
ತೆಳು ಅರಿಶಿನ ಬಣ್ಣದಿಂದ ಕಂಗೊಳಿಸುವ ಕೇದಿಗೆ (Kewda flower) ಹೂವಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಗಾಳಿ ಬೀಸುವ ದಿಕ್ಕಿನಲ್ಲಿ ನೂರಾರು ಮೀಟರ್ ದೂರಕ್ಕೂ ತನ್ನ ಪರಿಮಳ ಸೂಸುವ ಈ ಸೌಗಂಧಿಕ ಹೂವನ್ನು ನಾಗರಪಂಚಮಿಯ ದಿನ ನಾಗಬನಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಇದು ನಾಗನಿಗೆ ಬಲು ಪ್ರೀಯ. ಅದಕ್ಕಾಗಿಯೇ ಈ ಹೂವಿನ ಮರ ಇರುವಲ್ಲಿ ಹಾವುಗಳಿರುತ್ತವೆ ಎನ್ನುವ ನಂಬಿಕೆ ಇದೆ. ನಾಗರ ಪಂಚಮಿಯ (Nag Panchami) ಸಮಯದಲ್ಲಿ ಕೇದಿಗೆ ಹೂವಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ ಕೇದಗೆ ಪುಷ್ಪಕ್ಕೂ ನಾಗ ದೇವರಿಗೂ ಅವಿನಾಭಾವ ಸಂಬಂಧವಿದೆ. ಮಾತ್ರವಲ್ಲ ಈ ಹೂವನ್ನು ಪೂಜೆಗೆ ಮಾತ್ರವಲ್ಲ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಬಳಸಲಾಗುತ್ತದೆ. ಹೇಗೆ ಗೊತ್ತಾ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನಾಗರ ಪಂಚಮಿಯ ದಿನ ಕೇದಿಗೆ ಹೂವನ್ನು ನಾಗನಿಗೆ ಅರ್ಪಿಸುವುದಕ್ಕೆ ಕಾರಣವಿದೆ. ಪುರಾಣದ ಪ್ರಕಾರ, ತುಂಬಾ ವರ್ಷಗಳ ಹಿಂದೆ, ಆರು ಜನ ಅಣ್ಣಂದಿರು ಮತ್ತು ಒಬ್ಬಳು ತಂಗಿ ಇರುವ ಒಂದು ಕುಟುಂಬವೊಂದು ಇತ್ತಂತೆ. ಆ ಮೆನೆಯಲ್ಲಿರುವ ಅಣ್ಣಂದಿರು ನಾಗಗಳಿಗೆ ತೊಂದರೆ ಕೊಟ್ಟು ನಾಗ ದೇವರ ಕೋಪಕ್ಕೆ ಗುರಿಯಾಗಿ ತೊಂದರೆ ಅನುಭವಿಸುತ್ತಿದ್ದರಂತೆ. ಆ ಸಮಯದಲ್ಲಿ ತಂಗಿಯು ಕೇದಿಗೆ ಪುಷ್ಪದಿಂದ ಪಂಚಮಿಯ ದಿನದಂದು ನಾಗ ದೇವರನ್ನು ಭಕ್ತಿಯಿಂದ ಪೂಜಿಸಿ ದೇವರ ಬಳಿ ಕ್ಷಮೆ ಕೇಳಿ, ತನ್ನ ಅಣ್ಣಂದಿರ ಶಾಪ ವಿಮೋಚನೆಗೆಯಾಗುವುದಕ್ಕೆ ಕಾರಣಳಾಗುತ್ತಾಳೆ, ಹಾಗಾಗಿ ಅಂದಿನಿಂದ ಕೇದಗೆ ಹೂವನ್ನು ನಾಗದೇವರ ಪೂಜೆಗೆ ಬಳಸುತ್ತಾರೆ ಎನ್ನುವ ಪ್ರತೀತಿ ಇದೆ.
ಇದನ್ನೂ ಓದಿ: Nag Panchami 2025: ನಾಗರಪಂಚಮಿ ದಿನ ಮಾಡುವ ಕಡುಬನ್ನು ಅರಶಿನ ಎಲೆಯಲ್ಲಿಯೇ ಮಾಡಲು ಕಾರಣವೇನು?
ಕೇದಗೆ ಹೂವು ಸುಗಂಧ ತೈಲ, ಸೌಂದರ್ಯವರ್ಧಕಗಳು ಮತ್ತು ಪೂಜೆಗೆ ಮಾತ್ರವಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೇದಗೆಯ ಎಲೆಗಳು, ಹೂವುಗಳು ಮತ್ತು ಬೇರುಗಳನ್ನು ವಿವಿಧ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Sat, 26 July 25