AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astro Tips: ವ್ಯಕ್ತಿ ಜಾತಕಕ್ಕೆ ಅನುಗುಣವಾಗಿ ವಜ್ರ ಧರಿಸಲು ಜ್ಯೋತಿಷ್ಯ ನಿಯಮಗಳು ಹೀಗಿವೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವುದೇ ರತ್ನವನ್ನು ಧರಿಸುವ ಮೊದಲು ಮಂತ್ರ ಹೇಳುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ.. ನೀವು ಯಾವುದೇ ರೂಪದಲ್ಲಿ ವಜ್ರವನ್ನು ಧರಿಸಲು ಬಯಸಿದರೆ.. ಶುಕ್ರವಾರದ ದಿನ ಶುಕ್ರ ಗ್ರಹದ ‘ಓಂ ಶುಕ್ರ ಶುಕ್ರಾಯ ನಮಃ’ ಮಂತ್ರವನ್ನು ಪಠಿಸಿ.

Astro Tips: ವ್ಯಕ್ತಿ ಜಾತಕಕ್ಕೆ ಅನುಗುಣವಾಗಿ ವಜ್ರ ಧರಿಸಲು ಜ್ಯೋತಿಷ್ಯ ನಿಯಮಗಳು ಹೀಗಿವೆ
ವಜ್ರವನ್ನು ಯಾವ ದಿನ ಧರಿಸಬೇಕು?
Follow us
ಸಾಧು ಶ್ರೀನಾಥ್​
|

Updated on:Oct 20, 2023 | 2:15 PM

ನವರತ್ನದಲ್ಲಿ ವಜ್ರಕ್ಕೆ ವಿಶೇಷ ಸ್ಥಾನವಿದೆ. ವಜ್ರವನ್ನು ರತ್ನಗಳ ರಾಜರೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ರತ್ನವನ್ನು ಧರಿಸಲು ಬಯಸುತ್ತಾರೆ. ಜ್ಯೋತಿಷ್ಯದಲ್ಲಿ, ವಜ್ರವನ್ನು ಶುಕ್ರ ಗ್ರಹಕ್ಕೆ ಸಂಬಂಧಿಸಿದ ರತ್ನವೆಂದು ಪರಿಗಣಿಸಲಾಗುತ್ತದೆ. ಅಂದರೆ ವೃಷಭ ರಾಶಿಯನ್ನು ತುಲಾ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಜ್ರ ಧರಿಸಿದ ವ್ಯಕ್ತಿಗೆ ಸಂಪತ್ತಿನ ಕೊರತೆ ಇರುವುದಿಲ್ಲ. ವಜ್ರವು ಅತ್ಯಂತ ಅಮೂಲ್ಯವಾದ ರತ್ನವಾಗಿದೆ. ಇದು ಪಾರದರ್ಶಕವಾಗಿ ಕಾಣುತ್ತದೆ ಮತ್ತು ಹೊಳೆಯುತ್ತಿರುತ್ತದೆ.

ವಜ್ರವನ್ನು ಧರಿಸಲು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾದ ನಿಯಮಗಳಿವೆ. ವಜ್ರವನ್ನು ಧರಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ವಜ್ರ ಮಣಿ ಧರಿಸಿದ ವ್ಯಕ್ತಿಗೆ ಲಾಭದ ಬದಲು ನಷ್ಟವೇ ಕಾಣಿಸುತ್ತದೆ. ಆ ವಜ್ರದಿಂದ ಮಾಡಿದ ಉಂಗುರವನ್ನು ಧರಿಸುವ ಮೊದಲು ಜ್ಯೋತಿಷಿಯನ್ನು ಸಂಪರ್ಕಿಸಿ. ಅವರ ಸಲಹೆಯಂತೆ ವಜ್ರದಿಂದ ಮಾಡಿದ ಉಂಗುರವನ್ನು ಸೂಕ್ತ ಗಾತ್ರದಲ್ಲಿ, ಸರಿಯಾದ ತೂಕದಲ್ಲಿ, ಸರಿಯಾದ ಲೋಹದಲ್ಲಿ, ಶುಭ ಮುಹೂರ್ತ ಮತ್ತು ದಿನವನ್ನು ಗಣನೆಗೆ ತೆಗೆದುಕೊಂಡು ಧರಿಸಬೇಕು.

Also read: ಪ್ರೇಮಿ, ಸಂಗಾತಿ ಅಥವಾ ದಂಪತಿ ನಡುವೆ ಜಗಳ ಶುರುವಾದರೆ… ಶನಿ ಕೃಪೆಗಾಗಿ, ಕುಜ ದೋಷ ನಿವಾರಣೆಗಾಗಿ ಹೀಗೆ ಮಾಡಿ

ಯಾವುದೇ ರತ್ನವನ್ನು ಬಲಗೈಯಲ್ಲಿ ಧರಿಸಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಜ್ರವನ್ನು ಧರಿಸುವುದು ಬಲಗೈಗೆ ತೊಡಿಸಿದರೆ ಅದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಾದರೂ ತಮ್ಮ ಬಲಗೈಯಲ್ಲಿ ಉಂಗುರ ಧರಿಸಿದರೆ, ಅವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸಮಾಜದಲ್ಲಿ ಅವರ ಕೀರ್ತಿ ಹೆಚ್ಚುತ್ತದೆ. ಹಾಗೆಯೇ ಯಾರಾದರೂ ಉಂಗುರ ಬೆರಳಿಗೆ ಧರಿಸಿದರೆ ಅವರ ದಾಂಪತ್ಯ ಜೀವನ ಸುಖಮಯವಾಗಿ ಸಾಗುತ್ತದೆ.

ವಜ್ರವನ್ನು ಯಾವ ದಿನ ಧರಿಸಬೇಕು? ಜ್ಯೋತಿಷ್ಯದ ಪ್ರಕಾರ ವಜ್ರಗಳ ರತ್ನವು ಶುಕ್ರ ಗ್ರಹದ ಸಂಕೇತವಾಗಿದೆ. ಅದೃಷ್ಟವನ್ನು ಪಡೆಯಲು, ಯಾವುದೇ ತಿಂಗಳಲ್ಲಿ ಶುಕ್ಲಪಕ್ಷದ ಶುಕ್ರವಾರದಂದು ರತ್ನವನ್ನು ಧರಿಸಬೇಕು. ನೀವು ಈ ರತ್ನವನ್ನು ಧರಿಸಲು ಬಯಸಿದರೆ, ಜ್ಯೋತಿಷಿಯ ಸಲಹೆಯನ್ನು ಪಡೆದ ನಂತರ ಶುಕ್ರವಾರ ಅಂದರೆ ಆಶ್ವಿಯುಜ ಮಾಸದ ಪ್ರಕಾಶಮಾನವಾದ ಶುಕ್ಲಪಕ್ಷದಲ್ಲಿ ನವರಾತ್ರಿಯಂದು ನಿಗದಿತ ವಿಧಾನದ ಪ್ರಕಾರ ಇದನ್ನು ಧರಿಸಬಹುದು.

ವಜ್ರವನ್ನು ಧರಿಸುವ ಮೊದಲು ಪಠಿಸಬೇಕಾದ ಮಂತ್ರ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವುದೇ ರತ್ನವನ್ನು ಧರಿಸುವ ಮೊದಲು ಮಂತ್ರಗಳನ್ನು ಹೇಳುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ.. ನೀವು ಯಾವುದೇ ರೂಪದಲ್ಲಿ ವಜ್ರವನ್ನು ಧರಿಸಲು ಬಯಸಿದರೆ.. ಶುಕ್ರವಾರದ ದಿನ ಶುಕ್ರ ಗ್ರಹದ ‘ಓಂ ಶುಕ್ರ ಶುಕ್ರಾಯ ನಮಃ’ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನೀವು ಖಂಡಿತವಾಗಿಯೂ ಆಶೀರ್ವಾದವನ್ನು ಪಡೆಯುತ್ತೀರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

(ಗಮನಿಸಿ: ಜನರ ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಮೇಲೆ ತಿಳಿಸಿದ ಅಂಶಗಳನ್ನು ನೀಡಲಾಗಿದೆ)

Published On - 1:13 pm, Fri, 20 October 23

ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ