AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?

Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?

ಭಾವನಾ ಹೆಗಡೆ
|

Updated on: Dec 12, 2025 | 7:03 AM

Share

ನೀರು ಜೀವಕ್ಕೆ ಆಧಾರವಾಗಿದ್ದು, ಪಂಚಭೂತಗಳಲ್ಲಿ ಒಂದಾಗಿದೆ. ಧಾರ್ಮಿಕವಾಗಿ ನೀರನ್ನು ದೈವ ಸ್ವರೂಪ ಮತ್ತು ಅಮೃತ ಎಂದು ಪರಿಗಣಿಸಲಾಗುತ್ತದೆ. ಶುಭ ಕಾರ್ಯಗಳು ಹಾಗೂ ಹುಟ್ಟು-ಸಾವುಗಳ ಆಚರಣೆಗಳಲ್ಲಿ ನೀರಿಗೆ ಮಹತ್ವವಿದೆ. ಆದರೆ, ಅತಿಯಾಗಿ ನೀರನ್ನು ವ್ಯರ್ಥ ಮಾಡುವುದು ಅಥವಾ ಸ್ನಾನಕ್ಕೆ ಅತಿಯಾಗಿ ಬಳಸುವುದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗಬಹುದೆಂದು ಪುರಾಣಗಳು ತಿಳಿಸುತ್ತವೆ. ನೀರನ್ನು ಮಿತವಾಗಿ ಮತ್ತು ಹಿತವಾಗಿ ಬಳಸಬೇಕು.

ಬೆಂಗಳೂರು, ಡಿಸೆಂಬರ್ 12: ನೀರಿಲ್ಲದೆ ಜೀವನ ಅಸಾಧ್ಯ. ಈ ಭೂಮಂಡಲದಲ್ಲಿ ಪ್ರತಿಯೊಂದು ಜೀವಿಯೂ ನೀರಿನ ಅವಶ್ಯಕತೆ ಹೊಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ಅಗಾಧ ಮಹತ್ವವಿದೆ. ನೀರನ್ನು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ದೈವ ಸ್ವರೂಪ ಮತ್ತು ಅಮೃತ ಎಂದು ಪರಿಗಣಿಸಲಾಗುತ್ತದೆ. ಪಂಚಭೂತಗಳಲ್ಲಿ ನೀರು ಕೂಡ ಒಂದು.

ಪುರಾಣಗಳು ಮತ್ತು ಗ್ರಂಥಗಳಲ್ಲಿ ನೀರಿಗೆ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಗೃಹ ಪ್ರವೇಶ, ಶುಭಕಾರ್ಯಗಳು ಮತ್ತು ನದಿಗಳಿಗೆ ಪೂಜೆ ಸಲ್ಲಿಸುವಂತಹ ಸಂದರ್ಭಗಳಲ್ಲಿ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿ ಸೇರಿದಂತೆ ಸಪ್ತ ನದಿಗಳನ್ನು ಪವಿತ್ರವಾಗಿ ಪೂಜಿಸಲಾಗುತ್ತದೆ. ಹುಟ್ಟು-ಸಾವುಗಳ ಆಚರಣೆಗಳಲ್ಲೂ ನೀರಿಗೆ ಪ್ರಮುಖ ಪಾತ್ರವಿದೆ. ಶಿವಪುರಾಣದಲ್ಲಿ ಶಿವನನ್ನು ನೀರಿಗೆ ಹೋಲಿಸಲಾಗಿದೆ.

ಇಷ್ಟೆಲ್ಲಾ ಮಹತ್ವವಿದ್ದರೂ, ನೀರನ್ನು ಅತಿಯಾಗಿ ಬಳಸುವುದರಿಂದ ಅಥವಾ ವ್ಯರ್ಥ ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಕೆಲವರು ಸ್ನಾನಕ್ಕೆ ಅತಿಯಾದ ನೀರನ್ನು ಬಳಸುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹಿರಿಯರು ಹೇಳುತ್ತಾರೆ. ನೀರನ್ನು ಮಿತವಾಗಿ ಮತ್ತು ಹಿತವಾಗಿ ಬಳಸಬೇಕು. ನೀರನ್ನು ಕುಡಿಯುವಾಗಲೂ ನಿಧಾನವಾಗಿ, ಅಮೃತ ಎಂದು ಭಾವಿಸಿ ಕುಡಿಯುವುದು ದೇಹಕ್ಕೆ ಶಾಂತಿಯನ್ನು ನೀಡುತ್ತದೆ. ನೀರು ದೈವ ಸಮಾನ ಎಂದು ತಿಳಿಯಬೇಕು. ಅತಿಯಾದ ನೀರಿನ ಬಳಕೆಯು ದಾರಿದ್ರ್ಯ, ಮಂಗು, ಕಂಟಕ ಮತ್ತು ದೋಷಗಳಿಗೆ ಕಾರಣವಾಗುತ್ತದೆ. ಸರ್ವೇಜನಾ ಸುಖಿನೋಭವಂತು ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.