AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?

ಜ್ಯೋತಿಷ್ಯದಲ್ಲಿ ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?
ಶೃಂಗಾಟಕ, ವಜ್ರ ಮತ್ತು ಹಲಯೋಗದ ಪ್ರಕಾರ ನಿಮ್ಮ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 15, 2023 | 8:19 PM

Share

ಜ್ಯೋತಿಷ್ಯದಲ್ಲಿ (Astrology) ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ ಯೋಗ:

ಲಗ್ನ, ನವಮ ಮತ್ತು ಪಂಚಮಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶೃಂಗಾಟಕ ಯೋಗ. ಈ ಯೋಗದ ಜೊತೆ ಜನಿಸಿದವನು ಬಹಳ ಕಾಲ ಸುಖದ ಜೀವನವನ್ನು ನಡೆಸುವನು ಅಥವಾ ಜೀವನದ ಕೊನೆಯ ಭಾಗದಲ್ಲಿ ಹೆಚ್ಚು ಸುಖವನ್ನು ಅನುಭವಿಸುವನು ಎಂದೂ ಹೇಳುವರು.

ಹಲ ಯೋಗ:

ಲಗ್ನದಿಂದ 2, 6, 10 ಸ್ಥಾನ, 3, 7, 11 ಸ್ಥಾನ, 4, 8, 12 ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಹಲ ಯೋಗ ಎನ್ನುವರು. ಜನಿಸುವಾಗ ಈ ಯೋಗವಿದ್ದರೆ ಅವನು ಕೃಷಿಯಲ್ಲಿ ಆಸಕ್ತಿಯನ್ನು ಹೊಂದುವನು. ಕೃಷಿಯಲ್ಲಿ ತೊಡಗುವನು.

ಹಲ ಎಂದರೆ ನೇಗಿಲು ಎಂದರ್ಥ. ಈ ಯೋಗವೂ ಅದಕ್ಕೆ ಪೂರಕವಾಗಿ ಇರುವುದು. ಕೃಷಿ ಕಾರ್ಯಗಳಿಗೆ ಪೂರವಾಗಿ ಇರುವುದರಿಂದ ಇದನ್ನು ಹಲ ಯೋಗ ಎಂದೂ ಕರೆಯುವರು.

ಇದನ್ನೂ ಓದಿ: ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ವಜ್ರ ಯೋಗ:

ಲಗ್ನದಿಂದ ಸಪ್ತಮದವರೆಗೆ ಎಲ್ಲ ಶುಭಗ್ರಹರು ಅಂದರೆ ಪೂರ್ಣಚಂದ್ರ, ಶುಭಗ್ರಹಯುತನಾದ ಬುಧ, ಗುರು, ಶುಕ್ರ ಹಾಗೂ ಸಪ್ತಮದಿಂದ ದ್ವಾದಶದವರೆಗೆ ಪಾಪಗ್ರಹರೂ ಇದ್ದರೆ ಅಂದರೆ ಸೂರ್ಯ, ಅಮಾವಾಸ್ಯೆಯ ಚಂದ್ರ, ಕುಜ, ಪಾಪದ ಜೊತೆಗಿರುವ ಬುಧ, ಶನಿ, ರಾಹು ಹಾಗೂ ಕೇತು ಇದ್ದರೆ ವಜ್ರ ಯೋಗ.

ಈ ಯೋಗದಲ್ಲಿ ಜನಿಸಿದವನು ಬಾಲ್ಯ ಮತ್ತು ವೃದ್ಧಾವಸ್ಥೆಯಲ್ಲಿ ಭೋಗದಿಂದ ಹೆಚ್ಚು ಸುಖಿಯಾಗಿ ಇರುವರು. ಧೈರ್ಯದಿಂದ ಕೂಡಿದವನು ಅವನಾಗುವನು. ಎಲ್ಲ‌ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವನು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?