ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ

ಜುಲೈ 8, 2024ರ ದಿನ ಪಂಚಾಂಗ ಮತ್ತು ವಿವಿಧ ರಾಶಿಗಳ ದಿನಭವಿಷ್ಯವನ್ನು ಈ ಲೇಖನ ಒಳಗೊಂಡಿದೆ. ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಇಂದಿನ ದಿನದ ಶುಭಾಶುಭಗಳನ್ನು ವಿವರಿಸಲಾಗಿದೆ. ವೃತ್ತಿ, ಆರೋಗ್ಯ, ಸಂಬಂಧಗಳು ಮತ್ತು ಹಣಕಾಸಿನ ವಿಷಯಗಳ ಕುರಿತು ಮಾಹಿತಿ ನೀಡಲಾಗಿದೆ. ಶುಭ ಮುಹೂರ್ತಗಳ ಬಗ್ಗೆಯೂ ತಿಳಿಸಲಾಗಿದೆ.

ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ
ಭವಿಷ್ಯ

Updated on: Jul 08, 2025 | 12:12 AM

ಬೆಂಗಳೂರು, ಜುಲೈ 08, ನಿತ್ಯಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ವಾರ : ಮಂಗಳ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಜ್ಯೇಷ್ಠಾ ಯೋಗ : ಶಿವ, ಕರಣ : ಕೌಲವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:51 – 17:28, ಯಮಘಂಡ ಕಾಲ 09:24 – 11:01, ಗುಳಿಕ ಕಾಲ 12:38 – 14:15.

ತುಲಾ ರಾಶಿ: ಜನಪ್ರಿಯರಾಗುವ ತುಡಿತ ನಿಮ್ಮಲ್ಲಿ ಹೆಚ್ಚಾಗುವುದು. ವೃತ್ತಿಯನ್ನು ನಂಬಿ ಬದುಕುವವರು ಚಿಂತೆಗೆಡಬೇಕಾಗುವುದು. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಗೊತ್ತಾಗಬಹುದು. ಬಂಧುಗಳ ಭೇಟಿಯಾಗಲಿದ್ದೀರಿ. ಇದು ನಿಮ್ಮ ‌ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಎಲ್ಲ ಕೆಲಸ ಅಪೂರ್ಣವಾಗಲಿದ್ದು ಬಹಳ ಖೇದ ಉಂಟಗಬಹುದು. ನಿಮ್ಮವರನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುವಿರಿ. ಸ್ಥಾನಚ್ಯುತಿಯಿಂದ ಬಹಳ ಖೇದವಾಗಲಿದೆ‌. ಸಂಗಾತಿಯೂ ನಿಮ್ಮ ಮಾತನ್ನು ಕೇಳದೇ ಸ್ವತಂತ್ರವಾಗಿ ವರ್ತಿಸುವಳು. ಸಾಮರ್ಥ್ಯವಿದ್ದರೂ ಅವಕಾಶದ ಕೊರತೆ ಇರಲಿದೆ. ಕಾರ್ಯದಲ್ಲಿ ಇರುವ ಶಿಸ್ತು ನಿಮ್ಮನ್ನು ಎತ್ತರಕ್ಕೆ ಒಯ್ಯವುದು. ಹಿರಿಯರ‌ ಮಾತಿಗೆ ಗೌರವ ಕೊಡಿ. ತಂದೆಗೆ ಎದುರಾಡಬೇಕಾದ ಸ್ಥಿತಿಯನ್ನು ತಂದುಕೊಳ್ಳಬೇಡಿ. ಒತ್ತಡ ನಿವಾರಣೆಗೆ ಧ್ಯಾನವನ್ನು ಮಾಡಿ. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ನಿಮ್ಮ ವರ್ತನೆಯು ಯಾರ ಮೇಲಾದರೂ ಪ್ರಭಾವ ಬೀರಬಹುದು.

ವೃಶ್ಚಿಕ ರಾಶಿ: ಸವಲತ್ತುಗಳು ನಿಮಗೆ ಅಧಿಕವಾಗುವುದು. ಇಂದು ನೀವು ಬಹಳ ನಿಧಾನವಾಗಿ ಇರುವಿರಿ. ನಿಮ್ಮ‌ ಮೇಲೆ ಅಪವಾದವನ್ನು ತರಲಿದ್ದಾರೆ. ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ.‌ ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸೀತು. ಉದ್ವೇಗದಲ್ಲಿ ನೀವು ಮಾತನಾಡುವಿರಿ. ಇದು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟೀತು. ನಿಮ್ಮ ಪ್ರೇಮಪ್ರಕರಣವು ಸುಖಾಂತ್ಯವಾಗಲಿದೆ. ಬೇರೆಯವರು ನೀಡಿದ ವಸ್ತುವನ್ನು ಮರಳಿ ಪಡೆಯುವರು. ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗಬಹುದು. ಸಿಕ್ಕಿರುವುದನ್ನು ಪ್ರೀತಿಯಿಂದ ಸ್ವೀಕರಿಸಿ. ಎಲ್ಲದರಲ್ಲಿ ಹಾಳು ಇದ್ದೇ ಇದೆ. ಸುಮ್ಮನೇ ಕೊರಗುವ ಅವಶ್ಯಕತೆ ಇಲ್ಲ. ಬಂದ ಹಣವನ್ನು ಖಾಲಿ ಮಾಡದೇ ರಕ್ಷಣೆ ಮಾಡಿ. ಭವಿಷ್ಯದ ಸಂಪತ್ತಾಗಬಹುದು. ನಿಮ್ಮ ಮಿತಿಯಲ್ಲಿ ಸಿಕ್ಕಿದ್ದನ್ನು ಬಳಸಿಕೊಳ್ಳಿ. ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುವುದು. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಆದಾಯದ ಸ್ವಲ್ಪ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವಿರಿ.

ಧನು ರಾಶಿ: ಕ್ಷಮೆಯನ್ನು ಕೇಳಿದವರಿಗೆ ಇಲ್ಲವೆನ್ನಲಾಗದು. ಇಂದು ನಿಮ್ಮವರ ಮಾತೇ ನಿಮಗೆ ಕಷ್ಟವಾಗುವುದು. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡಿ. ಮಕ್ಕಳ ಜೊತೆ ಶಾಂತ ರೀತಿಯಿಂದ ವರ್ತಿಸಿ. ಹೊಸತನ್ನು ಕಲಿಯುವ ಹುಮ್ಮಸ್ಸು ಇರುವುದು. ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ. ವಿಮರ್ಶೆಯನ್ನು ಸೂಕ್ಷ್ಮವಾಗಿ ಗಮನಿಸಲಾರಿರಿ. ಸ್ತ್ರೀಯರು ಆಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಕುಟುಂಬದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡು ವಾದಗಳನ್ನು ಮಾಡಬಹುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲಿದ್ದೀರಿ. ಬೆಳಗಿನ ಉತ್ಸಾಹವು ಸಂಜೆಯ ತನಕ ಇರಲಿದೆ. ಸ್ನೇಹಿತರಿಂದ ಅಮೂಲ್ಯವಾದ ಉಡುಗೊರೆ ಸಿಗಲಿದೆ. ಋಣವಿದ್ದರೆ ಸಿಗುತ್ತದೆ ಎಂಬ ಭಾವದಲ್ಲಿ ಇರುವಿರಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಚರಾಸ್ತಿಯ ಗಳಿಕೆಯಲ್ಲಿ ಗೊಂದಲವಿರವುದು.

ಮಕರ ರಾಶಿ: ಕೌಶಲವನ್ನು ನೀವೇ ಕಂಡುಕೊಳ್ಳಬೇಕಾಗುವುದು. ಇಂದು ನಿಮ್ಮನ್ನು ವಿರೋಧಿಸುವವರು ನಿಮ್ಮ ಬಗ್ಗೆ ಬೇಡದ ಸಂಗತಿಗಳನ್ನು ಹರಿದುಬಿಡುವರು. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ಏಕಾಂಗಿ ತನವು ಮನೆಯವರಿಗೆ ಮುಳುವಾಗುವುದು. ಆಭರಣವನ್ನು ಖರೀದಿಸುವ ಮನಸ್ಸು ಉಂಟಾಗಬಹುದು. ಸದ್ಯಕ್ಕೆ ಅದು ಬೇಡ. ಉಳಿಸಿದ ಹಣವು ನಿಮ್ಮ ಆಪತ್ತಿಗೆ ನೆರವಾಗುವುದು. ಕಷ್ಟವಾದರೂ ಕಛೇರಿಯಲ್ಲಿ ಕೆಲಸವನ್ನು ಮಾಡಬೇಕಾದೀತು. ಸರ್ಕಾರಿ ನೌಕರರು ಬಡ್ತಿ ಪಡೆಯಬಹುದು. ಸಂದರ್ಭಕ್ಕೆ ಅನುಸಾರವಾಗಿ ನಿಮ್ಮ ಮಾತುಗಳಿರಲಿ. ಕುಟುಂಬ ಜೊತೆ ಆರೋಗ್ಯದ ಬಗ್ಗೆ ಹಂಚಿಕೊಳ್ಳಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡಬೇಡಿ. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಕಷ್ಟವಾದರೂ ತಗ್ಗಿ ನಡೆಯುವುದು ಅನಿವಾರ್ಯ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ.

ಕುಂಭ ರಾಶಿ: ಲೆಕ್ಕಾಚಾರ ವಿಭಾಗಕ್ಕೆ ಬೇಕಾದ ಮಾಹಿತಿ ಕೊಡುವಿರಿ. ಇಂದು ವಿದ್ಯಾರ್ಥಿಗಳಿಗೆ ಎಲ್ಲರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಸಹಕಾರವೂ ಸಿಗಲಿದೆ. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಛೇರಿಗೆ ನಿಯತ್ತಾಗಿ ಹೋಗಿ. ನಿಮ್ಮ ಯಾವ ವಿಚಾರವನ್ನು ಅವರು ಕೇಳರು. ಮನೆಯ ಕೆಲಸವನ್ನು ಎಲ್ಲರ ಸಹಾಯದಿಂದ ಬೇಗ ಮುಗಿಸುವಿರಿ. ಸೃಜನಾತ್ಮಕತೆಯಿಂದ ಉತ್ಸಾಹ ಹೆಚ್ಚುವುದು. ಯೋಗ್ಯತೆ ಇದ್ದರು ಯೋಗದ ಬಲ ಅಲ್ಪವಿದೆ. ಹಾಗಾಗಿ ಹೆಚ್ಚು ಪ್ರಯತ್ನದ ಅವಶ್ಯಕತೆ ಇದೆ. ಫಲವನ್ನೂ ಅತಿಯಾಗಿ ನಿರೀಕ್ಷಿಸಬೇಡಿ. ಒತ್ತಾಯದಿಂದ ನೀವಿಂದು ಪ್ರಯಾಣ ಮಾಡಲಿದ್ದೀರಿ. ನಿಮಗಿಷ್ಟವಾಗಿದ್ದು, ಬೇಕಾದ ಸಮಯಕ್ಕೆ ಸಿಗದು. ಅತಿಯಾದ ನಿದ್ರೆಯಿಂದ ಜಾಡ್ಯ ಉಂಟಾಗಬಹುದು. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ಆಕಸ್ಮಿಕವಾಗಿ ತೊಂದರೆ ಆಗಬಹುದು.

ಮೀನ ರಾಶಿ: ಬೆಂಬಲಿಗರು ಇದ್ದಾಗಲಷ್ಟೇ ನಿಮ್ಮ ಬಲ. ಇಂದು ನೀವು ಕೆಲವರ ವಿಚಾರದಲ್ಲಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಹುದಿನದಿಂದ ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಯಾರನ್ನೂ ಒತ್ತಾಯದಿಂದ ಹಿಡಿದಿಡಲಾಗದು. ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ನಿಮ್ಮ ದುಡಿಮೆಯ ದಾರಿಯನ್ನು ಬಹಿರಂಗವಾದರೆ, ಇತರರು ಅಸೂಯೆ ಪಟ್ಟಾರು. ಅದು ನಿಮಗೆ ನಕಾರಾತ್ಮಕ ಪ್ರಭಾವವನ್ನು ಬೀರಬಹುದು. ಕಾನೂನಿನ ಭಯವು ನಿಮ್ಮನ್ನು ಕಾಡಬಹುದು. ವ್ಯಾಪರವು ಅಲ್ಪ ಲಾಭವನ್ನು ತಂದೀತು. ಕಛೇರಿಯಲ್ಲಿ ನಿಮ್ಮ ಹಂತದಲ್ಲಿ ಬಗೆ ಹರಿಯುವ ಸಮಸ್ಯೆಗಳನ್ನು ಮೇಲಕ್ಕೆ ಒಯ್ಯವುದು ಬೇಡ. ಅದು ಇನ್ನೊಂದು ಮುಖವನ್ನೂ ತೋರಿಸೀತು. ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ.