AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?

ಜ್ಯೋತಿಷ್ಯದಲ್ಲಿ ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?
ಶೃಂಗಾಟಕ, ವಜ್ರ ಮತ್ತು ಹಲಯೋಗದ ಪ್ರಕಾರ ನಿಮ್ಮ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 15, 2023 | 8:19 PM

Share

ಜ್ಯೋತಿಷ್ಯದಲ್ಲಿ (Astrology) ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ ಯೋಗ:

ಲಗ್ನ, ನವಮ ಮತ್ತು ಪಂಚಮಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶೃಂಗಾಟಕ ಯೋಗ. ಈ ಯೋಗದ ಜೊತೆ ಜನಿಸಿದವನು ಬಹಳ ಕಾಲ ಸುಖದ ಜೀವನವನ್ನು ನಡೆಸುವನು ಅಥವಾ ಜೀವನದ ಕೊನೆಯ ಭಾಗದಲ್ಲಿ ಹೆಚ್ಚು ಸುಖವನ್ನು ಅನುಭವಿಸುವನು ಎಂದೂ ಹೇಳುವರು.

ಹಲ ಯೋಗ:

ಲಗ್ನದಿಂದ 2, 6, 10 ಸ್ಥಾನ, 3, 7, 11 ಸ್ಥಾನ, 4, 8, 12 ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಹಲ ಯೋಗ ಎನ್ನುವರು. ಜನಿಸುವಾಗ ಈ ಯೋಗವಿದ್ದರೆ ಅವನು ಕೃಷಿಯಲ್ಲಿ ಆಸಕ್ತಿಯನ್ನು ಹೊಂದುವನು. ಕೃಷಿಯಲ್ಲಿ ತೊಡಗುವನು.

ಹಲ ಎಂದರೆ ನೇಗಿಲು ಎಂದರ್ಥ. ಈ ಯೋಗವೂ ಅದಕ್ಕೆ ಪೂರಕವಾಗಿ ಇರುವುದು. ಕೃಷಿ ಕಾರ್ಯಗಳಿಗೆ ಪೂರವಾಗಿ ಇರುವುದರಿಂದ ಇದನ್ನು ಹಲ ಯೋಗ ಎಂದೂ ಕರೆಯುವರು.

ಇದನ್ನೂ ಓದಿ: ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ವಜ್ರ ಯೋಗ:

ಲಗ್ನದಿಂದ ಸಪ್ತಮದವರೆಗೆ ಎಲ್ಲ ಶುಭಗ್ರಹರು ಅಂದರೆ ಪೂರ್ಣಚಂದ್ರ, ಶುಭಗ್ರಹಯುತನಾದ ಬುಧ, ಗುರು, ಶುಕ್ರ ಹಾಗೂ ಸಪ್ತಮದಿಂದ ದ್ವಾದಶದವರೆಗೆ ಪಾಪಗ್ರಹರೂ ಇದ್ದರೆ ಅಂದರೆ ಸೂರ್ಯ, ಅಮಾವಾಸ್ಯೆಯ ಚಂದ್ರ, ಕುಜ, ಪಾಪದ ಜೊತೆಗಿರುವ ಬುಧ, ಶನಿ, ರಾಹು ಹಾಗೂ ಕೇತು ಇದ್ದರೆ ವಜ್ರ ಯೋಗ.

ಈ ಯೋಗದಲ್ಲಿ ಜನಿಸಿದವನು ಬಾಲ್ಯ ಮತ್ತು ವೃದ್ಧಾವಸ್ಥೆಯಲ್ಲಿ ಭೋಗದಿಂದ ಹೆಚ್ಚು ಸುಖಿಯಾಗಿ ಇರುವರು. ಧೈರ್ಯದಿಂದ ಕೂಡಿದವನು ಅವನಾಗುವನು. ಎಲ್ಲ‌ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವನು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು