ಚಂದ್ರನಿಂದ ಕಾರ್ಯಾರಂಭದ ಬಗ್ಗೆ ತಿಳಿಯಬಹುದಾದ ಅನೇಕ ಸಂಗತಿಗಳಿವು…

ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯರ, ಸಾಧಕ, ವಧ, ಮೈತ್ರ, ಪರಮಮೈತ್ರ ಎಂಬುದಾಗಿ ಒಂಭತ್ತು ನಾಮಗಳನ್ನು ಇಟ್ಟು ಯಾವ ಜನ್ಮನಕ್ಷತ್ರದಿಂದ ಇಷ್ಟದಿನದ ನಕ್ಷತ್ರವನ್ನು ಗಣಿಸಿ ಶೇಷದ ಆಧಾರದ ಮೇಲೆ ತಾರಾನುಕೂಲ ನೋಡುವುದು ಒಂದಾದರೆ, ಇನ್ನೊಂದು ಜನ್ಮದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಇದ್ದಾನೆಂದು ಮತ್ತು ಇಷ್ಟಕಾಲದಲ್ಲಿ ಎಲ್ಲಿ ಇರುವನೆಂದು ತಿಳಿದು ಫಲಾಫಲವನ್ನು ಹೇಳುವುದು ಇನ್ಮೊಂದು.

ಚಂದ್ರನಿಂದ ಕಾರ್ಯಾರಂಭದ ಬಗ್ಗೆ ತಿಳಿಯಬಹುದಾದ ಅನೇಕ ಸಂಗತಿಗಳಿವು...
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 05, 2025 | 6:02 PM

ಚಂದ್ರ ಮತ್ತು ಸೂರ್ಯರು ಇಡೀ ಪ್ರಪಂಚದ ದೊಡ್ಡ ಅಳತೆಗೋಲು.ಅವರೀರ್ವರ ಆಧಾರದ ಮೇಲೆ ಕಾಲಗಣನೆ ಇರಲಿದೆ. ಇಂತಹ ಚಂದ್ರ ಹುಟ್ಟಿದಾಗ ಮತ್ತು ವರ್ತಮಾನದಲ್ಲಿ ಎಲ್ಲಿದ್ದ ಎನ್ನುವುದು ಮುಖ್ಯವಾಗಿದ್ದು, ಇದರಿಂದ ಅನೇಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಥನ ಮಾಡಬಹುದು. ಒಂದು ವಿಧಾನ ನಕ್ಷತ್ರಗಳ ಮೂಲಕ ಚಂದ್ರನ ಬಲವನ್ನು ತಿಳಿಯುವುದು. ಇದನ್ನು ತಾರಾನುಕೂಲ ಎಂದು ಕರೆದಿದ್ದಾರೆ. ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯರ, ಸಾಧಕ, ವಧ, ಮೈತ್ರ, ಪರಮಮೈತ್ರ ಎಂಬುದಾಗಿ ಒಂಭತ್ತು ನಾಮಗಳನ್ನು ಇಟ್ಟು ಯಾವ ಜನ್ಮನಕ್ಷತ್ರದಿಂದ ಇಷ್ಟದಿನದ ನಕ್ಷತ್ರವನ್ನು ಗಣಿಸಿ ಶೇಷದ ಆಧಾರದ ಮೇಲೆ ತಾರಾನುಕೂಲ ನೋಡುವುದು ಒಂದಾದರೆ, ಇನ್ನೊಂದು ಜನ್ಮದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಇದ್ದಾನೆಂದು ಮತ್ತು ಇಷ್ಟಕಾಲದಲ್ಲಿ ಎಲ್ಲಿ ಇರುವನೆಂದು ತಿಳಿದು ಫಲಾಫಲವನ್ನು ಹೇಳುವುದು ಇನ್ಮೊಂದು. ಇದೂ ಕೂಡ ಅಂಗವಾಗಿ ಕೆಲವು ಕಡೆಗಳಲ್ಲಿ ನೋಡಲು ಸಿಗುತ್ತದೆ.

ಜನಿಸುವಾಗಲೂ ಮತ್ತು ವರ್ತಮಾನದ ಸಂದರ್ಭದಲ್ಲಿ ಚಂದ್ರನು ಒಂದೇ ರಾಶಿಯನ್ನು ಇದ್ದರೆ, ಅಂದರೆ ಹುಟ್ಟುವಾಗ ಮೇಷದಲ್ಲಿ ಹಾಗೂ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಅಥವಾ ಹೊಸ ಕಾರ್ಯವನ್ನು ಆರಂಭಿಸುವ ಸನ್ನಿವೇಶ ಬಂದಾಗ ಚಂದ್ರನು ಮೇಷದಲ್ಲಿ ಇದ್ದರೆ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತದೆ ಎನ್ನಬೇಕು. ಅದೇ ಮೇಷದಲ್ಲಿ ಚಂದ್ರ, ಅವನಿಂದ ಎರಡನೇ ರಾಶಿಯಲ್ಲಿ ವತ್ರಮಾನದ ಚಂದ್ರನಿದ್ದರೆ, ನಾನಾ ಪ್ರಕಾರದ ಸಂಪತ್ತು ಪ್ರಾಪ್ತಿ. ಮೂರರಲ್ಲಿ ಇದ್ದರೆ ಮಂಗಲಕರವಾದ ಕಾರ್ಯವಾಗಿರಲಿದೆ. ನಾಲ್ಕರಲ್ಲಾದರೆ ಕಲಹವುಂಟಾಗುವುದು, ಐದನೇ ರಾಶಿಯಲ್ಲಿ ಚಂದ್ರನಿದ್ದರೆ, ಜ್ಞಾನದ ವೃದ್ಧಿಯಾಗಲಿದೆ.‌ ಆರರಲ್ಲಿ ಧಾನ್ಯಗಳ ಸಮೃದ್ಧಿ, ಏಳರಲ್ಲಿ ಗೌರವ, ಆದರಗಳನ್ನು ಪಡೆಯುವನು. ಅಷ್ಟಮದಲ್ಲಿ ಚಂದ್ರನಿದ್ದಾಗ ಆರಂಭ ಮಾಡಿದ ಕಾರ್ಯದಿಂದ ಪ್ರಾಣಿಹಾನಿಯಾಗುವುದು ಅಥವಾ ಸಂಕಟಗಳು ನಿಮ್ಮನ್ನು ಮುತ್ತಬಹುದು. ಒಂಭತ್ತರಲ್ಲಿ ಇದ್ದರೆ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಸಂಪತ್ತು ನಿಮಗೆ ಬರಲಿದೆ. ದಶಮದಲ್ಲಿ ಇದ್ದರೆ ನೀವು ಅಂದುಕೊಂಡಿದ್ದು ಸಾಧ್ಯವಾಗಲಿದೆ. ಏಕಾದಶದಲ್ಲಿ ಇದ್ದರೆ, ವಿಜಯದ ಶಿಖರವನ್ನು ಏರುವಿರಿ. ದ್ವಾದಶದಲ್ಲಿ ಇದ್ದರೆ ನಾನಾ‌ ಪ್ರಕಾರದಲ್ಲಿ‌ ಹಾನಿಗಳಾಗುವುದು.

ಆದರೆ ಇದಕ್ಕೆ ಅಪವಾದವೂ ಇದೆ. ಅಧಿಕಾರ ಸ್ವೀಕಾರ, ಗರ್ಭಾದಾನ, ಅನ್ನಪ್ರಾಶನ, ಯಾವುದಾದರೂ ವ್ರತವನ್ನು ಕೈಗೊಳ್ಳುವುದು, ಗೃಹ ಪ್ರವೇಶ, ಯಾತ್ರೆಗಳಿಗೆ ದ್ವಾದಶದಲ್ಲಿ ಇರುವ ಚಂದ್ರನು ಶುಭ ಎಂಬ ಮಾತೂ ಇದೆ. ಜನ್ಮಸ್ಥಾನದಲ್ಲಿ‌ ಇರುವ ಚಂದ್ರನು ಎಲ್ಲ ಕಾರ್ಯಕ್ಕೂ ಶ್ರೇಷ್ಠ. ಆದರೆ ಕೌರ, ಔಷಧವನ್ನು ತೆಗೆದುಕೊಳ್ಳಲು ಆರಂಭಿಸುವುದು, ನ್ಯಾಯಾಲಯದಲ್ಲಿ ವಾದ ಮಂಡನೆ ಆರಂಭವಾಗುವುದು, ಪ್ರಯಾಣ ಮತ್ತು ಮನೆಯ ಉಪಯೋಗಕ್ಕೆ ಬೇಕಾದ ವಸ್ತುಗಳನ್ನು ಕತ್ತರಿಸುವ ಕಾರ್ಯವನ್ನು ಮಾಡಬಾರದು.

ಕೃಷ್ಣ ಪಕ್ಷದಲ್ಲಿ ತಾರಾಬಲವನ್ನೂ ಶುಕ್ರಪಕ್ಷದಲ್ಲಿ ಚಂದ್ರಬಲವನ್ನೂ ನೋಡಿ ಕಾರ್ಯವನ್ನು ಆರಂಭಿಸಿದರೆ ಉತ್ತಮ.

ಒಟ್ಟಿನಲ್ಲಿ ನಾಲ್ಕು, ಎಂಟು ಮತ್ತು ಹನ್ನೆರಡನೆಯ ರಾಶಿ ಶುಭಪ್ರದವಲ್ಲ. ಉಳಿದವು ಶುಭ. ಅದರಲ್ಲಿಯೂ ಆರಂಭ ಮಾಡುವ ಕಾರ್ಯಗಳು ಸಂಪತ್ತಿಗೋ ವಿಜಯಕ್ಕೋ, ಗೌರವಕ್ಕೋ ಎನ್ನುವುದರ ಮೇಲೆ ಅದು ನಿರ್ಧಾರವಾಗಲಿದೆ. ಇದನ್ನು ಅರ್ಥಮಾಡಿಕೊಂಡು ಮುಂದಾದರೆ ಎಲ್ಲವೂ ಸಮಾಧಾನಕರವಾಗಿ ಇರಲಿದೆ.

– ಲೋಹಿತ ಹೆಬ್ಬಾರ್ – 8762924271

ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ