AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?

ಜ್ಯೋತಿಷ್ಯದಲ್ಲಿ ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?
ಶೃಂಗಾಟಕ, ವಜ್ರ ಮತ್ತು ಹಲಯೋಗದ ಪ್ರಕಾರ ನಿಮ್ಮ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: Rakesh Nayak Manchi|

Updated on: Aug 15, 2023 | 8:19 PM

Share

ಜ್ಯೋತಿಷ್ಯದಲ್ಲಿ (Astrology) ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ ಯೋಗ:

ಲಗ್ನ, ನವಮ ಮತ್ತು ಪಂಚಮಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶೃಂಗಾಟಕ ಯೋಗ. ಈ ಯೋಗದ ಜೊತೆ ಜನಿಸಿದವನು ಬಹಳ ಕಾಲ ಸುಖದ ಜೀವನವನ್ನು ನಡೆಸುವನು ಅಥವಾ ಜೀವನದ ಕೊನೆಯ ಭಾಗದಲ್ಲಿ ಹೆಚ್ಚು ಸುಖವನ್ನು ಅನುಭವಿಸುವನು ಎಂದೂ ಹೇಳುವರು.

ಹಲ ಯೋಗ:

ಲಗ್ನದಿಂದ 2, 6, 10 ಸ್ಥಾನ, 3, 7, 11 ಸ್ಥಾನ, 4, 8, 12 ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಹಲ ಯೋಗ ಎನ್ನುವರು. ಜನಿಸುವಾಗ ಈ ಯೋಗವಿದ್ದರೆ ಅವನು ಕೃಷಿಯಲ್ಲಿ ಆಸಕ್ತಿಯನ್ನು ಹೊಂದುವನು. ಕೃಷಿಯಲ್ಲಿ ತೊಡಗುವನು.

ಹಲ ಎಂದರೆ ನೇಗಿಲು ಎಂದರ್ಥ. ಈ ಯೋಗವೂ ಅದಕ್ಕೆ ಪೂರಕವಾಗಿ ಇರುವುದು. ಕೃಷಿ ಕಾರ್ಯಗಳಿಗೆ ಪೂರವಾಗಿ ಇರುವುದರಿಂದ ಇದನ್ನು ಹಲ ಯೋಗ ಎಂದೂ ಕರೆಯುವರು.

ಇದನ್ನೂ ಓದಿ: ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ವಜ್ರ ಯೋಗ:

ಲಗ್ನದಿಂದ ಸಪ್ತಮದವರೆಗೆ ಎಲ್ಲ ಶುಭಗ್ರಹರು ಅಂದರೆ ಪೂರ್ಣಚಂದ್ರ, ಶುಭಗ್ರಹಯುತನಾದ ಬುಧ, ಗುರು, ಶುಕ್ರ ಹಾಗೂ ಸಪ್ತಮದಿಂದ ದ್ವಾದಶದವರೆಗೆ ಪಾಪಗ್ರಹರೂ ಇದ್ದರೆ ಅಂದರೆ ಸೂರ್ಯ, ಅಮಾವಾಸ್ಯೆಯ ಚಂದ್ರ, ಕುಜ, ಪಾಪದ ಜೊತೆಗಿರುವ ಬುಧ, ಶನಿ, ರಾಹು ಹಾಗೂ ಕೇತು ಇದ್ದರೆ ವಜ್ರ ಯೋಗ.

ಈ ಯೋಗದಲ್ಲಿ ಜನಿಸಿದವನು ಬಾಲ್ಯ ಮತ್ತು ವೃದ್ಧಾವಸ್ಥೆಯಲ್ಲಿ ಭೋಗದಿಂದ ಹೆಚ್ಚು ಸುಖಿಯಾಗಿ ಇರುವರು. ಧೈರ್ಯದಿಂದ ಕೂಡಿದವನು ಅವನಾಗುವನು. ಎಲ್ಲ‌ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವನು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್