ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ

ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದನ್ನು ನೋಡಣ.

ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ
ಕುಜ ಹಾಗೂ ಶುಕ್ರರ ಯೋಗದಿಂದ ಯಾರಿಗೆ ಏನಾಗಲಿದೆ?
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 24, 2023 | 10:06 PM

ಕುಜ ಹಾಗೂ ಶುಕ್ರರು ಜಾತಕದಲ್ಲಿ ವಿಶೇಷ ಗ್ರಹಗಳಾಗಿರುತ್ತವೆ. ಈ ಎರಡು ಗ್ರಹಗಳಿಂದ ವಿವಾಹ ಹಾಗೂ ಪ್ರೀತಿಯ ವಿಚಾರವನ್ನು ಹೆಚ್ಚಾಗಿ ಚಿಂತಿಸುತ್ತಾರೆ. ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದುದನ್ನು ನೋಡಣ.

ವೃಶ್ಚಿಕ ರಾಶಿ: ಈ ರಾಶಿಯಲ್ಲಿಯೇ ಗ್ರಹಗಳ ಯೋಗವು ಆಗುವ ಕಾರಣ ಈ ರಾಶಿಯವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಆದರೆ ಯಾರನ್ನೇ ಇಷ್ಟಪಡುವುದಾದರೂ ಸುಮ್ಮನೇ ಕುರುಡಾಗಿ ಇಷ್ಟಪಡುವುದು ಬೇಡ. ಮನಸ್ಸನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದುವರಿಯುವುದು ಸೂಕ್ತ.

ಮಕರ ರಾಶಿ : ಈ ರಾಶಿಯವರ ಪ್ರತಿಭೆಯ ಹಾಗೂ ಸಾಮರ್ಥ್ಯವನ್ನು ಕಂಡು ಪ್ರೀತಿ ಉಂಟಾಗುವುದು. ಸ್ನೇಹವೇ ಪ್ರೀತಿಯಾಗಿ ಬದಲಾಗುವುದು.

ಇದನ್ನೂ ಓದಿ:Astrology: 2024 ರಲ್ಲಿ, ಈ ನಾಲ್ಕು ರಾಶಿಯವರ ಭವಿಷ್ಯ ಬದಲಾಗಲಿದೆ, ಇದು ಆರ್ಥಿಕ ಲಾಭದ ಸಂಕೇತ

ಕುಂಭ ರಾಶಿ : ಈ ರಾಶಿಯವರಿಗೂ ಯಾರದ್ದಾದರೂ ಮೇಲೆ ಪ್ರೀತಿ ಉಂಟಾಗಬಹುದು. ಆದರೆ ಒಂದೇ ಕಡೆಯ ಪ್ರೀತಿಯು ಇರಲಿದೆ. ಇನ್ನೊಂದು ಕಡೆಯಿಂದ ನಿಮಗೆ ಯಾವುದೇ ಸೂಚನೆಯೂ ಸಿಗದು ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಭಾವವಿದೆ ಎನ್ನುವುದನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಲು ಆಗದು. ಆತಂಕವೂ ಒಂದುಕಡೆ ಕೆಲಸವನ್ನು ಮಾಡುತ್ತಲೇ ಇರುತ್ತದೆ.

ವೃಷಭ ರಾಶಿ :ಈ ರಾಶಿಯು ಶುಕ್ರನ ರಾಶಿಯಾದ ಕಾರಣ ವೃಶ್ಚಿಕ ಹಾಗೂ ವೃಷಭ ರಾಶಿಯವರ ಮೇಲೆ ಪರಸ್ಪರ ಪ್ರೀತಿಯು ಉಂಟಾಗಬಹುದು. ಪ್ರೇಮಿಗಳ ವಿವಾಹವು ನಿಶ್ಚಯವಾಗುವುದು.

ಮಿಥುನ ರಾಶಿ : ಈ ರಾಶಿಯವರಿಗೆ ಪ್ರೀತಿಯು ಉಂಟಾದರೂ ಪೂರ್ಣವಾದ ಒಪ್ಪಿಗೆಯು ಇರಲಾರದು. ಬಹಳ ಜಿಜ್ಞಾಸೆಗಳು ಇವರ ಮನಸ್ಸಿನಲ್ಲಿ ಇರುವುದು. ಬಂಧುಗಳ ನಡುವೆಯೇ ಪ್ರೀತಿಯು ಅಂಕುರಿಸಬಹುದು.

– ಲೋಹಿತ ಹೆಬ್ಬಾರ್, ಇಡುವಾಣಿ

Published On - 10:00 pm, Sun, 24 December 23

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us