
ನಿಮ್ಮ ಜನ್ಮಸಂಖ್ಯೆಗೆ (Numerology Prediction) ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 5ರಿಂದ 11ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ಕೆಲಸ ಮಾಡಿದ್ದು ಸಾರ್ಥಕ ಆಯಿತು ಎಂಬ ಭಾವ ನಿಮ್ಮಲ್ಲಿ ಮೂಡಲಿದೆ. ನಿಮ್ಮ ಸಲುವಾಗಿ ಅಥವಾ ನೀವು ಶಿಫಾರಸು ಮಾಡಿದ್ದರಿಂದ ಮತ್ತೊಬ್ಬರಿಗೆ ಕೆಲಸ ಅಥವಾ ಅವಕಾಶ ಅಥವಾ ಆರ್ಡರ್ ದೊರೆಯುವ ಮೂಲಕ ಅನುಕೂಲ ಒದಗಲಿದ್ದು, ಈ ಬೆಳವಣಿಗೆಯಿಂದ ಮನಸ್ಸಿಗೆ ತೃಪ್ತಿ ಆಗಲಿದೆ. ನಿಮ್ಮದೇ ಕೆಲಸಗಳು ಇತ್ತೀಚೆಗೆ ನಿಧಾನ ಆಗುತ್ತಿದೆ, ಒಂದು ಕೆಲಸಕ್ಕೆ ನಾಲ್ಕಾರು ಬಾರಿ ಓಡಾಡುವ ಹಾಗೆ ಆಗಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಅದರಿಂದ ಆಚೆ ಬರುವ ರೀತಿಯಲ್ಲಿ ವೇಗ ಪಡೆಯುತ್ತವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅಂಥವರು ಸಹಾಯಕ್ಕೆ ಬಂದು, ನಿಮಗೆ ಸಮಾಧಾನ ದೊರೆಯಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರ ಪೈಕಿ ಕೆಲವರಿಗೆ ಗೌರವ- ಸನ್ಮಾನ ದೊರೆಯುವ ಯೋಗ ಇದೆ. ಕೆಲವು ವ್ಯಕ್ತಿಗಳಿಂದ ಉದ್ದೇಶಪೂರ್ವಕವಾಗಿ ದೂರ ಇರಲು ನಿರ್ಧಾರ ಮಾಡಲಿದ್ದೀರಿ. ಕೃಷಿಕರಿಗೆ ಒಂದು ಬಗೆಯ ಗೊಂದಲ ಕಾಡಲಿದೆ. ನೀವು ಇಲ್ಲಿಯ ತನಕ ಪಾಲಿಸುತ್ತಾ ಬಂದಿದ್ದ ತತ್ವ, ಸಿದ್ಧಾಂತ ಅಥವಾ ನಂಬಿಕೆಗೆ ವಿರುದ್ಧವಾಗಿ ನಡೆಯಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಕುಟುಂಬ ಸದಸ್ಯರಿಂದ ಕೂಡ ನಿಮಗೆ ಒತ್ತಡ ಹೆಚ್ಚುತ್ತಾ ಹೋಗುವುದರಿಂದ ಏನು ಮಾಡಬೇಕು ಎಂಬ ಸ್ಪಷ್ಟತೆ ದೊರೆಯದೆ ಮಾನಸಿಕವಾಗಿ ನೆಮ್ಮದಿ ಇಲ್ಲದಂತೆ ಆಗಬಹುದು. ನಿಮ್ಮಲ್ಲಿ ಕೆಲವರು ಆಸ್ತಿಗೆ ಸಂಬಂಧಿಸಿದ ಉಯಿಲು ಮಾಡಿಸಬೇಕು ಎಂಬ ತೀರ್ಮಾನ ಮಾಡಲಿದ್ದೀರಿ. ಯಾವುದೇ ವಿಚಾರದಲ್ಲಾದರೂ ಸರಿ, ತಕ್ಷಣದ ಸನ್ನಿವೇಶ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಆಲೋಚಿಸದೆ ಸಮಾಧಾನವಾಗಿ ಆಲೋಚಿಸಿ, ಆ ನಂತರ ತೀರ್ಮಾನ ಕೈಗೊಳ್ಳುವುದು ಒಳ್ಳೆಯದು. ವೃತ್ತಿನಿರತರಿಗೆ ಉತ್ಸಾಹ ಹೆಚ್ಚುವ ಸಮಯ ಇದಾಗಿರುತ್ತದೆ. ನೀವು ಈಗಾಗಲೇ ಕೆಲಸ ಮಾಡಿಯಾಗಿದೆ, ಅದರಿಂದ ನಿಮಗೆ ಬರಬೇಕಾದ ಹಣ ಹಾಗೇ ಬಾಕಿ ಉಳಿದಿದೆ ಎಂದಾದಲ್ಲಿ ಈ ವಾರ ನಿಮ್ಮ ಕೈ ಸೇರುವಂಥ ಅವಕಾಶ ಇದೆ. ನಿಮ್ಮ ಜೊತೆಗೆ ದೀರ್ಘ ಕಾಲದಿಂದ ಕೆಲಸ ಮಾಡುತ್ತಾ ಬಂದಿದ್ದ ವ್ಯಕ್ತಿಯೊಬ್ಬರು ಬೇರೆ ಕಡೆ ಕೆಲಸ ಸಿಕ್ಕಿದೆ ಎಂಬ ಕಾರಣಕ್ಕೆ ಬಿಟ್ಟು ಹೋಗಬಹುದು ಅಥವಾ ತಾವೇ ಸ್ವಂತವಾಗಿ ವೃತ್ತಿ ಆರಂಭಿಸುವ ನಿರ್ಧಾರ ಮಾಡಬಹುದು. ವಿದ್ಯಾರ್ಥಿಗಳಿಗೆ ದೇಹಾಲಸ್ಯ ಇರುತ್ತದೆ. ಯಾವುದರಲ್ಲೂ ಮನಸಾರೆ ತೊಡಗಿಕೊಳ್ಳುವುದು ಸಾಧ್ಯವಾಗದೆ ಚಿಂತೆಗೆ ಕಾರಣ ಆಗಬಹುದು. ನಿಮ್ಮಲ್ಲಿ ಕೆಲವರು ಮನಶ್ಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ಮಾಡಿಸಿಕೊಳ್ಳುವ ಬಗ್ಗೆ ಆಲೋಚಿಸುವ ಸಾಧ್ಯತೆ ಇದೆ. ಮಹಿಳೆಯರು ಹಣಕಾಸಿನ ವಿಚಾರಕ್ಕೆ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ನಿಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕೆಲವರಿಂದ ಅವಮಾನ- ಮುಜುಗರಕ್ಕೆ ಒಳಗಾಗುವಂತೆ ಆಗುತ್ತದೆ. ಕುಟುಂಬ ಸದಸ್ಯರ ಜೊತೆಗೆ ಪಾರದರ್ಶಕವಾಗಿ ನಡೆದುಕೊಳ್ಳಿ. ಯಾವುದೇ ವಿಚಾರವನ್ನು ಮುಚ್ಚಿಡುವುದಕ್ಕೆ ಪ್ರಯತ್ನಿಸಬೇಡಿ. ಇದರಿಂದ ತೊಂದರೆಗೆ ಸಿಲುಕಿಕೊಳ್ತೀರಿ.
ನಿರ್ದಿಷ್ಟ ಗಡುವು ಎಂದು ಕೇಳಿ, ಹಣವನ್ನು ಸಾಲ ಪಡೆದಾಗಿದೆ ಅಂತಾದಲ್ಲಿ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಏನು ಪ್ರಯತ್ನ ಮಾಡುತ್ತಿದ್ದೀರಿ ಎಂಬುದನ್ನು ಸಾಬೀತು ಮಾಡಲೇ ಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮಲ್ಲಿ ಕೆಲವರು ಅದಕ್ಕಾಗಿ ಚಿನ್ನ, ಬೆಳ್ಳಿಯನ್ನು ಮಾರಾಟ ಮಾಡುವುದಕ್ಕೆ ಸಹ ಮುಂದಾಗಲಿದ್ದೀರಿ. ಇನ್ನು ನೀವು ಕೆಲಸ ಮಾಡಿಯಾಗಿದೆ, ನಿಮಗೆ ಬರಬೇಕಾದ ಹಣವು ಇದೆ ಎನ್ನುವಂಥದ್ದು ಸಹ ಆಗ ಈಗ ಎಂದು ಎಳೆದುಕೊಂಡು ಹೋಗುವುದರಿಂದ ಚಿಂತೆ ಪಡುವಂತೆ ಆಗಲಿದೆ. ಇನ್ನು ನಿಮ್ಮಲ್ಲಿ ಯಾರು ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತೀರಿ ಅಂಥವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಕಿರಿಕಿರಿ ಆಗುತ್ತಿದ್ದ ಕೆಲ ವಿಚಾರಗಳು ಸರಿ ದಾರಿಗೆ ಬರಲಿವೆ. ನಿಮ್ಮ ಮಾತಿಗೆ ಮಾನ್ಯತೆ- ಮನ್ನಣೆ ದೊರೆಯಲಿದ್ದು, ಇದರಿಂದಾಗಿ ಸಂತೋಷ ಆಗಲಿದೆ. ಕೃಷಿಕರಿಗೆ ಕೈಗೆ ಬಂದಂತೆಯೇ ಕಂಡುಬಂದ ಕೆಲವು ಅವಕಾಶಗಳು ಹಾಗೇ ಜಾರಿಹೋದ ಅನುಭವ ಆಗಲಿದೆ. ಕೆಲವು ಕೆಲಸಗಳು ಪೂರ್ಣಗೊಳ್ಳುವ ತನಕ ಯಾರ ಬಳಿಯೂ ಹೇಳಲಿಕ್ಕೆ ಹೋಗಬೇಡಿ. ಮತ್ತು ಅದರ ಸಂಭ್ರಮಾಚರಣೆ ಕೂಡ ಮಾಡುವುದಕ್ಕೆ ಹೋಗಬೇಡಿ. ನಿಮಗಾಗಿಯೇ ಪರೀಕ್ಷೆಗಳು ಹುಡುಕಿಕೊಂಡು ಬರ್ತಾವೆ ಅನ್ನೋ ಭಾವನೆ ನಿಮಗೆ ಬರಲಿದೆ. ವೃಥಾ ಅಲೆದಾಟ ಆಗುತ್ತದೆ. ಯಾವುದೇ ಕೆಲಸದ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುತ್ತೀರಿ ಅಂತಾದಲ್ಲಿ ಸಂಬಂಧಪಟ್ಟ ವ್ಯಕ್ತಿ ಸಿಗುತ್ತಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರಷ್ಟೇ ಹೊರಡಿ. ವೃತ್ತಿನಿರತರಿಗೆ ಇಷ್ಟು ಸಮಯ ಚಿಂತೆಯಾಗಿ ಕಾಡುತ್ತಿದ್ದ ಕೆಲವು ವಿಷಯಗಳು ದೂರವಾಗುವ ಯೋಗ ಇದೆ. ಪ್ರತಿಷ್ಠಿತ ಸಂಸ್ಥೆಗಳಿಂದ ನಿಮ್ಮ ಸೇವೆಯು ಬೇಕು ಎಂಬ ಪ್ರಸ್ತಾವ ಬರುವಂಥ ಯೋಗ ಇದೆ. ಯಾವ ವಿಚಾರದಲ್ಲಿ ನಿಮಗೆ ಹಿಂಜರಿಕೆ ಉಳಿದು ಹೋಗಿತ್ತೋ ಅದನ್ನು ಮೀರಲಿದ್ದೀರಿ. ಸ್ವಂತಕ್ಕಾಗಿ ಬಳಸಲು ತೆಗೆದುಕೊಂಡಿದ್ದ ವಾಹನವನ್ನು ಇತರರಿಗೆ ನೀಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಕೈ ತಪ್ಪಿಹೋಯಿತು ಅಂದುಕೊಂಡಿದ್ದ ಕೆಲವು ಅವಕಾಶಗಳು ಮತ್ತೆ ಹುಡುಕಿಕೊಂಡು ಬರಲಿವೆ. ಯಾರಿಗೆ ಪಿತ್ಥ- ಕಫದಂಥ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಾ ಇರುತ್ತದೆಯೋ ಅಂಥವರಿಗೆ ಅದರಿಂದ ಚೇತರಿಸಿಕೊಳ್ಳುವುದಕ್ಕೆ ಸೂಕ್ತ ವೈದ್ಯೋಪಚಾರ- ಔಷಧೋಪಚಾರಗಳು ದೊರೆಯಲಿವೆ. ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ಆ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಮಹಿಳೆಯರು ಒಂಟಿತನವನ್ನು ಅನುಭವಿಸುವಂತೆ ಆಗುತ್ತದೆ. ನಿಮ್ಮಲ್ಲಿ ಕೆಲವರು ನೇರವಾಗಿ, ಯಾವುದೇ ಮುಲಾಜು ನೋಡದೆ ಆಡಿದ ಮಾತುಗಳಿಂದ ಇಷ್ಟು ಸಮಯ ನಿಮಗೆ ಆಪ್ತರಾದವರು ದೂರವಾಗುವ ಸಾಧ್ಯತೆಗಳಿವೆ. ಕೆಲವು ಅನಿರೀಕ್ಷಿತ ಬೆಳವಣಿಗೆಗಳಿಗೆ ಮಾನಸಿಕವಾಗಿ ಸಿದ್ಧವಾಗಿರುವುದು ಒಳ್ಳೆಯದು.
ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಿದ್ದೀರಿ. ದೈಹಿಕ ಅಸ್ವಾಸ್ಥ್ಯ ನಿಮಗೆ ಆತಂಕ ತರಬಹುದು. ಮುಖ್ಯವಾಗಿ ನಿಮ್ಮಲ್ಲಿ ಯಾರಿಗೆ ಆಸ್ತಮಾ, ಕಫದಂಥ ಸಮಸ್ಯೆ ಇದೆಯೋ ಅಂಥವರು ಬಹಳ ಎಚ್ಚರಿಕೆಯಿಂದ ಇರಬೇಕು. ತಂದೆ ಅಥವಾ ತಾಯಿಗೆ ಬಹಳ ಸಮಯದಿಂದ ಆಗುತ್ತಿರುವ ಅನಾರೋಗ್ಯ ಸಮಸ್ಯೆಗೆ ಆಪರೇಷನ್ ಮಾಡಿಸಬೇಕಾಗುತ್ತದೆ ಎಂದು ವೈದ್ಯರು ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಮೇಲಿಂದ ಮೇಲೆ ನಿಮಗೆ ಹಣಕಾಸಿನ ಮುಗ್ಗಟ್ಟು ಕಾಣಿಸಿಕೊಳ್ಳುತ್ತಿದ್ದಲ್ಲಿ ಸರಿಯಾದ ಬಜೆಟ್ ರೂಪಿಸುವುದಕ್ಕೆ ಒತ್ತು ನೀಡಿ. ತೀರಾ ಅಗತ್ಯ ಬಂದಾಗ ನೋಡಿಕೊಂಡರಾಯಿತು ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ಒಂದು ವೇಳೆ ಮನೆ ನಿರ್ಮಾಣವನ್ನು ಮಾಡುತ್ತಿದ್ದೀರಿ ಅಂತಾದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಕೆಲಸ- ಕಾರ್ಯಗಳು ನಿಲ್ಲುವುದು, ವಿಳಂಬವಾಗುವುದು ಮೊದಲಾದ ತಡೆಗಳು ಕಾಣಿಸಿಕೊಳ್ಳಬಹುದು. ಮನೆಗೆ ಬೇಕಾದ ವಸ್ತುಗಳನ್ನು ಬಳಸುವ ವಿಚಾರಕ್ಕೆ ಅಭಿಪ್ರಾಯ ಭೇದಗಳು ಕಾಣಿಸಿಕೊಂಡು, ಅಂಥದ್ದರಿಂದಲೂ ವಿಳಂಬ ಆಗುವ ಸಾಧ್ಯತೆಗಳಿವೆ. ದೀರ್ಘ ಕಾಲಕ್ಕೆ ಎಂಬ ಉದ್ದೇಶದಿಂದ ಮಾಡಿದ ಹೂಡಿಕೆ, ಉಳಿತಾಯದ ಸ್ವಲ್ಪ ಪ್ರಮಾಣವನ್ನು ತೆಗೆಯಬೇಕು ಎಂಬ ಸನ್ನಿವೇಶಗಳು ಎದುರಾಗುತ್ತವೆ. ಸರ್ಕಾರದಿಂದ ಮಾಡಿಸಬೇಕಾದ ಲೈಸೆನ್ಸ್ ರಿನೀವಲ್, ಕಟ್ಟಬೇಕಾದ ಪರವಾನಗಿ ಅಥವಾ ನೋಂದಣಿ ಶುಲ್ಕದಂಥದ್ದನ್ನು ಡೆಡ್ ಲೈನ್ ಒಳಗಾಗಿ ಪಾವತಿಸಿ ಅಥವಾ ಮಾಡಿಸಿ. ನೀವು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವುದಕ್ಕೆ ಹೋಗದಿರುವುದು ಕ್ಷೇಮ. ಕೃಷಿಕರಿಗೆ ತಾವು ಬೆಳೆದ ಬೆಳೆಗೆ ನಿರೀಕ್ಷಿತ ಪ್ರಮಾಣದ ಆದಾಯ ಬರಲಿದೆ. ಮಕ್ಕಳ ವ್ಯಾಪಾರ ಯೋಜನೆಗಳಿಗೆ ಹಣ ಹೊಂದಿಸಿಕೊಡುವ ಅನಿವಾರ್ಯ ಸೃಷ್ಟಿ ಆಗಲಿದೆ. ಈ ಹಿಂದೆ ನೀಡಿದ ಮಾತನ್ನು ಉಳಿಸಿಕೊಳ್ಳಲೇ ಬೇಕು ಎಂಬ ಕಾರಣಕ್ಕೆ ರಿಸ್ಕ್ ಇರುವಂಥ ನಿರ್ಧಾರ ಮಾಡಬೇಕಾಗುತ್ತದೆ. ಸೋದರಿಯರ ಮನೆ ಕಾರ್ಯಕ್ರಮಗಳಿಗೆ ನಿಮ್ಮಿಂದ ಹಣಕಾಸಿನ ನೆರವು ಕೇಳಿಕೊಂಡು ಬರಬಹುದು. ಮನೆಯಲ್ಲಿ ಸಣ್ಣ- ಪುಟ್ಟ ದುರಸ್ತಿಗಳನ್ನು ಮಾಡಿಸಬೇಕು ಎಂದು ಆಲೋಚನೆ ಮಾಡಲಿದ್ದೀರಿ. ವೃತ್ತಿಪರರಿಗೆ ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಗ್ಯಾಜೆಟ್, ಲ್ಯಾಪ್ ಟಾಪ್ ಅಥವಾ ಬೇರೆ ಯಾವುದೇ ಸಲಕರಣೆಯನ್ನು ಖರೀದಿ ಮಾಡಲಿದ್ದೀರಿ. ಸಣ್ಣದಾದರೂ ಸರಿ ಸ್ವಂತದ್ದೊಂದು ಕಚೇರಿಯನ್ನು ಹೊಂದಿರಬೇಕು ಎಂಬ ಆಲೋಚನೆ ಬಲವಾಗಲಿದೆ. ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ಆಲೋಚನೆಯಿಂದ ಹೊಸ ಸೇವೆಗಳನ್ನು ನೀಡಬೇಕು, ಇದಕ್ಕಾಗಿ ಕೆಲವು ನೇಮಕಾತಿ ಮಾಡಿಕೊಳ್ಳಬೇಕು ಎಂಬ ನಿರ್ಧಾರ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಯಾರಿಗೆ ವಾಹನದ ಅಗತ್ಯ ಇರುತ್ತದೋ ಹಾಗೂ ಈ ಬಗ್ಗೆ ಪೋಷಕರ ಜೊತೆಗೆ ಮಾತನಾಡಿದ್ದೀರಿ, ಹೇಳಿದ್ದೀರಿ ಅಂತಾದಲ್ಲಿ ಅದನ್ನು ಕೊಡಿಸುವುದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಹೆಚ್ಚಿದೆ. ಅಥವಾ ನಿಮ್ಮದೇ ಉಳಿತಾಯದ ಹಣದಲ್ಲಿ ಕೆಲವು ಖರೀದಿಯನ್ನು ಮಾಡಲಿದ್ದೀರಿ. ಮಹಿಳೆಯರು ಸ್ವಂತ ಉದ್ಯಮ ಅಥವಾ ವ್ಯವಹಾರ ಆರಂಭಿಸಬೇಕು ಎಂದುಕೊಳ್ಳುತ್ತಿದ್ದಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆ- ಸಂಪನ್ಮೂಲ ಒಟ್ಟುಹಾಕುವುದು ಸಾಧ್ಯವಾಗಲಿದೆ.
ಅಂದುಕೊಂಡಷ್ಟು ಸಲೀಸಾಗಿ ಎಲ್ಲ ವಿಚಾರಗಳು ಇರುವುದಿಲ್ಲ. ಕುಟುಂಬ ಸದಸ್ಯರ ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರಲಿದೆ. ಇದರ ಜೊತೆಗೆ ಏನನ್ನೂ ಮಾಡಲಾಗದ ಪರಿಸ್ಥಿತಿಯಿಂದಾಗಿ ಮಾನಸಿಕ ಖಿನ್ನತೆ ನಿಮ್ಮನ್ನು ಕಾಡಬಹುದು. ಈ ಹಿಂದಿನ ಯಾವುದೋ ಘಟನೆ ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಕೌಟುಂಬಿಕ ವಿಚಾರಕ್ಕೆ ಹೆಚ್ಚು ಸಮಯ ನೀಡಬೇಕಾಗುತ್ತದೆ. ತಂದೆ- ತಾಯಿಯ ಜೊತೆಗೆ ಅಥವಾ ಕೂಡು ಕುಟುಂಬದಲ್ಲಿ ಇರುವಂಥವರು ಬೇರೆ ಮನೆ ಮಾಡುವಂಥ ಸನ್ನಿವೇಶ ಎದುರಾಗಬಹುದು. ಒಂದೋ ಕುಟುಂಬ ಸದಸ್ಯರೇ ಇಷ್ಟು ಸಮಯದೊಳಗಾಗಿ ಮನೆಯಿಂದ ಹೊರಗೆ ಹೋಗುವಂತೆ ಹೇಳಬಹುದು. ಅಥವಾ ನೀವಾಗಿಯೇ ಇಷ್ಟು ಅವಧಿಯೊಳಗೆ ಮನೆ ಬಿಟ್ಟು ಹೊರಗೆ ಹೋಗುವುದಾಗಿ ತಿಳಿಸುವ ಸಾಧ್ಯತೆಗಳಿವೆ. ಮೊದಮೊದಲಿಗೆ ಅಂತ ನೀವು ಆರಂಭಿಸಿದ ವ್ಯವಹಾರ- ವ್ಯಾಪಾರ ಅಥವಾ ಕೆಲಸಗಳಲ್ಲಿ ಪೂರ್ಣ ಪ್ರಮಾಣದ ವಿಶ್ವಾಸದಿಂದ ಮುಂದುವರಿಯುವುದು ಕಷ್ಟ ಎಂದೆನಿಸುವುದಕ್ಕೆ ಶುರುವಾಗಲಿದೆ. ಯುಪಿಎಸ್ ಸಿ ಅಥವಾ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಲ್ಲಿ ಪ್ರಯತ್ನವನ್ನು ಇನ್ನಷ್ಟು ತೀವ್ರವಾಗಿ ಮಾಡಲಿದ್ದೀರಿ. ಯಾರಿಗೆ ನೀವು ಬಹಳ ನಿಷ್ಠೆ, ಪ್ರಾಮಾಣಿಕತೆಯಿಂದ ನಡೆದುಕೊಂಡು ಬಂದಿರುತ್ತೀರಿ ಅಂಥವರು ತಾವಾಗಿಯೇ ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದೆನಿಸಲಿದೆ. ಸಂಗಾತಿಯ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಒತ್ತಡ ಸೃಷ್ಟಿ ಆಗುತ್ತದೆ. ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿವೆ. ಕೃಷಿಕರಿಗೆ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ, ಗ್ಯಾಸ್ಟ್ರಿಕ್ ನಂಥ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಈಗಾಗಲೇ ಈ ಎಲ್ಲ ಸಮಸ್ಯೆಗಳು ಇವೆ ಎಂದಾದಲ್ಲಿ ಉಲ್ಬಣಿಸಬಹುದು. ಔಷಧೋಪಚಾರಗಳಾಗಲೀ ಅಥವಾ ಫಾಲೋ ಅಪ್ ಚೆಕ್ ಅಪ್ ಗಳನ್ನಾಗಲೀ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಕುಟುಂಬ ಸದಸ್ಯರು ಹೇಳುವಂಥ ಗಂಭೀರ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಿ. ವೃತ್ತಿನಿರತರು ಗಡುವಿನೊಳಗೆ ಕೆಲಸ ಮಾಡುವುದಕ್ಕೆ ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ. ನೀವು ಅಂದುಕೊಂಡಂತೆ ಕೆಲವು ಕೆಲಸಗಳು ಆಯಾ ಸಮಯಕ್ಕೆ ಮುಗಿಸುವುದು ಕಷ್ಟಸಾಧ್ಯ ಎಂಬುದು ಗ್ರಹಿಕೆ ಆಗುತ್ತದೆ. ಸಾಮಾನ್ಯವಾಗಿ ಆಗುವುದಕ್ಕಿಂತ ಹೆಚ್ಚಿನ ಖರ್ಚು ಬರುತ್ತದೆ. ಆದರೆ ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಇಲ್ಲಿಯ ತನಕ ಉಳಿಸಿಕೊಂಡು ಬಂದಂಥ ವಿಶ್ವಾಸಾರ್ಹತೆಯನ್ನು ಹಾಗೇ ಮುಂದುವರಿಸಿಕೊಂಡು ಹೋಗುವುದು ಸವಾಲಾಗಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಕಳೆದುಕೊಳ್ಳುವಂತಾಗುತ್ತದೆ. ಬಾಹ್ಯ ಆಕರ್ಷಣೆಗಳಿಗೆ ಸಿಲುಕಿಕೊಳ್ಳಲಿದ್ದೀರಿ. ಬೇರೆಯವರ ಜೀವನದ ಜೊತೆಗೆ ಹೋಲಿಕೆಯನ್ನು ಮಾಡಿಕೊಳ್ಳಲಿದ್ದೀರಿ. ಈ ಕಾರಣಕ್ಕೆ ಕೆಲವು ಬದಲಾವಣೆಗಳು ಆಗಿ, ಇದರಿಂದಾಗಿ ವ್ಯಾಸಂಗದಲ್ಲಿ ಹಿನ್ನಡೆ ಆಗಬಹುದು. ಹಾಗೂ ನೀವು ಅಂದುಕೊಂಡಂತೆ ಕೆಲವು ಕೆಲಸಗಳು ಆಗುವುದಿಲ್ಲ. ಈ ಬಗ್ಗೆ ಬೇಸರ ಆಗಲಿದೆ. ಮಹಿಳೆಯರು ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಮದುವೆ, ಉದ್ಯೋಗದ ವಿಚಾರವಾಗಿ ಈ ವರೆಗೆ ಚಿಂತೆಗೆ ಈಡಾಗಿದ್ದರೆ ಅದು ನಿವಾರಣೆ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಮಕ್ಕಳು ಉಡುಗೊರೆಯನ್ನು ನೀಡಲಿದ್ದಾರೆ.
ಸ್ವಂತ ಚಿಂತನೆಗೆ ಆದ್ಯತೆ ನೀಡಿ. ನಿಮ್ಮ ಒಳ ಮನಸ್ಸಿಗೆ ಬೇಡ ಅಂತ ಅನಿಸಿದ್ದನ್ನು ಯಾವುದೇ ಕಾರಣಕ್ಕೆ ಮಾಡಲಿಕ್ಕೆ ಹೋಗಬೇಡಿ. ನಿಮ್ಮ ಸುಪ್ತ ಮನಸ್ಸು ಬಹಳ ಜಾಗೃತಾವಸ್ಥೆಯಲ್ಲಿ ಇರುತ್ತದೆ. ಅದರ ಫಲಿತವನ್ನು ಪಡೆದುಕೊಳ್ಳಿ. ಇನ್ನು ನಿಮ್ಮ ಎದುರಿಗೆ ಇರುವಂಥ ವ್ಯಕ್ತಿಯ ಅಗತ್ಯಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಬೇಕಾದಂಥದ್ದನ್ನು ದೊರಕಿಸಿಕೊಡುವ ಸಾಮರ್ಥ್ಯ ಹೆಚ್ಚಾಗಿ ಇರಲಿದೆ. ಆ ಕಾರಣದಿಂದಾಗಿ ಯಾವ ಗ್ರಾಹಕರ ಜತೆಗೆ ಅಥವಾ ವ್ಯಕ್ತಿಗಳ ಜತೆಗೆ ವ್ಯವಹರಿಸುವುದು ಕಷ್ಟ ಎಂದು ನಿಮ್ಮ ಸಹೋದ್ಯೋಗಿಗಳು ಕೈ ಚೆಲ್ಲಿ ಸುಮ್ಮನಾಗಿರುತ್ತಾರೋ ಅಂಥವರ ಜತೆಗೆ ಬಹಳ ಸರಳವಾಗಿ ಹಾಗೂ ಸುಲಭವಾಗಿ ವ್ಯವಹರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ. ಹೊಸ ಬಟ್ಟೆ, ಪ್ಲಾಟಿನಂ ಆಭರಣ- ಅದರಲ್ಲೂ ವಜ್ರದ ಆಭರಣವನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಕೃಷಿಕರಿಗೆ ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಯಾವುದಕ್ಕೆ ಹೌದು ಎನ್ನಬೇಕು ಹಾಗೂ ಯಾವುದಕ್ಕೆ ಇಲ್ಲ ಎನ್ನಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಇರಿಸಿಕೊಳ್ಳಿ. ಇತರರ ಸಾಮರ್ಥ್ಯವನ್ನು ನಂಬಿಕೊಂಡು, ಹೂಂ ಅಂದುಬಿಡಬೇಡಿ. ಯಾವ ವಿಚಾರವಾದರೂ ದುಡ್ಡು- ಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಂಡು, ಮುಂದುವರಿಯಿರಿ. ವೃತ್ತಿನಿರತರಾಗಿದ್ದಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಇರುವಂಥವರು ಅಥವಾ ಈಗಾಗಲೇ ಅದೇ ಕಾರಣಕ್ಕೆ ಹೀಗಳೆದವರಿಗೆ ಸರಿಯಾದ ಉತ್ತರವನ್ನು ಕೆಲಸದ ಮೂಲಕವೇ ನೀಡಲಿದ್ದೀರಿ. ಯಾವುದಾದರೂ ಪ್ರಾಜೆಕ್ಟ್ ಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಕುರಿತಂತೆ ಸೂಚನೆ ನೀಡಲಿದ್ದಾರೆ. ಅದೇ ವೇಳೆ ಅಲ್ಪಾವಧಿಗಾದರೂ ತರಬೇತಿ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಸಹ ಹೇಳಲಿದ್ದಾರೆ. ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ವಿದ್ಯಾರ್ಥಿಗಳು ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ. ಇಷ್ಟು ಸಮಯ ಹವ್ಯಾಸ ಎಂದಿರುವುದು ನಿಮ್ಮ ಪಾಲಿಗೆ ದೊಡ್ಡ ಆದಾಯ ತರುವಂತೆ ಮಾರ್ಪಡುವ ಸಾಧ್ಯತೆಗಳಿವೆ. ಮಹಿಳೆಯರು ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಉದ್ಯೋಗಸ್ಥರಾಗಿದ್ದಲ್ಲಿ ಕೆಲಸದ ಸ್ಥಳದಲ್ಲಿ ಈ ಹಿಂದೆ ನಡೆದಿದ್ದ ಘಟನೆಯೊಂದಕ್ಕೆ ಬೇರೆಯದೇ ವ್ಯಾಖ್ಯಾನ ಸಿಕ್ಕಿ, ನಿಮಗೆ ಮುಜುಗರ ಮಾಡುವುದಕ್ಕೆ ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ ಆತುರಕ್ಕೆ ಬಿದ್ದು, ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಸವಾಲುಗಳು ಎದುರಾಗಲಿವೆ.
ನಿಮ್ಮಿಂದ ಕೆಲವು ವಿಚಾರಗಳು ವಿಳಂಬ ಆಗಲಿದೆ. ನಿಮಗೆ ಬರಬೇಕಾದ ಆದಾಯ, ಈಗಾಗಲೇ ಕೊಟ್ಟಿರುವ ಸಾಲ ಬರುತ್ತಿಲ್ಲ ಎಂದಾದಲ್ಲಿ ಅವು ನಿಮ್ಮ ಕೈ ಸೇರುವ ಅವಕಾಶಗಳು ಹೆಚ್ಚಿವೆ. ಈ ರೀತಿಯ ಬೆಳವಣಿಗೆಯಿಂದಾಗಿ ಆರ್ಥಿಕ ಒತ್ತಡದಲ್ಲಿ ಇರುವವರಿಗೆ ಅದರಿಂದ ಹೊರಬರುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ನೀವು ಯೋಜನೆ ಮಾಡಿಕೊಂಡಂತೆಯೇ ಕೆಲಸ- ಕಾರ್ಯಗಳು ಸಾಗಲಿವೆ. ಒಂದು ವೇಳೆ ಇತರರಿಗೆ ಸಾಲ ನೀಡಿದ್ದು, ಅದನ್ನು ವಸೂಲಿ ಮಾಡುವುದಕ್ಕೆ ಪ್ರಯತ್ನಿಸಿದಲ್ಲಿ ಅದು ಕೂಡ ವಾಪಸ್ ಬರುವಂಥ ಅವಕಾಶಗಳಿವೆ. ಮನೆ ನಿರ್ಮಾಣ ಮಾಡುವುದಕ್ಕೆ ಆಲೋಚಿಸುತ್ತಿರುವವರು ಕೆಲವು ಸಮಯ ಬೇಡ ಅಂದುಕೊಳ್ಳುವ ಸಾಧ್ಯತೆ ಇದೆ. ತಿಂಗಳಾತಿಂಗಳು ಆದಾಯ ಬರುವಂಥ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂಬ ಕಡೆ ಪ್ರಯತ್ನವನ್ನು ಶುರು ಮಾಡುವುದಕ್ಕೆ ನಿಮ್ಮಲ್ಲಿ ಕೆಲವರು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ವಿರೋಧಿಗಳ ಸಾಮರ್ಥ್ಯವನ್ನು ನಿರ್ಲಕ್ಷ್ಯವೋ ಅಥವಾ ಕಡಿಮೆ ಅಂದಾಜು ಮಾಡಬೇಡಿ. ಈ ಹಿಂದಿನ ಯಾವುದೋ ಘಟನೆಗಳ ಆಧಾರದಲ್ಲಿ ಮತ್ತೊಬ್ಬ ವ್ಯಕ್ತಿಯ ನಿಯತ್ತನ್ನು ನಂಬಿಕೊಳ್ಳುವ ಕೆಲಸ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಏಳ್ಗೆ, ಆರ್ಥಿಕ ಸ್ಥಿತಿಯನ್ನು ಕಂಡು, ಕರುಬುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮುಂಚಿನ ಉತ್ಸಾಹದಲ್ಲಿ ಕೆಲಸ- ಕಾರ್ಯ ಮಾಡುವುದು ಬಹಳ ಮುಖ್ಯ. ಶೇಕಡಾ ಎಂಬತ್ತರಷ್ಟು ಕೆಲಸ ಮುಗಿದಿದೆ ಎಂದು ವಿರಮಿಸಿದಿರೋ ಅದು ಅಲ್ಲಿಂದ ಮುಂದಕ್ಕೆ ಹೋಗುವುದಕ್ಕೆ ಬಹಳ ಕಷಗಟ ಆಗಲಿದೆ. ಕೃಷಿಕರು ಇತರರ ಮೇಲೆ ಅವಲಂಬನೆ ಆಗಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಕೆಲವು ಕೆಲಸಗಳನ್ನು ಮಾಡಬೇಕಾಗುವುದರಿಂದ ಅದಕ್ಕಾಗಿ ಇತರರ ಮೇಲೆ ಅವಲಂಬಿಸಬೇಕಾಗುತ್ತದೆ, ಅವರು ಕೇಳಿದಂತೆ ನಡೆದುಕೊಳ್ಳುವುದು ಸಹ ಅಗತ್ಯ ಆಗಿಬಿಡುತ್ತದೆ. ನಿಮ್ಮಲ್ಲಿ ಕೆಲವರಿಗೆ ವ್ಯವಸಾಯ ಅಥವಾ ಕೃಷಿಕರ ಸಹಕಾರ ಸಂಘ- ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸುವ ಪ್ರಸ್ತಾವ ಬರಲಿದ್ದು, ಇದರಲ್ಲಿ ನಿಮಗೂ ಆಸಕ್ತಿ ಮೂಡಿ, ಪ್ರಮುಖ ಎಂದೆನಿಸುವುದಕ್ಕೆ ಶುರು ಆಗುತ್ತದೆ. ವೃತ್ತಿನಿರತರು ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಹೊಸ ಕೆಲಸ- ಕಾರ್ಯಗಳನ್ನು ವಹಿಸಿಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಈ ಹಿಂದೆ ನೀವು ಬೇಡ ಅಂದುಕೊಂಡಿದ್ದ ಕೆಲವು ಕೆಲಸಗಳನ್ನು ಮತ್ತೆ ಶುರು ಮಾಡುವುದಕ್ಕೆ ನೀವಾಗಿಯೇ ಕೇಳುವ ಸಾಧ್ಯತೆ ಕೂಡ ಇದೆ. ಕೆಲವು ಕ್ಲೈಂಟ್ ಗಳಿಂದ ಹೆಚ್ಚಿನ ಸೇವಾ ಶುಲ್ಕ ವಸೂಲಿ ಮಾಡುವ ಬಗ್ಗೆ ಕೂಡ ಯೋಚನೆ ಮೂಡಲಿದೆ. ವಿದ್ಯಾರ್ಥಿಗಳು ಮನಸೋ ಇಚ್ಛೆ ಹಣ ವೆಚ್ಚ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಖರ್ಚಿನ ಮೇಲೆ ಹಿಡಿತ ಇರುವುದು ಬಹಳ ಮುಖ್ಯ. ಅಗತ್ಯ ಇಲ್ಲದ ವಸ್ತುಗಳನ್ನೋ ಅಥವಾ ಈಗಾಗಲೇ ಇರುವ ವಸ್ತುಗಳ ಹೊಸ ವರ್ಷನ್ ಖರೀದಿಸುವುದೋ ಮಾಡುವುದರಿಂದ ವಿಪರೀತ ವೆಚ್ಚ ಆಗಲಿದೆ. ಮನೆಗೆ ಹೊಸದಾಗಿ ಆದ ಸ್ನೇಹಿತರನ್ನು ಕರೆದುಕೊಂಡು ಮುನ್ನ ಬಹಳ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಸುಧಾರಣೆ ಕಾಣಿಸಿಕೊಳ್ಳುತ್ತದೆ. ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಉಳಿತಾಯ ಯೋಜನೆಗಳಿಗಾಗಿ ಹಣವನ್ನು ಮೀಸಲಿಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ.
ಆರಾಮವಾಗಿ ಇದ್ದೀನಲ್ಲಾ ಇನ್ನೂ ಸ್ವಲ್ಪ ಸಮಯ ಹೀಗೇ ಇದ್ದುಬಿಡೋಣ ಅಂದುಕೊಳ್ಳುವುದಕ್ಕೆ ಹೋಗಬೇಡಿ. ಆಮೇಲೆ ಮಾಡಿದರಾಯಿತು, ಇನ್ನೂ ಸಮಯ ಇದೆಯಲ್ಲಾ ಎಂದುಕೊಂಡಿದ್ದು ನಿಮ್ಮ ಪಾಲಿಗೆ ದುಬಾರಿ ಆಗಿ ಪರಿಣಮಿಸಲಿದೆ. ಇಷ್ಟು ದಿನ ಸಮಯವನ್ನು ಹಾಗೇ ಕಳೆದದ್ದರ ಪರಿಣಾಮ ಎದುರಿಸಬೇಕಾಗುತ್ತದೆ. ಹಲವು ಕೆಲಸಗಳನ್ನು ಆತುರವಾಗಿ ಮಾಡಿ ಮುಗಿಸಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಣಕಾಸು, ಉದ್ಯೋಗ, ವೈಯಕ್ತಿಕ ಬದುಕು, ಪ್ರೀತಿ- ಪ್ರೇಮ ಸಂಗತಿಗಳು, ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಒಂದೇ ಬಗೆಯ ಧಾವಂತ ಕಾಣಿಸಿಕೊಂಡು, ತೀರ್ಮಾನ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಆನ್ ಲೈನ್ ಮೂಲಕ ಮಾಡಿದ ವ್ಯವಹಾರದಲ್ಲಿ ಹಣ ಒಂದಕ್ಕೆ ಎರಡು ಬಾರಿಗೆ ಎಂಬಂತೆ ಪಾವತಿಯಾಗಿ, ಅದನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡುವಂತಾಗುತ್ತದೆ. ಈ ವಿಷಯ ನಿಮ್ಮೊಳಗೇ ಇರಲಿ ಎಂದು ರಹಸ್ಯವಾದ ಸಂಗತಿಯನ್ನು ನೀವು ಯಾರ ಬಳಿ ಹೇಳಿರುತ್ತೀರೋ ಅವರೇ ಆ ಬಗ್ಗೆ ಎಲ್ಲರ ಬಳಿಯೂ ಹೇಳಿಕೊಂಡು ಬಂದು, ಅದನ್ನು ಯಾರ ಬಳಿಯೂ ಹೇಳಬಾರದು ಎಂದು ನೀವೇ ಹೇಳಿದ್ದಿರಿ ಅಂತಲೂ ತಿಳಿಸುತ್ತಾರೆ. ಕೃಷಿ ವೃತ್ತಿಯಲ್ಲಿ ಇರುವಂಥವರು ಏನು ಮಾಡಿದರೆ ಸರಿ ಅಥವಾ ಏನು ಮಾಡಿದರೆ ಸರಿಯಲ್ಲ ಎಂಬುದನ್ನು ನಿರ್ಧಾರ ಮಾಡುವ ಸ್ಥಿತಿಯಲ್ಲಿ ಈ ವಾರ ಇರುವುದಿಲ್ಲ. ಇತರರು ನಿಮ್ಮ ಮೇಲೆ ಬಹಳ ಸುಲಭವಾಗಿ ಪ್ರಭಾವ ಬೀರುವಂತಹ ಸಾಧ್ಯತೆಗಳು ಇರುತ್ತವೆ. ಆ ಕಾರಣದಿಂದ ಯಾವುದೇ ಪ್ರಮುಖ ನಿರ್ಧಾರವನ್ನು ಈ ವಾರದ ಮಟ್ಟಿಗೆ ತೆಗೆದುಕೊಳ್ಳದಿರುವುದು ಉತ್ತಮ. ಇನ್ನು ಭವಿಷ್ಯದ ವಿಚಾರದಲ್ಲಿ ನಿಮ್ಮ ಆದ್ಯತೆಗಳೇನು ಎಂಬುದರ ಪಟ್ಟಿ ಒಂದನ್ನು ಮಾಡಿಕೊಳ್ಳಿ. ನಿಮ್ಮ ಆಪ್ತರು ಹಾಗೂ ಹಿತೈಷಿಗಳು ಏನನ್ನಾದರೂ ಹೇಳಿದಲ್ಲಿ ತಾಳ್ಮೆಯಿಂದ ಕೇಳಿಸಿಕೊಳ್ಳಿ, ಅವುಗಳನ್ನು ಅನುಸರಿಸಲೇಬೇಕು ಎಂಬ ಕಡ್ಡಾಯವೇನಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ವೃತ್ತಿನಿರತರಿಗೆ ಯಾವುದೋ ಹಳೇ ವಿಚಾರವೊಂದು ಈ ವಾರ ತಲೆ ನೋವಾಗಿ ಪರಿಣಮಿಸಲಿದೆ. ಅದನ್ನು ಸಾಧ್ಯವಾದಷ್ಟೂ ಮುಂದುವರಿಸಿಕೊಂಡು ಹೋಗದಂತೆ ನೋಡಿಕೊಳ್ಳಿ. ನನ್ನದೇ ಸರಿ ಎಂಬ ಹಟ ಯಾವುದೇ ಕಾರಣಕ್ಕೂ ಬೇಡ. ಕಾರು ಪಾರ್ಕಿಂಗ್ ಅಥವಾ ಮನೆಯಲ್ಲಿನ ಸಾಕುಪ್ರಾಣಿಗಳ ವಿಚಾರದಲ್ಲಿ ಅಕ್ಕಪಕ್ಕದವರೊಂದಿಗೆ ಜಗಳ ಏರ್ಪಡುವ ಸಾಧ್ಯತೆಗಳಿವೆ. ಕೂತು, ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ವಸ್ತುಗಳನ್ನು ಕೊಳ್ಳುವ ವಿಚಾರಕ್ಕೆ ಇತರರ ಮೇಲೆ ಪ್ರತಿಷ್ಠೆಗೆ ಬಿದ್ದು ಖರ್ಚು ಮಾಡುವುದಕ್ಕೆ ಹೋಗಬೇಡಿ. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದಲ್ಲಿ ಖರ್ಚಿನ ಮೇಲೆ ನಿಗಾ ಇರಲಿ. ಮೆಟ್ರೋ ರೈಲು ಅಥವಾ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಂಥವರು ಮೊಬೈಲ್ ಸೇರಿದಂತೆ ನಿಮ್ಮ ಗ್ಯಾಜೆಟ್, ಲ್ಯಾಪ್ ಟಾಪ್ ಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಸ್ನೇಹಿತರು, ಸಂಬಂಧಿಕರು ಮನೆಗೆ ಬರುವುದರಿಂದ ಸಂತಸದ ವಾತಾವರಣ ಇರಲಿದೆ. ಬಹಳ ಇಷ್ಟಪಟ್ಟು ಮನೆಗೆ ತಂದಿದ್ದ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ಉಪಕರಣಗಳನ್ನು ಹಿಂತಿರುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಮಹಿಳೆಯರು ವಿವಾಹ ವಯಸ್ಕರಾಗಿದ್ದು, ಸೂಕ್ತ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಮನಸ್ಸಿಗೆ ಖುಷಿ ನೀಡುವಂತಹ ಸುದ್ದಿ ಸಿಗಲಿದೆ.
ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಸೋದರರ ಮಧ್ಯೆ ಬಾಂಧವ್ಯ ವೃದ್ಧಿ ಆಗುವ ಸಮಯ ಇದಾಗಿರುತ್ತದೆ. ಇನ್ನು ಸಂಬಂಧಿಗಳು- ಸ್ನೇಹಿತರಿಗೆ ನೀವಾಗಿಯೇ ಸಹಾಯ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಅದರಲ್ಲಿ ಸ್ನೇಹ- ಪ್ರೀತಿ- ಸಂಬಂಧ ಹೀಗೆ ಎಲ್ಲಕ್ಕೂ ತಳುಕು ಹಾಕಿಕೊಂಡಂಥ ಮುಖ್ಯವಾದ ವಿಚಾರ ಕಾಡಲು ಶುರುವಾಗುತ್ತದೆ. ಭಾವನಾತ್ಮಕವಾಗಿ ನಿಮಗೆ ಬಹಳ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಇದು ಬಹಳ ಮುಖ್ಯವಾದ ವಾರವಾಗಿರುತ್ತದೆ. ನಿಮ್ಮಲ್ಲಿ ಕೆಲವರಿಗೆ ಈ ವಿಚಾರವಾಗಿ ಮನೆಯಲ್ಲಿ ಮಾತುಕತೆಯಾಗಿ, ನಿಮ್ಮ ಮದುವೆಗೆ ಒಪ್ಪಿಗೆ ಸಿಕ್ಕಿಯೂ ಬಿಡಬಹುದು. ನಿಮ್ಮ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳಿ. ಇತರರ ವ್ಯವಹಾರಕ್ಕೆ ಮಧ್ಯವರ್ತಿಗಳಿಗೆ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರತಿಫಲ ದೊರೆಯಲಿದೆ. ನಿಮ್ಮಲ್ಲಿ ಕೆಲವರಿಗೆ ಚಿನ್ನದ ಒಡವೆಯೋ ಅಥವಾ ಗ್ಯಾಜೆಟ್ ಗಳೋ ಉಡುಗೊರೆಯಾಗಿ ಪಡೆದುಕೊಳ್ಳುವಂಥ ಯೋಗ ಸಹ ಇದೆ. ಸಾಧ್ಯವಾದಷ್ಟೂ ಆಡುವ ಮಾತಿನ ಮೇಲೆ ಒಂದಿಷ್ಟು ನಿಗಾ ಇರಿಸಿಕೊಳ್ಳಿ. ಕೃಷಿಕರಿಗೆ ಈ ವಾರ ಏನನ್ನೋ ಸಾಧಿಸಿದಂಥ ಮಾನಸಿಕ ಸಮಾಧಾನ ಇರುತ್ತದೆ. ವೈಯಕ್ತಿಕವಾಗಿ ಬಹಳ ಮುಖ್ಯವಾಗಿದ್ದ ಜವಾಬ್ದಾರಿಯೊಂದು ನೀವಂದುಕೊಂಡ ರೀತಿಯಲ್ಲೇ ಪೂರ್ತಿ ಆಗುವಂಥ ಯೋಗ ಇದೆ. ಈ ಹಿಂದೆ ಮಾತುಕತೆ ಆಡಿ, ಅರ್ಧದಲ್ಲೇ ನಿಂತು ಹೋಗಿದ್ದ ಜಮೀನು ಖರೀದಿ ಅಥವಾ ಭೋಗ್ಯಕ್ಕೆ ಪಡೆಯುವಂಥ ಮಾತುಕತೆಗಳು ಮತ್ತೆ ಮುಂದುವರಿಯುವ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಆದರೆ ಎಲ್ಲ ಸಲೀಸಾಗಿ ಆಗುತ್ತದೆ, ಮನೆಯ ಸದಸ್ಯರ ಎಲ್ಲರ ಒಮ್ಮತದ ತೀರ್ಮಾನದಿಂದ ಆಗಬಹುದು ಎಂದು ನೀವಂದುಕೊಂಡಿದ್ದ ಕೆಲ ವಿಚಾರಗಳ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತ ಆಗಬಹುದು. ವೃತ್ತಿನಿರತರು ಸುಮ್ಮನೆ ಒಂದು ಪ್ರಯತ್ನ ಅನ್ನೋ ಹಾಗೆ ಭೇಟಿ ಮಾಡುವ ವ್ಯಕ್ತಿಯಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಸಂವಹನ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಇನ್ನೊಬ್ಬರ ಮೇಲೆ ಪ್ರಭಾವ ಬೀರಿ, ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಳ್ಳಲಿದ್ದೀರಿ. ಆಪ್ತರಿಗೆ ಅಥವಾ ಹತ್ತಿರದ ಬಂದುವೊಬ್ಬರಿಗೆ ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಆದರೆ ನೆನಪಿಟ್ಟುಕೊಳ್ಳಿ, ಒಮ್ಮೆ ಹೇಳಿ ಸುಮ್ಮನಾಗಬೇಕಾದ ವಿಚಾರಗಳಿದ್ದಲ್ಲಿ ಪದೇಪದೇ ಹೇಳುವುದಕ್ಕೆ ಹೋಗದಿರಿ. ವಿದ್ಯಾರ್ಥಿಗಳಿಗೆ ಓದು, ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿ, ಭವಿಷ್ಯ ಏನು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ಯಾವ ಶಿಕ್ಷಣ ಸಂಸ್ಥೆಗೆ ಸೇರಬೇಕು ಹೀಗೆ ಹತ್ತಾರು ವಿಚಾರಗಳು ತಲೆಯಲ್ಲಿ ಸುಳಿದಾಡುವುದಕ್ಕೆ ಆರಂಭವಾಗುತ್ತದೆ. ಅದೆಷ್ಟೋ ಸಮಯದ ಹಿಂದೆ ನಡೆದಂಥ ಘಟನೆಗಳೋ ಸನ್ನಿವೇಶಗಳೋ ಇಂಥದ್ದರ ಕಾರಣಕ್ಕೆ ಜನರ ಗುಣವನ್ನು ಅಳೆಯುವುದಕ್ಕೆ ಆರಂಭಿಸುತ್ತೀರಿ. ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆಯಲ್ಲಿ ಬದಲಾವಣೆಗಳು ಆಗಲಿವೆ. ಮಹಿಳೆಯರಿಗೆ ನಿಮ್ಮ ಮಾತಿನಲ್ಲಿ ಒಂದು ಬಗೆಯ ಆಕರ್ಷಣೆ ಇರುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುವಂಥ ಸಾಧ್ಯತೆ ಇದೆ. ಅದರಲ್ಲೂ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗಿ ಆದಾಗ ನಿಮ್ಮನ್ನು ನೋಡಿದವರು ಮದುವೆ ಪ್ರಸ್ತಾವ ಇಡಬಹುದು.
ಇದನ್ನೂ ಓದಿ: ಅ.07ರಿಂದ 13ರವರೆಗೆ ಈ ರಾಶಿಯವರಿಗೆ ಬರಲಿದೆ ಸಾಲು ಸಾಲು ಸಂಕಷ್ಟ
ಒಂಟಿತನ ನಿಮ್ಮನ್ನು ಕಾಡಬಹುದು. ಕೆಲವು ಬಾರಿ ಯಾವುದಕ್ಕೂ ಪ್ರತಿಕ್ರಿಯಿಸಬಾರದು ಎಂಬ ಆಲೋಚನೆ ನಿಮ್ಮಲ್ಲಿಯೇ ಇದ್ದರೂ ಅದನ್ನು ಮೀರಿ ನಡೆದುಕೊಳ್ಳುವಂತೆ ಆಗುತ್ತದೆ. ಒಂದು ವೇಳೆ ನೆಮ್ಮದಿಯಾಗಿ ಇರಬೇಕು ಎಂಬುದು ನಿಮ್ಮ ಆಯ್ಕೆಯಾಗಿದ್ದಲ್ಲಿ ಒತ್ತಡದಲ್ಲಿ ಅಥವಾ ಎದುರಿಗೆ ಇರುವವರ ಮಾತಿಗೆ ಎದುರಾಡಬಾರದು ಎಂಬ ಕಾರಣದಿಂದ ನಿಮ್ಮ ಒಳ ಮನಸ್ಸಿಗೆ ಬೇಡ ಎಂದೆನಿಸಿದ ಕೆಲಸ- ಕಾರ್ಯಗಳನ್ನು ಈ ವಾರ ಯಾವುದೇ ಕಾರಣಕ್ಕೂ ಮಾಡಬೇಡಿ. ಒಂದು ವೇಳೆ ಅದರಿಂದ ಹೆಚ್ಚಿನ ಹಣ ಸಿಗುತ್ತದೆ, ನಿಮಗೆ ಭವಿಷ್ಯದಲ್ಲಿ ಅನುಕೂಲ ಆಗುತ್ತದೆ ಹೀಗೆ ಏನೇ ಅನಿಸಿದರೂ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ರಕ್ಷಣಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂತಾದಲ್ಲಿ ವರ್ಗಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾ ಆಗುವ ಅವಕಾಶಗಳಿವೆ. ನಿಮ್ಮ ವರ್ತನೆ, ಗುಣ- ನಡವಳಿಕೆಗಳಿಂದ ಮೇಲಧಿಕಾರಿಗಳಿಗೆ ಸಂತೋಷವಾಗಿ, ಅನುಕೂಲಗಳನ್ನು ಮಾಡಿಕೊಡಲಿದ್ದಾರೆ. ವಿದೇಶಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂಬ ಉದ್ದೇಶ ಇರುವಂಥವರಿಗೆ ಹಣಕಾಸಿನ ಅನುಕೂಲ, ನಿಮ್ಮ ಮನಸಿಗೆ ಒಪ್ಪುವಂಥ ಟ್ರಾವೆಲ್ ಏಜೆನ್ಸಿಗಳವರ ಪರಿಚಯ ಆಗಲಿದ್ದು, ಅಂತಿಮವಾಗಿ ದಿನಾಂಕವೇ ನಿಗದಿ ಆಗುವ ಸಾಧ್ಯತೆಗಳು ಹೆಚ್ಚಿವೆ. ಕೃಷಿಕರಿಗೆ ನಿಮ್ಮ ವರ್ತನೆಯಲ್ಲಿ ನಿಮಗೇ ಅಚ್ಚರಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಎಲ್ಲರೂ ನಿಮ್ಮಿಂದ ಹಣದ ಸಾಲ ಪಡೆಯುವ ತನಕ ಚೆನ್ನಾಗಿದ್ದು, ಆ ನಂತರ ಅದನ್ನು ಹಿಂತಿರುಗಿಸುವಾಗ ಸತಾಯಿಸುತ್ತಾರೆ ಎಂದು ಬಲವಾಗಿ ಅನಿಸುತ್ತದೆ. ಅದರ ಜತೆಗೆ ನಿಮ್ಮ ವೃತ್ತಿಗೆ ಯಾರೂ ಒತ್ತಾಸೆಯಾಗಿ ನಿಲ್ಲುತ್ತಿಲ್ಲ ಅಂತಲೂ ಅನಿಸುತ್ತದೆ. ಆದ್ದರಿಂದ ಒಂದಿಷ್ಟು ಆಕ್ರಮಣಕಾರಿಯಾಗಿ ಆಲೋಚನೆ ಮಾಡಲಿದ್ದೀರಿ. ‘ದುಡ್ಡಿಟ್ಟು ಆ ಮೇಲೆ ಮಾತನಾಡು’ ಅನ್ನುವ ರೀತಿಯಲ್ಲಿ ಇರುತ್ತದೆ ನಿಮ್ಮ ಧ್ವನಿ. ಯಾರ ಮೇಲೂ ನಂಬಿಕೆಯಿಟ್ಟು, ವ್ಯವಹಾರ ನಡೆಸಬಹುದು ಎಂಬ ಭಾವನೆ ನಿಮ್ಮೊಳಗೆ ಮೂಡುವುದಿಲ್ಲ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಂತವಾಗಿ, ಸ್ವತಂತ್ರವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವೃತ್ತಿನಿರತರು ಈ ವಾರ ಹೇಳಿದ್ದನ್ನೇ ಹೇಳಬೇಕಾದ ಹಾಗೂ ಮತ್ತೆ ಮತ್ತೆ ವಿವರಿಸಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಇನ್ನು ನಿಮ್ಮಲ್ಲಿ ಕೆಲವರಂತೂ ನನ್ನ ಮಾತು ಹಾಗೂ ಧ್ವನಿಯ ಅರ್ಥ ಇದಾಗಿತ್ತು ಅಂತ ಉದ್ದೇಶವನ್ನು ಬಿಡಿಸಿ ಹೇಳುವುದರಲ್ಲಿ ಹೈರಾಣಾಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಆತಂಕವನ್ನೂ ಹಾಗೂ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಪೋಷಕರು, ಸೋದರ- ಸೋದರಿಯರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಮಹಿಳೆಯರು ದಿರಿಸು, ಒಡವೆ, ವಸ್ತುಗಳು ಪ್ರತಿಯೊಂದರಲ್ಲೂ ಒಪ್ಪ- ಓರಣವಾಗಿ ಸಿದ್ಧವಾಗಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗೀ ಆಗುವ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಸಂತಸದ ವಾರ ಇದಾಗಿರಲಿದೆ. ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ಕೊಡುವ ಸಾಧ್ಯತೆ ಇದೆ. ಇನ್ನು ಮ್ಯೂಚುವಲ್ ಫಂಡ್, ಷೇರುಗಳು ಇಂಥದ್ದರಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಭ ಬರುವಂಥ ಯೋಗ ಇದೆ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ