Daily Devotional: ಪರೀಕ್ಷಾ ಸಮಯದಲ್ಲಿ ಪಠಿಸಬೇಕಾದ ಮಂತ್ರಗಳು
ಪ್ರತಿದಿನ ಓಂ ಗಂ ಗಣಪತಯೇ ನಮಃ, ಓಂ ಐಂ ಸರಸ್ವತ್ಯೈ ನಮಃ ಮತ್ತು ಓಂ ಹಯಗ್ರೀವಾಯ ನಮಃ ಎಂಬ ಮಂತ್ರಗಳನ್ನು ಪಠಿಸುವುದು ಶುಭಕರ. ರಾತ್ರಿ ಮಲಗುವ ಮುನ್ನ ದೇವರ ಮನೆಯಲ್ಲಿ ವೀಳ್ಯದೆಲೆ ಮೇಲೆ ಸ್ವಲ್ಪ ಶುದ್ಧ ಜೇನುತುಪ್ಪವನ್ನಿಟ್ಟು, ಈ ಮಂತ್ರಗಳನ್ನು ಜಪಿಸಿ, ದೇವರಿಗೆ ನೈವೇದ್ಯ ಮಾಡಬೇಕು. ಮರುದಿನ ಬೆಳಿಗ್ಗೆ ಎದ್ದು ಕೈ-ಕಾಲು ತೊಳೆದುಕೊಂಡು ಅಥವಾ ಸ್ನಾನ ಮಾಡಿ ಆ ಜೇನುತುಪ್ಪವನ್ನು ನಾಲಿಗೆಗೆ ಸ್ಪರ್ಶಿಸುವುದರಿಂದ ಜ್ಞಾಪಕಶಕ್ತಿ ಸುಧಾರಿಸಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಇಂತಹ ನಂಬಿಕೆ ಆಧಾರಿತ ಆಚರಣೆಗಳು ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಸ್ಥೈರ್ಯವನ್ನು ನೀಡುತ್ತವೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 07: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಆತಂಕ ಮತ್ತು ಭಯವನ್ನು ನಿವಾರಿಸಲು ಹಾಗೂ ಉತ್ತಮ ಯಶಸ್ಸು ಗಳಿಸಲು ಕೆಲವು ಆಧ್ಯಾತ್ಮಿಕ ಅಭ್ಯಾಸಗಳನ್ನು ಪಾಲಿಸಬಹುದಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ, ವಿದ್ಯೆಗೆ ಅಧಿದೇವತೆಗಳಾದ ಗಣಪತಿ, ಸರಸ್ವತಿ ಮತ್ತು ಹಯಗ್ರೀವ ದೇವತೆಗಳ ಸ್ಮರಣೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಪ್ರತಿದಿನ ಓಂ ಗಂ ಗಣಪತಯೇ ನಮಃ, ಓಂ ಐಂ ಸರಸ್ವತ್ಯೈ ನಮಃ ಮತ್ತು ಓಂ ಹಯಗ್ರೀವಾಯ ನಮಃ ಎಂಬ ಮಂತ್ರಗಳನ್ನು ಪಠಿಸುವುದು ಶುಭಕರ. ರಾತ್ರಿ ಮಲಗುವ ಮುನ್ನ ದೇವರ ಮನೆಯಲ್ಲಿ ವೀಳ್ಯದೆಲೆ ಮೇಲೆ ಸ್ವಲ್ಪ ಶುದ್ಧ ಜೇನುತುಪ್ಪವನ್ನಿಟ್ಟು, ಈ ಮಂತ್ರಗಳನ್ನು ಜಪಿಸಿ, ದೇವರಿಗೆ ನೈವೇದ್ಯ ಮಾಡಬೇಕು. ಮರುದಿನ ಬೆಳಿಗ್ಗೆ ಎದ್ದು ಕೈ-ಕಾಲು ತೊಳೆದುಕೊಂಡು ಅಥವಾ ಸ್ನಾನ ಮಾಡಿ ಆ ಜೇನುತುಪ್ಪವನ್ನು ನಾಲಿಗೆಗೆ ಸ್ಪರ್ಶಿಸುವುದರಿಂದ ಜ್ಞಾಪಕಶಕ್ತಿ ಸುಧಾರಿಸಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಇಂತಹ ನಂಬಿಕೆ ಆಧಾರಿತ ಆಚರಣೆಗಳು ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಸ್ಥೈರ್ಯವನ್ನು ನೀಡುತ್ತವೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

