ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸುಂದರ ದೇಹವಿರುತ್ತದೆ..!

ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸುಂದರ ದೇಹವಿರುತ್ತದೆ..!
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 11:47 AM

ಇಪ್ಪತ್ತೇಳು ನಕ್ಷತ್ರಗಳಲ್ಲಿ ರೋಹಿಣೀ ಮೂರನೇ ನಕ್ಷತ್ರ. ಇದರ ದೇವತೆ ಬ್ರಹ್ಮಾ. ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ. ನಕ್ಷತ್ರ ಸಮೂಹಗಳಿಂದ ಕೂಡಿರುವ ನಕ್ಷತ್ರವಿದು. ಶ್ರೀಕೃಷ್ಣನ ನಕ್ಷತ್ರವೂ ಇದೇ ಆಗಿದೆ.

ಈ ನಕ್ಷತ್ರದಲ್ಲಿ ಜನಿಸಿದರು ಹೇಗಿರುತ್ತಾರೆ? ಯಾವ ಅಂಶಗಳನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ? ಇವುದು ಇಷ್ಟ? ಎನ್ನುವುದನ್ನು ನೋಡೋಣ.

ಧರ್ಮಕಾರ್ಯದಲ್ಲಿ ಕುಶಲ :

ಧಾರ್ಮಿಕ ಆಚರಣೆಯನ್ನು ಹೇಗೆ ಮಾಡಬೇಕು ಎನ್ನುವ ಕೌಶಲವು ಇವರಿಗೆ ತಿಳಿದಿದೆ. ದೇವರಿಗೆ ಹಿರಿಯರಿಗೆ ಪ್ರಿಯವಾದುದನ್ನು ಮಾಡಲು ಇವರು ತಿಳಿದಿರುತ್ತಾರೆ.

ಉತ್ತಮ ಕುಲದಲ್ಲಿ ಜನನ :

ಇವರು ಯಾವುದೋ ಸಾಮಾನ್ಯ ಕುಲದಲ್ಲಿ ಜನಿಸದೇ, ಇವರ ತಂದೆ, ತಾಯಿ, ಅಜ್ಜ ಅಥವಾ ಇವರ ತಲೆಮಾರಿನಲ್ಲಿ ಯಾರಾದರೂ ಶ್ರೇಷ್ಠರು ಜನಿಸಿದವರಾಗಿರುತ್ತಾರೆ. ಅಂತಹ ಗೌರವಯುತವಾದ ಕುಟುಂಬದಲ್ಲಿ ಜನಿಸುವರು.

ಸುಂದರದೇಹ :

ಇವರ ದೇಹವೂ ಆತ್ಯಂತ ಆಕರ್ಷಕವಾಗಿ ಇರುತ್ತದೆ. ದೊಡ್ಡದಾದ, ಕೃಶವೂ ಸ್ಥೂಲವೂ ಅಲ್ಲದ ಶರೀರ, ಕಾಂತಿಯಿಂದಲೂ ಕೂಡಿರುತ್ತದೆ. ನೃತ್ಯ, ನಾಟಕ ಮುಂತಾದ ಕಲೆಗಳಿಗೆ ಯೋಗ್ಯವಾದ ಕಡೆ ಹೆಚ್ಚು ಆಸಕ್ತಿ ಇರುತ್ತದೆ.

ಧನವಾನ್ :

ಇವರ ಬಳಿ ಅಧಿಕ ಧನವಿರುತ್ತದೆ. ಸ್ಥಿತಿವಂತರಾಗಿ ಬಾಳುವರು. ಧನ, ಆಸ್ತಿಗಳು, ವಿದ್ಯೆ ಇವುಗಳು ಸಂಪತ್ತೇ ಆಗಿರುತ್ತದೆ.

ಮಾನವಾನ್ :

ಇವರು ಎಲ್ಲ ಕಡೆಗಳಿಂದ, ಎಲ್ಲರಿಂದ ಗೌರವವನ್ನು ಪಡೆದುಕೊಳ್ಳುವರು. ಅಂತಹ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ.

ಪ್ರಿಯವಾದ ಮಾತು :

ಇವರು ಅಂತರಂಗದಲ್ಲಿ ಏನೇ ಇದ್ದರು ಅದನ್ನು ಹೊರಹಾಕದೇ ಎಲ್ಲರ ಜೊತೆಯೂ ಪ್ರೀತಿಯಿಂದ ಸಂತೋಷವಾಗುವಂತೆ ಮಾತನಾಡುತ್ತಾರೆ.

ಶುಚಿತ್ವ :

ಇವರ ಇನ್ನೊಂದು ಗುಣ ಶುಚಿಯಾಗಿರುವುದು.‌ ಮನಸ್ಸಿಗೆ ಹಾಗೂ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವರು. ತಮ್ಮ ವಸ್ತುಗಳ ಬಗ್ಗೆಯೂ ಶುಚಿತ್ವವು ಇರುವುದು.

ಈ ನಕ್ಷತ್ರದ ಗುಣ ಹಾಗೂ ಶ್ರೀಕೃಷ್ಣನ ನಡೆವಳಿಕೆಗೆ ಎರಡಕ್ಕೂ ಕೂಡ ಹೆಚ್ಚು ಹೋಲಿಕೆ ಇದೆ. ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಅಲ್ಪ ಪ್ರಮಾಣದ ಲಕ್ಷಣಗಳು ಬಂದೇ ಬರುತ್ತವೆ.

– ಲೋಹಿತ ಹೆಬ್ಬಾರ್ – 8762924271

ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ