AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಷದಿಂದ ಕನ್ಯಾ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್

ಮೇಷ ರಾಶಿಯವರು ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಎಂದುಕೊಳ್ಳುವುದು ಬೇರೆ, ಅದೇ ವೃಷಭ, ಮಿಥುನ, ಕರ್ಕಾಟಕ ರಾಶಿಯವರು ಹಾಗೆ ಆಲೋಚಿಸುವುದು ಬೇರೆ. ಮೇಷದಿಂದ ಕನ್ಯಾ ತನಕ ಆರು ರಾಶಿಗಳವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.

ಮೇಷದಿಂದ ಕನ್ಯಾ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Aug 17, 2023 | 7:03 AM

ತೀರಾ ಮೊನ್ನೆ- ಮೊನ್ನೆಯವರೆಗೂ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದವರು ಇವತ್ತಿಗೆ ನನ್ನ ಫೋನ್ ರಿಸೀವ್ ಮಾಡ್ತಾ ಇಲ್ಲ. ನನ್ನ ನಂಬರ್ ಬ್ಲಾಕ್ ಮಾಡಿಬಿಟ್ಟಿದ್ದಾರೆ ಅಂತ ಕೆಲವರು ಹೇಳಿರುವುದನ್ನು ಕೇಳಿರುತ್ತೀರಿ. ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಅಂತ ಯಾವ ರಾಶಿಯವರಿಗೆ ಯಾವಾಗ ಅನಿಸುತ್ತದೆ ಎಂಬುದರ ಬಗ್ಗೆ ಬಹಳ ಇಂಟರೆಸ್ಟಿಂಗ್ ಆದ ಮಾಹಿತಿ ನಿಮ್ಮೆದುರು ಇದೆ. ಮೇಷ ರಾಶಿಯವರು ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಎಂದುಕೊಳ್ಳುವುದು ಬೇರೆ, ಅದೇ ವೃಷಭ, ಮಿಥುನ, ಕರ್ಕಾಟಕ ರಾಶಿಯವರು ಹಾಗೆ ಆಲೋಚಿಸುವುದು ಬೇರೆ. ಮೇಷದಿಂದ ಕನ್ಯಾ ತನಕ ಆರು ರಾಶಿಗಳವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.

ಮೇಷ

ಈ ರಾಶಿಯವರ ಇಗೋಗೆ ಹೊಡೆತ ಬೀಳುವಂಥ ಮಾತನಾಡಿದರೆ ಅಂಥವರಿಂದ ದೂರ ಆಗುವುದಕ್ಕೆ ಆರಂಭಿಸುತ್ತಾರೆ. ನಾನು ಮಾಡಬಲ್ಲೆ, ನಾನೇ ಮಾಡಬಲ್ಲೆ ಅಂತ ಮಾತನಾಡುವ ಮೇಷಕ್ಕೆ ಜತೆಗಿರುವವರು ಏನಾದರೂ ಹಂಗಿಸುವುದಕ್ಕೆ, ಮೂದಲಿಸುವುದಕ್ಕೆ, ನಿರುತ್ಸಾಹಗೊಳಿಸುವುದಕ್ಕೆ ಆರಂಭಿಸಿದರೋ ಅಂಥವರನ್ನು ದೂರ ಮಾಡಿಕೊಳ್ಳುತ್ತಾರೆ. ಇವರ ವೈಶಿಷ್ಟ್ಯ ಏನು ಗೊತ್ತಾ ತಾವು ಯಾರನ್ನು ಅವಾಯ್ಡ್ ಮಾಡಬೇಕು ಎಂದುಕೊಳ್ಳುತ್ತಾರೋ ಅವರ ಮುಖಕ್ಕೆ ಹೇಳುತ್ತಾರೆ.

ವೃಷಭ

ನಂಬಿಕೆ ಇವರಿಗೆ ಬಹಳ ಮುಖ್ಯ. ಜತೆಗೆ ಇರುವವರು ನಂಬಿಕೆ ಕಳೆದರು ಅಂದ ಮರು ಕ್ಷಣವೇ ಅವರ ಕೈಗೆ ಸಿಗದಂತೆ ಓಡಾಡಲು ಶುರು ಮಾಡುತ್ತಾರೆ. ಹತ್ತು ಸಲ ಕರೆ ಮಾಡಿದಲ್ಲಿ ಒಂದು ಸಲ ಫೋನ್ ಎತ್ತುಕೊಂಡು, ಬಹಳ ಕೆಲಸ ಇರುವವರಂತೆ ತೋರಿಸಿಕೊಳ್ಳುತ್ತಾರೆ. ಇನ್ನು ಕೊನೆಯ ಹಂತ, ಮೂರೇ ಜನರು ಇರುವಾಗಲೂ ಆ ಇನ್ನೊಬ್ಬರ ಜತೆಗೆ ಮಾತನಾಡುತ್ತಾರೆ ವಿನಾ ನಂಬಿಕೆ ಕಳೆದುಕೊಂಡ ಸ್ನೇಹಿತನ ಕಡೆ ತಲೆ ಎತ್ತಿ ಕೂಡ ನೋಡಲ್ಲ.

ಮಿಥುನ

ಈ ರಾಶಿಯವರು ಬಹಳ ಮೂಡಿ. ಇವರ ಜತೆಗೆ ಯಾವಾಗ ತಮಾಷೆಯಾಗಿ ಮಾತನಾಡಬೇಕೋ ಯಾವಾಗ ಸೀರಿಯಸ್ಸೋ ಗೊತ್ತೇ ಆಗಲ್ಲ. ಜತೆಗೆ ಇವರು ಸ್ನೇಹಿತರ ಆಯ್ಕೆಯಲ್ಲೇ ಮೊದಲೇ ಒಂದಿಷ್ಟು ಲೆಕ್ಕ ಹಾಕಿಕೊಂಡು ಹತ್ತಿರ ಮಾಡಿಕೊಂಡಿರುತ್ತಾರೆ. ಇವರ ಜತೆಗೆ ತುಂಬ ಸಲುಗೆ ತೆಗೆದುಕೊಂಡರಾ ಅಥವಾ ವಿಷಯದ ಗಾಂಭೀರ್ಯ ತಿಳಿದುಕೊಳ್ಳಲು ಸಾಧ್ಯವಾಗದೇ ಎಂಥದೋ ಮಾತನಾಡಿದರಾ ಅಲ್ಲಿಗೆ ಮುಗಿಯಿತು. ಇವರು ಯಾವ ವ್ಯಕ್ತಿಯನ್ನು ಬಿಟ್ಹಾಕುತ್ತಾರೋ ಅಂಥವರಿಗೆ ಯಾವ ಕಾರಣ ಅಂತ ಸಹ ಗೊತ್ತಾಗಲ್ಲ.

ಇದನ್ನೂ ಓದಿ: ತುಲಾದಿಂದ ಮೀನ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್

ಕರ್ಕಾಟಕ

ಈ ರಾಶಿಯವರು ವಿಪರೀತ ಎನಿಸುವಷ್ಟು ಎಮೋಷನಲ್. ಯಾರು ಇವರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುವುದಿಲ್ಲವೋ ಆ ಕೂಡಲೇ ದೂರ ಆಗುವುದಕ್ಕೆ ಆರಂಭಿಸುತ್ತಾರೆ. ಕಣ್ಣೀರು ಹಾಕದೆ, ಶಪಿಸದೆ, ಎದುರಿಗಿರುವ ವ್ಯಕ್ತಿಗಾಗಿ ತಾನು ಏನೆಲ್ಲ ಮಾಡಿದೆ ಎಂಬುದನ್ನು ಹೇಳದೆ ಒಬ್ಬ ವ್ತಕ್ತಿಯ ಸ್ನೇಹವನ್ನು ದೂರ ಮಾಡಿಕೊಳ್ಳದ ಜನ ಇವರು. ತಾವು ಯಾರನ್ನು ದೂರ ಮಾಡುತ್ತಿದ್ದೇನೆ ಎಂಬುದನ್ನು ಸಂಬಂಧಪಟ್ಟವರಿಗೆ ಬಿಟ್ಟು ಉಳಿದೆಲ್ಲರಿಗೂ ಹೇಳಿ, ಆ ನಂತರ ಯಾರಿಗೋ ಹೇಳಬೇಕೋ ಅವರಿಗೆ ತಿಳಿಸುತ್ತಾರೆ.

ಸಿಂಹ

ಈ ರಾಶಿಯವರ ಮೇಲೆ ಯಾರಾದರೂ ತುಂಬ ಅವಲಂಬಿಸುತ್ತಿದ್ದಾರೆ ಅಂದರೆ ಇವರಿಗೆ ಬಹಳ ಖುಷಿ ಕೊಡುತ್ತದೆ. ಆ ರೀತಿ ಇರುವವರ ಪರವಾಗಿ ಎಲ್ಲ ನಿರ್ಧಾರವನ್ನೂ ಮಾಡಿಬಿಡುತ್ತಾರೆ. ಆದರೆ ಹೇಗಿದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದರಲ್ಲಾ ಬೇರೆಯವರಿಗೆ ಇನ್ನೊಂದು ಕೆಲಸ ಕೊಡೋಣ. ಒಂದೇ ಸಮಯಕ್ಕೆ ಎರಡು ಕೆಲಸಗಳು ಆಗುತ್ತದೆ ಎಂದು ಇವರ ಸ್ನೇಹಿತರು ಯೋಚಿಸಿದರೆ ಅಲ್ಲಿಗೆ ಮುಗಿಯಿತು. ಸ್ನೇಹಿತರು, ಸಂಬಂಧಿಕರು, ಆಪ್ತರು ತಮ್ಮನ್ನು ಎಲ್ಲ ವಿಚಾರಕ್ಕೂ ಒಂದು ಸಲ ಕೇಳಬೇಕು ಎಂದು ಯೋಚಿಸುತ್ತಾರೆ. ಹಾಗೆ ಮಾಡಲಿಲ್ಲವೋ ಹೇಳದೆ ಕೇಳದೆ ದೂರವಾಗಿ ಬಿಡುತ್ತಾರೆ.

ಕನ್ಯಾ

ಈ ರಾಶಿಯವರ ಹತ್ತಿರ ಏನು ಬೇಕಾದರೂ ಸಹಾಯ ಕೇಳಬಹುದು. ಇವರೂ ಸಹ ಅದಕ್ಕೆ ಇಲ್ಲ ಎನ್ನದೆ ಮಾಡುತ್ತಾರೆ. ಆದರೆ ಎದುರಿನವರಿಂದಲೂ ಅದೇ ಪ್ರಮಾಣದ ಅಥವಾ ಅದಕ್ಕಿಂತಲೂ ಜಾಸ್ತಿ ಅಪೇಕ್ಷಿಸುತ್ತಾರೆ. ಇವರಿಗೇನೋ ಅಗತ್ಯ ಕಂಡುಬಂದಾಗ ಉದ್ದೇಶಪೂರ್ವಕವಾಗಿಯೋ ಅಥವಾ ನಿರುದ್ದಿಶ್ಯವಾಗಿಯೇ ಆಗಲ್ಲ ಎಂದಿರೋ ಅಲ್ಲಿಗೆ ದೂರವಾಗುವುದಕ್ಕೆ ಶುರು ಮಾಡುತ್ತಾರೆ. ಇವರದು ಇನ್ನೊಂದು ವಿಚಿತ್ರ ಏನೆಂದರೆ, ದೂರ ಆದ ಮೇಲೂ ಮಾತನಾಡುತ್ತಾರೆ, ಏನೂ ಆಗಿಲ್ಲ ಎಂಬಂತೆ ಇರುತ್ತಾರೆ. ಆದರೆ ಅಂತರ ಕಣ್ಣೆದುರು ಎದ್ದು ಕಾಣುತ್ತದೆ.

Published On - 6:52 am, Thu, 17 August 23

ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ