AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ. ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ […]

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು
ಸಿಟಿಗ್ರೂಪ್
KUSHAL V
| Edited By: ಸಾಧು ಶ್ರೀನಾಥ್​|

Updated on: Aug 18, 2020 | 1:44 PM

Share

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.

ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ ಪೇಚಿಗೆ ಸಿಲುಕಿದ್ದು ಹಣ ವಾಪಸ್ ಪಡೆಯಲು ಹರಸಾಹಸ ಪಡುತ್ತಿದೆ.

ಅಷ್ಟಕ್ಕೂ ಅಗಿದ್ದೇನು? ಈ ಸ್ವಾರಸ್ಯಕರ ಪ್ರಸಂಗ ಶುರುವಾದದ್ದು ಪ್ರತಿಷ್ಠಿತ ಸೌಂದರ್ಯವರ್ಧಕ ತಯಾರಿಕಾ ಕಂಪನಿ ರೆವ್ಲಾನ್​ ಮತ್ತು ಅದರ ಸಾಲದಾತರ ನಡುವಿನ ತಿಕ್ಕಾಟದಿಂದ. ರೆವ್ಲಾನ್​ ಕಂಪನಿಯು ಕೆಲವು ವರ್ಷಗಳ ಹಿಂದೆ ಸಾಲದಾತರ ಬಳಿ ದೊಡ್ಡ ಮೊತ್ತದ ಲೋನ್​ ಪಡೆದಿದ್ದು ಅದನ್ನು 2023ಕ್ಕೆ ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿತ್ತು.

ಈ ನಡುವೆ ಸಾಲದಾತರ ಲೋನ್​ ಮೊತ್ತವನ್ನು ಕೂಡಲೇ ಹಿಂದಿರುಗಿಸಲು ಕೇಳಿಕೊಂಡಿದ್ದಾರಂತೆ. ಇದಕ್ಕೆ ರೆವ್ಲಾನ್​ ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿದೆ. ಹೀಗಾಗಿ, ಸಾಲದಾತರು ಕಂಪನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ದಾಖಲಿಸಿದ್ದರಂತೆ. ಜೊತೆಗೆ, ಸಾಲದ ಒಪ್ಪಂದದ ನಿರ್ವಹಣೆ ವಹಿಸಿಕೊಂಡಿದ್ದ ಸಿಟಿಗ್ರೂಪ್​ ಕೇಸ್​ನ ಮತ್ತೊಬ್ಬ ಪ್ರತಿವಾದಿಯಾಗಿ ಸೇರಿಸಿತ್ತು.

ಇದೀಗ, ಕೇಸ್​ನ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿರುವ ವೇಳೆಯಲ್ಲಿ ಈ ಪ್ರಸಂಗ ಸಂಭವಿಸಿದ್ದು ಇದೀಗ ಸಿಟಿಗ್ರೂಪ್​ನ ಹಣವನ್ನ ವಾಪಸ್​ ನೀಡಲು ಕೆಲವು ಸಾಲದಾತ ಸಂಸ್ಥೆಗಳು ಸುತರಾಂ ನಿರಾಕರಿಸಿದ್ದಾರಂತೆ. ರಸ್ತೆ ಬದಿಯಲ್ಲಿ ಹೋಗುವಾಗ ಹಣದ ಕಂತೆ ಸಿಕ್ಕಷ್ಟು ಸಂತೋಷದಲ್ಲಿರುವ ಸಂಸ್ಥೆಗಳಿಂದ ಮೊತ್ತ ವಾಪಸ್​ ಪಡೆಯಲು ಸಿಟಿಗ್ರೂಪ್​ ಪಡೆಬೇಕಾಗಿರುವ ಪಾಡು ಅಷ್ಟಿಷ್ಟಲ್ಲ.

Follow Us
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ