
ಈ ದಿನ ನರಸಿಂಹ ದೇವರ ದೇವಸ್ಥಾನಕ್ಕೆ ತೆರಳಿ, ಕೆಂಪು ಬಣ್ಣದ ಹೂವಿನಿಂದ ಕಟ್ಟಿದಂಥ ಮಾಲೆಯೊಂದನ್ನು ಸಮರ್ಪಣೆ ಮಾಡುವುದರಿಂದ ಬಹಳ ಪ್ರಯತ್ನ ಮಾಡುತ್ತಿದ್ದ ಪ್ರಾಜೆಕ್ಟ್ ಗಳು, ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ.
ಇತರರ ವೈಯಕ್ತಿಕ ವಿಷಯಗಳಲ್ಲಿ ನೀವಾಗಿಯೇ ಸಲಹೆ- ಸೂಚನೆ ನೀಡುವುದಕ್ಕೆ ಹೋಗಬೇಡಿ. ಕೃಷಿಯನ್ನೇ ತಮ್ಮ ವೃತ್ತಿಯಾಗಿ ಮಾಡಿಕೊಂಡವರು ಜಮೀನಿನಲ್ಲಿ ಕೆಲವು ಕೆಲಸಗಳನ್ನು ಮಾಡಿಸುವ ನಿಟ್ಟಿನಲ್ಲಿ ಮಾತುಕತೆ ಆಡಲಿದ್ದೀರಿ. ಒಂದು ವೇಳೆ ಯಾವುದೇ ಕೆಲಸವನ್ನು ತಕ್ಷಣಕ್ಕೆ ಮಾಡಿಸುವುದು ಬೇಡ ಎಂದೆನಿಸಿದ್ದಲ್ಲಿ ಸ್ವಲ್ಪ ಸಮಯ ಮುಂದಕ್ಕೆ ಹಾಕುವುದು ಉತ್ತಮ ಎನಿಸಿಕೊಳ್ಳುತ್ತದೆ.
ಈ ಹಿಂದೆ ನೀವಾಗಿಯೇ ಹೇಳಿದ್ದ ಕೆಲವು ಸಲಹೆ- ನಿರ್ಧಾರಗಳನ್ನು ಬದಲಿಸುವುದಕ್ಕೆ ಮುಂದಾಗುತ್ತೀರಿ. ಇದೇ ವೇಳೆ ಹೂಡಿಕೆ ವಿಚಾರವಾಗಿ ಕುಟುಂಬದವರ ಜತೆಗೆ ಗಂಭೀರವಾದ ಚರ್ಚೆ ನಡೆಸಲಿದ್ದೀರಿ. ಈ ಹಿಂದೆ ಯಾವಾಗಲೋ ನೋಡಿಕೊಂಡು ಬಂದಿದ್ದ ಸ್ಥಳದ ಖರೀದಿಗೆ ಈ ದಿನ ಇನ್ನೊಮ್ಮೆ ಅವಕಾಶ ತೆರೆದುಕೊಳ್ಳಲಿದೆ. ಎಷ್ಟೇ ಹತ್ತಿರದವರೇ ಆದರೂ ಸಾಧಕ-ಬಾಧಕಗಳನ್ನು ಅಳೆದು ನೋಡದೆ ನಿರ್ಧಾರವನ್ನು ಮಾಡಬೇಡಿ.
ಎಲ್ಲವೂ ಮೊದಲಿನಂತಿಲ್ಲ ಎಂದು ಅನಿಸುವುದಕ್ಕೆ ಶುರು ಆಗುತ್ತದೆ. ಹೇಳಿದ ತಕ್ಷಣ ಆಗುತ್ತಿದ್ದ ಕೆಲಸಗಳು ಆಗುವುದಿಲ್ಲ. ಅದೇ ರೀತಿ ನಿಮ್ಮ ಎದುರು ನಿಂತು ಮಾತನಾಡುವುದಕ್ಕೆ ಸಹ ಅಂಜುತ್ತಿದ್ದವರು ಈ ದಿನ ಟೀಕೆ, ಆಕ್ಷೇಪ ಅಥವಾ ಆರೋಪಗಳನ್ನು ಮಾಡಬಹುದು. ನಿಮಗೆ ಮಾಹಿತಿ ಇಲ್ಲದ ವಿಷಯದಲ್ಲಿ ನಿಮ್ಮ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ.
ಲೇಖನ- ಸ್ವಾತಿ ಎನ್.ಕೆ.