AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಪ್ರೇಯಸಿಯ ರಾಶಿ ಭವಿಷ್ಯದ ಆಧಾರದಲ್ಲಿ ನಿಮ್ಮ ಪ್ರೀತಿಯ ಬಗ್ಗೆ ತಿಳಿದುಕೊಳ್ಳಿ, ಯಾವ ರಾಶಿಯವರ ನಡವಳಿಕೆ ಹೇಗಿರುತ್ತದೆ?

ಮೊದಲು ನಿಮ್ಮ ಪ್ರೇಯಸಿಯು ನಿಮ್ಮ ಬಗೆಗೆ ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ರಾಶಿ ಭವಿಷ್ಯದ ಆಧಾರದ ಮೇಲೆ ಪ್ರೇಯಸಿಯು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಕಾರಣ ಇಲ್ಲಿದೆ.

ನಿಮ್ಮ ಪ್ರೇಯಸಿಯ ರಾಶಿ ಭವಿಷ್ಯದ ಆಧಾರದಲ್ಲಿ ನಿಮ್ಮ ಪ್ರೀತಿಯ ಬಗ್ಗೆ ತಿಳಿದುಕೊಳ್ಳಿ, ಯಾವ ರಾಶಿಯವರ ನಡವಳಿಕೆ ಹೇಗಿರುತ್ತದೆ?
ಸಾಂದರ್ಭಿಕ ಚಿತ್ರ
shruti hegde
| Updated By: ಆಯೇಷಾ ಬಾನು|

Updated on: Apr 29, 2021 | 8:10 AM

Share

ಯಾವುದೇ ಸ್ನೇಹ ಅಥವಾ ಪ್ರೀತಿಯಲ್ಲಿ ಉತ್ಸಾಹ ಮತ್ತು ನಂಬಿಕೆ ಇಲ್ಲದಿದ್ದರೆ ಸಂಬಂಧ ಕುಸಿದು ಬೀಳುತ್ತದೆ. ನಿಮ್ಮ ಮತ್ತು ನಿಮ್ಮ ಪ್ರೇಯಸಿಯ ನಡುವಿನ ಬಾಂಧವ್ಯವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕೂಡಾ ಒಬ್ಬರಿಗೊಬ್ಬರು ಸ್ನೇಹ ಮತ್ತು ಪ್ರೀತಿಯ ಆಸಕ್ತಿ ಕಳೆದುಕೊಂಡಾಗ ಸಂಬಂಧ ಕಳೆದು ಹೋಗುತ್ತದೆ. ಅಂತಹ ಸಂಬಂಧವನ್ನು ಉಳಿಸಿಕೊಳ್ಳಲು ಬಲು ಕಷ್ಟ. ಆದ್ದರಿಂದ ಮೊದಲು ನಿಮ್ಮ ಪ್ರೇಯಸಿಯು ನಿಮ್ಮ ಬಗೆಗೆ ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ರಾಶಿ ಭವಿಷ್ಯದ ಆಧಾರದ ಮೇಲೆ ಪ್ರೇಯಸಿಯು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಕಾರಣ ಇಲ್ಲಿದೆ.

ಮೇಷ ಮೇಷ ರಾಶಿಯವರು ಬೇಸರಗೊಂಡರೆ ವ್ಯಕ್ತಿಯನ್ನು ಬಿಡಲೂ ಹಿಂಜರಿಯುವುದಿಲ್ಲ. ಸಂಬಂಧ ಮುರಿಯಲು ಮೇಷ ರಾಶಿರವರಿಗೆ ಇದೇ ಮುಖ್ಯ ಕಾರಣ. ನೀರಸ ಮತ್ತು ಜೀವನದ ಬಗ್ಗೆ ಬಹಳ ಸಂಕುಚಿತ ಮನೋಭಾವ ಹೊಂದಿರುವವರೊಂದಿಗೆ ಇರಲು ಇಷ್ಟ ಪಡುವುದಿಲ್ಲ. ಆದ್ದರಿಂದ ಅವರು ಅಂತಹ ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ.

ವೃಷಭ ರಾಶಿ ವೃಷಭ ರಾಶಿಯವರು ಬಹುಬೇಗ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಕೊಂಚ ನಿಧಾನ. ನಿಮ್ಮ ಪ್ರೀತಿಯ ಮೆಚ್ಚುಗೆಯನ್ನು ಪಡೆಯಲು ಒಂದೆರಡು ತಿಂಗಳುಗಳ ಕಾಲ ಕಾಯಬೇಕು. ಹೇಗಾದರೂ ಅತಿ ವೇಗವಾಗಿ ಅವರೊಂದಿಗೆ ವಿಷಯವನ್ನು ಪದೇ ಪದೇ ಹೇಳುತ್ತಿದ್ದರೆ, ಅಥವಾ ಹೆಚ್ಚುವರಿ ಸಮಯವನ್ನು ಕಳೆಯುವಂತೆ ಒತ್ತಾಯಿಸಿದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ. ಮತ್ತು ಅತಿ ಬೇಗ ನಿಮ್ಮ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಮಿಥುನ ಈ ರಾಶಿಯವರು ಯಾವಾಗಲೂ ವಿನೋದಾತ್ಮಕವಾಗಿ ಇರಲು ಇಷ್ಟಪಡುತ್ತಾರೆ. ನೀವು ಅವರೊಂದಿಗೆ ಪ್ರೀತಿಯಲ್ಲಿ ಮುಂದುವರೆಯಲು ವಿಫಲವಾದರೆ ಕ್ಷಣಾರ್ಧದಲ್ಲಿ ಅವರು ನಿಮ್ಮನ್ನು ಕಳೆದುಕೊಳ್ಳುತ್ತಾರೆ. ಮತ್ತು ಹೊಸಬರಿಗಾಗಿ ಹುಡುಕಾಟ ಪ್ರಾರಂಭಿಸುತ್ತಾರೆ.

ಕರ್ಕ ಕರ್ಕ ರಾಶಿರವರು ಹೆಚ್ಚು ಹೃದಯವಂತರು. ಈ ರಾಶಿಯವರ ಜೊತೆ ಹೊರಹೋಗಲು ಇಚ್ಛಿಸಿದರೆ ಅದು ವ್ಯರ್ಥ. ಬೇರೆ ವ್ಯಕ್ತಿಗಳನ್ನು ಬಹುಬೇಗ ನಂಬುವುದಿಲ್ಲ. ಸುಳ್ಳು ಹೇಳುವವರನ್ನು ಕಂಡರೆ ಈ ರಾಶಿಯವರು ಹಿಂದೆ ಸರಿಯುತ್ತಾರೆ.

ಸಿಂಹ ಸಿಂಹ ರಾಶಿಯವರಿಗೆ ಹೂವುಗಳೆಂದರೆ ಇಷ್ಟ. ಈ ರಾಶಿಯವರಿಗೆ ಡೇಟಿಂಗ್​ಗಳನ್ನು ಇಷ್ಟಪಡುತ್ತಾರೆ. ಈ ರಾಶಿಯವರಿಂದ ನೀವು ದೂರ ಹೋದರೆ ನಿಮ್ಮ ಕುರಿತಾಗಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ವಿವಿಧ ಉಡುಗೊರೆ, ಹೂವುಗಳನ್ನು ನೀಡಿದರೆ ಈ ರಾಶಿಯವರು ಪ್ರೀತಿಯಲ್ಲಿ ಬೀಳುತ್ತಾರೆ.

ಕನ್ಯಾರಾಶಿ ಕನ್ಯಾ ರಾಶಿಯವರು ಡೇಟಿಂಗ್​ಗಳ ಬಗ್ಗೆ ಬಹಳ ಗಂಭೀರವಾಗಿರುತ್ತಾರೆ. ಬೇರೆಯವರೊಂದಿಗೆ ಸಂಬಂಧ ಬೆಳೆಸುವ ಕುರಿತಾಗಿ ಹೆಚ್ಚು ಯೋಚಿಸುತ್ತಾರೆ ಮತ್ತು ಜಾಗರೂಕರಾಗಿರುತ್ತಾರೆ. ಪ್ರೀತಿಯಲ್ಲಿ ನಿಮಗೆ ಏನಾದರೂ ದೋಷ ಕಂಡಲ್ಲಿ, ಅಥವಾ ಆಸಕ್ತಿರಹಿತವಾದ ವರ್ತನೆ ಕಂಡಲ್ಲಿ ನಿಮ್ಮ ಪಾಡಿಗೆ ನಿಮ್ಮನ್ನು ಬಿಟ್ಟುಬಿಡುತ್ತಾರೆ.

ತುಲಾ ತುಲಾ ರಾಶಿಯವರು ನಿಮ್ಮ ಸಂಪರ್ಕಿಸಬೇಕು ಎಂದು ಇಚ್ಛಿಸಿದಾಗ ನೀವು ಸಿದ್ಧರಾಗಿರಬೇಕು. ಬೇರೆ ಕರೆಯಲ್ಲಿ ನಿರತರಾಗಿದ್ದರೆ ಅಥವಾ ಹರಟೆ ಹೊಡೆಯುತ್ತಿದ್ದರೆ, ಅವರು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆ ನಂತರ ನೀವೆಷ್ಟೇ ಅವರನ್ನು ನಂಬಿಸಲು ಪ್ರಯತ್ನಿಸಿದರೂ ನಿಮ್ಮನ್ನು ಸ್ವಾರ್ಥಿ ಎಂದು ಪರಿಗಣಿಸುತ್ತಾರೆ.

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರೊಡನೆ ನೀವು ಯಾವಾಗಲೂ ತಾಳ್ಮೆಯಿಂದ ವರ್ತಿಸಬೇಕು. ಡೇಟಿಂಗ್​ ಸಂದರ್ಭದಲ್ಲಿ ಅವರು ಹೆಚ್ಚಾಗಿ ನಿಮ್ಮಿಂದ ಕಾಳಜಿ, ಪ್ರೀತಿ, ಸಮಯ ಮತ್ತು ಸದ್ಧತೆಯನ್ನು ನಿರೀಕ್ಷಿಸುತ್ತಾರೆ. ಇದಕ್ಕೇ ಮೀರಿ ನಡೆದರೆ ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ.

ಧನು ರಾಶಿ ಧನು ರಾಶಿಯವರ ನಿರ್ಧಾರಗಳನ್ನು ಎಂದಿಗೂ ತಡೆಯಬೇಡಿ. ಅವರ ನಿರ್ಧಾರಗಳನ್ನು ತಪ್ಪು ಎಂದರೆ ಅವರಿಗೆ ಕೋಪ ಹೆಚ್ಚು. ಧನು ರಾಶಿಯವರು ಹೆಚ್ಚು ಹಠಮಾರಿಗಳಾಗಿರುವುದರಿಂದ ನಿರ್ಧಾರಗಳನ್ನು ಖಂಡಿಸಿದರೆ ಅವರು ನಿಮ್ಮಲ್ಲಿ ಹೆಚ್ಚು ಬೆರೆಯಲು ಇಷ್ಟಪಡುವುದಿಲ್ಲ.

ಮಕರ ಮಕರ ರಾಶಿಯವರು ತಮ್ಮ ಜೀವನದಲ್ಲಿ ಹೆಚ್ಚು ಬದ್ಧರಾಗಿರುತ್ತಾರೆ. ವೃತ್ತಿಪರ ಜೀವನಕ್ಕೆ ಹೆಚ್ಚು ಬದ್ಧರಾಗಿರುತ್ತಾರೆ. ಮಕರ ರಾಶಿಯವರಲ್ಲಿ ಹೆಚ್ಚು ಸಮಸ್ಯೆ ಕಂಡುಬರುವುದಿಲ್ಲ.

ಕುಂಭ ರಾಶಿ ಕುಂಭ ರಾಶಿಯವರ ಬೇಡಿಕೆಗಳು ಹೆಚ್ಚು. ಕೇಳಿದ್ದು ಆಗಲೇ ಬೇಕು. ಉಡುಗೊರೆಯನ್ನು ನಾಳೆ ಕೊಡಿಸುತ್ತೇನೆ ಎಂದರೆ ಇವರನ್ನು ಓಲೈಸುವುದು ಬಹಳ ಕಷ್ಟ. ಅಂತಹ ವ್ಯಕ್ತಿಯನ್ನು ಹೆಚ್ಚು ದ್ವೇಷಿಸಲು ಪ್ರಾರಂಭಿಸುತ್ತಾರೆ. ಮತ್ತು ಅಂತಹ ನಡುವಳಿಕೆಯವರ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಮೀನ ರಾಶಿ ಮೀನ ರಾಶಿವರಗೆ ಪ್ರೀತಿಯ ಬಗೆಗೆ ನಂಬಿಕೆ ಹುಟ್ಟಿಸುವುದು ಕಷ್ಟ. ಅಷ್ಟು ಬೇಗ ಯಾರ ಮಾತನ್ನೋ ನಂಬಿ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಪ್ರೀತಿಯ ಕುರಿತಾಗಿ ಭರವಸೆ ನೀಡುವಲ್ಲಿ ಹೆಚ್ಚು ಪ್ರಯತ್ನಗಳು ಬೇಕಾಗುತ್ತದೆ.

ಇದನ್ನೂ ಓದಿ: Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?