AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astro Tips: ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರಲಿ, ಜ್ಯೋತಿಷ್ಯದ ಪ್ರಕಾರ ಈ ದಿನಗಳಲ್ಲಿ ಬೆಳ್ಳಿ ಖರೀದಿಸಿದರೆ ತುಂಬಾ ಶ್ರೇಯಸ್ಕರ

Vastu tips for silver purchase: ಬೆಳ್ಳಿಯನ್ನು ಖರೀದಿಸಲು ವಾಸ್ತು ಸಲಹೆಗಳು: ಬೆಳ್ಳಿ ಖರೀದಿಸುವಾಗ ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವ ಅಂಗಡಿಯಿಂದ ಖರೀದಿಸಲು ಪ್ರಯತ್ನಿಸಿ. ಈ ದಿಕ್ಕುಗಳನ್ನು ವಾಸ್ತು ಶಾಸ್ತ್ರದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿಕ್ಕು ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ.

Astro Tips: ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರಲಿ, ಜ್ಯೋತಿಷ್ಯದ ಪ್ರಕಾರ ಈ ದಿನಗಳಲ್ಲಿ ಬೆಳ್ಳಿ ಖರೀದಿಸಿದರೆ ತುಂಬಾ ಶ್ರೇಯಸ್ಕರ
ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರಲಿ
ಸಾಧು ಶ್ರೀನಾಥ್​
|

Updated on: Aug 08, 2023 | 4:24 PM

Share

ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ಸಾವಿರಾರು ವರ್ಷಗಳ ಜ್ಯೋತಿಷ್ಯವು ನಂಬುತ್ತದೆ. ಸಕಾರಾತ್ಮಕ ಶಕ್ತಿಯು ವ್ಯಕ್ತಿಯ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಇದು ಸಮೃದ್ಧಿ, ಆರೋಗ್ಯ ಮತ್ತು ಸಂತೋಷವನ್ನು ತರುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಬೆಳ್ಳಿಯನ್ನು ಖರೀದಿಸಲು ಕೆಲವು ದಿನಗಳು ಶುಭ. ಏಕೆಂದರೆ ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ, ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇದೆ. ವಾಸ್ತು ಪ್ರಕಾರ ಬೆಳ್ಳಿಯನ್ನು ಖರೀದಿಸಲು ಕೆಲವು ದಿನಗಳು ವಿಶೇಷ ಪ್ರಾಮುಖ್ಯತೆಯನ್ನು (Vastu) ಹೊಂದಿವೆ. ಬೆಳ್ಳಿ (silver) ಖರೀದಿಸಲು ಯಾವ ದಿನ ಶುಭ ಎಂದು ತಿಳಿಯಿರಿ (Goddess Lakshmi Devi).

ಪುಷ್ಯ ನಕ್ಷತ್ರ: ಪುಷ್ಯಮಿ ನಕ್ಷತ್ರವನ್ನು ಅತ್ಯಂತ ಮಂಗಳಕರ ರಾಶಿಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಬೆಳ್ಳಿ ಖರೀದಿ ಬಹಳ ಮುಖ್ಯ. ಪುಷ್ಯಮಿ ನಕ್ಷತ್ರದ ಸಮಯದಲ್ಲಿ ಬೆಳ್ಳಿಯನ್ನು ಖರೀದಿಸುವುದು ಅಪಾರ ಸಂಪತ್ತು ಮತ್ತು ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಗುರುವಾರ: ಗುರುವಾರ ಭಗವಾನ್ ಗುರುವಿಗೆ ಸೇರಿದ ದಿನ. ಬೆಳ್ಳಿಯನ್ನು ಖರೀದಿಸಲು ಇಂದು ಅತ್ಯಂತ ಅನುಕೂಲಕರ ದಿನವೆಂದು ಪರಿಗಣಿಸಲಾಗಿದೆ. ದೇವಗುರು ಗುರುವನ್ನು ಸಂಪತ್ತು ಮತ್ತು ಸಮೃದ್ಧಿಯ ಗ್ರಹ ಎಂದು ಕರೆಯಲಾಗುತ್ತದೆ. ಗುರುವಾರ ಬೆಳ್ಳಿಯನ್ನು ಖರೀದಿಸುವುದರಿಂದ ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಯಿದೆ.

ಅಕ್ಷಯ ತೃತೀಯ: ಅಕ್ಷಯ ತೃತೀಯವು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಬೆಳ್ಳಿ ಖರೀದಿಸಲು ಅದು ಶುಭ ಸಂದರ್ಭ. ಈ ದಿನ ಬೆಳ್ಳಿಯನ್ನು ಖರೀದಿಸುವುದು ಬಹಳಷ್ಟು ಪ್ರಯೋಜನ ತರುತ್ತದೆ ಎಂದು ನಂಬಲಾಗಿದೆ.

ಬೆಳ್ಳಿಯನ್ನು ಖರೀದಿಸಲು ವಾಸ್ತು ಸಲಹೆಗಳು:

ಬೆಳ್ಳಿ ಖರೀದಿಸುವಾಗ ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವ ಅಂಗಡಿಯಿಂದ ಖರೀದಿಸಲು ಪ್ರಯತ್ನಿಸಿ. ಈ ದಿಕ್ಕುಗಳನ್ನು ವಾಸ್ತು ಶಾಸ್ತ್ರದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿಕ್ಕು ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ.

ಬೆಳ್ಳಿಯ ವಸ್ತುಗಳಾದ ಬೆಳ್ಳಿಯ ವಿಗ್ರಹಗಳು, ಶೋಪೀಸ್ ಅಥವಾ ಪಾತ್ರೆಗಳನ್ನು ಮನೆಯ ಅಲಂಕಾರದಲ್ಲಿ ಸೇರಿಸುವುದು ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಬೆಳ್ಳಿಯ ಧನಾತ್ಮಕ ಶಕ್ತಿಯನ್ನು ಹಾಗೇ ಇರಿಸಿಕೊಳ್ಳಲು, ಅದನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಇಡುವುದು ಅವಶ್ಯಕ. ಬೆಳ್ಳಿಯ ಸಾಮಾನುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದರಿಂದ ನಕಾರಾತ್ಮಕ ಶಕ್ತಿ ಸಂಗ್ರಹವಾಗುವುದನ್ನು ತಡೆಯುತ್ತದೆ.

ಬಳಕೆಯಲ್ಲಿಲ್ಲದಿದ್ದಾಗ ಬೆಳ್ಳಿಯ ಸಾಮಾನುಗಳನ್ನು ಸುರಕ್ಷಿತವಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿ. ಬೆಳ್ಳಿಯ ವಸ್ತುಗಳನ್ನು ಧೂಳಿನಿಂದ ರಕ್ಷಿಸುವಂತೆ ಖಚಿತಪಡಿಸಿಕೊಳ್ಳಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ