AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಳಕೆಯೊಡೆದ ಆಹಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ

Sprouts: ಮೊಳಕೆಯೊಡೆದ ಆಹಾರವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಲವು ರೋಗಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇವು, ದೇಹದ ಆರೋಗ್ಯವನ್ನು ಕಾಪಾಡುವಲ್ಲಿಯೂ ಬಹಳ ಸಹಾಯ ಮಾಡುತ್ತವೆ. ಈ ಕುರಿತು ಮಾಹಿತಿ ಇಲ್ಲಿದೆ.

ಮೊಳಕೆಯೊಡೆದ ಆಹಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Updated By: preethi shettigar|

Updated on: Nov 28, 2021 | 8:35 AM

Share

ಮೊಳಕೆಯೊಡೆದ ಆಹಾರವು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಉದ್ದೇಶದಿಂದ ಆಹಾರದಲ್ಲಿ ಬಳಕೆಯಾಗುತ್ತಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಇದನ್ನು ಮಧುಮೇಹವನ್ನು ತಡೆಗಟ್ಟಲು ಇರುವ ಆಹಾರವಾಗಿಯೂ ಬಳಸಲಾಗುತ್ತಿದೆ. ವಿಶೇಷವೆಂದರೆ, ಮೊಳಕೆಯೊಡೆದ ಆಹಾರಗಳನ್ನು ಹೆಚ್ಚಿನ ನಾಗರಿಕತೆಗಳು ಆಹಾರದ ಮೂಲವಾಗಿ ಗುರುತಿಸಿವೆ ಅಲ್ಲದೇ ಅದರ ಸುತ್ತಲೂ ಸಾಂಪ್ರದಾಯಿಕ ಪಾಕವಿಧಾನಗಳನ್ನು ರೂಪಿಸಿವೆ. ಭಾರತದಲ್ಲಿ, ಮೊಳಕೆಯೊಡೆದ ಆಹಾರವನ್ನು ಬೇಯಿಸಿದ (ಭಕ್ಷ್ಯಗಳು) ಅಥವಾ ಕಚ್ಚಾ (ಸಲಾಡ್ಗಳು) ಎರಡೂ ರೂಪದಲ್ಲೂ ಬಳಸಲಾಗುತ್ತದೆ. ಮೊಳಕೆಯೊಡೆದ ಆಹಾರ ಹಾಗೂ ಅದರ ವಿಶೇಷತೆಗಳು ಸಾಮಾನ್ಯ ಜನರಿಗೂ ತಿಳಿದಿವೆ. ಆದರೆ ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ಈ ಕುರಿತು ತಜ್ಞರ ಮಾತುಗಳು ಇಲ್ಲಿವೆ. ಮೊಳಕೆಯೊಡೆದ ಆಹಾರಗಳನ್ನು ಸೇವಿಸುವುದು ಜಾಗತಿಕವಾಗಿ ಎಲ್ಲೆಡೆ ಪ್ರಚಲಿತದಲ್ಲಿದೆ. ಬೀನ್ಸ್, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಧಾನ್ಯಗಳ ಬೀಜಗಳು ಮತ್ತು ತರಕಾರಿಗಳನ್ನು ಮೊಳಕೆಯೊಡೆಸಿ ಬಳಸಬಹುದು. ಅನೇಕ ಜನರು ಅಲ್ಫಾಲ್ಫಾ, ಕೋಸುಗಡ್ಡೆ, ಕ್ಲೋವರ್, ಗೋಧಿ ಗ್ರಾಸ್, ಸಂಪೂರ್ಣ ಬೀನ್ಸ್, ಕಡಲೆ ಬೀಜಗಳನ್ನು ಕೂಡ ನೆನೆಸಿ ಮೊಳಕೆಯೊಡೆದು ಬಳಸುತ್ತಾರೆ.

8-12 ಗಂಟೆಗಳ ಕಾಲ ನೆನೆಸಿಟ್ಟು, ಮೊಳಕೆ ಒಡೆಸಲಾಗುತ್ತದೆ. ನಂತರ ಅವುಗಳನ್ನು ಮೃದುವಾದ ಬಲದಿಂದ ಶುದ್ಧವಾದ ಹತ್ತಿ ಬಟ್ಟೆಯಲ್ಲಿ ಕಟ್ಟುವುದು (ಶುದ್ಧ ನೀರನ್ನು ಚಿಮುಕಿಸುವ ಮೂಲಕ ತೇವವಾಗಿಡಬಹುದು. ಮೊಳಕೆಯೊಡೆದ ಸಂದರ್ಭದಲ್ಲಿ ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತವೆ ಮತ್ತು ದೇಹವು ತಮ್ಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಕೆಲವರು ಧಾನ್ಯಗಳನ್ನು ನೆನೆಸಿದ ನೀರನ್ನು ಬದಲಾಯಿಸಲು ಇಷ್ಟಪಡುತ್ತಾರೆ. ವಾಸ್ತವವಾಗಿ ನೆನೆಸಿದ ಧಾನ್ಯಗಳನ್ನು ಪ್ರತಿ 8-12 ಗಂಟೆಗಳಿಗೊಮ್ಮೆ ತೊಳೆಯುವುದು ಉತ್ತಮ.

ಮೊಳಕೆಯೊಡೆಸುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಅಂದರೆ ಬ್ಯಾಕ್ಟೀರಿಯಾಗಳು ಮೊಳಕೆಯೊಡೆಯುವುದನ್ನು ಹಾನಿ ಮಾಡಬಹುದು. ಆದ್ದರಿಂದ ಆದಷ್ಟು ಸ್ವಚ್ಛವಾದ ವಾತಾವರಣ ಉಂಟಾಗುವಂತೆ ನೋಡಿಕೊಳ್ಳುವುದು ಉತ್ತಮ. ಅಲ್ಲದೇ ಮೊಳಕೆಯೊಡೆಸುವಾಗ ಕಳಪೆ ಧಾನ್ಯಗಳನ್ನು ಬಳಸಲೇಬೇಡಿ. ಒಂದು ವೇಳೆ ಮೊಳಕೆಯೊಡೆದವುಗಳನ್ನು ನೀವು ನೇರವಾಗಿ ಖರೀದಿಸುವುದಾದರೆ, ಪೋಷಕಾಂಶ ನಷ್ಟವಾದರೂ ಬೇಯಿಸಿ ತಿನ್ನುವುದು ಉತ್ತಮ. ಕಾರಣ, ಇದರಿಂದ ಕನಿಷ್ಠ ಮಾಲಿನ್ಯ ಭರಿತ ಆಹಾರ ದೇಹವನ್ನು ಸೇರುವುದು ತಪ್ಪುತ್ತದೆ. ಅಂದ ಹಾಗೆ ಈ ಮಾದರಿ ಭಾರತಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿ ಪ್ರಚಲಿತದಲ್ಲಿದೆ. ಕಾರಣ, ಅಲ್ಲಿನ ಜನರು ಹೆಚ್ಚಾಗಿ ಮೊಳಕೆಯೊಡೆದ ಆಹಾರವನ್ನು ನೇರವಾಗಿ ಖರೀದಿಸುತ್ತಾರೆ.

ಮೊಳಕೆಯೊಡೆದ ಆಹಾರ ದೇಹಕ್ಕೆ ಏನೆಲ್ಲಾ ಪ್ರಯೋಜನ ನೀಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ

  • ಹೃದಯದ ಆರೋಗ್ಯವನ್ನು ಉತ್ತಮವಾಗಿಸುತ್ತದೆ.
  • ಚರ್ಮದ ತ್ವಚೆಯನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಆಯಸ್ಸನ್ನೂ ವೃದ್ಧಿಸುತ್ತದೆ.
  • ತೂಕ ಕಡಿಮೆಗೊಳಿಸಲು ಮತ್ತು ತೂಕವನ್ನು ನಿರ್ವಹಿಸಲು ಪ್ರಯೋಜನಕಾರಿಯಾಗಿದೆ.
  • ಮಧುಮೇಹವನ್ನು ಹಿಮ್ಮೆಟ್ಟಸಿಲು ಸಹಕಾರಿಯಾಗಿದೆ.
  • ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸಹಕಾರಿ
  •  ಕರುಳಿನ ಚಟುವಟಿಕೆಯನ್ನು ಶಕ್ತಿಶಾಲಿಯಾಗಿಸುತ್ತದೆ.
  • ಉರಿಯೂತದ ವಿರುದ್ಧ ಸಹಕಾರಿ.
  • ಕ್ಯಾನ್ಸರ್​ ತಡೆಯಲೂ ಇದು ಸಹಕಾರಿಯಾಗಿದೆ.
  • ಆರೋಗ್ಯ ವೃದ್ಧಿಸಲು ಸಹಕಾರಿ.

(ವಿ.ಸೂ.: ಇಲ್ಲಿ ಪ್ರಸ್ತಾಪಿಸಲಾಗಿರುವ ವಿಚಾರಗಳು ಸಾಮಾನ್ಯ ಮಾಹಿತಿಗಳು. ನಿರ್ದಿಷ್ಟ ವಿಷಯದ ಕುರಿತು ನಿಮಗೆ ಗೊಂದಲ- ಅನುಮಾನಗಳಿದ್ದಲ್ಲಿ ಪರಿಣಿತ ವೈದ್ಯಕೀಯ ಸಲಹೆ ಪಡೆದುಕೊಳ್ಳಿ) 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ