Cancer
ಕ್ಯಾನ್ಸರ್ ಎನ್ನುವುದು ಅಸಹಜ ಜೀವಕೋಶದ ಬೆಳವಣಿಗೆಯನ್ನು ಒಳಗೊಂಡಿರುವ ರೋಗಗಳ ಗುಂಪಾಗಿದ್ದು, ಇದು ದೇಹದ ಇತರ ಭಾಗಗಳಿಗೆ ಆಕ್ರಮಣ ಮಾಡುವ ಅಥವಾ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಗೆಡ್ಡೆಗಳ ಮೂಲಕ ಕ್ಯಾನ್ಸರ್ ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ಕ್ಯಾನ್ಸರ್ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಜನರಿಗೆ ಕ್ಯಾನ್ಸರ್ ರೋಗಲಕ್ಷಣದ ಬಗ್ಗೆ ಜನರಿಗೆ ಹೆಚ್ಚಿನ ತಿಳಿವಳಿಕೆ ಇರದಿರುವುದು ಒಂದು ಮುಖ್ಯ ಕಾರಣ. ಕ್ಯಾನ್ಸರ್ನ ಸಂಭವನೀಯ ರೋಗಲಕ್ಷಣಗಳು ಗಡ್ಡೆ, ಅಸಹಜ ರಕ್ತಸ್ರಾವ, ದೀರ್ಘಕಾಲದ ಕೆಮ್ಮು, ಅತಿಯಾಗಿ ತೂಕ ಇಳಿಯುವುದು, ಮಲವಿಸರ್ಜನೆಯಲ್ಲಿ ಸಮಸ್ಯೆ ಇತ್ಯಾದಿ. 100 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್ಗಳು ಮನುಷ್ಯರ ಮೇಲೆ ಪರಿಣಾಮ ಬೀರುತ್ತವೆ.ತಂಬಾಕು ಸೇವನೆಯು ಸುಮಾರು 22%ರಷ್ಟು ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ.
ಗೃಹ ಆರೋಗ್ಯದಡಿ ಸ್ಕ್ರೀನಿಂಗ್ ಮಾಡಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ: 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ
ಕ್ಯಾನ್ಸರ್ ಎಂಬ ಕೇಳಿದರೆ ಸಾಕು, ಒಂದು ರೀತಿಯಲ್ಲಿ ಎಲ್ಲರೂ ಬೆಚ್ಚಿ ಬೀಳುತ್ತೇವೆ. ವಯಸ್ಕರು, ವೃದ್ದರು, ಪುಟ್ಟಪುಟ್ಟ ಮಕ್ಕಳು ಎಂಬ ಭೇದಭಾವವಿಲ್ಲದೇ ಪ್ರತಿವರ್ಷವು ಸಾವಿರಾರು ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದು, ಅದರಲ್ಲೂ ಬೆಂಗಳೂರಂತೂ ಕ್ಯಾನ್ಸರ್ ಹಾಟ್ಸ್ಪಾಟ್ ಆಗಿ ಬದಲಾಗುತಿದೆ. ‘ಗೃಹ ಆರೋಗ್ಯ’ ಯೋಜನೆ ಅಡಿ ಸ್ಕ್ರೀನಿಂಗ್ ಮಾಡಿದಾಗ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
- Vinay Kashappanavar
- Updated on: Nov 13, 2025
- 8:01 am
ಚಿಕಿತ್ಸೆ ನೀಡಿದರೂ ಹರೀಶ್ ರಾಯ್ ಬದುಕಲಿಲ್ಲ ಯಾಕೆ? ಪೂರ್ತಿ ಮಾಹಿತಿ ನೀಡಿದ ವೈದ್ಯರು
ನಟ ಹರೀಶ್ ರಾಯ್ ಅವರು ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದರಿಂದ ಚಿತ್ರರಂಗಕ್ಕೆ ನೋವಾಗಿದೆ. 3 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ಎರಡು-ಮೂರು ತಿಂಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಆ ಬಗ್ಗೆ ವೈದ್ಯರು ‘ಟಿವಿ9’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಧನಕ್ಕೆ ಕಾರಣವನ್ನು ತಿಳಿಸಿದ್ದಾರೆ.
- Mangala RR
- Updated on: Nov 6, 2025
- 6:26 pm
ನಟ ಹರೀಶ್ ರಾಯ್ ನಿಧನ: ಉಡುಪಿಯ ಅಂಬಲಪಾಡಿಯಲ್ಲಿ ನಡೆಯಲಿದೆ ಅಂತ್ಯಕ್ರಿಯೆ
ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಅವರು ಇಂದು (ನವೆಂಬರ್ 6) ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ. ಅವರು ಮೂಲತಃ ಉಡುಪಿಯವರಾಗಿದ್ದು, ಉಡುಪಿಯ ಅಂಬಲಪಾಡಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಬೆಂಗಳೂರಿನ ನಿವಾಸದಿಂದ ಮಧ್ಯಾಹ್ನದ ನಂತರ ಹರೀಶ್ ರಾಯ್ ಅವರ ಪಾರ್ಥಿವ ಶರೀರ ಉಡುಪಿಗೆ ರವಾನೆ ಆಗಲಿದೆ.
- Madan Kumar
- Updated on: Nov 6, 2025
- 3:02 pm
ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ: ಆಸ್ಪತ್ರೆ ಎದುರು ಪತ್ನಿ, ಮಗನ ಕಣ್ಣೀರು
ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಹರೀಶ್ ರಾಯ್ ಅವರು ಕೊನೆಯುಸಿರು ಎಳೆದಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ನವೆಂಬರ್ 6) ನಿಧನರಾಗಿದ್ದಾರೆ. ಅವರ ಕುಟುಂಬದವರು ಶೋಕದಲ್ಲಿ ಮುಳುಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Nov 6, 2025
- 1:39 pm
ಕರುಳಿನ ಕ್ಯಾನ್ಸರ್: ರಷ್ಯಾದಿಂದ ಲಸಿಕೆ ಸಿದ್ಧ; ನಿರುಪದ್ರವಿ ವೈರಸ್ ಬಳಸಿ ಕ್ಯಾನ್ಸರ್ ಕೋಶಗಳ ನಾಶ ಮಾಡಬಲ್ಲ ಪ್ರಬಲ ವ್ಯಾಕ್ಸಿನ್
Russian scientists develop EnteroMix vaccine against Colon Cancer: ಕರುಳಿನ ಕ್ಯಾನ್ಸರ್ ರೋಗಕ್ಕೆ ರಷ್ಯನ್ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಪ್ರೀಕ್ಲಿನಿಕಲ್ ಟ್ರಯಲ್ಗಳೆಲ್ಲವೂ ಯಶಸ್ವಿಯಾಗಿವೆ. ಮನುಷ್ಯರ ಮೇಲೆ ಬಳಕೆಗೆ ಇದು ಸಿದ್ಧವಾಗಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೀಡಬಹುದು. ರಷ್ಯನ್ ವಿಜ್ಞಾನಿಗಳ ಈ ಯಶಸ್ಸು ಕ್ಯಾನ್ಸರ್ ರೋಗಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎನಿಸಬಹುದು.
- Vijaya Sarathy SN
- Updated on: Sep 7, 2025
- 3:22 pm
ನಾಯಿ ಮೂಸಿದರೆ ಮನುಷ್ಯರ ಕಾಯಿಲೆ ಪತ್ತೆ; ಬೆಂಗಳೂರಿನ ಸ್ಟಾರ್ಟಪ್ನಿಂದ ಹೊಸ ರೋಗಪತ್ತೆ ಸಾಧನ ಆವಿಷ್ಕಾರ
Bengaluru startup Dognosis uses dogs to detect diseases in humans: ನಿಮ್ಮ ದೇಹದಲ್ಲಿರುವ ರೋಗಗಳನ್ನು ನಾಯಿಗಳು ಗುರುತಿಸಬಲ್ಲವು. ಅವುಗಳಿಗೆ ಅಂಥ ತೀಕ್ಷ್ಣ ವಾಸನಾ ಗ್ರಹಿಕೆ ಸಾಮರ್ಥ್ಯ ಇದೆ. ಬೆಂಗಳೂರಿನ ಡಾಗ್ನಾಸಿಸ್ ಎನ್ನುವ ಸ್ಟಾರ್ಟಪ್ವೊಂದು ಈ ಶ್ವಾನ ಶಕ್ತಿ ಬಳಸಿ ಹೊಸ ಡಯಾಗ್ನಾಸಿಸ್ ವಿಧಾನ ಆವಿಷ್ಕರಿಸಿದ್ಧಾರೆ. ವಿಶೇಷ ತರಬೇತಿ ಪಡೆದ ಶ್ವಾನದ ಹಾಗೂ ಎಐ ತಂತ್ರಜ್ಞಾನದ ನೆರವಿನಿಂದ ರೋಗ ಪತ್ತೆ ಮಾಡುತ್ತದೆ ಡಾಗ್ನಾಸಿಸ್.
- Vijaya Sarathy SN
- Updated on: Aug 22, 2025
- 3:27 pm
ತಮಿಳು ಚಿತ್ರರಂಗದ ಖ್ಯಾತ ನಟ ಮದನ್ ಬಾಬ್ ನಿಧನ; ಕ್ಯಾನ್ಸರ್ನಿಂದ ವಿಧಿವಶ
ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಮದನ್ ಬಾಬ್ ಅವರು ಚೈನ್ನೈನಲ್ಲಿ ಶನಿವಾರ (ಆ.3) ನಿಧನರಾದರು. ನಟನೆ ಮಾತ್ರವಲ್ಲದೇ ಸಂಗೀತದಲ್ಲಿ ಕೂಡ ಅವರಿಗೆ ಆಸಕ್ತಿ ಇತ್ತು. ಮದನ್ ಬಾಬ್ ಅವರ ನಿಧನದಿಂದ ತಮಿಳು ಚಿತ್ರಕ್ಕೆ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಕಂಬಿ ಮಿಡಿಯುತ್ತಿದ್ದಾರೆ.
- Madan Kumar
- Updated on: Aug 3, 2025
- 12:30 pm
ಕ್ಯಾನ್ಸರ್ ರೋಗಿಗಳಿಗೆ ಗುಡ್ನ್ಯೂಸ್ ನೀಡಿದ ಕರ್ನಾಟಕ ಆರೋಗ್ಯ ಇಲಾಖೆ
ದಿನದಿಂದ ದಿನಕ್ಕೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಕರ್ನಾಟಕದಲ್ಲಿ ಪ್ರತಿ ವರ್ಷ 70 ಸಾವಿರ ಹೊಸ ಕ್ಯಾನ್ಸರ್ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ಜಿಲ್ಲಾ ಕೀಮೋಥೆರಪಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಸರ್ಕಾರ ನಡೆದುಕೊಂಡಿದ್ದು, ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಸಂಬಂಧ ಮಹತ್ವದ ತೀರ್ಮಾನ ಕೈಗೊಂಡಿದೆ.
- Vinay Kashappanavar
- Updated on: May 22, 2025
- 6:57 pm
ಅರ್ಚನಾ ಉಡುಪ ಆರೋಗ್ಯದ ಬಗ್ಗೆ ಅಪಪ್ರಚಾರ; ಕ್ಯಾನ್ಸರ್ ಕುರಿತು ಗಾಯಕಿ ಸ್ಪಷ್ಟನೆ
‘ದಯವಿಟ್ಟು ಪೂರ್ತಿ ವಿಷಯವನ್ನು ತಿಳಿದುಕೊಳ್ಳದೇ, ಸೋಶಿಯಲ್ ಮೀಡಿಯಾದಲ್ಲಿ ಅರ್ಧಂಬರ್ಧ ನೋಡಿಕೊಂಡು ಏನೇನೋ ಊಹೆ ಮಾಡಿಕೊಳ್ಳಬೇಡಿ. ಇದರಿಂದ ಯಾರೋ ಒಬ್ಬರ ವೃತ್ತಿ ಜೀವನ ಮತ್ತು ಖಾಸಗಿ ಜೀವನಕ್ಕೆ ಘಾಸಿ ಆಗುವುದು ತಪ್ಪುತ್ತದೆ’ ಎಂದು ಅರ್ಚನಾ ಉಡುಪ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: May 16, 2025
- 6:35 pm
CT Scan: ಪದೇ ಪದೇ ಸಿಟಿ ಸ್ಕ್ಯಾನಿಂಗ್ ಮಾಡಿಸಿಕೊಂಡರೆ ಬರಬಹುದು ಈ ಮಾರಕ ರೋಗ!
ಸಂಶೋಧನಾ ವರದಿಯೊಂದರಲ್ಲಿ ಸಿಟಿ ಸ್ಕ್ಯಾನ್ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಹಲವಾರು ಬಾರಿ ಈ ಸ್ಕ್ಯಾನ್ ಮಾಡಿಸಿಕೊಳ್ಳುವ ಜನರು ಅಪಾಯದಲ್ಲಿದ್ದಾರೆ ಎಂದು ಈ ಸಂಶೋಧನೆ ಹೇಳುತ್ತಿದೆ. ಆದರೆ ರೋಗಗಳನ್ನು ಪತ್ತೆ ಹಚ್ಚುವ ಸಿಟಿ ಸ್ಕ್ಯಾನ್ ಕ್ಯಾನ್ಸರ್ ಗೆ ಹೇಗೆ ಕಾರಣವಾಗುತ್ತದೆ? ಸಿಟಿ ಸ್ಕ್ಯಾನ್ ಮಾಡಬಾರದೇ? ಈ ಬಗ್ಗೆ ಡಾ. ಜುಗಲ್ ಕಿಶೋರ್ ನೀಡಿರುವ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Apr 18, 2025
- 11:10 am
ಸುದೀಪ್, ದರ್ಶನ್, ಯಶ್ ಫ್ಯಾನ್ಸ್ ಕೂಡ ನನಗಾಗಿ ಪ್ರಾರ್ಥನೆ ಮಾಡಿದ್ದರು: ಶಿವಣ್ಣ
ನಟ ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಆಪರೇಷನ್ ಆದ ಬಳಿಕ ಅವರು ‘ಟಿವಿ9’ ಜತೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಲಿ ಅಂತ ಬೇರೆ ನಟರ ಫ್ಯಾನ್ಸ್ ಕೂಡ ಪ್ರಾರ್ಥನೆ ಮಾಡಿದ್ದರು. ಆ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ.
- Madan Kumar
- Updated on: Mar 5, 2025
- 9:12 pm
ಬೆಂಗಳೂರಿನಲ್ಲಿ ಆಪರೇಷನ್ ಇಡ್ಲಿ: ಹೋಟೆಲ್ಗಳ ಮೇಲೆ ಅಧಿಕಾರಿಗಳ ರೇಡ್, ಇಂಚಿಂಚೂ ಶೋಧ
ಬೆಂಗಳೂರಿನ ಹೋಟೆಲ್, ದರ್ಶಿನಿಗಳ ಇಡ್ಲಿಯಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಹಲವೆಡೆ ದಾಳಿ ನಡೆಸಿ ಇಡ್ಲಿ ತಯಾರಿ ಪ್ರಕ್ರಿಯೆಯ ಪರಿಶೀಲನೆ ನಡೆಸಿದೆ. ಈ ಮಧ್ಯೆ, ಹಸಿರು ಬಟಾಣಿಯಲ್ಲಿ ಕೃತಕ ಬಣ್ಣದ ಬಳಕೆಯೂ ಪತ್ತೆಯಾಗಿದೆ. ‘ಟಿವಿ9’ ಅಭಿಯಾನದಿಂದ ಈ ಸಮಸ್ಯೆ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
- Vinay Kashappanavar
- Updated on: Feb 28, 2025
- 1:06 pm