Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂದಿ ಜ್ವರ, ಸಾಮಾನ್ಯ ಜ್ವರ, ಕೋವಿಡ್ 19 ಹೇಗೆ ಒಂದಕ್ಕೊಂದು ಸುರುಳಿ ಸುತ್ತುಕೊಂಡಿವೆ?

ಗುಜರಾತ್​ನಲ್ಲಿ ಸಾಮಾನ್ಯ ಜ್ವರದಂತಹ ಪ್ರಕರಣಗಳು ವರದಿಯಾಗುತ್ತಿವೆ, ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಪತ್ತೆಯಾದ ಹಂದಿ ಜ್ವರ ಪ್ರಕರಣಗಳಿಗಿಂತ ಈ ವರ್ಷ ಶೇ.40ರಷ್ಟು ಹೆಚ್ಚಳ ಕಂಡುಬಂದಿದೆ.

ಹಂದಿ ಜ್ವರ, ಸಾಮಾನ್ಯ ಜ್ವರ, ಕೋವಿಡ್ 19 ಹೇಗೆ ಒಂದಕ್ಕೊಂದು ಸುರುಳಿ ಸುತ್ತುಕೊಂಡಿವೆ?
Fever
Follow us
TV9 Web
| Updated By: ನಯನಾ ರಾಜೀವ್

Updated on:Aug 12, 2022 | 11:30 AM

ಗುಜರಾತ್​ನಲ್ಲಿ ಸಾಮಾನ್ಯ ಜ್ವರದಂತಹ ಪ್ರಕರಣಗಳು ವರದಿಯಾಗುತ್ತಿವೆ, ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಪತ್ತೆಯಾದ ಹಂದಿ ಜ್ವರ ಪ್ರಕರಣಗಳಿಗಿಂತ ಈ ವರ್ಷ ಶೇ.40ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಹಂದಿ ಜ್ವರ ಮತ್ತು ಅಥವಾ ಸಾಮಾನ್ಯ ಜ್ವರದ ಪ್ರಕರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣ ಕೊಂಚ ಕಡಿಮೆಯಾಗಿತ್ತು.  ಆದರೆ ಈ ಬಾರಿ ಮತ್ತೆ ಪ್ರಕರಣಗಳ ಉಲ್ಬಣವನ್ನು ಕಾಣುತ್ತಿದ್ದೇವೆ ಎಂದು ಸ್ಟರ್ಲಿಂಗ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಮತ್ತು ಮುಖ್ಯ ಸಲಹೆಗಾರರಾದ ಡಾ. ಅತುಲ್ ಪಟೇಲ್ ಹೇಳಿದ್ದಾರೆ.

ಹಂದಿ ಜ್ವರವು ಪಕ್ಷಿಗಳು, ಹಂದಿಗಳು ಮತ್ತು ಮಾನವರಲ್ಲಿ ಇನ್ಫ್ಲುಯೆನ್ಸ ವೈರಸ್​ಗಳ ಮರುಸಂಯೋಜಕವಾಗಿದೆ. ಎರಡೂ ವೈರಸ್‌ಗಳು ಇರುವ ಕಾರಣ ನಾವು ಪ್ರಸ್ತುತ ಹಂದಿ ಜ್ವರ ರೋಗಿಗಳು ಮತ್ತು ಸೀಸನಲ್ ಇನ್ಫ್ಲುಯೆನ್ಸ ರೋಗಿಗಳನ್ನು ಕಾಣುತ್ತಿದ್ದೇವೆ. ಈ ಜ್ವರವು ಮೊದಲನೆಯದು ಚಳಿಗಾಲದಲ್ಲಿ ಮತ್ತು ಎರಡನೆಯದು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹಂದಿ ಜ್ವರ, ಸೀಸನಲ್ ಜ್ವರ ಹಾಗೂ ಕೋವಿಡ್ 19ನ ಆರಂಭಿಕ ಲಕ್ಷಣಗಳು ಒಂದೇ ರೀತಿಯಲ್ಲಿರುತ್ತವೆ.

ಹಾಗಾಗಿ ಸಾಮಾನ್ಯ ಜ್ವರವು ಈ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. US ಅಥವಾ ಯೂರೋಪ್‌ನಂತಹ ಸಮಶೀತೋಷ್ಣ ದೇಶಗಳಿಗೆ ಹೋಲಿಸಿದರೆ ಅಲ್ಲಿ ಚಳಿಗಾಲದಲ್ಲಿ ಮಾತ್ರ ಈ ರೋಗಗಳು ಕಾಣಿಸಿಕೊಳ್ಳುತ್ತದೆ.

ಇದೀಗ ನಾವು ಸಮಾನ ಸಂಖ್ಯೆಯ ಕೋವಿಡ್-19 ಮತ್ತು ಸಾಮಾನ್ಯ ಜ್ವರದ ರೋಗಿಗಳನ್ನು ನೋಡುತ್ತಿದ್ದೇವೆ. ವಾಸ್ತವವಾಗಿ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಸಾಮಾನ್ಯ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚು. ನಾವು ಕಟ್ಟುನಿಟ್ಟಾಗಿ ಮಾಸ್ಕ್​ ಧರಿಸದಿರುವುದು ಮತ್ತು ಕೈಗಳನ್ನು ಶುಚಿಗೊಳಿಸದಿರುವುದು ಇದಕ್ಕೆ ಕಾರಣವಾಗಿರಬಹುದು.

ಮೂರು ವೈರಸ್‌ಗಳಿಗೆ – ಇನ್ಫ್ಲುಯೆನ್ಸ A, B ಮತ್ತು ಹಂದಿ ಜ್ವರ – ಟ್ಯಾಮಿಫ್ಲು ಹೆಚ್ಚು ಪರಿಣಾಮಕಾರಿಯಾಗಿದೆ. ಇದಲ್ಲದೆ, ಈ ರೋಗಿಗಳಲ್ಲಿ ಹೆಚ್ಚಿನವರು ಆಂಟಿವೈರಲ್ ಔಷಧವನ್ನು ತೆಗೆದುಕೊಂಡ 48 ಗಂಟೆಗಳ ಒಳಗೆ ಪ್ರತಿಕ್ರಿಯಿಸುತ್ತಾರೆ.

ಪಿಸಿಆರ್ ಪರೀಕ್ಷೆ ಮೂಲಕ ಸಾಮಾನ್ಯ ಜ್ವರವೇ?, ಹಂದಿ ಜ್ವರವೇ ಅಥವಾ ಕೋವಿಡ್ 19 ಎಂಬುದನ್ನು ತಿಳಿಯಬಹುದು, ಆದರೂ ಈ ಮೂರು ಜ್ವರಗಳು ಒಂದಕ್ಕೊಂದು ಕೊಂಡಿಯಂತಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 12 August 22

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್