ದ್ವಾದಶಿ ತಿಥಿ ಹಾಗೂ ಶ್ರವಣಾ ನಕ್ಷತ್ರಗಳ ಅಪರೂಪದ ಸಂಯೋಗ ಇಂದು ಹೀಗೆ ಮಾಡಿದರೆ ಒಳಿತು

ಪಂಚಾಂಗದಲ್ಲಿ ತಿಥಿ ವಾರ ನಕ್ಷತ್ರಗಳು ಬಹಳ ಮುಖ್ಯವಾದವು. ಅವುಗಳ ಆಧಾರದ ಮೇಲೆ ಹೊಸ ಕಾರ್ಯಗಳ ಆರಂಭ, ಸಮೃದ್ಧಿ ಎಲ್ಲವೂ ಆಗುವುದು. ಏಕೆಂದರೆ ಅವುಗಳ ದೇವತಾ ಶಕ್ತಿಗಳು ಇವೆ. ಆ ಶಕ್ತಿಗಳೇ ಇಡೀ ದಿನವನ್ನು ರಕ್ಷಿಸುವುದು.

ದ್ವಾದಶಿ ತಿಥಿ ಹಾಗೂ ಶ್ರವಣಾ ನಕ್ಷತ್ರಗಳ ಅಪರೂಪದ ಸಂಯೋಗ ಇಂದು ಹೀಗೆ ಮಾಡಿದರೆ ಒಳಿತು
ರಾಶಿ ಭವಿಷ್ಯ
Follow us
| Updated By: ವಿವೇಕ ಬಿರಾದಾರ

Updated on:Sep 15, 2024 | 6:27 AM

ಪಂಚಾಂಗದಲ್ಲಿ ತಿಥಿ ವಾರ ನಕ್ಷತ್ರಗಳು ಬಹಳ ಮುಖ್ಯವಾದವು. ಅವುಗಳ ಆಧಾರದ ಮೇಲೆ ಹೊಸ ಕಾರ್ಯಗಳ ಆರಂಭ, ಸಮೃದ್ಧಿ ಎಲ್ಲವೂ ಆಗುವುದು. ಏಕೆಂದರೆ ಅವುಗಳ ದೇವತಾ ಶಕ್ತಿಗಳು ಇವೆ. ಆ ಶಕ್ತಿಗಳೇ ಇಡೀ ದಿನವನ್ನು ರಕ್ಷಿಸುವುದು.

ದ್ವಾದಶೀ ತಿಥಿಯ ಅಧಿಪತಿ ವಿಷ್ಣು ಹಾಗೂ ಶ್ರವಣಾ ನಕ್ಷತ್ರದ ಅಧಿಪತಿಯೂ ವಿಷ್ಣುವೇ. ಇವೆರಡೂ ಒಟ್ಟಿಗೇ ಬಂದಿರುವುದು ಅಪರೂಪ. ಈ ದಿನ ಸಂಪೂರ್ಣ ವಿಷ್ಣುವಿನ ಸಾನ್ನಿಧ್ಯವಿರುವ ದಿನವು ಇದಾಗಿದೆ. ಈ ದಿನಕ್ಕೆ ಇನ್ನಷ್ಟು ಮಹತ್ವದ ಕೊಡುವುದು ಭಾದ್ರಪದ ಮಾಸ ಮತ್ತು ಭಾನುವಾರ ಬಂದಿರುವುದು. ಅಷ್ಟೇ ಅಲ್ಲ ವಿಷ್ಣು ತನ್ನ ಯೋಗನಿದ್ರೆಯ ಪಾರ್ಶ್ವವನ್ನು ಬದಲಾಯಿಸಿಕೊಳ್ಳುವ ವಿಷ್ಣುಪರಿವರ್ತನಮ್ ಇದೇ ಆಗಿದೆ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಯಾರು ಏಕಾದಶಿಯಂದು ಉಪವಾಸ ಮಾಡಿ ಮರುದಿನ ಮಹಾವಿಷ್ಣುವನ್ನು ಪೂಜಿಸುವರೋ ಅವರಿಗೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದು ಎನ್ನುತ್ತದೆ ವರಾಹ ಪುರಾಣ.

ಮೂರುಲೋಕವನ್ನು ಸಂಚಾರ ಮಾಡುವ ದೇವಿಯು ನಿನಗೆ ಸದಾ ಪ್ರಿಯಳು. ಅವಳು ದ್ವಾದಶೀ ತಿಥಿಯಂದು ತನಗೆ ಇಷ್ಟಪಟ್ಟ ರೂಪವನ್ನು ಧರಿಸುವವಳು ಆಗಿದ್ದಾಳೆ. ಯಾರು ದ್ವಾದಶಿಯಲ್ಲಿ ತುಪ್ಪವನ್ನು ಸ್ತ್ರೀ ಆಗಲಿ ಪುರುಷರಾಗಲಿ ಸೇವಿಸುವರೋ ಆವರು ಸ್ವರ್ಗವಾಸಿಯಾಗುವರು.

ದ್ವಾದಶೀ ತಿಥಿಯಲ್ಲಿ ನಕ್ಷತ್ರವೂ ತಿಥಿಯೂ ಎರಡೂ ಬಂದಾಗ ಏಕಾದಶಿಗೆ ಮಾಡುವ ಉಪವಾಸವನ್ನು ದ್ವಾದಶಿಗೆ ಮಾಡಬಹುದು ಎನ್ನುತ್ತದೆ ಸ್ಮೃತಿ. ಇನ್ನು ಮಾರ್ಕಂಡೇಯ ಪುರಾಣವು ಯಾರು ಶ್ರವಣಾ ಹಾಗೂ ದ್ವಾದಶೀಯುಕ್ತ ದಿನದಂದು ಉಪವಾಸ ಮಾಡಿದರೆ ರಾಜನಾಗುತ್ತಾನೆ ಅಥವಾ ರಾಜನಿಗೆ ಸಮಾನವಾದ ಸಂಪತ್ತನ್ನು ಪಡೆಯುತ್ತಾನೆ.

ಹೀಗೆ ಕಾಲವೇ ಮನುಕುಲವು ಅತಿಶಯವಾದ ಸಂಪತ್ತು, ಸುಖ, ಅಧಿಕಾರವನ್ನು ಪಡೆಯಲು ಒಳ್ಳೆಯದನ್ನು ಮಾಡಿಕೊಡಲಿದೆ. ಇದೆಲ್ಲವೂ ಕಾಲದ ಕರುಣೆಯಾಗಿದೆ.

ಲೋಹಿತ ಹೆಬ್ಬಾರ್ – 8762924271

Published On - 6:24 am, Sun, 15 September 24

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?