AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ

ಮಾರ್ಚ್ 15 ರಿಂದ 21 ರವರೆಗಿನ ಈ ವಾರ ಪ್ರೇಮ ಸಂಬಂಧಗಳಲ್ಲಿ ಏರಿಳಿತಗಳನ್ನು ಕಾಣಲಿದೆ. ಹಳೆಯ ಪ್ರೀತಿ ಮತ್ತೆ ಚಿಗುರಬಹುದು ಅಥವಾ ಮರು ವಿವಾಹಕ್ಕೆ ಪ್ರಯತ್ನಗಳು ನಡೆಯಬಹುದು. ಕೆಲವು ಸಂಬಂಧಗಳಲ್ಲಿ ಸಂವಹನದ ಕೊರತೆ, ಮೂರನೇ ವ್ಯಕ್ತಿಯ ಹಸ್ತಕ್ಷೇಪ ಸವಾಲಾಗಬಹುದು. ತಾಳ್ಮೆ, ಹೊಂದಾಣಿಕೆ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಹೆಜ್ಜೆ ಹಾಕಿದರೆ ಯಶಸ್ಸು ಖಚಿತ.

ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Mar 14, 2026 | 2:41 PM

Share

ಮಾರ್ಚ್ 15ರಿಂದ ಮಾರ್ಚ್ 21ರವರೆಗೆ ಪ್ರೇಮದಲ್ಲಿ ಭಗ್ನತೆ, ಹಳೆಯ ಪ್ರೇಮದ ಹೊಸ ಹುಟ್ಟು ಕಾಣಿಸುವುದು. ಮರು ವಿವಾಹಕ್ಕೆ ಪ್ರಯತ್ನ ಸಾಗಲಿದೆ. ಪ್ರೇಮಕ್ಕೆ ಆಕರ್ಷಣೆಯ ಲೇಪವನ್ನು ಹಚ್ಚುವಿರಿ. ಎಲ್ಲವೂ ಕ್ಷಣಿಕವೆಂದು ಅರಿವಾದಾಗ ಕಾಲ ಕಳೆಯುತ್ತದೆ. ಹೆಜ್ಜೆ ಇಟ್ಟು ದೃಷ್ಟಿ ಹರಿಸುವ ಬದಲು, ದೃಷ್ಟಿ ಇಟ್ಟು ಹೆಜ್ಜೆ ಹಾಕಿ.

ಮೇಷ

ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ವಾಗ್ವಾದಗಳಾಗಬಹುದು, ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಮನೆಯವರಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸುಸಮಯವಿದು.

ವೃಷಭ

ಹಳೆಯ ಪ್ರೇಮ ನೆನಪಾಗಿ ಮನಸ್ಸು ಸ್ವಲ್ಪ ಚಂಚಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಗೌರವ ಹೆಚ್ಚಲಿದೆ. ಹೊಸ ಸಂಬಂಧಕ್ಕೆ ಕೈಹಾಕುವ ಮೊದಲು ಯೋಚಿಸಿ, ಪ್ರೇಮಭಂಗದ ಭೀತಿ ಇರುವವರು ಮೌನವಾಗಿರುವುದು ಒಳಿತು.

ಮಿಥುನ

ಸಂವಹನ ಕೊರತೆಯಿಂದ ದೂರವಾಗಿದ್ದ ಪ್ರೇಮಿಗಳು ಈ ವಾರ ಮತ್ತೆ ಒಂದಾಗುವರು. ಸಂಗಾತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೀತಿ ಬಲಪಡಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿ ಬರಲಿವೆ.

ಕಟಕ

ಕುಟುಂಬದಲ್ಲಿ ವಿವಾಹದ ಮಾತುಕತೆಗಳು ಶುಭ ಫಲ ನೀಡಲಿವೆ. ಪ್ರೇಮ ಜೀವನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಮನಸ್ತಾಪ ಉಂಟಾಗಬಹುದು. ಸಂಗಾತಿಯ ಭಾವನೆಗಳಿಗೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.

ಸಿಂಹ

ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸಂಗಾತಿಯ ಮನ ಗೆಲ್ಲುವಿರಿ. ಪ್ರೇಮ ನಿವೇದನೆಗೆ ಇದು ಅತ್ಯಂತ ಶುಭ ವಾರ. ವಿವಾಹ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದ್ದು, ದಂಪತಿಗಳ ನಡುವೆ ಸಾಮರಸ್ಯ ವೃದ್ಧಿಯಾಗಲಿದೆ.

ಕನ್ಯಾ

ಕೆಲಸದ ಒತ್ತಡದಿಂದ ಸಂಗಾತಿಯಿಂದ ದೂರ ಉಳಿಯುವ ಸಂದರ್ಭ ಬರಬಹುದು. ಅನಗತ್ಯ ಸಂಶಯಗಳು ಪ್ರೇಮಭಂಗಕ್ಕೆ ದಾರಿಯಾಗದಂತೆ ಎಚ್ಚರವಹಿಸಿ. ವಿವಾಹ ಪ್ರಸ್ತಾವನೆಗಳು ಅಂತಿಮವಾಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು.

ತುಲಾ

ಸಂಗಾತಿಯೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ಹೊಸದಾಗಿ ವಿವಾಹವಾದವರಿಗೆ ಈ ವಾರ ಅತ್ಯಂತ ಮಧುರವಾದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ.

ವೃಶ್ಚಿಕ

ನಿಮ್ಮ ಹಠಮಾರಿತನ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು, ಹೊಂದಾಣಿಕೆ ಮುಖ್ಯ. ಪ್ರೇಮ ವೈಫಲ್ಯ ಅನುಭವಿಸಿದವರಿಗೆ ಹಳೆಯ ನೋವಿನಿಂದ ಹೊರಬರಲು ಮಿತ್ರರ ಸಹಾಯ ಸಿಗಲಿದೆ. ಮದುವೆಯ ಮಾತುಕತೆಗಳಲ್ಲಿ ವಿಳಂಬ ಸಾಧ್ಯತೆ.

ಧನು

ಪ್ರೇಮ ಜೀವನದಲ್ಲಿ ನಂಬಿಕೆ ಮತ್ತು ಬದ್ಧತೆ ಹೆಚ್ಚಾಗಲಿದೆ. ಮನೆಯ ಹಿರಿಯರ ಸಮ್ಮತಿಯೊಂದಿಗೆ ವಿವಾಹ ನಿಶ್ಚಿತವಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

ಮಕರ

ವೃತ್ತಿಜೀವನದ ಬಿಡುವಿಲ್ಲದ ವೇಳಾಪಟ್ಟಿಯಿಂದ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗಬಹುದು. ಇದು ಸಂಗಾತಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಪ್ರೇಮಿಗಳು ಪರಸ್ಪರ ಸಹಕರಿಸುವುದರಿಂದ ಸಂಬಂಧ ಗಟ್ಟಿಯಾಗಲಿದೆ.

ಕುಂಭ

ಹೊಸಬರ ಪರಿಚಯ ಗಾಢವಾದ ಪ್ರೇಮವಾಗಿ ಬದಲಾಗುವ ಲಕ್ಷಣಗಳಿವೆ. ವಿಚ್ಛೇದನ ಅಥವಾ ಪ್ರೇಮಭಂಗ ಅನುಭವಿಸಿದವರಿಗೆ ಹೊಸ ಜೀವನ ಆರಂಭಿಸಲು ಇದು ಸಕಾಲ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದ್ದು, ಸಂತೋಷದ ವಾತಾವರಣವಿರುತ್ತದೆ.

ಮೀನ

ಪ್ರೇಮ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಭಾವನೆಗಳ ಮೇಲೆ ಹಿಡಿತವಿರಲಿ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಶುಭ ಕಾರ್ಯಗಳು ನೆರವೇರಲಿವೆ. ಸಂಗಾತಿಯ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.

ಲೋಹಿತ ಹೆಬ್ಬಾರ್

Follow Us
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್
ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್