AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravan

Shravan

ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಮಾಸವಾಗಿದೆ. ದ್ವಾದಶ ಮಾಸಗಳಲ್ಲಿ ಐದನೇ ಮಾಸವಾಗಿರುವ ಶ್ರಾವಣ “ಪಂಚಮಂ ಕಾರ್ಯಸಿದ್ಧಿ” ಎಂದೂ ಕರೆಯಲ್ಪಡುತ್ತದೆ. ಈ ತಿಂಗಳು ಶಿವನ ಆರಾಧನೆಗೆ ಅತ್ಯಂತ ಪವಿತ್ರವಾದ ಸಮಯವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸವು ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಈ ಮಾಸ ಜಪ, ತಪ, ಧ್ಯಾನ ಮತ್ತು ದಾನಕ್ಕೆ ಅತ್ಯಂತ ಅನುಕೂಲಕರವಾದ ಸಮಯ. “ಶ್ರಾವಣ” ಎಂಬ ಪದವು “ಕೇಳುವುದು” ಎಂಬ ಅರ್ಥವನ್ನು ಹೊಂದಿದ್ದು, ಈ ಮಾಸದಲ್ಲಿ ಜ್ಞಾನವನ್ನು ಕೇಳುವುದು ಮತ್ತು ಸ್ವೀಕರಿಸುವುದು ಮಾಸ ಎಂದೂ ಕೂಡ ಪರಿಗಣಿಸಲಾಗಿದೆ.

ಇನ್ನೂ ಹೆಚ್ಚು ಓದಿ

Swapna Shastra: ಕನಸಿನಲ್ಲಿ ಶಿವ ಕಾಣಿಸಿಕೊಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?

ನಿದ್ರೆಯಲ್ಲಿ ಕಾಣುವ ಕನಸುಗಳು ಸಾಮಾನ್ಯವಾದರೂ, ಸ್ವಪ್ನ ಶಾಸ್ತ್ರದ ಪ್ರಕಾರ ಶಿವನಿಗೆ ಸಂಬಂಧಿಸಿದ ಕನಸುಗಳು ವಿಶೇಷ ಅರ್ಥ ಹೊಂದಿವೆ. ಶ್ರಾವಣ ಮಾಸದಲ್ಲಿ ಮಹಾದೇವನ ದರ್ಶನ ಅತ್ಯಂತ ಶುಭ ಸಂಕೇತ. ಶಿವನ ರೂಪ, ಶಿವಲಿಂಗ ಅಥವಾ ಹಾವು ಕನಸಿನಲ್ಲಿ ಕಂಡರೆ ಜೀವನದಲ್ಲಿ ಪ್ರಮುಖ ಬದಲಾವಣೆ, ಕಾರ್ಯಗಳಲ್ಲಿ ಯಶಸ್ಸು, ಅಡೆತಡೆ ನಿವಾರಣೆ ಮತ್ತು ಆಧ್ಯಾತ್ಮಿಕ ಏಳಿಗೆ ಸೂಚಿಸುತ್ತದೆ. ಇದು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ.

Video: ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ, ರೇವಣ್ಣ ಕುಟುಂಬದಿಂದ ವಿಶೇಷ ಪೂಜೆ

ಎರಡನೇ ಶ್ರಾವಣ ಶನಿವಾರದಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕುಟುಂಬದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ. ರೇವಣ್ಣ, ಭವಾನಿ ರೇವಣ್ಣ ಮತ್ತು ಡಾ. ಸೂರಜ್ ರೇವಣ್ಣ ಸಹ ಪೂಜೆಯಲ್ಲಿ ಭಾಗಿಯಾಗಿದ್ದರು.

ಶ್ರಾವಣ ಶುಕ್ಲ ದಶಮಿ: ಶ್ರಾವಣ ಶನಿವಾರದ ಗ್ರಹಬಲ ಹಾಗೂ ಶುಭ-ಅಶುಭ ಸಮಯ!

ಆಗಸ್ಟ್ 22, 2026ರ ಶ್ರಾವಣ ಶುಕ್ಲ ದಶಮಿಯ ಶನಿವಾರದ ಪಂಚಾಂಗ ವಿವರ, ಗ್ರಹಗಳ ರಾಶಿ ಪರಿವರ್ತನೆ, ಶನಿ ದೇವ ಹಾಗೂ ಹನುಮಂತನ ವಿಶೇಷ ಪೂಜಾ ವಿಧಾನ ಮತ್ತು ದಿನದ ಅತ್ಯಂತ ಶುಭ ಹಾಗೂ ಅಶುಭ (ರಾಹುಕಾಲ, ಯಮಗಂಡ) ಸಮಯಗಳ ಸಂಪೂರ್ಣ ವಿವರ ಮತ್ತು ಶನಿ ಸಾಡೇಸಾತಿ ನಿವಾರಣೆಗೆ ಎಳ್ಳೆಣ್ಣೆ ದೀಪ, ಸ್ತೋತ್ರ ಪಠಣ, ಮತ್ತು ದಾನ-ಧರ್ಮಗಳ ಕುರಿತು ಮಾಹಿತಿ ಹಾಗೂ ಶುಭ-ಅಶುಭ ಸಮಯಗಳ ವಿವರ ಇಲ್ಲಿದೆ.

Video: ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ. 10 ರೂ.ನಿಂದ 500 ರೂ.ವರೆಗಿನ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಬಳಸಿ ದೇವಿಯನ್ನು ಅಲಂಕರಿಸಲಾಗಿದೆ. ಮುಖ್ಯ ಅರ್ಚಕ ಲಕ್ಷ್ಮೀಶ್ ಶರ್ಮ ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿದರು. ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ವರಮಹಾಲಕ್ಷ್ಮಿ ಹಬ್ಬ: ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ, ಹುಬ್ಬಳ್ಳಿ ನಗರದ ಜನತಾ ಬಜಾರ್‌ನಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತಿಪೂರ್ವಕ ವಿಶೇಷ ಪೂಜೆಗಳು ನೆರವೇರುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ದೇವಿಗೆ ಸುಂದರವಾದ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಈ ಧಾರ್ಮಿಕ ಆಚರಣೆಯು ದೇವಸ್ಥಾನದಲ್ಲಿ ಸಡಗರ ಮತ್ತು ಭಕ್ತಿಯ ವಾತಾವರಣವನ್ನು ಸೃಷ್ಟಿಸಿದೆ.

Shravana Masa: ವರಮಹಾಲಕ್ಷ್ಮಿ ಹಬ್ಬ; ಶ್ರಾವಣ ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ

ಶ್ರಾವಣ ಮಾಸ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ. ಈ ಮಾಸದಲ್ಲಿ ವರಮಹಾಲಕ್ಷ್ಮಿ ವ್ರತಕ್ಕೆ ವಿಶೇಷ ಪ್ರಾಮುಖ್ಯತೆ. ಆಗಸ್ಟ್ 21 ರಂದು ಬರುವ ಈ ವ್ರತದಲ್ಲಿ ಮಹಿಳೆಯರು ಕುಟುಂಬದ ಸುಖ-ಶಾಂತಿ, ಐಶ್ವರ್ಯಕ್ಕಾಗಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಶ್ರಾವಣ ಶುಕ್ರವಾರದಂದು ಸಕಾರಾತ್ಮಕ ಚಿಂತನೆ, ಶಾಂತ ಸ್ವಭಾವ ಮತ್ತು ಶ್ರೀಗಂಧ ಲೇಪನವು ಆಧ್ಯಾತ್ಮಿಕ ಮತ್ತು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಆಚರಣೆಗಳು ಸಮೃದ್ಧ ಜೀವನಕ್ಕೆ ಸಹಕಾರಿ.

ವರಮಹಾಲಕ್ಷ್ಮಿ ವ್ರತ: ಸಂಪತ್ತು, ಸಮೃದ್ಧಿ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ

ವರಮಹಾಲಕ್ಷ್ಮಿ ಹಬ್ಬವು ಸಂಪತ್ತು ಮತ್ತು ಸಮೃದ್ಧಿಗಾಗಿ ಆಚರಿಸುವ ಪ್ರಮುಖ ವ್ರತವಾಗಿದೆ. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸಲಾಗುವ ಈ ಹಬ್ಬದಲ್ಲಿ ದಂಪತಿಗಳು ಕಲಶ ಪ್ರತಿಷ್ಠಾಪಿಸಿ, ಆಭರಣಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಇದು ದಾರಿದ್ರ್ಯವನ್ನು ದೂರಮಾಡಿ, ಇಷ್ಟಾರ್ಥಗಳನ್ನು ಈಡೇರಿಸುವ ಮಹತ್ವದ ಹಬ್ಬ. ಡಾ. ಕೆ.ಎನ್. ಸೋಮಯಾಜಿಯವರಿಂದ ಇದರ ವಿಧಿವಿಧಾನಗಳನ್ನು ತಿಳಿಯಿರಿ.

Varalakshmi Vrata 2026: ವರಲಕ್ಷ್ಮಿ ವ್ರತ; ಈ 4 ರಾಶಿಗಳಿಗೆ ಒಲಿಯಲಿದೆ ಮಹಾಲಕ್ಷ್ಮಿಯ ಕೃಪೆ, ಅಪಾರ ಸಂಪತ್ತು!

ಶ್ರಾವಣ ಮಾಸದ ವರಮಹಾಲಕ್ಷ್ಮಿ ವ್ರತವು ಮಹಿಳೆಯರಿಗೆ ಪವಿತ್ರ ಹಬ್ಬ. ಈ ದಿನ ಲಕ್ಷ್ಮಿ ದೇವಿಯ ಪೂಜೆಯಿಂದ ಕುಟುಂಬದಲ್ಲಿ ಸೌಭಾಗ್ಯ, ಯೋಗಕ್ಷೇಮ, ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ. ಈ ಬಾರಿಯ ವರಲಕ್ಷ್ಮಿ ವ್ರತದ ಶುಭ ಸಂದರ್ಭದಲ್ಲಿ ಮಹಾಲಕ್ಷ್ಮಿಯ ವಿಶೇಷ ಆಶೀರ್ವಾದದಿಂದ ನಾಲ್ಕು ರಾಶಿಗಳ ಜನರಿಗೆ ಅಪಾರ ಧನಲಾಭ ಮತ್ತು ಯಶಸ್ಸು ಸಿಗಲಿದೆ. ಆ ರಾಶಿಗಳು ಯಾವುವು ಎಂಬ ವಿವರ ಇಲ್ಲಿದೆ.

Varalakshmi Vrata: ವರಮಹಾಲಕ್ಷ್ಮಿ ವ್ರತ ಯಾರು ಆಚರಿಸಬಹುದು ಮತ್ತು ಹೇಗೆ? ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ

ಶ್ರಾವಣ ಮಾಸದ ಪವಿತ್ರ ವರಮಹಾಲಕ್ಷ್ಮಿ ವ್ರತದ ಕುರಿತು ಹಲವರಲ್ಲಿರುವ ಅನುಮಾನಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ. ಭಕ್ತಿ ಇರುವ ಯಾರು ಬೇಕಾದರೂ ಈ ವ್ರತ ಆಚರಿಸಬಹುದು, ಕುಟುಂಬದಲ್ಲಿ ಪದ್ಧತಿ ಇಲ್ಲದಿದ್ದರೂ ಹೊಸದಾಗಿ ಪ್ರಾರಂಭಿಸಬಹುದು. ವ್ರತದ ದಿನ ತಪ್ಪಿದಲ್ಲಿ ಪರ್ಯಾಯ ದಿನಾಂಕಗಳು ಲಭ್ಯ. ಕಲಶ ಸ್ಥಾಪನೆ ಮತ್ತು ವಿಗ್ರಹದ ಆಯ್ಕೆ ಕುರಿತು ಸ್ಪಷ್ಟನೆ ಇದೆ. ಭಕ್ತಿ ಮತ್ತು ಶ್ರದ್ಧೆಯೇ ಈ ವ್ರತದ ಮೂಲಾಧಾರ.

ಶ್ರಾವಣ ಮಾಸದ ವಿಶೇಷ: ವರಲಕ್ಷ್ಮಿ ಪೂಜೆ, ಹಯಗ್ರೀವ ಜಯಂತಿ ಮತ್ತು ಲಕ್ಷ್ಮಿ ತತ್ವದ ಆಧ್ಯಾತ್ಮಿಕ ರಹಸ್ಯ

ಶ್ರಾವಣ ಮಾಸವು ಆಧ್ಯಾತ್ಮಿಕ ಜಾಗೃತಿಗೆ ಪವಿತ್ರ ಸಮಯ. ವರಲಕ್ಷ್ಮಿ ವ್ರತವು ಕುಟುಂಬದ ಸೌಭಾಗ್ಯ, ಸಂತಾನ ಮತ್ತು ಅಷ್ಟೈಶ್ವರ್ಯಕ್ಕಾಗಿ ಆಚರಿಸುವ ಪ್ರಮುಖ ಪೂಜೆಯಾಗಿದೆ. ಕೇವಲ ಹಣಕ್ಕಿಂತಲೂ ಆರೋಗ್ಯ, ಜ್ಞಾನ, ಧೈರ್ಯ ಸೇರಿದಂತೆ ಸಮಗ್ರ ಸುಖ-ಸಮೃದ್ಧಿಯೇ ಲಕ್ಷ್ಮಿಯ ನಿಜವಾದ ಸ್ವರೂಪ. ಈ ಮಾಸದಲ್ಲಿ ಶ್ರಾವಣ ಪೂರ್ಣಿಮೆಯಂದು ಹಯಗ್ರೀವ ಜಯಂತಿ, ಜ್ಞಾನಾರ್ಜನೆಗೆ ಪ್ರಾಮುಖ್ಯತೆ ಹೊಂದಿದೆ. ಭಕ್ತಿ ಮತ್ತು ನಮ್ರತೆಯಿಂದ ಆಚರಿಸುವ ವ್ರತವು ನಿಜವಾದ ಫಲ ನೀಡುತ್ತದೆ ಎಂಬ ನಂಬಿಕೆಯಿದೆ.

Shravana: ಶ್ರಾವಣದಲ್ಲಿ ಶಿವನ ಕೃಪೆಗೆ ಇಲ್ಲಿದೆ ಸುಲಭ ಮಾರ್ಗ; ಈ ಒಂದು ಕೆಲಸ ಮಾಡಿದ್ರೆ ಸಕಲ ಇಷ್ಟಾರ್ಥ ಸಿದ್ಧಿ!

ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಇಷ್ಟಾರ್ಥಗಳನ್ನು ಈಡೇರಿಸುತ್ತದೆ. ಆದರೆ, ರಾಮನ ಪೂಜೆಯಿಂದಲೂ ಶಿವನ ಕೃಪೆಯನ್ನು ಅತೀ ವೇಗವಾಗಿ ಪಡೆಯಬಹುದು. ಪ್ರತಿದಿನ ರಾಮಾಯಣ ಪಠಿಸುವುದರಿಂದ ಮನೆಯ ವಾಸ್ತುದೋಷ, ನಕಾರಾತ್ಮಕ ಶಕ್ತಿ ನಿವಾರಣೆಯಾಗಿ, ಮಾನಸಿಕ ನೆಮ್ಮದಿ ದೊರೆಯುತ್ತದೆ. ಇದು ಕೌಟುಂಬಿಕ ಬಾಂಧವ್ಯ ಹೆಚ್ಚಿಸಿ, ಮನೆಯಲ್ಲಿ ಸಂಪತ್ತು ನೆಲೆಸುವಂತೆ ಮಾಡುತ್ತದೆ. ಶಿವ ಪೂಜೆಯ ಜೊತೆಗೆ ರಾಮ ನಾಮ ಜಪ ಅಥವಾ ರಾಮಾಯಣ ಪಠಣ ಶ್ರೇಷ್ಠ.

Shravana: ಶ್ರಾವಣ ಮಂಗಳವಾರದಂದು ತಪ್ಪಿಯೂ ಈ ಕೆಲಸ ಮಾಡಬೇಡಿ; ಪಾಲಿಸಬೇಕಾದ ಕಠಿಣ ನಿಯಮಗಳಿವು

ಶ್ರಾವಣ ಮಾಸದ ಮಂಗಳಗೌರಿ ವ್ರತವು ಕುಟುಂಬದ ಶ್ರೇಯಸ್ಸಿಗೆ ಮಹತ್ವಪೂರ್ಣ. ಈ ಪವಿತ್ರ ದಿನದಂದು ಸಂಪೂರ್ಣ ಸಾತ್ವಿಕ ವಾತಾವರಣ ಅಗತ್ಯ. ಮಾಂಸಾಹಾರ, ಮದ್ಯಪಾನ, ಈರುಳ್ಳಿ, ಬೆಳ್ಳುಳ್ಳಿ ತ್ಯಜಿಸಬೇಕು. ಉಗುರು, ಕೂದಲು ಕತ್ತರಿಸುವುದು ನಿಷಿದ್ಧ. ಯಾರನ್ನೂ ನೋಯಿಸದೆ, ಶಾಂತ ಮನಸ್ಸಿನಿಂದ ಪೂಜಿಸುವುದರಿಂದ ಸಕಲ ಶುಭಗಳು ಲಭಿಸುತ್ತವೆ ಎಂದು ನಂಬಲಾಗಿದೆ.

ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ