AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂದಿ ಜ್ವರ, ಸಾಮಾನ್ಯ ಜ್ವರ, ಕೋವಿಡ್ 19 ಹೇಗೆ ಒಂದಕ್ಕೊಂದು ಸುರುಳಿ ಸುತ್ತುಕೊಂಡಿವೆ?

ಗುಜರಾತ್​ನಲ್ಲಿ ಸಾಮಾನ್ಯ ಜ್ವರದಂತಹ ಪ್ರಕರಣಗಳು ವರದಿಯಾಗುತ್ತಿವೆ, ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಪತ್ತೆಯಾದ ಹಂದಿ ಜ್ವರ ಪ್ರಕರಣಗಳಿಗಿಂತ ಈ ವರ್ಷ ಶೇ.40ರಷ್ಟು ಹೆಚ್ಚಳ ಕಂಡುಬಂದಿದೆ.

ಹಂದಿ ಜ್ವರ, ಸಾಮಾನ್ಯ ಜ್ವರ, ಕೋವಿಡ್ 19 ಹೇಗೆ ಒಂದಕ್ಕೊಂದು ಸುರುಳಿ ಸುತ್ತುಕೊಂಡಿವೆ?
Fever
TV9 Web
| Edited By: |

Updated on:Aug 12, 2022 | 11:30 AM

Share

ಗುಜರಾತ್​ನಲ್ಲಿ ಸಾಮಾನ್ಯ ಜ್ವರದಂತಹ ಪ್ರಕರಣಗಳು ವರದಿಯಾಗುತ್ತಿವೆ, ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಪತ್ತೆಯಾದ ಹಂದಿ ಜ್ವರ ಪ್ರಕರಣಗಳಿಗಿಂತ ಈ ವರ್ಷ ಶೇ.40ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಹಂದಿ ಜ್ವರ ಮತ್ತು ಅಥವಾ ಸಾಮಾನ್ಯ ಜ್ವರದ ಪ್ರಕರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣ ಕೊಂಚ ಕಡಿಮೆಯಾಗಿತ್ತು.  ಆದರೆ ಈ ಬಾರಿ ಮತ್ತೆ ಪ್ರಕರಣಗಳ ಉಲ್ಬಣವನ್ನು ಕಾಣುತ್ತಿದ್ದೇವೆ ಎಂದು ಸ್ಟರ್ಲಿಂಗ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಮತ್ತು ಮುಖ್ಯ ಸಲಹೆಗಾರರಾದ ಡಾ. ಅತುಲ್ ಪಟೇಲ್ ಹೇಳಿದ್ದಾರೆ.

ಹಂದಿ ಜ್ವರವು ಪಕ್ಷಿಗಳು, ಹಂದಿಗಳು ಮತ್ತು ಮಾನವರಲ್ಲಿ ಇನ್ಫ್ಲುಯೆನ್ಸ ವೈರಸ್​ಗಳ ಮರುಸಂಯೋಜಕವಾಗಿದೆ. ಎರಡೂ ವೈರಸ್‌ಗಳು ಇರುವ ಕಾರಣ ನಾವು ಪ್ರಸ್ತುತ ಹಂದಿ ಜ್ವರ ರೋಗಿಗಳು ಮತ್ತು ಸೀಸನಲ್ ಇನ್ಫ್ಲುಯೆನ್ಸ ರೋಗಿಗಳನ್ನು ಕಾಣುತ್ತಿದ್ದೇವೆ. ಈ ಜ್ವರವು ಮೊದಲನೆಯದು ಚಳಿಗಾಲದಲ್ಲಿ ಮತ್ತು ಎರಡನೆಯದು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹಂದಿ ಜ್ವರ, ಸೀಸನಲ್ ಜ್ವರ ಹಾಗೂ ಕೋವಿಡ್ 19ನ ಆರಂಭಿಕ ಲಕ್ಷಣಗಳು ಒಂದೇ ರೀತಿಯಲ್ಲಿರುತ್ತವೆ.

ಹಾಗಾಗಿ ಸಾಮಾನ್ಯ ಜ್ವರವು ಈ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. US ಅಥವಾ ಯೂರೋಪ್‌ನಂತಹ ಸಮಶೀತೋಷ್ಣ ದೇಶಗಳಿಗೆ ಹೋಲಿಸಿದರೆ ಅಲ್ಲಿ ಚಳಿಗಾಲದಲ್ಲಿ ಮಾತ್ರ ಈ ರೋಗಗಳು ಕಾಣಿಸಿಕೊಳ್ಳುತ್ತದೆ.

ಇದೀಗ ನಾವು ಸಮಾನ ಸಂಖ್ಯೆಯ ಕೋವಿಡ್-19 ಮತ್ತು ಸಾಮಾನ್ಯ ಜ್ವರದ ರೋಗಿಗಳನ್ನು ನೋಡುತ್ತಿದ್ದೇವೆ. ವಾಸ್ತವವಾಗಿ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಸಾಮಾನ್ಯ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚು. ನಾವು ಕಟ್ಟುನಿಟ್ಟಾಗಿ ಮಾಸ್ಕ್​ ಧರಿಸದಿರುವುದು ಮತ್ತು ಕೈಗಳನ್ನು ಶುಚಿಗೊಳಿಸದಿರುವುದು ಇದಕ್ಕೆ ಕಾರಣವಾಗಿರಬಹುದು.

ಮೂರು ವೈರಸ್‌ಗಳಿಗೆ – ಇನ್ಫ್ಲುಯೆನ್ಸ A, B ಮತ್ತು ಹಂದಿ ಜ್ವರ – ಟ್ಯಾಮಿಫ್ಲು ಹೆಚ್ಚು ಪರಿಣಾಮಕಾರಿಯಾಗಿದೆ. ಇದಲ್ಲದೆ, ಈ ರೋಗಿಗಳಲ್ಲಿ ಹೆಚ್ಚಿನವರು ಆಂಟಿವೈರಲ್ ಔಷಧವನ್ನು ತೆಗೆದುಕೊಂಡ 48 ಗಂಟೆಗಳ ಒಳಗೆ ಪ್ರತಿಕ್ರಿಯಿಸುತ್ತಾರೆ.

ಪಿಸಿಆರ್ ಪರೀಕ್ಷೆ ಮೂಲಕ ಸಾಮಾನ್ಯ ಜ್ವರವೇ?, ಹಂದಿ ಜ್ವರವೇ ಅಥವಾ ಕೋವಿಡ್ 19 ಎಂಬುದನ್ನು ತಿಳಿಯಬಹುದು, ಆದರೂ ಈ ಮೂರು ಜ್ವರಗಳು ಒಂದಕ್ಕೊಂದು ಕೊಂಡಿಯಂತಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 12 August 22

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ