AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Citigroup: ಭಾರತ ಸೇರಿ 13 ದೇಶಗಳಲ್ಲಿ ರೀಟೇಲ್ ಬ್ಯಾಂಕಿಂಗ್ ವ್ಯವಹಾರ ನಿಲ್ಲಿಸಲಿದೆ ಸಿಟಿಗ್ರೂಪ್

Citigroup to shutter retail business: ಭಾರತ ಸೇರಿದಂತೆ 13 ದೇಶಗಳಲ್ಲಿ ರೀಟೇಲ್ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ಏಪ್ರಿಲ್ 15ನೇ ತಾರೀಕಿನ ಗುರುವಾರದಂದು ಸಿಟಿಗ್ರೂಪ್ ಘೋಷಣೆ ಮಾಡಿದೆ.

Citigroup: ಭಾರತ ಸೇರಿ 13 ದೇಶಗಳಲ್ಲಿ ರೀಟೇಲ್ ಬ್ಯಾಂಕಿಂಗ್ ವ್ಯವಹಾರ ನಿಲ್ಲಿಸಲಿದೆ ಸಿಟಿಗ್ರೂಪ್
ಸಿಟಿಗ್ರೂಪ್
Srinivas Mata
|

Updated on: Apr 15, 2021 | 8:06 PM

Share

ಭಾರತ ಮತ್ತು ಚೀನಾ ಸೇರಿದಂತೆ 13 ದೇಶಗಳಲ್ಲಿ ರೀಟೇಲ್ ಬ್ಯಾಂಕಿಂಗ್ ನಿಲ್ಲಿಸುವುದಾಗಿ ಏಪ್ರಿಲ್ 15, 2021ರಂದು ಸಿಟಿಗ್ರೂಪ್ ಘೋಷಣೆ ಮಾಡಿದೆ. ಅಮೆರಿಕನ್ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆ ಕಂಪೆನಿಯಾದ ಸಿಟಿ ಗ್ರೂಪ್, ಏಷ್ಯಾ ಮತ್ತು ಯುರೋಪ್​ನಾದ್ಯಂತ 13 ದೇಶಗಳಲ್ಲಿ ಗ್ರಾಹಕ/ರೀಟೇಲ್ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ. ಯಾವುದು ಆ 13 ದೇಶಗಳು ಅಂದರೆ, ಆಸ್ಟ್ರೇಲಿಯಾ, ಬಹರೇನ್, ಚೀನಾ, ಭಾರತ, ಇಂಡೋನೇಷ್ಯಾ, ಕೊರಿಯಾ, ಮಲೇಷ್ಯಾ, ಫಿಲಿಪೈನ್ಸ್, ರಷ್ಯಾ, ತೈವಾನ್, ಥಾಯ್ಲೆಂಡ್ ಮತ್ತು ವಿಯೆಟ್ನಾಂ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಎಲ್ಲಿ ಗ್ರಾಹಕ ಕಾರ್ಯಾಚರಣೆಯನ್ನು ಕೊನೆಗೊಳಿಸಲಾಗುತ್ತದೋ ಅಲ್ಲಿ ಸಿಟಿ ಸಮೂಹದ ಸಾಂಸ್ಥಿಕ ಗ್ರಾಹಕರ ಸಮೂಹಕ್ಕೆ ಸೇವೆಯನ್ನು ಮುಂದುವರಿಸಲಿದೆ.

ಈ ನಡೆಯ ಬಗ್ಗೆ ಹೇಳಿಕೆ ನೀಡಿರುವ ಸಿಟಿ ಸಮೂಹ, ಈಗಿನ ನಿರ್ಧಾರದಿಂದ ಹೂಡಿಕೆ ಮತ್ತು ಸಂಪನ್ಮೂಲವನ್ನು ಎಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಿಸುವುದಕ್ಕೆ ಹಾಗೂ ಬೆಳವಣಿಗೆಗೆ ಅವಕಾಶ ಇದೆಯೋ ಅಲ್ಲಿ ತೊಡಗಿಸಲಾಗುತ್ತದೆ. ಸಿಟಿ ಗ್ರೂಪ್ ಸಿಇಒ ಜೇನ್ ಫ್ರೇಸರ್ ಮಾತನಾಡಿ, ಈ 13 ಮಾರುಕಟ್ಟೆಯಲ್ಲಿ ಸರಿಯಾದ ಸ್ಪರ್ಧೆ ನೀಡುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಅಲ್ಲಿಂದ ಹೊರಬರುತ್ತಿದ್ದೇವೆ ಎಂದಿದ್ದಾರೆ.

ಈಗಿನ ಹೊಸ ವ್ಯೂಹದ ಪರಿಣಾಮದಿಂದ ನಮ್ಮ ಸಂಪತ್ತು ದ್ವಿಗುಣ ಆಗುತ್ತದೆ. ಏಷ್ಯಾ ಮತ್ತು EMEA (ಯುರೋಪ್-ಮಧ್ಯಪ್ರಾಚ್ಯ-ಆಫ್ರಿಕಾ)ದಲ್ಲಿ ಇರುವ ನಮ್ಮ ಗ್ರಾಹಕ ಬ್ಯಾಂಕಿಂಗ್ ಫ್ರಾಂಚೈಸಿಗಳನ್ನು ಸಿಂಗಾಪೂರ್, ಹಾಂಕಾಂಗ್, ಯುಎಇ ಮತ್ತು ಲಂಡನ್​ಯಿಂದ ನಿರ್ವಹಣೆ ಮಾಡುತ್ತೇವೆ. ಇದರೊಂದಿಗೆ ಈ ಮುಖ್ಯ ಹಬ್​ಗಳಲ್ಲಿ ವೆಲ್ತ್ ಮ್ಯಾನೇಜ್​ಮೆಂಟ್ ಉದ್ಯಮದಲ್ಲಿ ಆಕರ್ಷಕ ರಿಟರ್ನ್ಸ್ ಮತ್ತು ಪ್ರಬಲ ಬೆಳವಣಿಗೆ ಕಾಣಲು ಸಹಕಾರ ಆಗುತ್ತದೆ ಎಂದು ಫ್ರೇಸರ್ ಹೇಳಿದ್ದಾರೆ.

ಇನ್ನು ಇತರ 13 ಮಾರುಕಟ್ಟೆಗಳಲ್ಲಿ ಅದ್ಭುತವಾದ ಮಾರುಕಟ್ಟೆ ಇದೆ. ನಾವು ಅಲ್ಲಿ ಸ್ಪರ್ಧಿಸಬೇಕು. ನಮ್ಮ ಬಂಡವಾಳ, ಹೂಡಿಕೆ ಡಾಲರ್​ಗಳು, ಮತ್ತು ಇತರ ಸಂಪನ್ಮೂಲಗಳನ್ನು ಹೆಚ್ಚಿನ ರಿಟರ್ನ್ಸ್ ನೀಡುವ ಅವಕಾಶ ಇರುವ ಮತ್ತು ಏಷ್ಯಾದ ನಮ್ಮ ಸಾಂಸ್ಥಿಕ ವ್ಯವಹಾರದಲ್ಲಿ ನಿಯೋಜಿಸುತ್ತೇವೆ. ಷೇರುದಾರರಿಗೆ ನೀಡುತ್ತಿರುವ ರಿಟರ್ನ್ಸ್ ಹೆಚ್ಚಿಸಲು ಕೆಲಸ ಮಾಡುತ್ತಿದ್ದು, ನಮ್ಮ ವ್ಯೂಹಾತ್ಮಕ ನಿರ್ಧಾರದ ಬಗ್ಗೆ ನಿಮಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು

(Citigroup announced on April 15th that, to shutter retail banking in 13 countries including India)

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ