AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ. ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ […]

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು
ಸಿಟಿಗ್ರೂಪ್
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 18, 2020 | 1:44 PM

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.

ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ ಪೇಚಿಗೆ ಸಿಲುಕಿದ್ದು ಹಣ ವಾಪಸ್ ಪಡೆಯಲು ಹರಸಾಹಸ ಪಡುತ್ತಿದೆ.

ಅಷ್ಟಕ್ಕೂ ಅಗಿದ್ದೇನು? ಈ ಸ್ವಾರಸ್ಯಕರ ಪ್ರಸಂಗ ಶುರುವಾದದ್ದು ಪ್ರತಿಷ್ಠಿತ ಸೌಂದರ್ಯವರ್ಧಕ ತಯಾರಿಕಾ ಕಂಪನಿ ರೆವ್ಲಾನ್​ ಮತ್ತು ಅದರ ಸಾಲದಾತರ ನಡುವಿನ ತಿಕ್ಕಾಟದಿಂದ. ರೆವ್ಲಾನ್​ ಕಂಪನಿಯು ಕೆಲವು ವರ್ಷಗಳ ಹಿಂದೆ ಸಾಲದಾತರ ಬಳಿ ದೊಡ್ಡ ಮೊತ್ತದ ಲೋನ್​ ಪಡೆದಿದ್ದು ಅದನ್ನು 2023ಕ್ಕೆ ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿತ್ತು.

ಈ ನಡುವೆ ಸಾಲದಾತರ ಲೋನ್​ ಮೊತ್ತವನ್ನು ಕೂಡಲೇ ಹಿಂದಿರುಗಿಸಲು ಕೇಳಿಕೊಂಡಿದ್ದಾರಂತೆ. ಇದಕ್ಕೆ ರೆವ್ಲಾನ್​ ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿದೆ. ಹೀಗಾಗಿ, ಸಾಲದಾತರು ಕಂಪನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ದಾಖಲಿಸಿದ್ದರಂತೆ. ಜೊತೆಗೆ, ಸಾಲದ ಒಪ್ಪಂದದ ನಿರ್ವಹಣೆ ವಹಿಸಿಕೊಂಡಿದ್ದ ಸಿಟಿಗ್ರೂಪ್​ ಕೇಸ್​ನ ಮತ್ತೊಬ್ಬ ಪ್ರತಿವಾದಿಯಾಗಿ ಸೇರಿಸಿತ್ತು.

ಇದೀಗ, ಕೇಸ್​ನ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿರುವ ವೇಳೆಯಲ್ಲಿ ಈ ಪ್ರಸಂಗ ಸಂಭವಿಸಿದ್ದು ಇದೀಗ ಸಿಟಿಗ್ರೂಪ್​ನ ಹಣವನ್ನ ವಾಪಸ್​ ನೀಡಲು ಕೆಲವು ಸಾಲದಾತ ಸಂಸ್ಥೆಗಳು ಸುತರಾಂ ನಿರಾಕರಿಸಿದ್ದಾರಂತೆ. ರಸ್ತೆ ಬದಿಯಲ್ಲಿ ಹೋಗುವಾಗ ಹಣದ ಕಂತೆ ಸಿಕ್ಕಷ್ಟು ಸಂತೋಷದಲ್ಲಿರುವ ಸಂಸ್ಥೆಗಳಿಂದ ಮೊತ್ತ ವಾಪಸ್​ ಪಡೆಯಲು ಸಿಟಿಗ್ರೂಪ್​ ಪಡೆಬೇಕಾಗಿರುವ ಪಾಡು ಅಷ್ಟಿಷ್ಟಲ್ಲ.

ಶಾಸಕ ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿಗೆ ಶಿಫ್ಟ್‌: ವಿಡಿಯೋ ನೋಡಿ
ಶಾಸಕ ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿಗೆ ಶಿಫ್ಟ್‌: ವಿಡಿಯೋ ನೋಡಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್