Sushma Chakre
- Updated on: Jul 11, 2026
- 10:51 pm
ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ, ವೈದ್ಯರ ಎಚ್ಚರಿಕೆ!
ಬೆಂಗಳೂರಿನಲ್ಲಿ ಕಿರಿಯ ವಯಸ್ಸಿನಲ್ಲೇ ತಂಬಾಕು ಮತ್ತು ಧೂಮಪಾನದ ವ್ಯಸನಕ್ಕೆ ಒಳಗಾಗುತ್ತಿರುವ ಕಾರಣ ಯುವ ಜನರಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಕಿಡ್ವಾಯಿ ಆಸ್ಪತ್ರೆ ವೈದ್ಯರು ಎಚ್ಚರಿಸಿದ್ದಾರೆ. ನಾಲಿಗೆ, ಬಾಯಿ ಹಾಗೂ ಲಿವರ್ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದ್ದು, ಸಿಗರೇಟ್ಗೆ ಪರ್ಯಾಯವಾಗಿ ಬಳಸುವ ವೇಪಿಂಗ್ (ಇ-ಸಿಗರೇಟ್) ಕೂಡ ಶ್ವಾಸಕೋಶಕ್ಕೆ ಅಷ್ಟೇ ಅಪಾಯಕಾರಿ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
- Bhavana Hegde
- Updated on: May 31, 2026
- 10:08 am
Skin Cancer: ಟ್ಯಾಟೂ ಮೂಲಕವೂ ಚರ್ಮದ ಕ್ಯಾನ್ಸರ್ ಪತ್ತೆಹಚ್ಚಬಹುದಂತೆ!
ಚರ್ಮದ ಮೇಲ್ಮೈಯಲ್ಲಿ ಕಂಡುಬರುವ ಅತಿ ಸೂಕ್ಷ್ಮವಾದ ಉಷ್ಣಾಂಶದ ವ್ಯತ್ಯಾಸಗಳನ್ನು ಅಳೆಯುವ ಮೂಲಕ ಅತ್ಯಂತ ಆರಂಭಿಕ ಹಂತಗಳಲ್ಲೇ ಚರ್ಮದ ಕ್ಯಾನ್ಸರ್ಗಳನ್ನು ಪತ್ತೆಹಚ್ಚಬಲ್ಲ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯೊಂದನ್ನು ಕೆನಡಾದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಚರ್ಮದ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆಹಚ್ಚಬಹುದು. ಚರ್ಮರೋಗ ಶಾಸ್ತ್ರದಲ್ಲಿ ಮೆಲನೋಮಾವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ರೋಗಿಗಳು ಬದುಕುಳಿಯುವ ಪ್ರಮಾಣವನ್ನು ಸುಧಾರಿಸಲು ಅತ್ಯಂತ ನಿರ್ಣಾಯಕವಾಗಿದೆ.
- Sushma Chakre
- Updated on: May 25, 2026
- 9:37 pm
ಪುಟಾಣಿ ಮಕ್ಕಳಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್: ಆಘಾತಕಾರಿ ಅಂಕಿಅಂಶ ಬಯಲು
ಕರ್ನಾಟಕದಲ್ಲಿ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ವರ್ಷ 1,889 ಮಕ್ಕಳು ಬಾಧಿತರಾಗಿ, 312 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರೊಂದರಲ್ಲೇ 349 ಪ್ರಕರಣಗಳು ದಾಖಲಾಗಿವೆ. ಕಿದ್ವಾಯಿ ಆಸ್ಪತ್ರೆಯಲ್ಲಿ ನಿತ್ಯ 120ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಆರೋಗ್ಯ ಜಾಗೃತಿ ಹಾಗೂ ಹೆಚ್ಚುವರಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
- Vinay Kashappanavar
- Updated on: Feb 13, 2026
- 11:36 am
ಗೃಹ ಆರೋಗ್ಯದಡಿ ಸ್ಕ್ರೀನಿಂಗ್ ಮಾಡಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ: 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ
ಕ್ಯಾನ್ಸರ್ ಎಂಬ ಕೇಳಿದರೆ ಸಾಕು, ಒಂದು ರೀತಿಯಲ್ಲಿ ಎಲ್ಲರೂ ಬೆಚ್ಚಿ ಬೀಳುತ್ತೇವೆ. ವಯಸ್ಕರು, ವೃದ್ದರು, ಪುಟ್ಟಪುಟ್ಟ ಮಕ್ಕಳು ಎಂಬ ಭೇದಭಾವವಿಲ್ಲದೇ ಪ್ರತಿವರ್ಷವು ಸಾವಿರಾರು ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದು, ಅದರಲ್ಲೂ ಬೆಂಗಳೂರಂತೂ ಕ್ಯಾನ್ಸರ್ ಹಾಟ್ಸ್ಪಾಟ್ ಆಗಿ ಬದಲಾಗುತಿದೆ. ‘ಗೃಹ ಆರೋಗ್ಯ’ ಯೋಜನೆ ಅಡಿ ಸ್ಕ್ರೀನಿಂಗ್ ಮಾಡಿದಾಗ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
- Vinay Kashappanavar
- Updated on: Nov 13, 2025
- 8:01 am
ಚಿಕಿತ್ಸೆ ನೀಡಿದರೂ ಹರೀಶ್ ರಾಯ್ ಬದುಕಲಿಲ್ಲ ಯಾಕೆ? ಪೂರ್ತಿ ಮಾಹಿತಿ ನೀಡಿದ ವೈದ್ಯರು
ನಟ ಹರೀಶ್ ರಾಯ್ ಅವರು ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದರಿಂದ ಚಿತ್ರರಂಗಕ್ಕೆ ನೋವಾಗಿದೆ. 3 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ಎರಡು-ಮೂರು ತಿಂಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಆ ಬಗ್ಗೆ ವೈದ್ಯರು ‘ಟಿವಿ9’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಧನಕ್ಕೆ ಕಾರಣವನ್ನು ತಿಳಿಸಿದ್ದಾರೆ.
- Mangala RR
- Updated on: Nov 6, 2025
- 6:26 pm
ನಟ ಹರೀಶ್ ರಾಯ್ ನಿಧನ: ಉಡುಪಿಯ ಅಂಬಲಪಾಡಿಯಲ್ಲಿ ನಡೆಯಲಿದೆ ಅಂತ್ಯಕ್ರಿಯೆ
ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಅವರು ಇಂದು (ನವೆಂಬರ್ 6) ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ. ಅವರು ಮೂಲತಃ ಉಡುಪಿಯವರಾಗಿದ್ದು, ಉಡುಪಿಯ ಅಂಬಲಪಾಡಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಬೆಂಗಳೂರಿನ ನಿವಾಸದಿಂದ ಮಧ್ಯಾಹ್ನದ ನಂತರ ಹರೀಶ್ ರಾಯ್ ಅವರ ಪಾರ್ಥಿವ ಶರೀರ ಉಡುಪಿಗೆ ರವಾನೆ ಆಗಲಿದೆ.
- Madan Kumar
- Updated on: Nov 6, 2025
- 3:02 pm
ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ: ಆಸ್ಪತ್ರೆ ಎದುರು ಪತ್ನಿ, ಮಗನ ಕಣ್ಣೀರು
ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಹರೀಶ್ ರಾಯ್ ಅವರು ಕೊನೆಯುಸಿರು ಎಳೆದಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ನವೆಂಬರ್ 6) ನಿಧನರಾಗಿದ್ದಾರೆ. ಅವರ ಕುಟುಂಬದವರು ಶೋಕದಲ್ಲಿ ಮುಳುಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Nov 6, 2025
- 1:39 pm
ಕರುಳಿನ ಕ್ಯಾನ್ಸರ್: ರಷ್ಯಾದಿಂದ ಲಸಿಕೆ ಸಿದ್ಧ; ನಿರುಪದ್ರವಿ ವೈರಸ್ ಬಳಸಿ ಕ್ಯಾನ್ಸರ್ ಕೋಶಗಳ ನಾಶ ಮಾಡಬಲ್ಲ ಪ್ರಬಲ ವ್ಯಾಕ್ಸಿನ್
Russian scientists develop EnteroMix vaccine against Colon Cancer: ಕರುಳಿನ ಕ್ಯಾನ್ಸರ್ ರೋಗಕ್ಕೆ ರಷ್ಯನ್ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಪ್ರೀಕ್ಲಿನಿಕಲ್ ಟ್ರಯಲ್ಗಳೆಲ್ಲವೂ ಯಶಸ್ವಿಯಾಗಿವೆ. ಮನುಷ್ಯರ ಮೇಲೆ ಬಳಕೆಗೆ ಇದು ಸಿದ್ಧವಾಗಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೀಡಬಹುದು. ರಷ್ಯನ್ ವಿಜ್ಞಾನಿಗಳ ಈ ಯಶಸ್ಸು ಕ್ಯಾನ್ಸರ್ ರೋಗಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎನಿಸಬಹುದು.
- Vijaya Sarathy SN
- Updated on: Sep 7, 2025
- 3:22 pm