AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ. ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ […]

ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್​ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು
ಸಿಟಿಗ್ರೂಪ್
KUSHAL V
| Edited By: ಸಾಧು ಶ್ರೀನಾಥ್​|

Updated on: Aug 18, 2020 | 1:44 PM

Share

ಲೋನ್​ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್​ ಬ್ಯಾಂಕ್​ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.

ಕಳೆದ ಬುಧವಾರ ಸಿಟಿಗ್ರೂಪ್​ ಬ್ಯಾಂಕ್​ನ ಲೋನ್​ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್​ ಡಾಲರ್​ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಟ್ರಾನ್ಸ್​ಫರ್​ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್​ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್​ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್​ ಪೇಚಿಗೆ ಸಿಲುಕಿದ್ದು ಹಣ ವಾಪಸ್ ಪಡೆಯಲು ಹರಸಾಹಸ ಪಡುತ್ತಿದೆ.

ಅಷ್ಟಕ್ಕೂ ಅಗಿದ್ದೇನು? ಈ ಸ್ವಾರಸ್ಯಕರ ಪ್ರಸಂಗ ಶುರುವಾದದ್ದು ಪ್ರತಿಷ್ಠಿತ ಸೌಂದರ್ಯವರ್ಧಕ ತಯಾರಿಕಾ ಕಂಪನಿ ರೆವ್ಲಾನ್​ ಮತ್ತು ಅದರ ಸಾಲದಾತರ ನಡುವಿನ ತಿಕ್ಕಾಟದಿಂದ. ರೆವ್ಲಾನ್​ ಕಂಪನಿಯು ಕೆಲವು ವರ್ಷಗಳ ಹಿಂದೆ ಸಾಲದಾತರ ಬಳಿ ದೊಡ್ಡ ಮೊತ್ತದ ಲೋನ್​ ಪಡೆದಿದ್ದು ಅದನ್ನು 2023ಕ್ಕೆ ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿತ್ತು.

ಈ ನಡುವೆ ಸಾಲದಾತರ ಲೋನ್​ ಮೊತ್ತವನ್ನು ಕೂಡಲೇ ಹಿಂದಿರುಗಿಸಲು ಕೇಳಿಕೊಂಡಿದ್ದಾರಂತೆ. ಇದಕ್ಕೆ ರೆವ್ಲಾನ್​ ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿದೆ. ಹೀಗಾಗಿ, ಸಾಲದಾತರು ಕಂಪನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ದಾಖಲಿಸಿದ್ದರಂತೆ. ಜೊತೆಗೆ, ಸಾಲದ ಒಪ್ಪಂದದ ನಿರ್ವಹಣೆ ವಹಿಸಿಕೊಂಡಿದ್ದ ಸಿಟಿಗ್ರೂಪ್​ ಕೇಸ್​ನ ಮತ್ತೊಬ್ಬ ಪ್ರತಿವಾದಿಯಾಗಿ ಸೇರಿಸಿತ್ತು.

ಇದೀಗ, ಕೇಸ್​ನ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿರುವ ವೇಳೆಯಲ್ಲಿ ಈ ಪ್ರಸಂಗ ಸಂಭವಿಸಿದ್ದು ಇದೀಗ ಸಿಟಿಗ್ರೂಪ್​ನ ಹಣವನ್ನ ವಾಪಸ್​ ನೀಡಲು ಕೆಲವು ಸಾಲದಾತ ಸಂಸ್ಥೆಗಳು ಸುತರಾಂ ನಿರಾಕರಿಸಿದ್ದಾರಂತೆ. ರಸ್ತೆ ಬದಿಯಲ್ಲಿ ಹೋಗುವಾಗ ಹಣದ ಕಂತೆ ಸಿಕ್ಕಷ್ಟು ಸಂತೋಷದಲ್ಲಿರುವ ಸಂಸ್ಥೆಗಳಿಂದ ಮೊತ್ತ ವಾಪಸ್​ ಪಡೆಯಲು ಸಿಟಿಗ್ರೂಪ್​ ಪಡೆಬೇಕಾಗಿರುವ ಪಾಡು ಅಷ್ಟಿಷ್ಟಲ್ಲ.

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ