AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ವಿಳಂಬ, ನಿಮ್ಮ ಇಷ್ಟದ ಜೀವನ ಸಂಗಾತಿ ಸಿಗುತಿಲ್ವಾ? ಚಿಂತೆ ಬಿಡಿ, ಇಲ್ಲಿದೆ ಪರಿಹಾರ

ಅನೇಕ ಜನರು ಮದುವೆ ವೇಳೆ ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ನಿಶ್ಚಿತಾರ್ಥವಾದ ಬಳಿಕ ಮದುವೆ ಮುರಿದು ಬೀಳುತ್ತದೆ. ಅಥವಾ ಇತರ ಕಾರಣಗಳಿಂದಾಗಿ, ಬಯಸಿದ ಜೀವನ ಸಂಗಾತಿ ಸಿಗುವುದಿಲ್ಲ. ಅಂತಹವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ.

ಮದುವೆಯಲ್ಲಿ ವಿಳಂಬ, ನಿಮ್ಮ ಇಷ್ಟದ ಜೀವನ ಸಂಗಾತಿ ಸಿಗುತಿಲ್ವಾ? ಚಿಂತೆ ಬಿಡಿ, ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Apr 05, 2022 | 6:30 AM

Share

ಪ್ರತಿಯೊಬ್ಬರ ಜೀವನದಲ್ಲೂ ಮದುವೆಯೆಂಬುವುದು(Marriage) ಒಂದು ಪ್ರಮುಖ ಹಾಗೂ ಮುಖ್ಯವಾದ ಘಟ್ಟ. ಆದ್ರೆ ಕೆಲವೊಮ್ಮೆ, ಜಾತಕ, ಗ್ರಹ, ನಕ್ಷತ್ರಪುಂಜಗಳಿಂದಾಗಿ ಮದುವೆಯ ವಯಸ್ಸು ಮೀರಿದರೂ ಕಂಕಣ ಭಾಗ್ಯ ಕೂಡಿಬರದಿರುವುದು, ಮದುವೆಯಲ್ಲಿ ಅಡೆತಡೆಗಳು, ಮದುವೆ ಮುರಿದು ಬೀಳುವುದು ಹೀಗೆ ಅನೇಕ ಸಮಸ್ಯೆಗಳು ಕಂಡು ಬರುತ್ತವೆ(Facing Problems in Getting Married). ಇಂತಹ ಸಂದರ್ಭಗಳಲ್ಲಿ ತಜ್ಞರ, ಜ್ಯೋತಿಷಿಗಳ ಸಲಹೆ ನಂತರ ನೀಲಮಣಿ ರತ್ನವನ್ನು ಧರಿಸುವುದರಿಂದ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ ಮತ್ತು ಜೀವನದಲ್ಲಿ ಸಂತೋಷ ನೆಲೆಸುತ್ತದೆ.

ಅನೇಕ ಜನರು ಮದುವೆ ವೇಳೆ ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ನಿಶ್ಚಿತಾರ್ಥವಾದ ಬಳಿಕ ಮದುವೆ ಮುರಿದು ಬೀಳುತ್ತದೆ. ಅಥವಾ ಇತರ ಕಾರಣಗಳಿಂದಾಗಿ, ಬಯಸಿದ ಜೀವನ ಸಂಗಾತಿ ಸಿಗುವುದಿಲ್ಲ. ಅಂತಹವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ. ರತ್ನಶಾಸ್ತ್ರದಲ್ಲಿ ಹೇಳಲಾದ ಪರಿಹಾರದ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ನೀಲಮಣಿ(Topaz) ಧರಿಸುವುದುರಿಂದ ಕಂಕಣ ಭಾಗ್ಯ ನೀಲಮಣಿ ಗುರು ಗ್ರಹವನ್ನು ಪ್ರತಿನಿಧಿಸುತ್ತದೆ. ಇದು ಹಳದಿ, ನೀಲಿ ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಗುರು ಗ್ರಹವನ್ನು ಬಲಪಡಿಸಲು ಹಳದಿ ನೀಲಮಣಿ ಧರಿಸಲು ಸಲಹೆ ನೀಡಲಾಗುತ್ತದೆ, ಇದು ತುಂಬಾ ಪರಿಣಾಮಕಾರಿಯಾಗಿದೆ. ಆದರೆ ನೀಲಿ ಬಣ್ಣದ ನೀಲಮಣಿ ಕೂಡ ತುಂಬಾ ಪರಿಣಾಮಕಾರಿ ಎಂದು ಕೆಲವೇ ಜನರಿಗೆ ತಿಳಿದಿದೆ. ನೀಲಮಣಿ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ, ವಿಶೇಷವಾಗಿ ನಿಮ್ಮ ಪ್ರೀತಿಯನ್ನು ಪಡೆಯಲು ಮತ್ತು ಮದುವೆಯಲ್ಲಿನ ತೊಂದರೆಗಳನ್ನು ದೂರವಾಡಲು ಸಹಾಯಕಾರಿ. ಇದಲ್ಲದೆ, ನೀಲಮಣಿ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇತರ ರತ್ನ, ಹವಳಗಳನ್ನ ಧರಿಸುವ ಮುನ್ನ ತಜ್ಞರನ್ನು ಸಂಪರ್ಕಿಸಿದಂತೆ ಈ ರತ್ನದ ಕಲ್ಲುಗಳನ್ನು ಧರಿಸುವ ಮುನ್ನ ಸಹ ತಜ್ಞರನ್ನು ಸಂಪರ್ಕಿಸಿ ಧರಿಸಬೇಕು.

-ನೀಲಮಣಿ ಧರಿಸುವುದರಿಂದ ಪ್ರೀತಿಯಲ್ಲಿ ಯಶಸ್ಸನ್ನು ಕಾಣಬಹುದು. ಹಾಗೂ ಬಯಸಿದ ಸಂಗಾತಿಯನ್ನು ಮದುವೆಯಾಗಲು ಎದುರಾಗುವ ಸಮಸ್ಯೆಗಳನ್ನು ದೂರ ಮಾಡಬಹುದು. -ಮದುವೆ ಮುರಿದು ಹೋಗುತ್ತಿದ್ದರೆ ಅಥವಾ ಮದುವೆಯಲ್ಲಿ ಅಡೆತಡೆಗಳು ಇದ್ದಲ್ಲಿ, ಈ ರತ್ನವನ್ನು ಧರಿಸುವುದರಿಂದ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು. -ನೀಲಮಣಿ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ. ಇದು ಅಜ್ಞಾತ ಭಯದಿಂದ ಪರಿಹಾರವನ್ನು ನೀಡುತ್ತದೆ. ಕೋಪದಿಂದ ಅಥವಾ ಆಗಾಗ ಜಗಳ, ವಿವಾದಗಳಿಗೆ ಒಳಗಾಗುವವರು ಈ ರತ್ನವನ್ನು ಧರಿಸುವುದರಿಂದ ಅವರಿಗೂ ಲಾಭವಾಗುತ್ತದೆ. -ನೀಲಮಣಿ ಧರಿಸುವುದು ಬೆಳವಣಿಗೆಗೆ, ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ. ತಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಬಯಸುವವರು, ಸಾಧಿಸಲು ಬಯಸುವ ಜನರು ಸಹ ಈ ರತ್ನವನ್ನು ಧರಿಸಬಹುದು. -ನೀಲಮಣಿ ನಿದ್ರೆಯ ಸಮಸ್ಯೆಗಳು, ಆಲಸ್ಯ ಮತ್ತು ಸೋಮಾರಿತನವನ್ನು ಹೋಗಲಾಡಿಸುವ ಮೂಲಕ ವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ: ಹೋಳಿ ಆಚರಣೆ ವೇಳೆ ಯಾವ ರಾಶಿಯ ಜನರು ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು? ಇಲ್ಲಿದೆ ಮಾಹಿತಿ

ನವರಾತ್ರಿ ವೇಳೆ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆಯುಕ್ತರಿಗೆ ಪತ್ರ ಬರೆದ ಮೇಯರ್

‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ