AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac Sign Personality Part 1: ಪ್ರತಿ ರಾಶಿಯ ಕೆಟ್ಟ ಅಭ್ಯಾಸಗಳು; ನಿಮಗೂ ಈ ಅಭ್ಯಾಸಗಳಿವೆಯೇ?

ಈ ಲೇಖನದಲ್ಲಿ, ಪ್ರತಿ ರಾಶಿಯವರಿಗೆ ಸಂಬಂಧಿಸಿದ ನಕಾರಾತ್ಮಕ ಗುಣಗಳ ಬಗ್ಗೆ ನೀವು ತಿಳಿಯಿರಿ, ಸ್ವಯಂ-ಅರಿವು ವೈಯಕ್ತಿಕ ಬೆಳವಣಿಗೆ ಮತ್ತು ಧನಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ.

Zodiac Sign Personality Part 1: ಪ್ರತಿ ರಾಶಿಯ ಕೆಟ್ಟ ಅಭ್ಯಾಸಗಳು; ನಿಮಗೂ ಈ ಅಭ್ಯಾಸಗಳಿವೆಯೇ?
ಸಾಂದರ್ಭಿಕ ಚಿತ್ರ
ನಯನಾ ಎಸ್​ಪಿ
|

Updated on: Aug 08, 2023 | 6:38 PM

Share

ಪ್ರತಿ ರಾಶಿಯವರಲ್ಲಿಯೂ (Zodiac Sign) ಕೆಟ್ಟ ಗುಣಗಳು ಇರುವುದು ಸಹಜ. ಮಾನವ ಎಂದ ಮೇಲೆ ತಪ್ಪುಗಳು, ಕೆಲವು ಕೆಟ್ಟ ಗುಣಗಳು ಸಾಮಾನ್ಯ, ಆದರೆ ಅದನ್ನು ಸರಿ ಪಡಿಸಿಕೊಂಡು ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ಬಹಳ ಮುಖ್ಯ . ಅಸಹನೆ, ಮೊಂಡುತನದವರೆಗೆ, ಅತಿ ಸೂಕ್ಷ್ಮತೆ ಹೀಗೆ ಪ್ರತಿ ರಾಶಿಯವರು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು ಅದು ಕೆಲವು ಕೆಟ್ಟ ಅಭ್ಯಾಸಗಳಿಗೆ ಕಾರಣವಾಗಬಹುದು. ಈ ಲೇಖನದಲ್ಲಿ, ಪ್ರತಿ ರಾಶಿಯವರಿಗೆ ಸಂಬಂಧಿಸಿದ ನಕಾರಾತ್ಮಕ ಗುಣಗಳ ಬಗ್ಗೆ ನೀವು ತಿಳಿಯಿರಿ, ಸ್ವಯಂ-ಅರಿವು ವೈಯಕ್ತಿಕ ಬೆಳವಣಿಗೆ ಮತ್ತು ಧನಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ.

ಪ್ರತಿ ರಾಶಿಯವರ ಕೆಟ್ಟ ಅಭ್ಯಾಸಗಳು

ಮೇಷ

  • ಅಸಹನೆ: ಮೇಷ ರಾಶಿಯವರು ವಿಷಯವನ್ನು ಗ್ರಹಿಸಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ, ಈ ಅಸಹನೆಯ ವ್ಯಕ್ತಿತ್ವ ಆತುರದ ನಿರ್ಧಾರಗಳಿಗೆ ಕಾರಣವಾಗುತ್ತದೆ.
  • ತ್ವರಿತ ಸ್ವಭಾವ: ಈ ಅಸಹನೆಯ ಗುಣ ತಕ್ಷಣ ಕೋಪಗೊಳ್ಳುವಂತೆ ಮಾಡುತ್ತದೆ ಮತ್ತು ಭಾವನಾತ್ಮಕ ಪ್ರಕೋಪಗಳಿಗೆ ಗುರಿಯಾಗುತ್ತದೆ.

ವೃಷಭ ರಾಶಿ

  • ಮೊಂಡುತನ: ವೃಷಭ ರಾಶಿಯವರು ತಮ್ಮ ಅಚಲ ನಿರ್ಣಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಇದು ಮೊಂಡುತನಕ್ಕೆ ಕಾರಣವಾಗಬಹುದು ಮತ್ತು ಬದಲಾವಣೆಗೆ ಬೇಗ ಒಗ್ಗಿಕೊಳ್ಳಲು ಕಷ್ಟವಾಗಬಹುದು.
  • ಅತಿಯಾಸೆ: ಐಷಾರಾಮಿ ಜೀವನವನ್ನು ಪ್ರೀತಿಸುವ ಇವರ ನಡವಳಿಕೆಯಿಂದಾಗಿ, ಹೊರ ಜಗತ್ತಿದೆ ಇವರು ಅಸೆ ಬುರಕರಂತೆ ತೋರಬಹುದು, ವಿಶೇಷವಾಗಿ ಆಹಾರ ಮತ್ತು ಆಸ್ತಿಯ ಆಸೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ .

ಮಿಥುನ

  • ಅನಿರ್ದಿಷ್ಟತೆ: ಮಿಥುನ ರಾಶಿಯವರ ದ್ವಂದ್ವ ಸ್ವಭಾವವು ಆಯ್ಕೆಗಳನ್ನು ಮಾಡುವಲ್ಲಿ ತೊಂದರೆಗೆ ಕಾರಣವಾಗಬಹುದು, ಆಗಾಗ್ಗೆ ವಿವಿಧ ಆಯ್ಕೆಗಳಿರುವ ಸಂದರ್ಭದಲ್ಲಿ ಇವರು ಗೊಂದಲಕ್ಕೆ ಒಳಗಾಗುತ್ತಾರೆ.
  • ಗಾಸಿಪ್ ಮಾಡುವುದು: ಇವರ ಕುತೂಹಲ ವ್ಯಕ್ತಿತ್ವ ಕೆಲವೊಮ್ಮೆ ವದಂತಿಗಳನ್ನು ಹರಡಲು ಮತ್ತು ಗಾಸಿಪ್‌ನಲ್ಲಿ ತೊಡಗಿಸಿಕೊಳ್ಳವಂತೆ ಮಾಡಬಹುದು.

ಕಟಕ

  • ಮಿತಿಮೀರಿದ ರಕ್ಷಣೆ: ಕಟಕ ರಾಶಿಯವರ ಕಾಳಜಿಯು ಅತಿಯಾದ ರಕ್ಷಣೆಯಾಗಿ ಬದಲಾಗಬಹುದು, ಇದರಿಂದಾಗಿ ಅವರು ಇತರರ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ .
  • ಮೂಡ್ ಸ್ವಿಂಗ್: ಅವರು ಆಗಾಗ್ಗೆ ಮೂಡ್ ಸ್ವಿಂಗ್ಗಳನ್ನು ಅನುಭವಿಸಬಹುದು, ಇದರಿಂದಾಗಿ ಇತರರಿಗೆ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ.

ಸಿಂಹ

  • ಹೆಚ್ಚಿನ ಗಮನವನ್ನು ಬಯಸುತ್ತಾರೆ: ಗಮನ ಮತ್ತು ಮೆಚ್ಚುಗೆಗಾಗಿ ಸಿಂಹ ರಾಶಿಯವರ ಬಯಕೆ ಕೆಲವೊಮ್ಮೆ ಸ್ವಯಂ-ಕೇಂದ್ರಿತವೆನಿಸಬಹುದು
  • ದುರಹಂಕಾರ: ಅವರ ಆತ್ಮವಿಶ್ವಾಸದ ಸ್ವಭಾವವು ದುರಹಂಕಾರಕ್ಕೆ ಕಾರಣವಾಗಬಹುದು ಮತ್ತು ಅವರು ಯಾವಾಗಲೂ ಸರಿ ಎಂದು ನಂಬುವ ಪ್ರವೃತ್ತಿಗೆ ಕಾರಣವಾಗಬಹುದು.

ಇದನ್ನೂ ಓದಿ: ಈ 5 ರಾಶಿಯವರು ಜೀವನದಲ್ಲಿ ಮತ್ತೆ ಪ್ರೀತಿಯನ್ನು ಪಡೆಯುತ್ತಾರೆ

ಕನ್ಯಾ

  • ವಿಮರ್ಶಾತ್ಮಕ ಸ್ವಭಾವ: ಕನ್ಯಾ ರಾಶಿಯವರು ಸಣ್ಣ ಸಣ್ಣ ವಿವರಗಳತ್ತ ಗಮನ ಹರಿಸುತ್ತಾರೆ, ಅವರು ತಮ್ಮನ್ನು ಮತ್ತು ಇತರರನ್ನು ಅತಿಯಾಗಿ ಟೀಕಿಸುತ್ತಾರೆ.
  • ಚಿಂತೆ: ಅವರ ವಿಶ್ಲೇಷಣಾತ್ಮಕ ಮನಸ್ಸು ಅತಿಯಾದ ಚಿಂತೆ ಮತ್ತು ಆತಂಕಕ್ಕೆ ಕಾರಣವಾಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?