AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ. ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ […]

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು
ಸಿಟಿಗ್ರೂಪ್
KUSHAL V
| Updated By: ಸಾಧು ಶ್ರೀನಾಥ್​|

Updated on: Aug 18, 2020 | 1:44 PM

Share

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.

ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ ಪೇಚಿಗೆ ಸಿಲುಕಿದ್ದು ಹಣ ವಾಪಸ್ ಪಡೆಯಲು ಹರಸಾಹಸ ಪಡುತ್ತಿದೆ.

ಅಷ್ಟಕ್ಕೂ ಅಗಿದ್ದೇನು? ಈ ಸ್ವಾರಸ್ಯಕರ ಪ್ರಸಂಗ ಶುರುವಾದದ್ದು ಪ್ರತಿಷ್ಠಿತ ಸೌಂದರ್ಯವರ್ಧಕ ತಯಾರಿಕಾ ಕಂಪನಿ ರೆವ್ಲಾನ್​ ಮತ್ತು ಅದರ ಸಾಲದಾತರ ನಡುವಿನ ತಿಕ್ಕಾಟದಿಂದ. ರೆವ್ಲಾನ್​ ಕಂಪನಿಯು ಕೆಲವು ವರ್ಷಗಳ ಹಿಂದೆ ಸಾಲದಾತರ ಬಳಿ ದೊಡ್ಡ ಮೊತ್ತದ ಲೋನ್​ ಪಡೆದಿದ್ದು ಅದನ್ನು 2023ಕ್ಕೆ ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿತ್ತು.

ಈ ನಡುವೆ ಸಾಲದಾತರ ಲೋನ್​ ಮೊತ್ತವನ್ನು ಕೂಡಲೇ ಹಿಂದಿರುಗಿಸಲು ಕೇಳಿಕೊಂಡಿದ್ದಾರಂತೆ. ಇದಕ್ಕೆ ರೆವ್ಲಾನ್​ ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿದೆ. ಹೀಗಾಗಿ, ಸಾಲದಾತರು ಕಂಪನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ದಾಖಲಿಸಿದ್ದರಂತೆ. ಜೊತೆಗೆ, ಸಾಲದ ಒಪ್ಪಂದದ ನಿರ್ವಹಣೆ ವಹಿಸಿಕೊಂಡಿದ್ದ ಸಿಟಿಗ್ರೂಪ್​ ಕೇಸ್​ನ ಮತ್ತೊಬ್ಬ ಪ್ರತಿವಾದಿಯಾಗಿ ಸೇರಿಸಿತ್ತು.

ಇದೀಗ, ಕೇಸ್​ನ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿರುವ ವೇಳೆಯಲ್ಲಿ ಈ ಪ್ರಸಂಗ ಸಂಭವಿಸಿದ್ದು ಇದೀಗ ಸಿಟಿಗ್ರೂಪ್​ನ ಹಣವನ್ನ ವಾಪಸ್​ ನೀಡಲು ಕೆಲವು ಸಾಲದಾತ ಸಂಸ್ಥೆಗಳು ಸುತರಾಂ ನಿರಾಕರಿಸಿದ್ದಾರಂತೆ. ರಸ್ತೆ ಬದಿಯಲ್ಲಿ ಹೋಗುವಾಗ ಹಣದ ಕಂತೆ ಸಿಕ್ಕಷ್ಟು ಸಂತೋಷದಲ್ಲಿರುವ ಸಂಸ್ಥೆಗಳಿಂದ ಮೊತ್ತ ವಾಪಸ್​ ಪಡೆಯಲು ಸಿಟಿಗ್ರೂಪ್​ ಪಡೆಬೇಕಾಗಿರುವ ಪಾಡು ಅಷ್ಟಿಷ್ಟಲ್ಲ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?