AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?

Best leaders On zodiac signs: ಈ ಮೂರು ರಾಶಿಯವರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣ ಇರುತ್ತದೆ. ಯಾರು ಮೂರು ರಾಶಿಯವರು ತಿಳಿಯಲು ಮುಂದೆ ಓದಿ.

ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?
ಪ್ರಾತಿನಿಧಿಕ ಚಿತ್ರ
Srinivas Mata
| Updated By: Digi Tech Desk|

Updated on:Apr 29, 2021 | 3:27 PM

Share

ಜ್ಯೋತಿಷ ಎಂಬುದು ಶುದ್ಧಾನುಶುದ್ಧ ನಂಬಿಕೆ. ಕೆಲವರಿಗೆ ನಂಬಿಕೆ ಇರುತ್ತದೆ, ಕೆಲವರಿಗೆ ಇರಲ್ಲ. ಮತ್ತೆ ಕೆಲವರಿಗೆ ಆಗಾಗ ನಂಬಿಕೆ ಬಂದು- ಹೋಗಿ ಆಗುತ್ತಿರುತ್ತದೆ. ಅಥವಾ ತಮಗೆ ಬೇಕಾದಾಗ ನಂಬ್ತಾರೆ, ಇಲ್ಲದಿದ್ದಲ್ಲಿ ಇಲ್ಲ. ಈ ಕೆಟಗಿರಿಗಳ ಪೈಕಿ ನೀವ್ಯಾವುದು ಅಂತ ಗೊತ್ತಿಲ್ಲ. ಆದರೆ ಈ ಲೇಖನದ ಬಗ್ಗೆ ತಿಳಿದರೆ ನಿಮಗೊಂದು ಕುತೂಹಲವಂತೂ ಮೂಡುತ್ತದೆ. ಏನು ಈ ಲೇಖನದ ವಿಶೇಷ ಅಂತೀರಾ? ರಾಶಿಗಳ ಆಧಾರದಲ್ಲಿ ವ್ಯಕ್ತಿಗಳ ಸ್ವಭಾವಗಳ ಬಗ್ಗೆ ಕೇಳಿರ್ತೀರಿ. ಅದರ ಬಗ್ಗೆಯೇ ಇಂದು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಆದರೆ ಎಲ್ಲ ರಾಶಿಗಳ ಬಗ್ಗೆ ಅಲ್ಲ. ಬರೀ ಆ ಮೂರು ರಾಶಿಗಳ ಬಗ್ಗೆ ಮಾತ್ರ.

ಈ ಮೂರು ರಾಶಿಯವರನ್ನು ಚಾಂಪಿಯನ್​ಗಳು ಎಂದು ಪರಿಗಣಿಸಲಾಗುತ್ತದೆ. ಇವರಿಗೆ ಹುಟ್ಟಿನಿಂದಲೇ ನಾಯಕತ್ವದ ಗುಣ ಬಂದಿರುತ್ತದೆ. ಇವರು ಭವಿಷ್ಯವು ದೊರೆಯುವ ಬಂಧುಗಳು, ಸಂಸ್ಕಾರ ಮತ್ತು ವಾತಾವರಣದ ಮೇಲೆ ರೂಪುಗೊಳ್ಳುತ್ತಾ ಹೋಗುತ್ತದೆ. ಅಂದ ಹಾಗೆ ಇವರು ಯಾವುದೇ ಕ್ಷೇತ್ರದಲ್ಲಿ ಪ್ರವೇಶ ಪಡೆದರೂ ಅಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ. ಜನರ ಮಧ್ಯೆ ಇವರದೊಂದು ಪ್ರಭಾವಳಿ ಸೃಷ್ಟಿ ಆಗುತ್ತದೆ. ಯಾರು ಆ ಮೂರು ರಾಶಿಯವರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮೇಷ ರಾಶಿ ಮೇಷ ರಾಶಿಯವರ ಅಧಿಪತಿ ಕುಜ. ತುಂಬ ಶಕ್ತಿಯುತರಾದ ಇವರು, ಯಾವುದೇ ನಿರ್ಧಾರ ಕೈಗೊಂಡಾಗ ದೃಢನಿಶ್ಚಯದಿಂದ ಮಾಡುತ್ತಾರೆ. ಆಕ್ರಮಣಕಾರಿ ಧೋರಣೆ ಹೊಂದಿರುತ್ತಾರೆ. ಇವರು ಎಲ್ಲೇ ಹೋದರೂ ಜನರ ಮಧ್ಯೆ ತಮ್ಮದೊಂದು ಹೆಜ್ಜೆ ಮೂಡಿಸಿ, ಸ್ಥಾನ ಭದ್ರ ಮಾಡಿಕೊಳ್ಳುತ್ತಾರೆ. ನಾಯಕತ್ವ ಗುಣಗಳು ಇವರಲ್ಲಿ ನೋಡಲು ದೊರೆಯುತ್ತವೆ. ಈ ಗುಣದ ಕಾರಣಕ್ಕಾಗಿಯೇ ಇವರು ಯಾವುದೇ ಕ್ಷೇತ್ರಕ್ಕೆ ಹೋದರೂ ಉಚ್ಚ ಸ್ಥಾನವನ್ನು ತಲುಪಿಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದು ಪೂರ್ಣ ಆಗದ ಹೊರತು ವಿರಮಿಸುವವರಲ್ಲ. ಇವರ ಆಕ್ರಮಣಕಾರಿ ಸ್ವಭಾವವು ಎಷ್ಟೋ ಬಾರಿ ಸಮಸ್ಯೆಗಳನ್ನು ತರುವುದುಂಟು. ಆದರೆ ಹೇಗಾದರೂ ಆ ಸ್ಥಿತಿಯಿಂದ ಆಚೆ ಬರುವಲ್ಲಿ ಸಫಲರಾಗುತ್ತಾರೆ.

ಸಿಂಹ ರಾಶಿ ಈ ರಾಶಿಯ ಅಧಿಪತಿ ರವಿ. ಇವರು ಹುಟ್ಟಿನಿಂದಲೇ ಪ್ರಭಾವಳಿಯೊಂದನ್ನು ಪಡೆದುಕೊಂಡಿರುತ್ತಾರೆ. ಸ್ವತಂತ್ರ ಸ್ವಭಾವ ಹೊಂದಿರುತ್ತಾರೆ. ಒಬ್ಬ ರಾಜನಿಗೆ ಹೋಲಿಸಿ, ಇವರ ಗುಣಾವಳಿಗಳನ್ನು ಅಳೆದರೂ ಅದು ತಪ್ಪಾಗಲಿಕ್ಕಿಲ್ಲ. ಇವರು ಎಲ್ಲೇ ಹೋದರೂ ಅಲ್ಲಿ ಜನರ ಭರವಸೆಯನ್ನು ಗಳಿಸುವಲ್ಲಿ ಯಶಸ್ವಿ ಆಗುತ್ತಾರೆ ಮತ್ತು ತಮ್ಮ ಪ್ರಭುತ್ವ ಸ್ಥಾಪಿಸುತ್ತಾರೆ. ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಇವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವವರಲ್ಲ. ಸಮಾಜದಲ್ಲಿ ಸಾಕಷ್ಟು ಮಾನ-ಸಮ್ಮಾನ ದೊರೆಯುತ್ತದೆ.

ವೃಶ್ಚಿಕ ರಾಶಿ ಈ ರಾಶಿಯವರ ಅಧಿಪತಿ ಕೂಡ ಕುಜ. ಇವರ ಸ್ವಭಾವದಲ್ಲಿ ಸ್ವಲ್ಪ ಮಟ್ಟಿಗೆ ಉಗ್ರತೆ ಇರುತ್ತದೆ. ಈ ರಾಶಿಯವರು ಕಠಿಣ ಪರಿಶ್ರಮಿಗಳು. ತಮ್ಮ ಶ್ರಮದಿಂದಲೇ ಮೇಲೆ ಬರುತ್ತಾರೆ. ತಮ್ಮ ಗುಣದ ಮೂಲಕ ಜನರ ಭರವಸೆ, ಗಳಿಸಿ ಪ್ರಭಾವ ಬೀರುತ್ತಾರೆ. ಇವರು ಯಾವುದೇ ಕ್ಷೇತ್ರವನ್ನು ಆರಿಸಿಕೊಂಡರೂ ಕೆಲವೇ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಾರೆ. ಇವರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣ ಇರುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಅತ್ಯುತ್ತಮ ನಿರ್ಣಯ ಕೈಗೊಳ್ಳುತ್ತಾರೆ. ಇನ್ನು ಯಾರೊಂದಿಗಾದರೂ ಶತ್ರುತ್ವ ಸಾಧಿಸಿದರೆ ಅದನ್ನು ತೀರಿಸುವ ತನಕ ವಿರಮಿಸುವುದಿಲ್ಲ.

ಇದನ್ನೂ ಓದಿ: Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

ಇದನ್ನೂ ಓದಿ: Best Husbands: ಜ್ಯೋತಿಷ್ಯ ರೀತಿ ಈ 3 ರಾಶಿಯವರು ಅತ್ಯುತ್ತಮ ಪತಿರಾಯರು

(Aries, Leo and Scorpio natives are born leaders with good leadership qualities according to astrology)

Published On - 3:22 pm, Thu, 29 April 21

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್