AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology tips: ವ್ಯಾಪಾರ, ಉದ್ಯಮ ಯಾರಿಗೆ, ಯಾವ ಗ್ರಹದ ಅನುಗ್ರಹದಿಂದ ಆಗಿಬರುತ್ತದೆ ಗೊತ್ತೆ?

ವ್ಯಾಪಾರ, ವ್ಯವಹಾರ ಶುರು ಮಾಡುವುದು ಹಲವರಿಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಕೊರೆಯುತ್ತಲೇ ಇರುತ್ತದೆ. ಆದರೆ ಎಲ್ಲರಿಗೂ ಆಗಿಬರುತ್ತದೆಯೇ ಎಂಬುದನ್ನು ಜ್ಯೋತಿಷ ಮೂಲಕ ಪರಿಶೀಲಿಸಿಕೊಳ್ಳುವುದು ಉತ್ತಮ.

Astrology tips: ವ್ಯಾಪಾರ, ಉದ್ಯಮ ಯಾರಿಗೆ, ಯಾವ ಗ್ರಹದ ಅನುಗ್ರಹದಿಂದ ಆಗಿಬರುತ್ತದೆ ಗೊತ್ತೆ?
ರಾಶಿ ಚಕ್ರ
TV9 Web
| Edited By: |

Updated on: Jun 04, 2021 | 6:57 AM

Share

ಸ್ವಂತ ಉದ್ಯಮ, ವ್ಯಾಪಾರ ಮಾಡುವುದು ಬಹಳ ಜನರ ಗುರಿ, ಆಸೆ ಆಗಿರುತ್ತದೆ. ಹಾಗಂತ ಸಟಕ್ಕನೆ ಕೈಯಲ್ಲಿರುವ ಹಣವನ್ನೋ ಅಥವಾ ಸಾಲ ತಂದೋ ದುಡ್ಡನ್ನು ಹಾಕಿ, ವ್ಯಾಪಾರ- ಉದ್ಯಮ ಆರಂಭಿಸುವುದಕ್ಕೆ ಮೊದಲು ಒಮ್ಮೆ ಜನ್ಮ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ. ಏಕೆಂದರೆ, ಜಾತಕದಲ್ಲಿ ಶುಕ್ರ ನೀಚವಾಗಿರುವಾಗಲೋ ಅಥವಾ ಶುಕ್ರಾದಿತ್ಯ ದಶಾ ಸಂಧಿ ಕಾಲದಲ್ಲೋ ಅಥವಾ ಸಾಡೇಸಾತ್ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿ, ಕೈ ಸುಟ್ಟುಕೊಂಡು ಆ ನಂತರ ದುಃಖ ಪಟ್ಟವರು ಬಹಳ ಮಂದಿ. ಆದ್ದರಿಂದ ವ್ಯಾಪಾರ- ವ್ಯವಹಾರ ಮಾಡಬೇಕು ಅಂದರೆ ಗಮನಿಸಬೇಕಾದ ಅಂಶಗಳೇನು ಅನ್ನೋದನ್ನು ಸರಳವಾದ ಅಂಶಗಳಲ್ಲಿ ವಿವರಿಸುವ ಪ್ರಯತ್ನವೇ ಈ ಲೇಖನದಲ್ಲಿದೆ.

1) ಜಾತಕದಲ್ಲಿ ಶುಕ್ರ ಗ್ರಹ ಯಾವ ಸ್ಥಾನದಲ್ಲಿ ಇದೆ ಎಂಬುದನ್ನು ಗಮನಿಸಿ. ನೀಚ ಸ್ಥಾನದಲ್ಲಿ ಇದ್ದರೆ ಆಲೋಚನೆ ಕೈ ಬಿಡಿ. ಅಥವಾ ಶುಕ್ರ ಗ್ರಹದ ಅನುಗ್ರಹ ಇಲ್ಲ ಅಂತಾದರೂ ಇದೇ ಮಾತು ಅನ್ವಯ. ಆದರೆ ಉತ್ತಮ ಸ್ಥಾನದಲ್ಲಿದ್ದು, ಉಚ್ಚ ಕ್ಷೇತ್ರವಾದ ಮೀನ ರಾಶಿಯಲ್ಲಿದ್ದಾಗ ಆ ಬಗ್ಗೆ ಚಿಂತಿಸಬಹುದು. 2) ಶುಕ್ರ ಗ್ರಹ ಉಚ್ಚ ಸ್ಥಾನದಲ್ಲಿ ಇದ್ದಾಗ ಚಿತ್ರರಂಗದಲ್ಲಿ ಕೂಡ ಪ್ರಯತ್ನಿಸಬಹುದು. ಚಿತ್ರ ನಿರ್ಮಾಣ ಸೇರಿದಂತೆ ನಟನೆ ಇತ್ಯಾದಿಗಳಲ್ಲಿ ಪಾಲ್ಗೊಳ್ಳಬಹುದು. 3) ಜಾತಕದಲ್ಲಿ ಬುಧ ಉತ್ತಮ ಸ್ಥಾನದಲ್ಲಿ ಇದ್ದಲ್ಲಿ ಕನ್ಸಲ್ಟೆನ್ಸಿ, ಕೌನ್ಸೆಲಿಂಗ್, ಮೀಡಿಯಾ ಇವುಗಳಲ್ಲಿ ಪ್ರಯತ್ನಿಸಬಹುದು. 4) ಶನಿ ಅನುಗ್ರಹವಿದ್ದಲ್ಲಿ ಸಿಮೆಂಟ್, ಚರಂಡಿ ಕಾಂಟ್ರಾಕ್ಟ್ ಮೊದಲಾದವುಗಳಲ್ಲಿ ಪ್ರಯತ್ನಿಸಿ 5) ಕುಜ ಚೆನ್ನಾಗಿದ್ದಲ್ಲಿ ಭೂಮಿಗೆ ಸಂಬಂಧಿಸಿದ್ದು 6) ಗುರುವು ಅನುಕೂಲನಾಗಿದ್ದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ್ದು, ಸಾಫ್ಟ್​ವೇರ್ ಮೊದಲಾದವು ಆಗಿಬರುತ್ತದೆ. 7) ಚಂದ್ರ ಅನುಕೂಲವಾಗಿದ್ದಲ್ಲಿ ವೈದ್ಯಕೀಯ, ಡೇರಿ, ಆಹಾರ, ಪಶು ಸಂಗೋಪನೆ ಪ್ರಯತ್ನಿಸಬಹುದು. 8) ರವಿ ಅನುಗ್ರಹ ಇದ್ದಲ್ಲಿ ಸರ್ಕಾರದ ಜತೆಗೆ ಸಂವಹನದಂಥದ್ದರಲ್ಲಿ ತೊಡಗಬಹುದು.

ಆದರೆ, ಜಾತಕದಲ್ಲಿ ಶುಕ್ರ ಗ್ರಹದ ಸ್ಥಾನ ನೋಡಿದ ನಂತರವೇ ಮುಂದುವರಿಯಬೇಕು. ಕನ್ಯಾ ರಾಶಿಯಲ್ಲಿ ಶುಕ್ರ ಸ್ಥಿತವಾಗಿದ್ದಲ್ಲಿ ಉದ್ಯಮವೋ ವ್ಯಾಪಾರವೋ ಆರಂಭಿಸುವ ಆಲೋಚನೆ ಬಿಟ್ಟುಬಿಡುವುದು ಉತ್ತಮ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲೇ ಬೇಡಿ. ಜ್ಯೋತಿಷಿಗಳ ಬಳಿ ಒಮ್ಮೆ ಸಲಹೆ ಪಡೆದು ಮುಂದುವರಿಯಿರಿ.

ಇದನ್ನೂ ಓದಿ: ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?

(Astrology tips: Whether business suitable for natives according astrology here is the details)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು