AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Prediction For July: ಷೇರು ಮಾರುಕಟ್ಟೆಯಲ್ಲಿ ಜುಲೈನಲ್ಲಿ ಏನೇನಾಗಲಿದೆ? ಇಲ್ಲಿದೆ ಖ್ಯಾತ ಟಾರೋ ಕಾರ್ಡ್ ರೀಡರ್ ಭವಿಷ್ಯ

ಜುಲೈ ತಿಂಗಳಲ್ಲಿ ಷೇರು ಮಾರುಕಟ್ಟೆ ಹೇಗೆ ವ್ಯವಹಾರ ನಡೆಸಲಿದೆ ಎಂಬುದನ್ನು ಖ್ಯಾತ ಟಾರೋ ಕಾರ್ಡ್ ರೀಡರ್ ಆದ ಪ್ರಕಾಶ ದಳವಿ ಅವರು ಟಾರೋ ಕಾರ್ಡ್ ರೀಡಿಂಗ್ ಮೂಲಕ ತಿಳಿಸಿದ್ದಾರೆ.

Stock Market Prediction For July: ಷೇರು ಮಾರುಕಟ್ಟೆಯಲ್ಲಿ ಜುಲೈನಲ್ಲಿ ಏನೇನಾಗಲಿದೆ? ಇಲ್ಲಿದೆ ಖ್ಯಾತ ಟಾರೋ ಕಾರ್ಡ್ ರೀಡರ್ ಭವಿಷ್ಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 01, 2022 | 5:51 PM

Share

ಷೇರುಪೇಟೆ (Stock Market) ಹೂಡಿಕೆದಾರರಿಗೆ ಟಿವಿ9 ಕನ್ನಡ ಡಿಜಿಟಲ್​ನ ಈ ಹೊಸ ಪ್ರಯತ್ನದ ಬಗ್ಗೆ ಗಮನ ಸೆಳೆಯಬೇಕಿದೆ. ಈ ಲೇಖನವು ಒಂದು ತಿಂಗಳಲ್ಲಿ, ಅಂದರೆ ಈಗ 2022ರ ಜುಲೈನಲ್ಲಿ ಷೇರುಪೇಟೆಯಲ್ಲಿ ಏನೇನು ಬೇಳವಣಿಗೆ ಆಗಬಹುದು ಎಂದು ಊಹಿಸಿರುವ ಟಾರೋ ಕಾರ್ಡ್ ರೀಡಿಂಗ್​ನ ಲೇಖನ. ಮಹಾರಾಷ್ಟ್ರ ಮೂಲದ ಖ್ಯಾತ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಅವರು ಈ ರೀಡಿಂಗ್ ನೀಡಿದ್ದಾರೆ. ಇದನ್ನು ಕೊನೆಯ ತನಕ ನೀವು ಓದಿದರೆ ಏನು ಹೇಳುವುದಕ್ಕೆ ಪ್ರಯತ್ನ ಪಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ನಮ್ಮ ಮಟ್ಟಿಗೆ ಹೊಸ ಪ್ರಯತ್ನವಾದ್ದರಿಂದ ನಿಮ್ಮ ಫೀಡ್​ಬ್ಯಾಕ್ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಇನ್ನು ತಡ ಮಾಡದಿರಿ. ಜುಲೈ ತಿಂಗಳಲ್ಲಿ ಷೇರು ಪೇಟೆ ವಹಿವಾಟು ಹೇಗಿರಲಿದೆ ಎಂಬುದನ್ನು ಓದಲು ಶುರು ಮಾಡಿ. ಅಂದಹಾಗೆ ಇಲ್ಲಿರುವ ಅಭಿಪ್ರಾಯಗಳು ಮತ್ತು ಸಲಹೆ ಆಯಾ ಲೇಖಕರವೇ ಹೊರತು ಟಿವಿ9 ನೆಟ್​ವರ್ಕ್​ನ ಯಾವ ಸಂಸ್ಥೆಯು ಜವಾಬ್ದಾರ ಅಲ್ಲ- ಸಂಪಾದಕರು, ಟಿವಿ9 ಕನ್ನಡ ಡಿಜಿಟಲ್.

****

ಟಿವಿ9 ಕನ್ನಡ ಡಿಜಿಟಲ್​ನ ಎಲ್ಲ ಓದುಗರಿಗೆ ನನ್ನ ನಮಸ್ಕಾರ. ನಮ್ಮ ಈ ಬಾಂಧವ್ಯ ಹೀಗೇ ಮುಂದುವರಿಯಲಿ ಎಂಬ ಆಶಯದೊಂದಿಗೆ ಈ ಲೇಖನ ಶುರು ಮಾಡುತ್ತೇನೆ. ಟಾರೋ ಕಾರ್ಡ್ ರೀಡಿಂಗ್ ಎಂಬುದು ಜ್ಯೋತಿಷ್ಯದ ಒಂದು ಭಾಗ. ಅದರ ಮೂಲಕ ನಾನಾ ಸಂಗತಿಗಳನ್ನು ತಿಳಿಯಬಹುದು. ಈಗ ಜುಲೈ ತಿಂಗಳಲ್ಲಿ ಭಾರತದ ಷೇರುಪೇಟೆ ಹೇಗೆ ವಹಿವಾಟು ನಡೆಸಬಹುದು ಅಥವಾ ವರ್ತಿಸಬಹುದು ಎಂಬುದನ್ನು ಟಾರೋ ಕಾರ್ಡ್ ರೀಡಿಂಗ್ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ಆರಂಭದಲ್ಲೇ ಹೇಳುತ್ತಿದ್ದೇನೆ, ಇದು ಆ ಭಗವಂತನ ಸ್ಮರಣೆ ಮಾಡಿ, ಪಾಸಿಟಿವ್ ಎನರ್ಜಿಯೊಂದಿಗೆ, ಕಾರ್ಡ್ ಮೂಲಕ ತಿಳಿದಿದ್ದನ್ನು ನಿಮಗೆ ದಾಟಿಸಬೇಕು ಎಂಬ ಉದ್ದೇಶವಷ್ಟೇ ನನ್ನದು. ಇಲ್ಲಿ ನಾನು ತಿಳಿಸಿರುವ ವಿಚಾರದಲ್ಲಿ ವೈಯಕ್ತಿಕ ಲಾಭ, ಹಿತಾಸಕ್ತಿಗಳು ಇಲ್ಲ ಎಂಬುದನ್ನು ಆರಂಭದಲ್ಲೇ ಖಾತ್ರಿಪಡಿಸಿಬಿಡುತ್ತೇನೆ.

Prakasha Dalavi Taraot Card Reader

ಪ್ರಕಾಶ್ ದಳವಿ

ಇನ್ನು ಜೂನ್ 30ನೇ ತಾರೀಕಿನ ಕೊನೆಗೆ ಸೆನ್ಸೆಕ್ಸ್ 53,000 ಪಾಯಿಂಟ್ಸ್​ಗಿಂತ ಸ್ವಲ್ಪ ಮೇಲೆ ಮತ್ತು ನಿಫ್ಟಿ 15,780 ಪಾಯಿಂಟ್ಸ್​ನೊಂದಿಗೆ ಮುಕ್ತಾಯ ಕಂಡಿದೆ. ಜಲೈ 1ರಿಂದ 10ನೇ ತಾರೀಕು ತನಕ ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತಷ್ಟು ಕೆಳಗೆ ಇಳಿಯುತ್ತದೆ. ಇಂಟ್ರಾಡೇ ವಹಿವಾಟು ನಡೆಸುವವರಿಗೆ ಈಗಿನ ಮಾರ್ಕೆಟ್​ ಟ್ರೆಂಡ್ ಚೆನ್ನಾಗಿರುವುದಿಲ್ಲ. ಆದರೆ ಟಾಪ್ ಕಂಪೆನಿಗಳ ಷೇರುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಇರಾದೆ ಇರುವವರಿಗೆ ಅದ್ಭುತವಾದ ಅವಕಾಶ ಇದಾಗಲಿದೆ.

ಜುಲೈ 11ರಿಂದ 20ನೇ ತಾರೀಕಿನ ತನಕ ಸೂಚ್ಯಂಕದ ಚಲನೆ ನಿಧಾನ ಗತಿಯಲ್ಲಿ ಇರುತ್ತದೆ. ಅಷ್ಟೇ ಅಲ್ಲ, ಇಂತಿಷ್ಟು ಮಿತಿಯಲ್ಲಿ ಎಂದು ವಹಿವಾಟು ನಡೆಸುತ್ತದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಯಾವುದೇ ಏರಿಕೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ.

ಜುಲೈ 21ರಿಂದ 31ರ ಮಧ್ಯೆ ಈ ಅವಧಿಯಲ್ಲಿ ಷೇರು ಮಾರುಕಟ್ಟೆಯು ಚೇತರಿಕೆ ಕಾಣಿಸಿಕೊಳ್ಳುತ್ತದೆ. ಯಾವ ಹೂಡಿಕೆದಾರರು ಜುಲೈ 1ರಿಂದ 10ನೇ ತಾರೀಕಿನ ಮಧ್ಯೆ ಖರೀದಿ ಮಾಡಿದಂಥ ಹೂಡಿಕೆದಾರರಿಗೆ ಅಲ್ಪಾವಧಿಯಲ್ಲಿ ಲಾಭ ನಗದೀಕರಣಕ್ಕೆ ಅವಕಾಶ ಸಿಗುತ್ತದೆ. ಆದರೆ ದೊಡ್ಡ ಮಟ್ಟದಲ್ಲಿ ಚೇತರಿಕೆ ಕಾಣಿಸಲ್ಲ.

ಬ್ಯಾಂಕ್ ನಿಫ್ಟಿ: 30ನೇ ಜೂನ್​​ಗೆ ಬ್ಯಾಂಕ್​ ನಿಫ್ಟಿ 33,425 ಪಾಯಿಂಟ್ಸ್​ನಲ್ಲಿ ಮುಕ್ತಾಯ ಕಂಡಿದೆ. 2022ರ ಜುಲೈನಲ್ಲಿ ಇನ್ನಷ್ಟು ಕೆಳಗೆ ಹೋಗಲಿದೆ. ಜುಲೈನಲ್ಲಿ ಬ್ಯಾಂಕ್​ ನಿಫ್ಟಿ ಸೂಚ್ಯಂಕದಲ್ಲಿ ಚೇತರಿಕೆ ಕಾಣುತ್ತಿಲ್ಲ.

ಕಮಾಡಿಟಿ ಮಾರುಕಟ್ಟೆ:

ಚಿನ್ನ: ಚಿನ್ನದ ಬೆಲೆ ಜುಲೈನಲ್ಲಿ ಇನ್ನಷ್ಟು ಕೆಳಗೆ ಇಳಿಯಲಿದೆ.

ಬೆಳ್ಳಿ: ಬೆಳ್ಳಿಯ ದರವು ರೇಂಜ್​ನಲ್ಲಿ ಇರುತ್ತದೆ. ಬೆಳ್ಳಿ ಬೆಲೆ ದೊಡ್ಡ ಗಳಿಕೆಯೂ ಕಾಣುತ್ತಿಲ್ಲ, ಅದೇ ರೀತಿ ಇಳಿಕೆಯೂ.

ಕಚ್ಚಾ ತೈಲ ಮತ್ತು ತಾಮ್ರ: ಇವುಗಳಲ್ಲಿ ಬೆಲೆ ಏರಿಕೆ ಕಂಡು ಬರುತ್ತಿದೆ.

ಅಲ್ಯೂಮಿನಿಯಂ: ಇದು ರೇಂಜ್ ಬೌಂಡ್ ಆಗಿರಲಿದೆ. ದೊಡ್ಡ ಮಟ್ಟದ ಗಳಿಕೆಯೋ ಅಥಚಾ ಸಾಕಷ್ಟು ಪ್ರಮಾಣದ ಏರಿಕೆ ಕಾಣುತ್ತಿಲ್ಲ.

ಲೇಖಕರ ಎಚ್ಚರಿಕೆ: ನಾನು ಸೆಬಿಯ ನೋಂದಾಯಿತ ಆರ್ಥಿಕ ಸಲಹೆಗಾರನಲ್ಲ. ಷೇರು ಮಾರುಕಟ್ಟೆಯ ಯಾವುದೇ ನಿರ್ಧಾರ ಮಾಡುವ ಮುನ್ನ ದಯವಿಟ್ಟು ಹಣಕಾಸು ಸಲಹೆಗಾರರ ಜತೆ ಚರ್ಚಿಸಿ.

ಲೇಖಕರು: ಪ್ರಕಾಶ್ ದಳವಿ​ ಖ್ಯಾತ ಟಾರೋ​ ಕಾರ್ಡ್​ ರೀಡರ್​, ಷೇರು ಮಾರುಕಟ್ಟೆ ವಿಶ್ಲೇಷಕರು ಮೊಬೈಲ್ ಸಂಖ್ಯೆ: 8369408344

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

Published On - 5:48 pm, Fri, 1 July 22

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ