AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಳಕೆಯೊಡೆದ ಆಹಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ

Sprouts: ಮೊಳಕೆಯೊಡೆದ ಆಹಾರವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಲವು ರೋಗಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇವು, ದೇಹದ ಆರೋಗ್ಯವನ್ನು ಕಾಪಾಡುವಲ್ಲಿಯೂ ಬಹಳ ಸಹಾಯ ಮಾಡುತ್ತವೆ. ಈ ಕುರಿತು ಮಾಹಿತಿ ಇಲ್ಲಿದೆ.

ಮೊಳಕೆಯೊಡೆದ ಆಹಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Nov 28, 2021 | 8:35 AM

ಮೊಳಕೆಯೊಡೆದ ಆಹಾರವು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಉದ್ದೇಶದಿಂದ ಆಹಾರದಲ್ಲಿ ಬಳಕೆಯಾಗುತ್ತಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಇದನ್ನು ಮಧುಮೇಹವನ್ನು ತಡೆಗಟ್ಟಲು ಇರುವ ಆಹಾರವಾಗಿಯೂ ಬಳಸಲಾಗುತ್ತಿದೆ. ವಿಶೇಷವೆಂದರೆ, ಮೊಳಕೆಯೊಡೆದ ಆಹಾರಗಳನ್ನು ಹೆಚ್ಚಿನ ನಾಗರಿಕತೆಗಳು ಆಹಾರದ ಮೂಲವಾಗಿ ಗುರುತಿಸಿವೆ ಅಲ್ಲದೇ ಅದರ ಸುತ್ತಲೂ ಸಾಂಪ್ರದಾಯಿಕ ಪಾಕವಿಧಾನಗಳನ್ನು ರೂಪಿಸಿವೆ. ಭಾರತದಲ್ಲಿ, ಮೊಳಕೆಯೊಡೆದ ಆಹಾರವನ್ನು ಬೇಯಿಸಿದ (ಭಕ್ಷ್ಯಗಳು) ಅಥವಾ ಕಚ್ಚಾ (ಸಲಾಡ್ಗಳು) ಎರಡೂ ರೂಪದಲ್ಲೂ ಬಳಸಲಾಗುತ್ತದೆ. ಮೊಳಕೆಯೊಡೆದ ಆಹಾರ ಹಾಗೂ ಅದರ ವಿಶೇಷತೆಗಳು ಸಾಮಾನ್ಯ ಜನರಿಗೂ ತಿಳಿದಿವೆ. ಆದರೆ ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ಈ ಕುರಿತು ತಜ್ಞರ ಮಾತುಗಳು ಇಲ್ಲಿವೆ. ಮೊಳಕೆಯೊಡೆದ ಆಹಾರಗಳನ್ನು ಸೇವಿಸುವುದು ಜಾಗತಿಕವಾಗಿ ಎಲ್ಲೆಡೆ ಪ್ರಚಲಿತದಲ್ಲಿದೆ. ಬೀನ್ಸ್, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಧಾನ್ಯಗಳ ಬೀಜಗಳು ಮತ್ತು ತರಕಾರಿಗಳನ್ನು ಮೊಳಕೆಯೊಡೆಸಿ ಬಳಸಬಹುದು. ಅನೇಕ ಜನರು ಅಲ್ಫಾಲ್ಫಾ, ಕೋಸುಗಡ್ಡೆ, ಕ್ಲೋವರ್, ಗೋಧಿ ಗ್ರಾಸ್, ಸಂಪೂರ್ಣ ಬೀನ್ಸ್, ಕಡಲೆ ಬೀಜಗಳನ್ನು ಕೂಡ ನೆನೆಸಿ ಮೊಳಕೆಯೊಡೆದು ಬಳಸುತ್ತಾರೆ.

8-12 ಗಂಟೆಗಳ ಕಾಲ ನೆನೆಸಿಟ್ಟು, ಮೊಳಕೆ ಒಡೆಸಲಾಗುತ್ತದೆ. ನಂತರ ಅವುಗಳನ್ನು ಮೃದುವಾದ ಬಲದಿಂದ ಶುದ್ಧವಾದ ಹತ್ತಿ ಬಟ್ಟೆಯಲ್ಲಿ ಕಟ್ಟುವುದು (ಶುದ್ಧ ನೀರನ್ನು ಚಿಮುಕಿಸುವ ಮೂಲಕ ತೇವವಾಗಿಡಬಹುದು. ಮೊಳಕೆಯೊಡೆದ ಸಂದರ್ಭದಲ್ಲಿ ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತವೆ ಮತ್ತು ದೇಹವು ತಮ್ಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಕೆಲವರು ಧಾನ್ಯಗಳನ್ನು ನೆನೆಸಿದ ನೀರನ್ನು ಬದಲಾಯಿಸಲು ಇಷ್ಟಪಡುತ್ತಾರೆ. ವಾಸ್ತವವಾಗಿ ನೆನೆಸಿದ ಧಾನ್ಯಗಳನ್ನು ಪ್ರತಿ 8-12 ಗಂಟೆಗಳಿಗೊಮ್ಮೆ ತೊಳೆಯುವುದು ಉತ್ತಮ.

ಮೊಳಕೆಯೊಡೆಸುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಅಂದರೆ ಬ್ಯಾಕ್ಟೀರಿಯಾಗಳು ಮೊಳಕೆಯೊಡೆಯುವುದನ್ನು ಹಾನಿ ಮಾಡಬಹುದು. ಆದ್ದರಿಂದ ಆದಷ್ಟು ಸ್ವಚ್ಛವಾದ ವಾತಾವರಣ ಉಂಟಾಗುವಂತೆ ನೋಡಿಕೊಳ್ಳುವುದು ಉತ್ತಮ. ಅಲ್ಲದೇ ಮೊಳಕೆಯೊಡೆಸುವಾಗ ಕಳಪೆ ಧಾನ್ಯಗಳನ್ನು ಬಳಸಲೇಬೇಡಿ. ಒಂದು ವೇಳೆ ಮೊಳಕೆಯೊಡೆದವುಗಳನ್ನು ನೀವು ನೇರವಾಗಿ ಖರೀದಿಸುವುದಾದರೆ, ಪೋಷಕಾಂಶ ನಷ್ಟವಾದರೂ ಬೇಯಿಸಿ ತಿನ್ನುವುದು ಉತ್ತಮ. ಕಾರಣ, ಇದರಿಂದ ಕನಿಷ್ಠ ಮಾಲಿನ್ಯ ಭರಿತ ಆಹಾರ ದೇಹವನ್ನು ಸೇರುವುದು ತಪ್ಪುತ್ತದೆ. ಅಂದ ಹಾಗೆ ಈ ಮಾದರಿ ಭಾರತಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿ ಪ್ರಚಲಿತದಲ್ಲಿದೆ. ಕಾರಣ, ಅಲ್ಲಿನ ಜನರು ಹೆಚ್ಚಾಗಿ ಮೊಳಕೆಯೊಡೆದ ಆಹಾರವನ್ನು ನೇರವಾಗಿ ಖರೀದಿಸುತ್ತಾರೆ.

ಮೊಳಕೆಯೊಡೆದ ಆಹಾರ ದೇಹಕ್ಕೆ ಏನೆಲ್ಲಾ ಪ್ರಯೋಜನ ನೀಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ

  • ಹೃದಯದ ಆರೋಗ್ಯವನ್ನು ಉತ್ತಮವಾಗಿಸುತ್ತದೆ.
  • ಚರ್ಮದ ತ್ವಚೆಯನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಆಯಸ್ಸನ್ನೂ ವೃದ್ಧಿಸುತ್ತದೆ.
  • ತೂಕ ಕಡಿಮೆಗೊಳಿಸಲು ಮತ್ತು ತೂಕವನ್ನು ನಿರ್ವಹಿಸಲು ಪ್ರಯೋಜನಕಾರಿಯಾಗಿದೆ.
  • ಮಧುಮೇಹವನ್ನು ಹಿಮ್ಮೆಟ್ಟಸಿಲು ಸಹಕಾರಿಯಾಗಿದೆ.
  • ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸಹಕಾರಿ
  •  ಕರುಳಿನ ಚಟುವಟಿಕೆಯನ್ನು ಶಕ್ತಿಶಾಲಿಯಾಗಿಸುತ್ತದೆ.
  • ಉರಿಯೂತದ ವಿರುದ್ಧ ಸಹಕಾರಿ.
  • ಕ್ಯಾನ್ಸರ್​ ತಡೆಯಲೂ ಇದು ಸಹಕಾರಿಯಾಗಿದೆ.
  • ಆರೋಗ್ಯ ವೃದ್ಧಿಸಲು ಸಹಕಾರಿ.

(ವಿ.ಸೂ.: ಇಲ್ಲಿ ಪ್ರಸ್ತಾಪಿಸಲಾಗಿರುವ ವಿಚಾರಗಳು ಸಾಮಾನ್ಯ ಮಾಹಿತಿಗಳು. ನಿರ್ದಿಷ್ಟ ವಿಷಯದ ಕುರಿತು ನಿಮಗೆ ಗೊಂದಲ- ಅನುಮಾನಗಳಿದ್ದಲ್ಲಿ ಪರಿಣಿತ ವೈದ್ಯಕೀಯ ಸಲಹೆ ಪಡೆದುಕೊಳ್ಳಿ) 

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ