AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology tips: ವ್ಯಾಪಾರ, ಉದ್ಯಮ ಯಾರಿಗೆ, ಯಾವ ಗ್ರಹದ ಅನುಗ್ರಹದಿಂದ ಆಗಿಬರುತ್ತದೆ ಗೊತ್ತೆ?

ವ್ಯಾಪಾರ, ವ್ಯವಹಾರ ಶುರು ಮಾಡುವುದು ಹಲವರಿಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಕೊರೆಯುತ್ತಲೇ ಇರುತ್ತದೆ. ಆದರೆ ಎಲ್ಲರಿಗೂ ಆಗಿಬರುತ್ತದೆಯೇ ಎಂಬುದನ್ನು ಜ್ಯೋತಿಷ ಮೂಲಕ ಪರಿಶೀಲಿಸಿಕೊಳ್ಳುವುದು ಉತ್ತಮ.

Astrology tips: ವ್ಯಾಪಾರ, ಉದ್ಯಮ ಯಾರಿಗೆ, ಯಾವ ಗ್ರಹದ ಅನುಗ್ರಹದಿಂದ ಆಗಿಬರುತ್ತದೆ ಗೊತ್ತೆ?
ರಾಶಿ ಚಕ್ರ
TV9 Web
| Edited By: |

Updated on: Jun 04, 2021 | 6:57 AM

Share

ಸ್ವಂತ ಉದ್ಯಮ, ವ್ಯಾಪಾರ ಮಾಡುವುದು ಬಹಳ ಜನರ ಗುರಿ, ಆಸೆ ಆಗಿರುತ್ತದೆ. ಹಾಗಂತ ಸಟಕ್ಕನೆ ಕೈಯಲ್ಲಿರುವ ಹಣವನ್ನೋ ಅಥವಾ ಸಾಲ ತಂದೋ ದುಡ್ಡನ್ನು ಹಾಕಿ, ವ್ಯಾಪಾರ- ಉದ್ಯಮ ಆರಂಭಿಸುವುದಕ್ಕೆ ಮೊದಲು ಒಮ್ಮೆ ಜನ್ಮ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ. ಏಕೆಂದರೆ, ಜಾತಕದಲ್ಲಿ ಶುಕ್ರ ನೀಚವಾಗಿರುವಾಗಲೋ ಅಥವಾ ಶುಕ್ರಾದಿತ್ಯ ದಶಾ ಸಂಧಿ ಕಾಲದಲ್ಲೋ ಅಥವಾ ಸಾಡೇಸಾತ್ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿ, ಕೈ ಸುಟ್ಟುಕೊಂಡು ಆ ನಂತರ ದುಃಖ ಪಟ್ಟವರು ಬಹಳ ಮಂದಿ. ಆದ್ದರಿಂದ ವ್ಯಾಪಾರ- ವ್ಯವಹಾರ ಮಾಡಬೇಕು ಅಂದರೆ ಗಮನಿಸಬೇಕಾದ ಅಂಶಗಳೇನು ಅನ್ನೋದನ್ನು ಸರಳವಾದ ಅಂಶಗಳಲ್ಲಿ ವಿವರಿಸುವ ಪ್ರಯತ್ನವೇ ಈ ಲೇಖನದಲ್ಲಿದೆ.

1) ಜಾತಕದಲ್ಲಿ ಶುಕ್ರ ಗ್ರಹ ಯಾವ ಸ್ಥಾನದಲ್ಲಿ ಇದೆ ಎಂಬುದನ್ನು ಗಮನಿಸಿ. ನೀಚ ಸ್ಥಾನದಲ್ಲಿ ಇದ್ದರೆ ಆಲೋಚನೆ ಕೈ ಬಿಡಿ. ಅಥವಾ ಶುಕ್ರ ಗ್ರಹದ ಅನುಗ್ರಹ ಇಲ್ಲ ಅಂತಾದರೂ ಇದೇ ಮಾತು ಅನ್ವಯ. ಆದರೆ ಉತ್ತಮ ಸ್ಥಾನದಲ್ಲಿದ್ದು, ಉಚ್ಚ ಕ್ಷೇತ್ರವಾದ ಮೀನ ರಾಶಿಯಲ್ಲಿದ್ದಾಗ ಆ ಬಗ್ಗೆ ಚಿಂತಿಸಬಹುದು. 2) ಶುಕ್ರ ಗ್ರಹ ಉಚ್ಚ ಸ್ಥಾನದಲ್ಲಿ ಇದ್ದಾಗ ಚಿತ್ರರಂಗದಲ್ಲಿ ಕೂಡ ಪ್ರಯತ್ನಿಸಬಹುದು. ಚಿತ್ರ ನಿರ್ಮಾಣ ಸೇರಿದಂತೆ ನಟನೆ ಇತ್ಯಾದಿಗಳಲ್ಲಿ ಪಾಲ್ಗೊಳ್ಳಬಹುದು. 3) ಜಾತಕದಲ್ಲಿ ಬುಧ ಉತ್ತಮ ಸ್ಥಾನದಲ್ಲಿ ಇದ್ದಲ್ಲಿ ಕನ್ಸಲ್ಟೆನ್ಸಿ, ಕೌನ್ಸೆಲಿಂಗ್, ಮೀಡಿಯಾ ಇವುಗಳಲ್ಲಿ ಪ್ರಯತ್ನಿಸಬಹುದು. 4) ಶನಿ ಅನುಗ್ರಹವಿದ್ದಲ್ಲಿ ಸಿಮೆಂಟ್, ಚರಂಡಿ ಕಾಂಟ್ರಾಕ್ಟ್ ಮೊದಲಾದವುಗಳಲ್ಲಿ ಪ್ರಯತ್ನಿಸಿ 5) ಕುಜ ಚೆನ್ನಾಗಿದ್ದಲ್ಲಿ ಭೂಮಿಗೆ ಸಂಬಂಧಿಸಿದ್ದು 6) ಗುರುವು ಅನುಕೂಲನಾಗಿದ್ದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ್ದು, ಸಾಫ್ಟ್​ವೇರ್ ಮೊದಲಾದವು ಆಗಿಬರುತ್ತದೆ. 7) ಚಂದ್ರ ಅನುಕೂಲವಾಗಿದ್ದಲ್ಲಿ ವೈದ್ಯಕೀಯ, ಡೇರಿ, ಆಹಾರ, ಪಶು ಸಂಗೋಪನೆ ಪ್ರಯತ್ನಿಸಬಹುದು. 8) ರವಿ ಅನುಗ್ರಹ ಇದ್ದಲ್ಲಿ ಸರ್ಕಾರದ ಜತೆಗೆ ಸಂವಹನದಂಥದ್ದರಲ್ಲಿ ತೊಡಗಬಹುದು.

ಆದರೆ, ಜಾತಕದಲ್ಲಿ ಶುಕ್ರ ಗ್ರಹದ ಸ್ಥಾನ ನೋಡಿದ ನಂತರವೇ ಮುಂದುವರಿಯಬೇಕು. ಕನ್ಯಾ ರಾಶಿಯಲ್ಲಿ ಶುಕ್ರ ಸ್ಥಿತವಾಗಿದ್ದಲ್ಲಿ ಉದ್ಯಮವೋ ವ್ಯಾಪಾರವೋ ಆರಂಭಿಸುವ ಆಲೋಚನೆ ಬಿಟ್ಟುಬಿಡುವುದು ಉತ್ತಮ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲೇ ಬೇಡಿ. ಜ್ಯೋತಿಷಿಗಳ ಬಳಿ ಒಮ್ಮೆ ಸಲಹೆ ಪಡೆದು ಮುಂದುವರಿಯಿರಿ.

ಇದನ್ನೂ ಓದಿ: ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?

(Astrology tips: Whether business suitable for natives according astrology here is the details)

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್