AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸುಂದರ ದೇಹವಿರುತ್ತದೆ..!

ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸುಂದರ ದೇಹವಿರುತ್ತದೆ..!
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 07, 2024 | 11:47 AM

Share

ಇಪ್ಪತ್ತೇಳು ನಕ್ಷತ್ರಗಳಲ್ಲಿ ರೋಹಿಣೀ ಮೂರನೇ ನಕ್ಷತ್ರ. ಇದರ ದೇವತೆ ಬ್ರಹ್ಮಾ. ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ. ನಕ್ಷತ್ರ ಸಮೂಹಗಳಿಂದ ಕೂಡಿರುವ ನಕ್ಷತ್ರವಿದು. ಶ್ರೀಕೃಷ್ಣನ ನಕ್ಷತ್ರವೂ ಇದೇ ಆಗಿದೆ.

ಈ ನಕ್ಷತ್ರದಲ್ಲಿ ಜನಿಸಿದರು ಹೇಗಿರುತ್ತಾರೆ? ಯಾವ ಅಂಶಗಳನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ? ಇವುದು ಇಷ್ಟ? ಎನ್ನುವುದನ್ನು ನೋಡೋಣ.

ಧರ್ಮಕಾರ್ಯದಲ್ಲಿ ಕುಶಲ :

ಧಾರ್ಮಿಕ ಆಚರಣೆಯನ್ನು ಹೇಗೆ ಮಾಡಬೇಕು ಎನ್ನುವ ಕೌಶಲವು ಇವರಿಗೆ ತಿಳಿದಿದೆ. ದೇವರಿಗೆ ಹಿರಿಯರಿಗೆ ಪ್ರಿಯವಾದುದನ್ನು ಮಾಡಲು ಇವರು ತಿಳಿದಿರುತ್ತಾರೆ.

ಉತ್ತಮ ಕುಲದಲ್ಲಿ ಜನನ :

ಇವರು ಯಾವುದೋ ಸಾಮಾನ್ಯ ಕುಲದಲ್ಲಿ ಜನಿಸದೇ, ಇವರ ತಂದೆ, ತಾಯಿ, ಅಜ್ಜ ಅಥವಾ ಇವರ ತಲೆಮಾರಿನಲ್ಲಿ ಯಾರಾದರೂ ಶ್ರೇಷ್ಠರು ಜನಿಸಿದವರಾಗಿರುತ್ತಾರೆ. ಅಂತಹ ಗೌರವಯುತವಾದ ಕುಟುಂಬದಲ್ಲಿ ಜನಿಸುವರು.

ಸುಂದರದೇಹ :

ಇವರ ದೇಹವೂ ಆತ್ಯಂತ ಆಕರ್ಷಕವಾಗಿ ಇರುತ್ತದೆ. ದೊಡ್ಡದಾದ, ಕೃಶವೂ ಸ್ಥೂಲವೂ ಅಲ್ಲದ ಶರೀರ, ಕಾಂತಿಯಿಂದಲೂ ಕೂಡಿರುತ್ತದೆ. ನೃತ್ಯ, ನಾಟಕ ಮುಂತಾದ ಕಲೆಗಳಿಗೆ ಯೋಗ್ಯವಾದ ಕಡೆ ಹೆಚ್ಚು ಆಸಕ್ತಿ ಇರುತ್ತದೆ.

ಧನವಾನ್ :

ಇವರ ಬಳಿ ಅಧಿಕ ಧನವಿರುತ್ತದೆ. ಸ್ಥಿತಿವಂತರಾಗಿ ಬಾಳುವರು. ಧನ, ಆಸ್ತಿಗಳು, ವಿದ್ಯೆ ಇವುಗಳು ಸಂಪತ್ತೇ ಆಗಿರುತ್ತದೆ.

ಮಾನವಾನ್ :

ಇವರು ಎಲ್ಲ ಕಡೆಗಳಿಂದ, ಎಲ್ಲರಿಂದ ಗೌರವವನ್ನು ಪಡೆದುಕೊಳ್ಳುವರು. ಅಂತಹ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ.

ಪ್ರಿಯವಾದ ಮಾತು :

ಇವರು ಅಂತರಂಗದಲ್ಲಿ ಏನೇ ಇದ್ದರು ಅದನ್ನು ಹೊರಹಾಕದೇ ಎಲ್ಲರ ಜೊತೆಯೂ ಪ್ರೀತಿಯಿಂದ ಸಂತೋಷವಾಗುವಂತೆ ಮಾತನಾಡುತ್ತಾರೆ.

ಶುಚಿತ್ವ :

ಇವರ ಇನ್ನೊಂದು ಗುಣ ಶುಚಿಯಾಗಿರುವುದು.‌ ಮನಸ್ಸಿಗೆ ಹಾಗೂ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವರು. ತಮ್ಮ ವಸ್ತುಗಳ ಬಗ್ಗೆಯೂ ಶುಚಿತ್ವವು ಇರುವುದು.

ಈ ನಕ್ಷತ್ರದ ಗುಣ ಹಾಗೂ ಶ್ರೀಕೃಷ್ಣನ ನಡೆವಳಿಕೆಗೆ ಎರಡಕ್ಕೂ ಕೂಡ ಹೆಚ್ಚು ಹೋಲಿಕೆ ಇದೆ. ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಅಲ್ಪ ಪ್ರಮಾಣದ ಲಕ್ಷಣಗಳು ಬಂದೇ ಬರುತ್ತವೆ.

– ಲೋಹಿತ ಹೆಬ್ಬಾರ್ – 8762924271

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು